Kannada Madhyama Shale Ulisi Andolana

Kannada Madhyama Shale Ulisi Andolana

Share

FREE Spoken English Training for
Kannada medium Schools

Photos from Kannada Madhyama Shale Ulisi Andolana's post 22/09/2023

Manoj Kadaba explaining the parents of Karnataka Public School, Bidkalkatte about the project

Photos from Kannada Madhyama Shale Ulisi Andolana's post 15/09/2023

ಶೆಫಿನ್ಸ್ನಿಂದ ಶಿಕ್ಷರ ತರಬೇತಿಯ 3ನೇ ಬ್ಯಾಚ್ ಉದ್ಘಾಟನೆ

ಯಡಾಡಿ-ಮತ್ಯಾಡಿ ಶಾಲೆಯಲ್ಲಿ ಶಿಕ್ಷಕರ ಉಚಿತ ಸ್ಫೋಕ ಇಂಗ್ಲಿಷ್ ತರಬೇತಿಯನ್ನು ಇಂದು ಉದ್ಘಾಟಿಸಲಾಯಿತು.
ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ಪೂರ್ತಿ ಉಚಿತ ಸ್ಫೋಕನ್ ಇಂಗ್ಲಿಷ್ ತರಬೇತಿ ನೀಡಲಾಗುತ್ತದೆ.

Photos from Kannada Madhyama Shale Ulisi Andolana's post 13/09/2023

ಅಜೆಕಾರು ಜ್ಯೋತಿ ಪ್ರೌಢಶಾಲೆ ವತಿಯಿಂದ ಹಮ್ಮಿಕೊಳ್ಳಲಾದ ಭಾಷೆಯಾಗಿ ಇಂಗ್ಲಿಷ್ ಕಲಿಯಿರಿ ಕಾರ್ಯಕ್ರಮಕ್ಕೆ ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಎಂಬ ಅಭಿಯಾನವನ್ನು ಮಾಡುತ್ತಿರುವ ಶೆಫಿನ್ಸ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಮನೋಜ್ ಕಡಬವರನ್ನು ಅಹ್ವಾನಿಸಿ ವಿದ್ಯಾರ್ಥಿಗಳಿಗೆ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ನೀಡಲಾಯಿತಿ.
ಕಾರ್ಯಕ್ರಮದಲ್ಲಿ ಮನೋಜ್ ಕಡಬ, ಹಿರಿಯ ಪತ್ರಕರ್ತ ಡಾ. ಶೇಖರ್ ಅಜೆಕಾರು, ಅರ್ಪಿತ ಬ್ರಹ್ಮಾವರ ಉಪಸ್ಥಿತರಿದ್ದರು.

Photos from Kannada Madhyama Shale Ulisi Andolana's post 05/09/2023

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ.) ಕೇಂದ್ರ ಸಮಿತಿ ಹುಬ್ಬಳ್ಳಿ ಹಾಗೂ ಶ್ರೀ ಜನಾರ್ಧನ ಮಹಾಂಕಾಳಿ ದೇವಸ್ಥಾನ ಸಮಿತಿ ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ನಡೆದ ಶಿಕ್ಷಕ ಸಾಹಿತಿಗಳ ಆರನೇ ಸಮ್ಮೇಳನ ಸಂಭ್ರಮದಲ್ಲಿ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಕರಪತ್ರವನ್ನು ಸಮ್ಮೇಳನದ ಸರ್ವಾಧ್ಯಕ್ಷರಾದ ನೆಂಪು ನರಸಿಂಹ ಭಟ್ಟರು ಅನಾವರಣಗೊಳಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ವಿಶ್ವನಾಥ ಶೆಣೈ, ಆಂದೋಲನದ ಮುಖ್ಯಸ್ಥ ಮನೋಜ್ ಕಡಬ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಶಿಕ್ಷಕರ ದಿನಾಚರಣೆ: ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಮನೋಜ್ ಕಡಬ ಅವರಿಗೆ ಉಡುಪಿಯಲ್ಲಿ ರಾಜ್ಯಮಟ್ಟದ ಪ್ರ 05/09/2023

ಶಿಕ್ಷಕರ ದಿನಾಚರಣೆ: ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಮನೋಜ್ ಕಡಬ ಅವರಿಗೆ ಉಡುಪಿಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ

https://tulunaduvarthe.com/teachers-day-celebration-state-level-award-to-manoj-kadaba-of-save-kannada-medium-school-movement-in-udupi/

🪀 ತುಳುನಾಡು ವಾರ್ತೆ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://chat.whatsapp.com/GwfCPHLqVQZHzS9JOkP0Dl

ಶಿಕ್ಷಕರ ದಿನಾಚರಣೆ: ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಮನೋಜ್ ಕಡಬ ಅವರಿಗೆ ಉಡುಪಿಯಲ್ಲಿ ರಾಜ್ಯಮಟ್ಟದ ಪ್ರ ಉಡುಪಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು (ರಿ), ಕೇಂದ್ರ ಸಮಿತಿ ಹುಬ್ಬಳ್ಳಿ ಮತ್ತು ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನ ಸಮಿತಿ, ಅ...

28/08/2023
Photos from Kannada Madhyama Shale Ulisi Andolana's post 14/08/2023

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕುಂದಾಪುರ ಘಟಕದ ವತಿಯಿಂದ ಹಮ್ಮಿಕೊಂಡ ವೈದ್ಯ ಸಾಹಿತ್ಯ ಸಮಾವೇಶದಲ್ಲಿ ನಮ್ಮ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದ ಸ್ಟಾಲನ್ನು ಇಟ್ಟು ಎಲ್ಲರಿಗೂ ನಮ್ಮ ಆಂದೋಲನದ ಬಗ್ಗೆ ವಿವರವಾಗಿ ತಿಳಿಸಲಾಯಿತು.

ಮನೋಜ್ ಕಡಬ
ಶೆಫಿನ್ಸ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ), ಉಡುಪಿ.
9008418534

Save Kannada Medium Schools Full details 12/08/2023

Information about
Save Kannada Medium Schools by teaching spoken English
to the primary and high schools of Udupi and DK district.

This project is being conducted by Shefins Educational and Charitable Trust (R), with the permission of DDPI of Udupi District and DDPI of DK District.

Manoj Kadaba
Director
Shefins Educational and Charitable Trust (R), Udupi


Save Kannada Medium Schools Full details Information about Save Kannada Medium Schools by teaching spoken Englishto the primary and high schools of Udupi and DK district. This project is being condu...

Photos from Kannada Madhyama Shale Ulisi Andolana's post 09/08/2023
Photos from Kannada Madhyama Shale Ulisi Andolana's post 09/08/2023

ಚೌಕಿಂಗಡಿ ಮಾಳ ಶಾಲೆಯಲ್ಲಿ ಉಚಿತ ಸ್ಫೋಕ ಇಂಗ್ಲಿಷ್ ತರಬೇತಿ ಉದ್ಘಾಟನೆ

ಸ್ಪೋಕನ್ ಇಂಗ್ಲಿಷ್ ಕಲಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದಡಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅತಿಥಿ ಹಾಗೂ ಗೌರವ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ಉಚಿತ ಸ್ಫೋಕನ್ ಇಂಗ್ಲಿಷ್ ತರಬೇತಿ ನೀಡಲಾಗುತ್ತದೆ.
ಶಿಕ್ಷಕಿಯರು ಆರಂಭದ ಹಂತದ ತರಬೇತಿಯನ್ನು ಪಡೆದ ಬಳಿಕ ಅವರುಗಳ ಶಾಲೆಗಳಲ್ಲಿ ವಿದ್ಯಾರ್ಥಿಗಳ ತರಬೇತಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಾಗುತ್ತದೆ.

ಕಾರ್ಕಳ ತಾಲೂಕು, ಚೌಕಿಯಂಗಡಿ ಮಾಳ ಶಾಲೆಯ ಅತಿಥಿ ಶಿಕ್ಷಕಿಯರಾದ ಶ್ರೀಮತಿ ಉಷಾ ಮತ್ತು ಕುಮಾರಿ ಶ್ರೇಯ ಇವರು ಈಗಾಗಲೇ ಶೆಫಿನ್ಸ್ ನಿಂದ ತರಬೇತಿಯನ್ನು ಪಡೆದಿದ್ದು, ಸದ್ರಿ ಶಾಲೆಯ ವಿದ್ಯಾರ್ಥಿಗಳಿಗಾಗಿ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನು ಉದ್ಘಾಟಿಸಲಾಯಿತು.

ವರ್ಷಂತ್ಯದವರೆಗೆ ಮಕ್ಕಳಿಗೆ ವಾರದಲ್ಲಿ ಮೂರು ದಿನ ತಲಾ ಒಂದೊಂದು ಪಿರೇಡ್ನಂತೆ ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡಲಾಗುವುದು. ಈ ಮೂಲಕ ಮಕ್ಕಳಲ್ಲಿ ಇಂಗ್ಲಿಷ್ ಬಗ್ಗೆ ಆಸಕ್ತಿಯನ್ನು ಹೆಚ್ಚು ಮೂಡಿಸುವಂಥದ್ದು ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ಉಳಿದು, ಇಂಗ್ಲಿಷ್ ಸಂವಹನವನ್ನು ಚೆನ್ನಾಗಿ ಮಾಡುತ್ತ ಬದುಕಿನಲ್ಲಿ ಮುಂದೆ ಬರಲು ಅವಕಾಶಗಳನ್ನು ಒದಗಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಹಾಗೂ ಈ ಮೂಲಕ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳನ್ನು ಉಳಿಸಿಕೊಳ್ಳುವುದು ಈ ಒಂದು ಆಂದೋಲನದ ಉದ್ದೇಶವಾಗಿದೆ ಎಂದು ಶೆಫಿನ್ಸ್ ನ ನಿರ್ದೇಶಕ ಮನೋಜ್ ಕಡಬ ಹೇಳಿದರು.

ಉದ್ಘಾಟನೆಯನ್ನು ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಕ್ಷಿತಾ ಶೆಟ್ಟಿ ಅವರು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತರಬೇತಿದಾರರಾದ ಕುಮಾರಿ ಅಕ್ಷತಾ ಶೆಣೈ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಶ್ಲಾಘಿಸಿದರು. ತರಬೇತಿ ಪಡೆದ ಶಿಕ್ಷಕಿಯರಾದ ಶ್ರೀಮತಿ ಉಷಾ ಹಾಗೂ ಕುಮಾರಿ ಶ್ರೇಯ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಚಂದ್ರನಾಥ ಇಂದ್ರ, ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಯಶೋಧರ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಭುಜಂಗ ಅವರು ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ವಂದಿಸಿ, ಸಹಶಿಕ್ಷಕ ಶ್ರೀ ಸುಭಾಷ್ ಕಾರ್ಯಕ್ರಮ ನಿರೂಪಣೆಗೈದರು.

Want your school to be the top-listed School/college in Udupi?

Click here to claim your Sponsored Listing.

Location

Telephone

Address


Basement, AV Arcade, Near Karnataka Bank, Kunjibettu
Udupi
576102