NVSJC mayasandra

NVSJC mayasandra NVSJC" Nevaru Vidya Shala Junior College". placed in mayasandra(TB cross). Turvekere Tq. Tumkur Dst.

Today's pictures❤️
08/04/2023

Today's pictures❤️

ತಮ್ಮ ಸುದೀರ್ಘ ಅವಧಿಯ ದಹಿಕ ಶಿಕ್ಷಕರ ವೃತ್ತಿಯನ್ನು ಮುಗಿಸಿ ಇಂದು ನಿವೃತ್ತಿ ಪಡೆದ ಮಾನ್ಯ ಶ್ರೀ S ನಿಂಗೇಗೌಡ ಸರ್(SNG )ಗೆ ಅಭಿನಂದನೆಗಳು, ತಮ್...
31/05/2022

ತಮ್ಮ ಸುದೀರ್ಘ ಅವಧಿಯ ದಹಿಕ ಶಿಕ್ಷಕರ ವೃತ್ತಿಯನ್ನು ಮುಗಿಸಿ ಇಂದು ನಿವೃತ್ತಿ ಪಡೆದ ಮಾನ್ಯ ಶ್ರೀ S ನಿಂಗೇಗೌಡ ಸರ್(SNG )ಗೆ ಅಭಿನಂದನೆಗಳು, ತಮ್ಮ ಮುಂದಿನ ಜೀವನ ಸುಖ-ಶಾಂತಿ ಇಂದ ಕೂಡಿರಲೆಂದು ಪ್ರಾರ್ಥಿಸುತ್ತೇವೆ.🙏🏻❤️

ಭಾವಪೂರ್ಣ ಶ್ರದ್ಧಾಂಜಲಿ.
04/04/2022

ಭಾವಪೂರ್ಣ ಶ್ರದ್ಧಾಂಜಲಿ.

10/05/2021
10/06/2019

ಕಳೆದ ಹಲವು ವರ್ಷಗಳಿಂದ ಹಿಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಮಂಜಪ್ಪನವರು ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾಧಿಸುತ್ತೆವೆ.

16/07/2017

ಕೆಲ‌ಸ‌ದ‌ ಒತ್ತಡದ‌ಲ್ಲಿ ಬೆಂಡಾದ ಮನಸ್ಸನ್ನು , ಹಳೆಯ ಸುಂದರ ಲೋಕಕ್ಕೆ ಒಯ್ಯುವ ಕೆಲ ಸಾಲುಗ‌ಳು..

ಇದನ್ನು ಬರೆದ‌ವ‌ರ್ಯಾರೊ ಗೊತ್ತಿಲ್ಲ..

ಓದಿ, ....

ಅಂದು ಬಡತನವಿತ್ತು.
ಹಸಿವು ಸೋಲಿಸುತ್ತಿತ್ತು.
ಒಮ್ಮೊಮ್ಮೆ ತಂಗಳನ್ನವಿತ್ತು.
ಇಲ್ಲವಾದರೆ ಹೆತ್ತಬ್ಬೆಯ ಮಡಿಲಿತ್ತು!
ಆಟಿಕೆಗೂ ಬರವಿತ್ತು,ಆಟ ಸಾಗುತಲಿತ್ತು!
ವರ್ಷಕ್ಕೊಂದೇ ಹಬ್ಬವಿತ್ತು.
ದುಂಡಾದ ಇಡ್ಲಿಯಿತ್ತು.
ರುಚಿಸುತ್ತಿದ್ದ ಸಾರಿತ್ತು.
ಅಪ್ಪ ಕೊಡಿಸುತ್ತಿದ್ದ ಹಬ್ಬದ ಬಟ್ಟೆಯಿತ್ತು.
ಸಂಬಂಧ ಬೆಸೆಯುವ ಭೇಟಿಗಳಿತ್ತು.
ಹಬ್ಬದಂದು ಎಂಟತ್ತು ನಾಣ್ಯಗಳಿತ್ತು!

ಆರೇಳು ಕುಟಂಬಗಳು ಬಾಳುವ
ಸಣ್ಣ ಜೋಪಡಿಯಿತ್ತು!
ಮನೆತುಂಬಾ 'ಮಕ್ಕಳ' ನಗುವಿತ್ತು!
ಆಟವಾಡಲು ಅಜ್ಜನ ಆಲದಮರವಿತ್ತು.
ಹೂಂಗುಟ್ಟುತ್ತಾ ಮಲಗಲು ಅಜ್ಜಿಯ ಕತೆಯಿತ್ತು!
ಒಂದೇ ಹಲಸನು ಹಂಚಿ ತಿನ್ನುವ
ಹಲಸದ ಬಂಧಗಳಿತ್ತು!

ಜಾತ್ರೆಯಲಿ ಕೊಂಡ ಪ್ಲಾಸ್ಟಿಕ್ ಚೆಂಡಿತ್ತು.
ತುಟಿ ಕೆಂಪಾಗಿಸುತಿದ್ದ ಪೆಪ್ಪರ್ಮೆಂಟಿತ್ತು.
ಕೈಗೆ ಕಟ್ಟಲು ತೆಂಗಿನಗರಿಯ ವಾಚಿತ್ತು.
ಉಲ್ಟ ದರಿಸಿದ್ದ BYKOF ಚಪ್ಪಲಿಯಿತ್ತು.
ಕೇರಿ ಸುತ್ತಾಟಕ್ಕೆ ಬಂಡಿಯಾಟವಿತ್ತು
ಮಳೆಗಾಲದಲಿ ಹರಿದ ಛತ್ರಿಯಿತ್ತು.
ನೆನೆದು ಒದ್ದೆಯಾಗುವ ಹುಚ್ಚುತನವಿತ್ತು.
ಜ್ವರ ಬಂದರೆ ರಜೆಯೆಂಬ ಖುಷಿಯಿತ್ತು.
ಜ್ವರದ ರಾತ್ರಿಗಳಲಿ ಅಮ್ಮನ ಕಾವಲಿತ್ತು.
ಪಾಚಿಯಲಿ ಜಾರಿದ ಅವಮಾನವಿತ್ತು.
ತೋಡಿನ ನೀರಲೂ ದೋಣಿಯಾಟವಿತ್ತು.
ಮೀನು ಹಿಡಿಯುವ ಅಭ್ಯಾಸವಿತ್ತು.
ಅದಕೆಂದೇ ಅಪ್ಪನ ಹರಿದ ಲುಂಗಿಯಿತ್ತು.
ಸಂಜೆಗೆ ಅಜ್ಜಿ ಕಾಯಿಸಿದ ಹಪ್ಪಳವಿತ್ತು.
ಚಳಿಗಾಲದಿ ಚಳಿಕಾಯಿಸುವಿಕೆಯಿತ್ತು.
ಮೈ ತುಂಬುತಿದ್ದ ಅಜ್ಜನ ಬಟ್ಟೆಯಿತ್ತು.
ಹೊದ್ದು ಮಲಗಲು ಕಂಬಳಿಯಿತ್ತು.
ಸಣ್ಣ ಜೋಪಡಿ ತುಂಬಾ ಕತ್ತಲಿತ್ತು.
ಹಿಡಿದಿಡುತ್ತಿದ್ದ ಮಿಂಚುಹುಳದ ಬೆಳಕಿತ್ತು.

ಬದುಕು ಕಲಿಸುತ್ತಿದ್ದ ಹಳ್ಳಿಯ ಸ್ಕೂಲಿತ್ತು.
ಶಾಲೆಗೆ ನಡೆಯಲು ಗದ್ದೆಯ ದಾರಿಯಿತ್ತು.
ದಾರಿಯ ಮರಗಳಲೂ ಪ್ರೀತಿಯಿತ್ತು.
ತಿನ್ನಲು ಗೇರು,ಮಾವು,ನೇರಳೆಗಳಿತ್ತು.
ಉದಾಸೀನದ ವ್ಯಾಯಾಮವಿತ್ತು.
ನಾಗರಬೆತ್ತದ ಭಯವೂ ಇತ್ತು.
ರಾಗದಿ ಹೇಳುತ್ತಿದ್ದ ಮಗ್ಗಿಯಿತ್ತು.
ಮಾತಾಡಲು ಕ್ಲಾಸ್ಲೀಡರ್ ಭಯವಿತ್ತು.
ಖುಷಿಕೊಡುತ್ತಿದ್ದ ಲಾಂಗ್-ಬೆಲ್ ಇತ್ತು.
ಚೀಲೆಯಲಿ ಕದ್ದ ಬಣ್ಣದ ಬಳಪವಿತ್ತು.
ಮತ್ತೆ ಮತ್ತೆ ತಪ್ಪುತ್ತಿದ್ದ ಉಕ್ತಲೇಖನವಿತ್ತು.
ಬರೆದು ಮುಗಿಯದ imposition ಇತ್ತು.
ಅಳು ತರಿಸಿದ್ದ ಪುಣ್ಯಕೋಟಿ ಕತೆಯಿತ್ತು.
ಸ್ವತಂತ್ರದಂದು ಎರಡು ಬಾವುಟವಿತ್ತು.
ಲಾಡುಕೊಡುವ ಸರದಿಯಲಿ ಜಗಳವಿತ್ತು.
ಖುಷಿಕೊಡುವ ಲಗೋರಿಯಾಟವಿತ್ತು.
ಕಣ್ಣೀರು ತರಿಸುವ ಇಂಜೆಕ್ಷನ್ಗಳಿತ್ತು.
ತಪ್ಪಿಗೆ ಮೈದಾನ ಸುತ್ತುವ ಶಿಕ್ಷೆಗಳಿತ್ತು.
ಬಿಸಿಲಲಿ ತಲೆಸುತ್ತುವ ಭಯವಿತ್ತು. ಬಿದ್ದಾಗ ಟೀಚರಮ್ಮನ ಆರೈಕೆಯಿತ್ತು.
ಕಬಡ್ಡೀಲಿ ಸೋತಂದು ಉಪವಾಸವಿತ್ತು.
ಪ್ರೈಜ್ ಕೊಟ್ಟ ಮೇಷ್ಟ್ರಿಗೆ ಶಾಪವಿತ್ತು.

ನಿಂತನೀರಿಗೆ ಕಲ್ಲೆಸೆದು ಕಪ್ಪೆ ಎಬ್ಬಿಸುತಿದ್ದೆ.
ಕೊಂದ ಓತಿಕೇತಕ್ಕೆ ತಿಥಿ
ಸತ್ತ ಇರುವೆಯ ನೋಡಿ ಅತ್ತಿದ್ದೆ.
ಸಕ್ಕರೆ,ಬೆಲ್ಲ,ಹುಳಿಯ ಕದಿಯುತಿದ್ದೆ.
ಗೆಳೆಯ ಔಟಾಗಲೆಂದು ಮಾಟಮಾಡಿದ್ದೆ.
ಅರ್ಥವಾಗದ ಹಾಸ್ಯಕ್ಕೆ ನಕ್ಕಿದ್ದೆ.
ಮಂಚದಡಿ ಕೂತು ಅಮ್ಮನ ಹೆದರಿಸಿದ್ದೆ.
ದುಂಭಿ ಹಿಡಿದು,ಅದನೂ ಸಾಕುತ್ತಿದ್ದೆ.
ಸಾರಿಗೆ ತಂದ ಟೊಮ್ಯಟೋ ಈಜಲು ಬಿಟ್ಟಿದ್ದೆ.
ಚಂದಮಾಮನ ಹಸಿವಿಗೆಂದು ಉಣುತ್ತಿದ್ದೆ
ಪೇರಳೆ ಕೊಯ್ಯಲು ಮರಹತ್ತುತ್ತಿದ್ದೆ.
ಬಿದ್ದು ಕೈ ಮುರಿದುಕೊಂಡಿದ್ದೆ.
ಐಸ್ಕ್ಯಾಂಡಿ ಕೊಡಿಸಲೆಂದು ಅಳುತ್ತಿದ್ದೆ.
ಕೊಡಿಸಿದಾಗ ಚುಂಬಿಸಿದ್ದೆ.
ಎಲ್ಲರದು ಮುಗಿಯಲೆಂದು ಕಾಯುತ್ತಿದ್ದೆ.

ಏನಿಲ್ಲ ಎನ್ನುತ್ತಿದ್ದ ನನಗಾಗ ಎಲ್ಲಾ ಇತ್ತು.
ಎಲ್ಲಕ್ಕೂ ಮಿಗಿಲಾದ ಮುಗ್ಧತೆಯಿತ್ತು.
ಸ್ನೇಹದ ಅರ್ಥ ತಿಳಿದಿರಲಿಲ್ಲ.
ಸೋಮ, ಪುನಿತ, ಅಬ್ದುಲ್, ಜೊತೆಗಿದ್ದೆ.
ಆಗ ನನ್ನಲಿ ನಿಷ್ಕಪಟ ಸ್ನೇಹವಿತ್ತು.
ಮಾನವತೆಯ ಹೃದಯವಿತ್ತು.
ಹೃದಯದ ಮಾತುಗಳಿತ್ತು.

******************

06/03/2017

ಬಂಗಾರ್ದಂಗ್ ಇದ್ ನಮ್ schoolನ ಗೋಶಾಲೆ ಮಾಡ್ಬಿಟೌರಲ್ಲ ಗುರು!!!
😣😣😣

📷 - ತರುಣ್ ರಾಜಣ್ಣ (Theertha)
22/01/2017

📷 - ತರುಣ್ ರಾಜಣ್ಣ (Theertha)

ತುಂಬಾ ದಿನದ ಹಿಂದೆ ತೆಗ್ದಿದ್ದು,ತುಂಬ ಇಷ್ಟ ಪಟ್ಟು ತೆಗ್ದಿದ್ದು.                           📷 - ತರುಣ್ ರಾಜಣ್ಣ  (Theertha)
18/01/2017

ತುಂಬಾ ದಿನದ ಹಿಂದೆ ತೆಗ್ದಿದ್ದು,
ತುಂಬ ಇಷ್ಟ ಪಟ್ಟು ತೆಗ್ದಿದ್ದು.
📷 - ತರುಣ್ ರಾಜಣ್ಣ (Theertha)

01/07/2016

(ವಾಟ್ಸಪ್ಪಿನಲ್ಲಿ ಬಂದಿದ್ದು....)
ನವದಂಪತಿಗಳು ಆ ಮನೆಗೆ ಬಾಡಿಗೆಗೆ ಬಂದರು. ಮರುದಿನ ಅವರು ಉಪಾಹಾರ ಸೇವಿಸುವಾಗ ಪಕ್ಕದ ಮನೆಯಲ್ಲಿ ಒಣಗಿಹಾಕಲು ನೇತು ಹಾಕಿದ ಬಟ್ಟೆಗಳನ್ನು ಗಂಡನಿಗೆ ತೋರಿಸುತ್ತಾ,”ಆ ಪಕ್ಕದ ಮನೆಯ ಹೆಂಗಸು ಹೇಗೆ ಬಟ್ಟೆ ತೊಳೆದಿದ್ದಾಳೆ ನೋಡಿ. ಸ್ವಲ್ಪವೂ ಸ್ವಚ್ಛವಾಗಿಲ್ಲ. ಕೊಳೆಯೆಲ್ಲ ಹಾಗೇ ಇದೆ’ ಎಂದಳು.

ಹೆಂಡತಿಯ ಮಾತನ್ನು ಗಂಡ ಕೇಳಿಸಿಕೊಂಡ. ಆದರೆ ಏನೂ ಪ್ರತಿಕ್ರಿಯಿಸಲಿಲ್ಲ.

ಪ್ರತಿಸಲ ಪಕ್ಕದ ಮನೆಯಾಕೆ ಬಟ್ಟೆಗಳನ್ನು ಒಣ ಹಾಕಿದಾಗಲೆಲ್ಲ ಹೆಂಡತಿ ಇದೇ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಳು.”ಆಕೆಗೆ ಬಟ್ಟೆ ತೊಳೆಯೋದು ಹೇಗೆ ಎಂಬುದನ್ನು ತಿಳಿಸಿ ಕೊಡಬೇಕು, ಇಲ್ಲವೇ ಬಟ್ಟೆ ತೊಳೆಯುವ ಉತ್ತಮ ಸೋಪು ಪೌಡರನ್ನಾದರೂ ತಂದು ಕೊಡಬೇಕು’ ಎಂದು ಗೇಲಿ ಮಾಡುತ್ತಿದ್ದಳು.

ಒಂದು ತಿಂಗಳು ಕಳೆದ ಬಳಿಕ ಒಂದು ದಿನ…
‘ನೋಡಿದಿರಾ? ಪಕ್ಕದ ಮನೆಯವಳಲ್ಲಿ ಅಗಾಧ ಬದಲಾವಣೆಯಾಗಿದೆ. ಈಗ ಅವಳು ತೊಳೆದ ಬಟ್ಟೆ ಕ್ಲೀನಾಗಿರುತ್ತದೆ. ಆಶ್ಚರ್ಯ ಅಂದ್ರೆ ಅವಳು ಬಟ್ಟೆ ತೊಳೆಯಲು ಹೇಗೆ ಕಲಿತಳು ಎಂಬುದು’ ಎಂದು ಗಂಡನನ್ನು ಕರೆದು ಶುಭ್ರ ಬಟ್ಟೆಗಳನ್ನು ತೋರಿಸುತ್ತಾ ಹೇಳಿದಳು.

ಇದನ್ನು ಕೇಳಿಸಿಕೊಂಡ ಗಂಡ ಮೆಲ್ಲಗೆ ನುಡಿದ-“ಇಂದು ನಾನು ಬೇಗ ಎದ್ದು, ನಮ್ಮ ಮನೆಯ ಕಿಟಕಿ ಗಾಜುಗಳನ್ನೆಲ್ಲ ಚೆನ್ನಾಗಿ ತೊಳೆದು ಒರೆಸಿದೆ.’
ಪಕ್ಕದ ಮನೆಯವರ ಗಲೀಜನ್ನು ಎತ್ತಿ ತೋರಿಸುವ ಮೊದಲು ನಮ್ಮ ಮನೆಯ ಕಿಟಕಿ ಗಾಜು ಹೇಗಿದೆ ಎಂದು ನೋಡಿಕೊಳ್ಳೋಣ. ಹೊಲಸು ಗಾಜಿನಿಂದ ನೋಡಿದರೆ ಹೊರಜಗತ್ತೆಲ್ಲ ಹೊಲಸಾಗಿಯೇ ಕಾಣುತ್ತದೆ. ಮೊದಲು ನಮ್ಮ ಮನೆಯ ಕಿಟಕಿ ಗಾಜುಗಳನ್ನು ಸ್ವಚ್ಛಗೊಳಿಸೋಣ.

Address

Tumkur
572221

Website

Alerts

Be the first to know and let us send you an email when NVSJC mayasandra posts news and promotions. Your email address will not be used for any other purpose, and you can unsubscribe at any time.

Shortcuts

Share

Category