Vivekananda College, Puttur

Vivekananda College, Puttur Contact information, map and directions, contact form, opening hours, services, ratings, photos, videos and announcements from Vivekananda College, Puttur, Education, Nehru Nagar, Puttur.

https://youtu.be/r9UBdAQlO_Q🛑ಹಾಸ್ಯದ ಮುಖೇನವೇ ಜೀವನ ಪಾಠ ಹೇಳುವ ಕಲ್ಲಡ್ಕ ವಿಠಲ್ ನಾಯಕ್  ನಗೆಚಟಾಕಿಕಚಗುಳಿ-ಇದು ನಗುವಿನ ಟಾನಿಕ್🔴ಭಾಗ-೧🚨ವ...
11/07/2022

https://youtu.be/r9UBdAQlO_Q

🛑ಹಾಸ್ಯದ ಮುಖೇನವೇ ಜೀವನ ಪಾಠ ಹೇಳುವ ಕಲ್ಲಡ್ಕ ವಿಠಲ್ ನಾಯಕ್ ನಗೆಚಟಾಕಿ

ಕಚಗುಳಿ-ಇದು ನಗುವಿನ ಟಾನಿಕ್

🔴ಭಾಗ-೧

🚨ವೀಕ್ಷಿಸಿ ನಿಮ್ಮ ವಿಕಸನ ಟಿವಿಯಲ್ಲಿ

02/05/2021
Ms.Ananya Pangal of BSc, has secured First Rank in Mangalore university Examination held during September 2020.Congratul...
26/03/2021

Ms.Ananya Pangal of BSc, has secured First Rank in Mangalore university Examination held during September 2020.
Congratulation to her.

ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕರು-ವಿದ್ಯಾರ್ಥಿಗಳಿಂದ ‘ಕೋವಿಡ್-೧೯’ ಜಾಗೃತಿ ಜಾಥಾಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಾಧ್ಯಾಪಕ...
24/03/2021

ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕರು-ವಿದ್ಯಾರ್ಥಿಗಳಿಂದ ‘ಕೋವಿಡ್-೧೯’ ಜಾಗೃತಿ ಜಾಥಾ
ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪ್ರಾಧ್ಯಾಪಕ ವರ್ಗ, ಎನ್.ಎಸ್.ಎಸ್., ಎನ್.ಸಿ.ಸಿ. ಹಾಗೂ ರೇಂಜರ್ಸ್ ಮತ್ತು ರೋವರ್ಸ್ ಘಟಕದ ವತಿಯಿಂದ ‘ಕೋವಿಡ್-೧೯’ ಜಾಗೃತಿ ಜಾಥಾ ನಡೆಯಿತು. ವಿವೇಕಾನಂದ ಪದವಿ ಮಹಾವಿದ್ಯಾಲಯದಿಂದ ಹೊರಟ ಜಾಥಾ ನೆಹರುನಗರದ ಬಸ್‌ಸ್ಟ್ಯಾಂಡ್ ನಲ್ಲಿ ಕೊನೆಗೊಂಡಿತು. ಕಾಲೇಜಿನ ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳು ತಯಾರಿಸಿದ ಮಾಸ್ಕ್ಗಳನ್ನು ಸಾರ್ವಜನಿಕರಿಗೆ, ಅಂಗಡಿಗಳ ಮಾಲಿಕ ಹಾಗೂ ಗ್ರಾಹಕ ವರ್ಗ, ಪಾದಾಚಾರಿಗಳಿಗೆ ವಿತರಿಸುವ ಮೂಲಕ ಕೊರೊನಾ ಕುರಿತಾಗಿ ಜಾಗೃತಿ ಮೂಡಿಸಿದರು. ಈ ಜಾಗೃತಿ ಜಾಥಾಕ್ಕೆ ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಶುಭಹಾರೈಸಿದರು.

ದಿನಾಂಕ 19-2-2021 ರಂದು  ವಿವೇಕಾನಂದ ಪದವಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಹಾಗೂ ಉದ್ಯೋಗ ಮತ್ತು ತರಬೇತಿ ಘಟಕ, ಐಕ್ಯೂಎಸಿ ಇದರ ಸಹಯೋಗದಲ್ಲಿ ...
20/03/2021

ದಿನಾಂಕ 19-2-2021 ರಂದು ವಿವೇಕಾನಂದ ಪದವಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಹಾಗೂ ಉದ್ಯೋಗ ಮತ್ತು ತರಬೇತಿ ಘಟಕ, ಐಕ್ಯೂಎಸಿ ಇದರ ಸಹಯೋಗದಲ್ಲಿ 'ಕಾರ್ಪೊರೇಟ್ ಕಲ್ಚರ್' ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಹಿರಿಯ ವಿದ್ಯಾರ್ಥಿ, ಪ್ರಸ್ತುತ ' ಸ್ಟೇಟ್ ಸ್ಟ್ರೀಟ್ ಕಾರ್ಪೊರೇಟ್ ಸರ್ವೀಸಸ್' ಬೆಂಗಳೂರು ಇಲ್ಲಿ ಸೀನಿಯರ್ ಅಸೋಸಿಯೇಟ್ ಆಗಿರುವ ಶ್ರೀ ರವೀಶ್ ಶರ್ಮ, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಇವರು ಕಾರ್ಪೊರೇಟ್ ಜಗತ್ತಿನ ವ್ಯವಹಾರ ನೀತಿ ಶಾಸ್ತ್ರ, ಸಂವಹನ, ವ್ಯವಹಾರಿಕ ಸಂಸ್ಕೃತಿ, ಬಾಡಿ ಲ್ಯಾಂಗ್ವೇಜ್, ಟೇಬಲ್ ಮ್ಯಾನರ್ಸ್ ಇತ್ಯಾದಿ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ವಿಷ್ಣು ಗಣಪತಿ ಭಟ್ ಹಾಗೂ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ರೇಖಾ ಉಪಸ್ಥಿತರಿದ್ದರು. ತೃತೀಯ ಬಿಬಿಎ ವಿದ್ಯಾರ್ಥಿಗಳಾದ ವಿನಯ್ ಸೇಡಿಯಾಪು ಸ್ವಾಗತಿಸಿ, ಚರಣ್ ವಂದಿಸಿದರು. ಪ್ರಜ್ಞಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

ಪಠ್ಯ ವಿಷಯಗಳ ಜೊತೆಗೆ ಟ್ಯಾಲಿ ಅಕೌಂಟಿಂಗ್ ಸಾಫ್ಟ್ವೇರ್ನ ಜ್ಞಾನವು ಬಿಕಾಂ ಹಾಗೂ ಬಿಬಿಎ ಪದವೀಧರರಿಗೆ ಉದ್ಯೋಗ ಅವಕಾಶಗಳನ್ನು   ಒದಗಿಸಿಕೊಡುತ್ತದೆ...
20/03/2021

ಪಠ್ಯ ವಿಷಯಗಳ ಜೊತೆಗೆ ಟ್ಯಾಲಿ ಅಕೌಂಟಿಂಗ್ ಸಾಫ್ಟ್ವೇರ್ನ ಜ್ಞಾನವು ಬಿಕಾಂ ಹಾಗೂ ಬಿಬಿಎ ಪದವೀಧರರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಟ್ಯಾಲಿ ಅಕೌಂಟಿಂಗ್ ಸಾಫ್ಟ್ವೇರ್ ವಿಶ್ವದಾದ್ಯಂತ ಪ್ರಚಲಿತದಲ್ಲಿರುವ ಅತ್ಯಂತ ಜನಪ್ರಿಯವಾದ ಸಾಫ್ಟ್ವೇರ್ ಗಳಲ್ಲಿ ಒಂದಾಗಿದ್ದು, ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಯು ಬಳಸುತ್ತಿರುವ ಅಕೌಂಟಿಂಗ್ ಸಾಫ್ಟ್ವೇರ್ ಎಂದು ಸಿಎ ಅರವಿಂದ ಕೃಷ್ಣ ಹೇಳಿದರು..
ಇವರು ದಿನಾಂಕ 6-3-2021 ರಂದು ವಿವೇಕಾನಂದ ಪದವಿ ಕಾಲೇಜಿನಲ್ಲಿ tally.erp 9 ಸರ್ಟಿಫಿಕೇಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು. ಐಕ್ಯೂಎಸಿ ಕೋಆರ್ಡಿನೇಟರ್ ಶ್ರೀ ಶಿವಪ್ರಸಾದ್ ಕೆಎಸ್ ಶುಭಹಾರೈಸಿ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿ ಜಿ ಭಟ್ ವಹಿಸಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಶ್ರೀಮತಿ ರವಿಕಲಾ ಹಾಗೂ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ರೇಖಾ ಉಪಸ್ಥಿತರಿದ್ದರು. ಜ್ಞಾನೇಶ್ 3 BBA ಸ್ವಾಗತಿಸಿ, ಪೂಜಾ ನಾಯಕ 3rd B.Com , ವಂದಿಸಿದರು. ಅಕ್ಷಿತಾ 3rd B.Com ಕಾರ್ಯಕ್ರಮ ನಿರೂಪಿಸಿದರು.

ಅಗಾಧವಾದ ಅವಕಾಶಗಳ ಅಗಾರವೇ ಈ ಪೋಲಿಸ್ ಇಲಾಖೆ : ರವಿಚಂದ್ರವಿವೇಕಾನಂದ ಕಾಲೇಜಿನ ಪ್ಲೇಸ್‌ಮೆಂಟ್ ಹಾಗೂ ಟ್ರೇನಿಂಗ್ ಸೆಲ್, ಐಕ್ಯೂಎಸಿ ಘಟಕ, ಎನ್.ಸಿ...
19/03/2021

ಅಗಾಧವಾದ ಅವಕಾಶಗಳ ಅಗಾರವೇ ಈ ಪೋಲಿಸ್ ಇಲಾಖೆ : ರವಿಚಂದ್ರ
ವಿವೇಕಾನಂದ ಕಾಲೇಜಿನ ಪ್ಲೇಸ್‌ಮೆಂಟ್ ಹಾಗೂ ಟ್ರೇನಿಂಗ್ ಸೆಲ್, ಐಕ್ಯೂಎಸಿ ಘಟಕ, ಎನ್.ಸಿ.ಸಿ. ಮತ್ತು ರೆಡ್‌ಕ್ರಾಸ್ ಘಟಕಗಳು ದಿನಾಂಕ 6-2-2021 ರಂದು ಪೋಲಿಸ್ ಸೇವೆಯಲ್ಲಿ ವೃತ್ತಿ ಅವಕಾಶಗಳು’ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಮಂಗಳೂರು ಪೋಲಿಸ್ ಕಮಿಷನರೇಟ್‌ನ ಅಡ್ಮಿನಿಸ್ಟ್ರೇಟಿವ್ ಆಫೀಸರ್ ರವಿಚಂದ್ರ, ಪೊಲೀಸ್ ಸೇವೆಯಲ್ಲಿ ವೃತ್ತಿ ಅವಕಾಶಗಳ ಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಷ್ಣು ಗಣಪತಿ ಭಟ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಯೋಜಕಿ, ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗರತ್ನ ಸಿ. ಉಪಸ್ಥಿತರಿದ್ದರು. ಕಾಲೇಜಿನ ಪ್ಲೇಸ್‌ಮೆಂಟ್ ಹಾಗೂ ಟ್ರೇನಿಂಗ್ ಸೆಲ್‌ನ ಸಂಯೋಜಕಿ, ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ ಪಿ. ಸ್ವಾಗತಿಸಿ, ಎನ್.ಸಿ.ಸಿ. ಘಟಕದ ಸಂಯೋಜಕ, ಕಾಲೇಜಿನ ವಾಣಿಜ್ಯಶಾಸ್ತç ಉಪನ್ಯಾಸಕ ಬಿ. ಅತುಲ್ ಶೆಣೈ ವಂದಿಸಿದರು. ಪ್ಲೇಸ್‌ಮೆಂಟ್ ಹಾಗೂ ಟ್ರೇನಿಂಗ್ ಸೆಲ್‌ನ ಸದಸ್ಯೆ, ಕಾಲೇಜಿನ ಗಣಕಶಾಸ್ತç ವಿಭಾಗದ ಉಪನ್ಯಾಸಕಿ ಜೀವಿತಾ ಎನ್.ಕೆ. ಕಾರ್ಯಕ್ರಮ ನಿರೂಪಿಸಿದರು.

Department of Business Administration organized student outreach programme at Government PU College Savanoor on 12/03/20...
16/03/2021

Department of Business Administration organized student outreach programme at Government PU College Savanoor on 12/03/2021. Final BBA students conducted the various activities for PU students. Around 50 students of the government PU College. Savanoor have participated in this programme..

Fine arts Association Program.....
15/03/2021

Fine arts Association Program.....

ಸಮಾಜವನ್ನು ತಿದ್ದುವ ಕೆಲಸ ನಾಟಕಗಳಿಂದಾಗಲಿ: ಡಾ. ಕೆ. ಪ್ರಭಾಕರ ಭಟ್ಪುತ್ತೂರು ಮಾ.5: ನಾಟಕ ಅನ್ನುವುದು ಅದ್ಭುತವಾದ ಕಲೆ. ನೂರಕ್ಕೆ ನೂರು ಪ್ರತಿ...
05/03/2021

ಸಮಾಜವನ್ನು ತಿದ್ದುವ ಕೆಲಸ ನಾಟಕಗಳಿಂದಾಗಲಿ: ಡಾ. ಕೆ. ಪ್ರಭಾಕರ ಭಟ್

ಪುತ್ತೂರು ಮಾ.5: ನಾಟಕ ಅನ್ನುವುದು ಅದ್ಭುತವಾದ ಕಲೆ. ನೂರಕ್ಕೆ ನೂರು ಪ್ರತಿಶತವಾಗಿ ಕಲಾವಿದನಾದವನು ತನ್ನನ್ನು ಆ ಪಾತ್ರದಲ್ಲಿ ತೊಡಗಿಸಿಕೊಳ್ಳಬೇಕು. ಈ ಕಲಾಕ್ಷೇತ್ರ ಜೀವನಕ್ಕೆ ಒಂದು ದಿಕ್ಕು ತೋರಿಸುವ ಕ್ಷೇತ್ರ. ಈ ಕಲಾಪ್ರಕಾರಗಳು ಹಳ್ಳಿ ಹಳ್ಳಿಗೆ ತಲುಪಬೇಕು. ಸಮಾಜವನ್ನು ತಿದ್ದಿ ಅದನ್ನು ಎತ್ತರಕ್ಕೆ ಏರಿಸುವಂತಹ ಕ್ಷೇತ್ರ ಅದು. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯಬೇಕು ಎಂದು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಹಾಗೂ ಐಕ್ಯೂಎಸಿ ಘಟಕ, ಕರ್ನಾಟಕ ನಾಟಕ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಒಂದು ದಿನದ ‘ರಂಗ ವಿಮರ್ಶಾ ಕಮ್ಮಟ’ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು.
ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ದೇಶ. ಇಲ್ಲಿ ಭಾಷೆಗಳು ಹಲವು, ನಡೆ-ನುಡಿಗಳು, ವೇಷ-ಭೂಷಣಗಳು ಹಲವು. ಆದಾಗ್ಯೂ ಏಕತೆಯನ್ನು ಸಾಧಿಸಿದ ಹೆಮ್ಮ ನಮ್ಮ ಭಾರತೀಯರದ್ದು. ಈ ದೇಶದ ಸಂಸ್ಕೃತಿ- ಸಭ್ಯತೆಯನ್ನು ರೂಢಿಸಿಕೊಳ್ಳುವುದು ನಮ್ಮ ಅಸ್ಮಿತೆ. ನಮ್ಮತನದಿಂದ, ನಮ್ಮ ವ್ಯಕ್ತಿತ್ವದಿಂದ ನಮ್ಮನ್ನು ಗುರುತಿಸುವಂತಾಗಬೇಕು ಎಂದು ತಿಳಿಸಿದರು.
ಸಮಾರೋಪ ನುಡಿಗಳನ್ನಾಡಿದ ಹಿರಿಯ ಪತ್ರಕರ್ತ, ಸಾಹಿತಿ ಪ್ರೊ. ವಿ.ಬಿ. ಅರ್ತಿಕಜೆ ಮಾತನಾಡಿ, ಪತ್ರಿಕೋದ್ಯಮದ ಮುಖ್ಯ ಉದ್ದೇಶ ಸಮಾಚಾರ, ವಿಚಾರ ಹಾಗೂ ಪ್ರಚಾರ. ಆಧ್ಯತೆ, ಬಾಧ್ಯತೆ, ಸಾಧ್ಯತೆಗಳನ್ನು ಅರಿತುಕೊಂಡು ಬರೆಯಬೇಕು. ಯಾವುದನ್ನು ಎಷ್ಟರ ಮಟ್ಟಿಗೆ ಬರಿಯಬೇಕು, ಏನನ್ನು ಬರಿಯಬೇಕು ಅಂತೆಯೇ ಏನನ್ನು ಬರೆಯಬಾರದು ಎಂಬುವುದನ್ನು ಪತ್ರಕರ್ತರು ತಿಳಿದಿರಬೇಕು. ವಿಷಯಗಳ ಉತ್ಪೇಕ್ಷೆಯೂ ಆಗಬಾರದು ಅಂತೆಯೇ ಅವಪ್ರೇಕ್ಷೆಯೂ ಆಗಬಾರದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ವಿದ್ಯಾರ್ಥಿಗಳಿಗೆ ರಂಗಭೂಮಿ, ನಾಟಕ ತರಬೇತಿಗಳನ್ನು ನಡೆಸಿದಾಗ, ಅವರಲ್ಲಿನ ಬಹುಮುಖ ಪ್ರತಿಭೆಯನ್ನು ಹೊರತರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಎಂದರು.
ಮುಖ್ಯ ಅಭ್ಯಾಗತರಾಗಿ ಆಗಮಿಸಿದ ಹಿರಿಯ ಪತ್ರಕರ್ತ ಯು. ಎಲ್. ಉದಯ ಕುಮಾರ್ ಮಾತನಾಡಿ, ನಾಟಕ ವಿಮರ್ಶೆಗಳು ಕಲಾವಿದರನ್ನು ಬೆಳೆಸುತ್ತದೆ. ಕಲಾವಿದರ ಅಭಿನಯವನ್ನು ವೃದ್ಧಿ ಪಡಿಸಿಕೊಳ್ಳುವಲ್ಲಿ ಈ ವಿಮರ್ಶೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಂ. ಕೆ. ಮಠ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಉಪಸ್ಥಿತರಿದ್ದರು. ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ ಪಿ. ಆರ್ ನಿಡ್ಪಳ್ಳಿ ಸ್ವಾಗತಿಸಿ, ಸ್ನಾತಕೋತ್ತರ ಪತ್ರಿಕೋದ್ಯಮದ ವಿದ್ಯಾರ್ಥಿನಿ ಪವಿತ್ರ ಭಟ್ ವಂದಿಸಿದರು. ಸ್ನಾತಕೋತ್ತರ ಪತ್ರಿಕೋದ್ಯಮದ ವಿದ್ಯಾರ್ಥಿನಿ ಪ್ರಜ್ಞಾ ಓಡಿಳ್ನಾಳ ಕಾರ್ಯಕ್ರಮ ನಿರೂಪಿಸಿದರು.

Address

Nehru Nagar
Puttur
574203

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 1pm

Alerts

Be the first to know and let us send you an email when Vivekananda College, Puttur posts news and promotions. Your email address will not be used for any other purpose, and you can unsubscribe at any time.

Contact The School

Send a message to Vivekananda College, Puttur:

Shortcuts

Share

Category