30/12/2023
ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜು ಇಂದು ನಿಮ್ಮನ್ನು ಸ್ವಾಗತಿಸಲು ಸಜ್ಜಾಗಿದೆ...
-ಇಂದು ಹದಿನಾಲ್ಕನೇ ವಾರ್ಷಿಕ ಮತ್ತು ನಾಲ್ಕನೇ ಸನದುದಾನ ಸಮ್ಮೇಳನ
-ಕರುನಾಡಿನ ಕರ್ಮ ರಂಗಕ್ಕೆ ಮತ್ತಷ್ಟು " ಮಅಬರಿ ವಿದ್ವಾಂಸರ ಸಮರ್ಪಣೆ
ಇದು ಶೈಖುಲ್ ಜಾಮಿಅಃರ ಮಾತು ಮುತ್ತಾದ ಕಥೆ ...
ಆಜುಬಾಜು ಹದಿನೈದು ವರ್ಷಗಳ ಹಿಂದಿನ ಒಂದು ದಿನ . ಉಡುಪಿಯ ಕನ್ನಂಗಾರ್ ಎಂಬಲ್ಲಿ ಜಾಮಿಅಃ ಸಮ್ಮೇಳನದ ಪ್ರಚಾರಾರ್ಥ ಅಲ್ಲೊಂದು ಸಮಾವೇಶ ನಡೆದಿತ್ತು. ಶೈಖುಲ್ ಜಾಮಿಅಃ ಸೇರಿದಂತೆ ಹಲವಾರು ಸಾತ್ವಿಕರು ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮ ಮುಗಿಸಿ ಮರಳುತ್ತಿದ್ದ ಶೈಖುಲ್ ಜಾಮಿಅಃ ಶೈಖುನಾ ಆಲಿಕುಟ್ಟಿ ಉಸ್ತಾದರ ವಾಹನದಲ್ಲಿ ತೋಡಾರಿನ ಉಲಮಾ ಉಮರಾಗಳ ಪೈಕಿ ಕೆಲವರು ಸಹಪ್ರಯಾಣಿಕರಾಗಿ ಜೊತೆಗಿದ್ದರು. ಮಾತಿನ ಮಧ್ಯೆ ಕರ್ನಾಟಕದ ದೀನೀ ಶಿಕ್ಷಣ ಸಂಸ್ಥೆಗಳ ಕಡೆಗೆ ಚರ್ಚೆ ತಿರುಗಿದಾಗ , ಒಂದು ಅರಬಿಕ್ ಕಾಲೇಜು ಆರಂಭಿಸುವ ಅಭಿಲಾಷೆ ತಮಗಿದೆಯೆಂದು ತೋಡಾರಿಗರು ತಿಳಿಸಿದಾಗ ' ಹಾಗಿದ್ದಲ್ಲಿ ಜಾಮಿಅಃದ ನೂತನ ಸಮನ್ವಯ ಶಿಕ್ಷಣ ಯೋಜನೆಯ ಭಾಗವಾಗಿ ಜಾಮಿಅಃ ಜೂನಿಯರ್ ಕಾಲೇಜನ್ನು ಶೈಖುನಾ ಶಂಸುಲ್ ಉಲಮಾರ ಪುಣ್ಯ ನಾಮದಲ್ಲಿ ಆರಂಭಿಸಿ ' ಎಂದು ಮೆಲುದನಿಯಲ್ಲಿ ಆಶೀರ್ವದಿಸಿದರು. ಮುಂದೆ ನಡೆದಿದ್ದೆಲ್ಲವೂ ಇತಿಹಾಸ...
ಸಯ್ಯಿದುಲ್ ಉಮ್ಮಃ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ತಮ್ಮ ಅಮೃತ ಹಸ್ತದಿಂದ ಶಿಲಾನ್ಯಾಸಗೈದು ಶೈಖುನಾ ಝೈನುಲ್ ಉಲಮಾ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ಉದ್ಘಾಟನೆ ನೆರವೇರಿಸಿ ಚಾಲನೆ ನೀಡಿದ ಈ ಸಂಸ್ಥೆಯ ಪಯಣವೀಗ ಹದಿನಾಲ್ಕನೇ ಸಂವತ್ಸರವನ್ನು ದಾಟುತ್ತಿದೆ . ಸಂಸ್ಥೆಯಿಂದು ನಾಲ್ಕನೇ ಸನದುದಾನದ ಸಂಭ್ರಮದಲ್ಲಿದೆ ..
ದೀನೀ ಜ್ಞಾನ ಪರಂಪರೆಯ ಬೇರುಗಳನ್ನು ಬೆಸೆಯುವ ಮಖ್ದೂಮಿ ಉಲಮಾ ಸರಣಿಯನ್ನು ನೆನಪಿಸುವ " ಮಅಬರಿ " ಬಿರುದಾಂಕಿತ ನಲ್ವತ್ತರಷ್ಟು ಸಂಸ್ಥೆಯ ಸಂತತಿಗಳು ಇದೀಗಾಗಲೇ ಕರುನಾಡ ಕರ್ಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದು ಮತ್ತೆ ಇಪ್ಪತ್ತು ಮಅಬರಿಗಳು ಸಮರ್ಪಣೆಗೊಳ್ಳಲಿದ್ದಾರೆ ...
ಲೌಕಿಕ ಪದವಿಗಳ ಪಟ್ಟಿ ಎಷ್ಟೇ ದೊಡ್ಡದಿದ್ದರೂ ವೇಷ ಭೂಷಣದಲ್ಲೂ ನಡೆನುಡಿಯಲ್ಲೂ ಅಂಧವಾಗಿ ಆಧುನಿಕತೆಯನ್ನು ಅರಗಿಸಿಕೊಳ್ಳದೆ ದೀನೀ ದಅವತ್ & ಖಿದ್ಮತಿನಲ್ಲೇ ಸಿಂಹಪಾಲು ಮಅಬರಿಗಳು ತೊಡಗಿಸಿಕೊಂಡಿರುವುದು ಸಂಸ್ಥೆಗೆ ಸಹಾಯ ಹಸ್ತ ಚಾಚಿದ ಸಮುದಾಯದ ಕನಸು ನನಸಾಗುತ್ತಿದೆಯೆಂಬುದರ ಜೀವಂತ ಸಾಕ್ಷಿಯಾಗಿದೆ .
ನಿಮ್ಮ ಬೆಂಬಲ... ಸಹಾಯ.. ಸಹಕಾರ ಮುಂದೆಯೂ ಈ ಸಂಸ್ಥೆಯೊಂದಿಗಿರಲಿ...
ಇಂದಿನ ಸನದುದಾನ ಸಮ್ಮೇಳನಕ್ಕೆ ಮತ್ತೊಮ್ಮೆ ಮಗದೊಮ್ಮೆ ಸುಸ್ವಾಗತ...
Naeem Faizy Al Ma'bari
ಅಹ್ಮದ್ ನಈಂ ಫೈಝಿ ಮಅಬರಿ