23/02/2024
ಶ್ರೀಮನ್ನ್ಯಾಯಯ ಸುಧೆ ಅಮೃತದ ಕಡಲು
ಎಂದಿಗೂ ಕರಗದ ಕೊರಗದ ಭಾಗ್ಯದ ಒಡಲು .
ಪ್ರತಿವಾದಿಗಳಿಗೆ ಭಯಂಕರ ಸಿಡಿಲು.
ತತ್ವಚಿಂತಕರಿಗೆ ಶ್ರಮವನ್ನು ಕಳೆಯುವ ಮಡಿಲು.
ಸದಾತನ
ಸು- ಸುಖಕ್ಕಾಗಿ
ಧಾ - ಧಾವಿಸುವ
ಪ್ರತಿಯೊಬ್ಬ ಸುಧಿಯೂ ಸುಧೆಯನ್ನು ಸವಿಯಬೇಕು.
ಸಂಸಾರವು ಕಷ್ಟಕಾರ್ಪಣ್ಯಗಳ ಸಾಗರ.
ಶ್ರೀಮನ್ನ್ಯಾಯ ಸುಧೆಯು ಅಪರಿಮಿತ ಆನಂದಸಾಗರ.
ಸಂಸಾರ ಸಾಗರದಲ್ಲಿ ತೆರೆಗಳ ತಿಕ್ಕಾಟದಿಂದ ಸುನಾಮಿಯ ಭಯ.
ಟೀಕಾಕೃತ್ಪಾದರ ಸುಧಾಸಾಗರದಲ್ಲಿ
ಶ್ರೀಹರಿಯ ಸುನಾಮಗಳಿಂದ ಅಭಯ.
ಭವ ಸಾಗರ ಲವಣದ ಆಗರ, ಸುಧಾಕಾರರ ಸುಧಾ ಲಾವಣ್ಯದ ಆಗರ.
ಭವ ಸಾಗರದ ಪ್ರತಿ ಹನಿಯಲ್ಲಿಯೂ ಲವಣದ ಬಿಂದು.
ಸುಧೆಯ ಪ್ರತಿಪದದಲ್ಲಿಯೂ ಆನಂದದ ಸಿಂಧು.
ಸಂಸಾರಸಾಗರದಲ್ಲಿ ಗರವಿದೆ. ಸುಧೆಯಲ್ಲಿ ಗೌರವವಿದೆ.
ಸಂಸಾರದಲ್ಲಿ ಮುಳುಗಿದವನು ಮೃತನಾಗುವನು.
ಸುಧಾಸಾಗರದಲ್ಲಿ ಮುಳುಗಿದವನು ಅಮೃತನಾಗುವನು.
*ಕ್ರೀಡತೋ ಹೈಮೃತಾಂಭೋಧೌ ಕಿಂ ವಾ ಅನ್ಯೈ: ಖಾತಕೋದಕೈಃ*
ಅಮೃತಸಾಗರದಲ್ಲಿ ವಿಹರಿಸುವವರಿಗೆ
ಇತರ ಸರೋವರಗಳ ನೀರಿನಿಂದ ಆಗುವದೇನಿದೆ?
ಈ ವಿಧ ಅಗಾಧ ಸುಧಾಸಾಗರದ ಆಳದಲ್ಲಿಳಿದು ರತ್ನಗಳನ್ನು ಹೆಕ್ಕಿ ನೀಡುವ ಶ್ರೀಸತ್ಯಾತ್ಮತೀರ್ಥರು ನಡೆಸುವ ಈ ಸುಧಾಮಂಗಳದಲ್ಲಿ ನೀವು ಬನ್ನಿ, ನಿಮ್ಮವರನ್ನು ಕರೆತನ್ನಿ.
ನಿಮ್ಮೆಲ್ಲರಿಗೂ ನಮ್ಮ ಹಾರ್ದಿಕ ಸುಸ್ವಾಗತ
#01/03/2024 to 05/03/2024