15/09/2022
Govt.Highschool, kirimanjeshwara
GHS KIRIMANJESHWARA
15/09/2022
31/07/2022
ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ
ಇಲ್ಲಿ ಇಂದು ಗಣಿತ ದಿನಾಚರಣೆ ನಡೆಯಿತು. 1887 ಡಿಸೆಂಬರ್ 22ರಂದು ತಮಿಳುನಾಡಿನ ಈರೋಡ್ ಪಟ್ಟಣದಲ್ಲಿ ಭಾರತದ ಗಣಿತ ನಕ್ಷತ್ರ ವೊಂದು ಉದಯವಾಯಿತು. ಅವರೇ ಶ್ರೀನಿವಾಸ ಅಯ್ಯಂಗಾರ್ ಹಾಗೂ ಕೋಮಲರ್ಮಳ್ ದಂಪತಿಯ ವರಪುತ್ರ ಶ್ರೀನಿವಾಸ ರಾಮಾನುಚಾನ್.
1920 ಏಪ್ರಿಲ್ 26ರಂದು ತನ್ನ 33ನೇ ವಯಸ್ಸಿಗೆ ಕ್ಷಯರೋಗಕ್ಕೆ ತುತ್ತಾಗಿ ಈ ಗಣಿತ ಸೂರ್ಯ ಅಸ್ತಂಗತನಾದ ಎಂದು ಗಣಿತದ ಶಿಕ್ಷಕಿ ಶ್ರೀಮತಿ ವೇದಾವತಿಯವರು ಗಣಿತದಿನದ ಮಹತ್ವವನ್ನು ವಿವರಿಸಿದರು.
ವಿದ್ಯಾರ್ಥಿಗಳಿಂದ ನಡೆಸಿದ ಚಟುವಟಿಕೆಗಳನ್ನು ಚಾರ್ಟ್ ಹಾಗೂ ಗಣಿತದ ಮಾದರಿಗಳ ಮೂಲಕ ಪ್ರದರ್ಶನ ಏರ್ಪಡಿಸಲಾಯಿತು. ಶ್ರೀಮತಿ ಅಶ್ವಿನಿ ಕನ್ನಂತರು ಗಣಿತದ ರಸಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ನಡೆಸಿದರು. ಇತರ ಅಧ್ಯಾಪಕರು ಸಹಕಾರ ಹಾಗೂ ಮಾರ್ಗದರ್ಶನ ನೀಡಿದರು. ಮುಖ್ಯೋಪಾಧ್ಯಾಯರು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.
ಸರಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ
ಬ್ಯೆಂದೂರು ವಲಯ .
ಇಂದು ನಮ್ಮ ಶಾಲೆಯಲ್ಲಿ " ದಾಸ ಸಾಹಿತ್ಯದ ಸಂತ ಶ್ರೇಷ್ಠ " " ಕನಕದಾಸರ ಜಯಂತಿ " ಯನ್ನು ಆಚರಿಸಲಾಯಿತು.
ಆದಿಕೇಶವ ಎಂಬ ಅಂಕಿತನಾಮದಿಂದ ಅನೇಕ ಜನಪ್ರಿಯ ಕೀರ್ತನೆಗಳನ್ನು ರಚಿಸಿ, ಸಮಾಜದಲ್ಲಿ ಇರುವ, ಅಂಧಶ್ರಧ್ದೆ ಹಾಗೂ ಅರ್ಥವಿಲ್ಲದ ಆಚರಣೆಗಳನ್ನು ,ತೊಡೆದುಹಾಕಿ , ಸರ್ವರಲ್ಲೂ ಸಮಾನತೆಯ ಸಂದೇಶ ಸಾರಿದ
ಅರಿವಿನ ಗುರುವನ್ನು ನಾವು ನುಡಿನಮನಗಳಲ್ಲಿ ಸ್ಮರಿಸಿಕೊಂಡು ಕನಕದಾಸರ ಹೆಸರು ಅಜರಾಮರವಾಗಿರಲಿ ಎಂದು ಹಾರೈಸಿದೆವು.
ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಸಹಾಯಕ ಅಧ್ಯಾಪಕರು ಹಾಜರಿದ್ದರು.
Click here to claim your Sponsored Listing.
Location
Category
Website
Address
Kirimanjeshwara
Udupi
576219
Opening Hours
| Monday | 9am - 5pm |
| Tuesday | 9am - 5pm |
| Wednesday | 9am - 5pm |
| Thursday | 9am - 5pm |
| Friday | 9am - 5pm |
| Saturday | 9am - 1pm |