23/03/2025
2003 ರಿಂದ 2024 ಜನವರಿಯವರೆಗೆ , ನಮ್ಮ ಸಂಸ್ಥೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶ್ರೀ ಕಿರಣ್ ರಾಜಾರಾಂ ವಜೆ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು
Government Pre-University college Udupi, located near service bus stand, Udupi
23/03/2025
2003 ರಿಂದ 2024 ಜನವರಿಯವರೆಗೆ , ನಮ್ಮ ಸಂಸ್ಥೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಶ್ರೀ ಕಿರಣ್ ರಾಜಾರಾಂ ವಜೆ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು
26/01/2025
ನಮ್ಮ ಕಾಲೇಜಿನ ಕು. ಶಾಜ್ನ್ ದ್ವಿತೀಯ ವಿಜ್ಞಾನ ಇವಳು ಭಾರತ ಚುನಾವಣಾ ಆಯೋಗ ಮತದಾರರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜ್ಗೆ ಕೀರ್ತಿ ತಂದಿರುತ್ತಾಳೆ.
ದಿನಾಂಕ 20-07-24 ಶನಿವಾರದಂದು ಮಾನ್ಯ ಶಾಸಕರು ಶ್ರೀ ಯಶಪಾಲ ಸುವರ್ಣ ಅವರ ಅಧ್ಯ್ಷತೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನವೀಕರಣಗೊಂಡ ಜನತಾ ಸಭಾ ಭವನದ ಉದ್ಘಾಟನೆ ಮತ್ತು ದ್ವಿತೀಯ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಪ್ರಾಂಶುಪಾಲರಾದ ಲೀಲಾಬಾಯಿ ಭಟ್ ಅವರು ಅತಿಥಿಗಳನ್ನು ಸ್ವಾಗತಿಸುತ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಈ ಸಭಾಭವನದ ನವೀಕರಣದ ಹಿನ್ನಲೆಯಲ್ಲಿ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿಯವರ ಆಶಯ ಕುರಿತು ಹೇಳಿದರು. ಪ್ರಕಾಶ್ ಆಚಾರ ಠೇವಣಿಯಾಗಿ ಇಟ್ಟ ದತ್ತಿನಿಧಿಯಿಂದ ಬಂದ ಬಡ್ಡಿಯಿಂದ ರೂ. 1,20,000-00 ಗಳನ್ನು ವಿದ್ಯಾರ್ಥಿಗಳಿಗೆ ಹಂಚಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು ಸಂಸ್ಥೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳ ಸಾಧನೆ ಅನುಸರಣಿಯವೆಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾರುತಿ ,ಉಡುಪಿ ಕ್ಷೇತ್ರ ಶಿಕ್ಷಣಾಧಕಾರಿ ಡಾ. ಯಲ್ಲಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷ್ ವಿಟ್ಟಲ ಶೆಟ್ಟಿ, ಪೋಷಕರ ಶೈಕ್ಷಣಿಕ ಸಮಿತಿ ಹಿಂದಿನ ಅಧ್ಯಕ್ಷ ಸಂತೋಷ್ ಶೆಟ್ಟಿಗಾರ್ , ಸ್ಟೀಫನ್ ಮೆಸ್ಕೇರನ್ಸ್, ನಿವೃತ್ತ ಪ್ರಾಂಶುಪಾಲರಾದ ರಮೇಶ್, ವಿಲಾಸ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕ ಶ್ರೀ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.ಉಪನ್ಯಾಸಕಿ ಸುಮನಾ ದತ್ತಿನಿಧಿ ವಿಜೇತರ ಪಟ್ಟಿ ವಾಚಿಸಿದರು ಹಿರಿಯ ಶಿಕ್ಷಕಿ ಭಾಗೀರಥಿ ವಂದಿಸಿದರು.
ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ, ದಿನಾಂಕ :25-06-2024 ರಂದು ರೋಟರಿ ಉಡುಪಿ ಇವರ ವತಿಯಿಂದ ಶ್ರೀಮತಿ ಪೂರ್ಣಿಮಾ ನಾಯಕ ಚೆನ್ನೈ ಇವರು ಪ್ರಾಯೋಜಿಸಿರುವ ಪ್ರತಿಭಾವಂತ ಗ್ರಾಮೀಣ ಬಡ ಹೆಣ್ಣು ಮಕ್ಕಳ ಓದಿಗಾಗಿ ಅವರ 2 ವರ್ಷಗಳ ಶುಲ್ಕ ಭರಿಸುವ ಉದ್ದೇಶದಿಂದ 10 ವಿದ್ಯಾರ್ಥಿನಿಯರಿಗೆ ತಲಾ ರೂ. 5000=00 ರಂತೆ ಒಟ್ಟು ರೂ. 50000=00ಧನ ಸಹಾಯ ವಿತರಿಸಲಾಯಿತು. ಕಾಲೇಜಿನ ಅರ್ಹ ವಿದ್ಯಾರ್ಥಿನಿಯರಿಗೆ ಧನ ಸಹಾಯ ವಿತರಣೆ ಮಾಡಿ, ಬಡ ಹೆಣ್ಣು ಮಕ್ಕಳು ದಾನಿಗಳ ಸಹಾಯದಿಂದ ಓದನ್ನು ಮುಂದುವರಿಸಲು ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಶಾಸಕರಾದ ಶ್ರೀ ಯಶಪಾಲ್ ಎ. ಸುವರ್ಣ ರವರು ಕರೆ ನೀಡಿದರು.
ಸುಂದರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಉಡುಪಿಯ ಅಧ್ಯಕ್ಷರು ಆದ ಶ್ರೀಮತಿ ದೀಪಾ ಭಂಡಾರಿ ವಹಿಸಿದ್ದರು. ಶ್ರೀ ಕಿರಣ್ ವಝೆ, ಶ್ರೀ ಕೆ. ಎಸ್. ಕಾರಂತ್, ಶ್ರೀಮತಿ ಶುಭ ಬಾಸ್ರಿ ಉಪಸ್ಥಿತರಿದ್ದರು. ಶ್ರೀ ಕೃಷ್ಣಾನಂದ್ ಸ್ವಾಗತಿಸಿದರು, ಶ್ರೀ ಪರಮೇಶ್ವರ್ ವಂದಿಸಿದರು. ಶ್ರೀ ನಾಗರಾಜ ಕಾರ್ಯಕ್ರಮ ನಿರೂಪಣೆ ಮಾಡಿದರು.
29/12/2024
ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶದ ವಿಶಿಷ್ಟ ಶೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು.
ಅಭಿನಂದನೆಗಳು.
05/11/2022
ದಿನಾಂಕ:03-11-2022 ರಂದು ಕರ್ನಾಟಕ ಲೋಕಾಯುಕ್ತ ಉಡುಪಿ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಲೋಕಾಯುಕ್ತ ಪೊಲೀಸ್ ನಿರೀಕ್ಷಕರು ಜಯರಾಮೇಗೌಡ್, ಹಿರಿಯ ಉಪನ್ಯಾಸಕರಾದ ಶ್ರೀ ಕೃಷ್ಣಾನಂದ , ಲೋಕಾಯುಕ್ತ ಉಡುಪಿ ಇಲ್ಲಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಶ್ರೀ ಪರಮೇಶ್ವರ ಕಾರ್ಯಕ್ರಮ ನಿರೂಪಿಸಿದರು.
26/01/2022
ದಿನಾಂಕ :25-01-2022 ರಂದು ಉಡುಪಿ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ರಾಷ್ಟೀಯ ಮತದಾರರ ದಿನಾಚರಣೆ ಕಾರ್ಯಕ್ರಮ ನೆರವೇರಿತು. ಈ ಸಂಧರ್ಭದಲ್ಲಿ ಜಿಲ್ಲಾ ಮಟ್ಟದ ಇಂಗ್ಲಿಷ್ ಪ್ರಬಂಧ ಸ್ಪರ್ಧೆ ಯಲ್ಲಿ ನಮ್ಮ ಕಾಲೇಜ್ ನ ಕುಮಾರಿ ಪಲ್ಲವಿ ರಾವ್ ದ್ವಿತೀಯ ಸ್ಥಾನ ಪಡೆದು ಗಣ್ಯರಿಂದ ಬಹುಮಾನ ಸ್ವೀಕರಿಸುತ್ತಿರುವುದು.
ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ
ಇಲ್ಲಿ ದಿನಾಂಕ 12-01-2021 ರಂದು ರಾಷ್ಟ್ರೀಯ ಯುವ ದಿನ ಆಚರಣೆ ಪ್ರಯುಕ್ತ ನಡೆಸಿದ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜೇತರು ಬೆಳಗಿನ ಶಾಲಾ ಅಧಿವೇಶನ ಸಭೆಯಲ್ಲಿ ಭಾಷಣ ಮಾಡಿದರು. ಸಭೆಯಲ್ಲಿ ಮಾನ್ಯ ಪ್ರಾಂಶುಪಾಲರು ಹಾಗೂ ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು.
27/11/2021
ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಆಚರಿಸಲಾಯಿತು. ನಂತರದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಸಂವಿಧಾನ ದಿನಾಚರಣೆಯ ಮಹತ್ವ ಮತ್ತು ಸಂವಿಧಾನ ರಚನಾ ಪ್ರಕ್ರಿಯೆ ಕುರಿತು ಪರಮೇಶ್ವರ್ ಎಮ್ ರಾಜ್ಯಶಾಸ್ತ್ರ ಉಪನ್ಯಾಸಕರು ವಿವರಿಸಿದರು. ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಉಪನ್ಯಾಸಕರು ಉಪಸ್ಥಿತರಿದ್ದರು.
17/11/2021
Lokayukta justice shri vishwanath Shetty , Alumni of this college visited our college yesterday. Walking around the campus, he recalled his student life and shared his memories. Udupi district DC Kurma Rao and CEO Naveen Bhat were present at that moment.
17/11/2021
Lokayukta justice shri Vishwanath Shetty , alumni of this college visited our college yesterday. Walking around the campus, he recalled his student life and shared his memories. DC Kurma Rao, CEO Naveen Bhat are also present at that moment..