Nittur High School - Udupi

05/12/2023
ಕೆ.ಎ.ಪಿ. ಭಟ್ ನಿಧನಉಡುಪಿ : ಕೆ.ಎ.ಪಿ. ಭಟ್ (83) ಇಂದು ಬೆಳಗ್ಗೆ 8.00 ಗಂಟೆಗೆ ನಿಧನ ಹೊಂದಿದರು. ಇವರು ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ...
08/04/2021

ಕೆ.ಎ.ಪಿ. ಭಟ್ ನಿಧನ
ಉಡುಪಿ : ಕೆ.ಎ.ಪಿ. ಭಟ್ (83) ಇಂದು ಬೆಳಗ್ಗೆ 8.00 ಗಂಟೆಗೆ ನಿಧನ ಹೊಂದಿದರು. ಇವರು ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಗೆ ಸೇರಿ ನಿಟ್ಟೂರು ಪ್ರೌಢಶಾಲೆಯಲ್ಲಿ ಅಧ್ಯಾಪಕ ಹಾಗೂ ಮುಖ್ಯೋಪಾಧ್ಯಾಯರಾಗಿ ಹಲವಾರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು. ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾಗಿ, ಶಾಲಾಭಿವೃದ್ಧಿಗಾಗಿ ಶ್ರಮಿಸಿದ್ದರು. ಇವರು ಉತ್ತಮ ವಾಲಿಬಾಲ್ ಕ್ರೀಡಾಪಟುವಾಗಿದ್ದು, ನಾಟಕದಲ್ಲಿ ನಟನೆ ಮತ್ತು ನಿರ್ದೇಶನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇವರ ಅಂತಿಮ ಸಂಸ್ಕಾರವು ಇಂದು ಸಂಜೆ 5.30 ಗಂಟೆಗೆ ಜರಗಲಿದೆ. ಇವರ ನಿಧನಕ್ಕೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್ ಮತ್ತು ಮುಖ್ಯೋಪಾಧ್ಯಾಯರು ಅಧ್ಯಾಪಕ ವೃಂದ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ್ ಸಂತಾಪ ವ್ಯಕ್ತಪಡಿಸಿದರು. ಮೃತರು ಪತ್ನಿ, ಇರ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ಓರ್ವ ಪುತ್ರ ಡಾ.ಶ್ರೀಶ ಕೊಯಮುತ್ತೂರಿನಲ್ಲಿ ಪ್ರಖ್ಯಾತ ನೇತ್ರತಜ್ಞರಾಗಿದ್ದು, ಇನ್ನೋರ್ವ ಮಗ ಮುರಾರಿ ಉಡುಪಿಯಲ್ಲಿ ನೋಟರಿ ನ್ಯಾಯವಾದಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.

02/11/2020
Please do come and witness the program
31/10/2020

Please do come and witness the program

37 ವರ್ಷದ ಸಂಭ್ರಮದ, ಸಂತೃಪ್ತಿಯ ಶಿಕ್ಷಕ ವೃತ್ತಿಯಿಂದ ನಿವೃತ್ತನಾದ ಕ್ಷಣ. ಹಿರಿಯ ಶಿಕ್ಷಕಿ ಶ್ರೀಮತಿ ಅನಸೂಯ ಮುಂದಿನ ಮುಖ್ಯಶಿಕ್ಷಕಿಯಾಗಿ ಹೊಣೆಗ...
29/10/2020

37 ವರ್ಷದ ಸಂಭ್ರಮದ, ಸಂತೃಪ್ತಿಯ ಶಿಕ್ಷಕ ವೃತ್ತಿಯಿಂದ ನಿವೃತ್ತನಾದ ಕ್ಷಣ. ಹಿರಿಯ ಶಿಕ್ಷಕಿ ಶ್ರೀಮತಿ ಅನಸೂಯ ಮುಂದಿನ ಮುಖ್ಯಶಿಕ್ಷಕಿಯಾಗಿ ಹೊಣೆಗಾರಿಕೆಯನ್ನು ಸ್ವೀಕರಿಸುವ ಸಂದರ್ಭ
# SIGNING OFF -OFFICIALLY #

No one can say goodbye to a teacher like you, because you'll forever be in our hearts. Happy retirement DEAREST SIR!  BL...
29/10/2020

No one can say goodbye to a teacher like you, because you'll forever be in our hearts. Happy retirement DEAREST SIR!
BLESSED #

ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾಗಿ ಕೆ. ರಘುಪತಿ ಭಟ್ ಆಯ್ಕೆ:ನಿಟ್ಟೂರು ಎಜುಕೇಶನಲ್ ಸೊಸೈಟಿಯ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 18ರಂದು ...
19/09/2020

ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾಗಿ ಕೆ. ರಘುಪತಿ ಭಟ್ ಆಯ್ಕೆ:
ನಿಟ್ಟೂರು ಎಜುಕೇಶನಲ್ ಸೊಸೈಟಿಯ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 18ರಂದು ಕೆ. ರಘುಪತಿ ಭಟ್‍ರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯದರ್ಶಿ ಭಾಸ್ಕರ್ ಡಿ. ಸುವರ್ಣ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಮುರಲಿ ಕಡೆಕಾರ್ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಬಳಿಕ 2020-21ನೇ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷ : ಕೆ. ರಘುಪತಿ ಭಟ್, ಉಪಾಧ್ಯಕ್ಷರು : ಎಸ್. ವಿ. ಭಟ್, ಎಂ. ಗಂಗಾಧರ ರಾವ್, ಯೋಗೀಶ್ಚಂದ್ರಾಧರ, ಕಾರ್ಯದರ್ಶಿ : ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ : ಪಿ. ದಿನೇಶ್ ಪೂಜಾರಿ, ಕೋಶಾಧಿಕಾರಿ : ಅನಸೂಯ.
ಸದಸ್ಯರು : ಭಾಸ್ಕರ ಡಿ ಸುವರ್ಣ, ಕೆ. ಸುಬ್ರಹ್ಮಣ್ಯ ಭಟ್, ರವೀಕಾಂತ, ಆಲ್ಫ್ರೆಡ್ ಕರ್ನೇಲಿಯೋ, ಸಂತೋಷ ಕರ್ನೇಲಿಯೋ, ರಾಮಚಂದ್ರ ಆಚಾರ್, ಯು. ಬಿ. ಅಜಿತ್ ಕುಮಾರ್, ಕೃಷ್ಣಮೂರ್ತಿ ಭಟ್, ಪಿ. ಪರಶುರಾಮ ಶೆಟ್ಟಿ, ಕೆ. ಎ. ಪಿ. ಭಟ್, ಪ್ರಭಾಕರ ಪೂಜಾರಿ, ಪ್ರಭಾಕರ ಜಿ, ವಸಂತ ಎನ್.
ಲೆಕ್ಕ ಪರಿಶೋಧಕರಾಗಿ ಸಿ. ಎ. ಪ್ರದೀಪ್ ಜೋಗಿಯವರನ್ನು ನಿಯುಕ್ತಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್‍ರವರು ಕರೋನಾದ ನಡುವೆಯೂ 50 ಎಕ್ರೆ ಹಡಿಲುಗದ್ದೆ ಬೇಸಾಯ ಮಾಡಿ ಸುವರ್ಣ ಪರ್ವವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಯಿತು. ಶಾಲೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ತಿಂಗಳೊಳಗೆ ಪೂರೈಸಿ, ಸಮಾಜ ಮೆಚ್ಚುವ ರೀತಿಯಲ್ಲಿ ಈ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ನುಡಿದರು. ಆರಂಭದಲ್ಲಿ ಶಾಲೆಯ ಸ್ಥಾಪಕ ಸದಸ್ಯರಾದ ಪಿ. ಎಂ. ರಾಮಕೃಷ್ಣ ಆಚಾರ್ ಮತ್ತು ಪಿ. ರಾಮ ಭಟ್ ಹಾಗೂ ಲೆಕ್ಕ ಪರಿಶೋಧಕರಾದ ಬಿ. ಡಿ. ಶೆಟ್ಟರ ನಿಧನಕ್ಕೆ ಸಭೆಯಲ್ಲಿ ಗಾಢ ಸಂತಾಪ ಸೂಚಿಸಲಾಯಿತು.

ಪ್ರಿಯರೆ, ನೀವು ವಿದ್ಯಾರ್ಜನೆಗೈದ ನಿಟ್ಟೂರು ಪ್ರೌಢಶಾಲೆಗೆ ಇದೀಗ ಸುವರ್ಣ ಪರ್ವ ಕಳೆದ 5 ದಶಕಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನ್ನಡ...
18/09/2020

ಪ್ರಿಯರೆ,

ನೀವು ವಿದ್ಯಾರ್ಜನೆಗೈದ ನಿಟ್ಟೂರು ಪ್ರೌಢಶಾಲೆಗೆ ಇದೀಗ ಸುವರ್ಣ ಪರ್ವ ಕಳೆದ 5 ದಶಕಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನೂ ಕಲಿಸಿದ ಶಾಲೆಯ ಋಣಭಾರ ನಿಮ್ಮ ಮೇಲಿದೆ ಕಾರಣ ಈ ಶಾಲೆಯ ದೆಸೆಯಿಂದ ನೀವು ಮಿತವ್ಯಯದಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದೀರಿ. ಕಳೆದ 5 ವರ್ಷಗಳಿಂದ ಸಂಪೂರ್ಣ ಉಚಿತವಾಗಿ ಶಿಕ್ಷಣವನ್ನು ನೀಡುತ್ತಾ ಇದೆ ನಿಮ್ಮೀ ಶಾಲೆ. ಮಕ್ಕಳು ಸ್ಥಿತಿವಂತರಾದಾಗ ಮನೆಯನ್ನು ದುರಸ್ಥಿಗೊಳಿಸುವುದು ಯಾ ಮಾತಾಪಿತೃಗಳಿಗೆ ನೆಮ್ಮದಿಯ ಬದುಕನ್ನು ಕಲ್ಪಿಸುವುದು ಹೇಗೆ ಕರ್ತವ್ಯವೋ, ಅದೇ ರೀತಿ ನಿಮ್ಮ ಬಾಳ್ವೆಯ ರೂಪಣೆಯಲ್ಲೂ ಈ ಶಾಲೆಯ ಕೊಡುಗೆ ಇರುವುದರಿಂದ ಶಾಲೆಯ ಭೌತಿಕ ದುರಸ್ತಿ ಹಾಗೂ ಅಭಿವೃದ್ಧಿಗೆ ನಿಮ್ಮ ಸಹಾಯಹಸ್ತ ಬೇಕಾಗಿದೆ.
ಕಟ್ಟಡಗಳ ನವೀಕರಣ, ಪೀಠೋಪಕರಣ ದುರಸ್ತಿ, ಸಭಾಂಗಣ ದುರಸ್ತಿ, ಜತೆಗೆ ಮುಂದೆಯೂ ಆರ್ಥಿಕ ಸಂಕಷ್ಟ ವಿಲ್ಲದೆ ಶಾಲೆ ಕಾರ್ಯನಿರ್ವಹಿಸಬೇಕೆಂಬ ನೆಲೆಯಲ್ಲಿ 50 ಲಕ್ಷದ ನಿರಖು ಠೇವಣಿ ಸ್ಥಾಪನೆ ಹೀಗೆ ಸುಮಾರು 1 ಕೋಟಿಯ ವೆಚ್ಚದ ಕ್ರಿಯಾಯೋಜನೆ ನಮ್ಮದಾಗಿದೆ.
ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅಧ್ಯಾಪಕವೃಂದ ಹಳೆವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಧನಸಂಗ್ರಹ ಮಾಡಿ ಸಭಾಂಗಣ, ಆಟದ ಮೈದಾನ ಖರೀದಿ, ಆವರಣ ಗೋಡೆ ನಿರ್ಮಾಣ ಹೀಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಮಾಡಿದ್ದರಿಂದ ಕಳೆದ 25 ವರ್ಷಗಳಲ್ಲಿ ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡಿರುವುದನ್ನು ನೀವು ಗಮನಿಸಿದ್ದೀರಿ.
ಸ್ಥಿತಿವಂತರು ಹೋಗುವ ಇಂಗ್ಲೀಷ್ ಮಾಧ್ಯಮ ಶಾಲೆಗೆ ಸರಿ ಮಿಗಿಲೆನಿಸುವ ಬೌತಿಕ ಪರಿಕರಗಳು ನಿಮ್ಮ ಶಾಲೆಗೂ ಬೇಕೆಂಬ ಆಸೆ ಖಂಡಿತ ನಿಮ್ಮಲ್ಲಿದೆ ಎಂದು ಭಾವಿಸುತ್ತೇವೆ.
ಆದ್ದರಿಂದ ಸುವರ್ಣ ಪರ್ವದ ಈ ಪ್ರಸನ್ನ ಕಾಲದಲ್ಲಿ ನೀವು ಕಲಿತ ವಿದ್ಯಾದೇಗುಲಕ್ಕೆ ನಿಮ್ಮಿಂದ ಪ್ರೀತಿಪೂರ್ವಕ ದೇಣಿಗೆಯನ್ನು ಸಂಸ್ಥೆ ಅಪೇಕ್ಷಿಸುತ್ತದೆ. ಸುಮಾರು 5000ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಈ ಶಾಲೆಯ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿ ದೇಶ ವಿದೇಶಗಳಲ್ಲಿ ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾಧಕರಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ.
ಅನ್ಯಥಾ ಭಾವಿಸದೆ, ಶಾಲೆಗೆ ನಿಮ್ಮ ಮಿತಿಯಲ್ಲಿ ಪ್ರತಿಯೊಬ್ಬ ಹಳೆವಿದ್ಯಾರ್ಥಿ ಗರಿಷ್ಠಸಾಧ್ಯ ನೆರವನ್ನು ನೀಡಬೇಕಾಗಿ ವಿನಮ್ರ ವಿನಂತಿ.
• ದೇಣಿಗೆ ಅಕ್ಟೋಬರ್ 10, 2020ರ ಒಳಗೆ ನೀಡುವುದು
• ನೀವು ನೀಡುವ ದೇಣಿಗೆಗೆ 80ಜಿ ಆದಾಯ ತೆರಿಗೆ ವಿನಾಯಿತಿ ಇದೆ.
• 1 ತರಗತಿ ಕೋಣೆಯ ಮರು ನವೀಕರಣ ವೆಚ್ಚ 2 ಲಕ್ಷ ರೂಪಾಯಿ. ನೀವು ಸೂಚಿಸಿದ ಹೆಸರನ್ನು ಶಿಲಾಫಲಕದಲ್ಲಿ ನಮೂದಿಸಲಾಗುವುದು.
• ರೂ. 10,000/- ಮೇಲ್ಪಟ್ಟು ನೆರವು ನೀಡಿದವರ ಹೆಸರನ್ನು ಶಿಲಾಫಲಕದಲ್ಲಿ ನಮೂದಿಸಲಾಗುವುದು
• ನಿಮಗೆ ಪರಿಚಯವಿರುವ ಶಾಲಾ ಹಳೆವಿದ್ಯಾರ್ಥಿಗಳಿಗೆ ಈ ಮಾಹಿತಿ ರವಾನಿಸಿ
ಇದು ಶಾಲೆಯ ಸುವರ್ಣಪರ್ವದ ಉತ್ಸವದ ಕಾಲ. ವಿದ್ಯಾದೇವಿಯ ಪ್ರಸನ್ನ ಕಾಲ. ಇದೊಂದೇ ನಮ್ಮ ನಿವೇದನೆಯ ಪತ್ರ. ಸಹೃದಯರೆ ಸ್ಪಂದನೆಯ ನಿರೀಕ್ಷೆ ನಮ್ಮದು.

ನಿಮ್ಮ ಮೇಲೆ ವಿಶ್ವಾಸವಿರಿಸಿ ನಿರೀಕ್ಷೆಯಲ್ಲಿರುವ

ಮುರಲಿ ಕಡೆಕಾರ್
ಮುಖ್ಯೋಪಾಧ್ಯಾಯರು

ಶಾಲೆಯ ಬ್ಯಾಂಕ್ ಖಾತೆಯ ವಿವರ :
Nittur Educational Society
SB Ac : 0182500100197601
IFSC : KARB0000018
Karnataka Bank Ambagilu Branch

Online Payment Gate way link :

.

18/09/2020

Address

Udupi
576102

Website

Alerts

Be the first to know and let us send you an email when Nittur High School - Udupi posts news and promotions. Your email address will not be used for any other purpose, and you can unsubscribe at any time.

Contact The School

Send a message to Nittur High School - Udupi:

Shortcuts

Share

Category