08/11/2021
ಪ್ರಿಯ ಆತ್ಮೀಯ ಬಂಧುಗಳೇ ದಿನಾಂಕ ೯-೧೧-೨೦೨೧ ಮಂಗಳವಾರ ಸಂಜೆ ೬ ಗಂಟೆಗೆ ಭಾಗ್ಯನಗರದ ಮಾರ್ಕಂಡೇಶ್ವರ ವೃತ್ತ ಬಯಲು ವೇದಿಕೆಯಲ್ಲಿ ಕೊಪ್ಪಳ ನಾಡಿನ ಸಂಗೀತ ದಿಗ್ಗಜರು ಗುರುಗಳಾದ ಪಂ.ಶ್ರೀ ಗೋವಿಂದರಾಜ ಬೊಮ್ಮಲಾಪುರ ಹಾಗೂ ಪಂ.ಶ್ರೀ ಅಂಬಣ್ಣ ಕೊಪ್ಪರದರವರ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ಸ್ವರ ಗೀತ ನೃತ್ಯ ಆರಾಧನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಕಲಾವಿದರಾದ ಶ್ರೀ ವೆಂಕಟೇಶ್ ಆಲ್ಕೋಡ ಶ್ರೀ ಜೀವನಸಾಬ ಬಿನ್ನಾಳ ಶ್ರೀ ರುದ್ರೇಶ ಉಜ್ಜನಕೊಪ್ಪ ಶ್ರೀ ಪಂಚಾಕ್ಷರಕುಮಾರ ಬೊಮ್ಮಲಾಪುರ ಶ್ರೀಮತಿ ವಿಜಯಲಕ್ಷ್ಮೀ ನಾಗರಾಜರಿಂದ ಸಂಗೀತ ಕಾರ್ಯಕ್ರಮಗಳು ಹಾಗೂ ಕು.ಭೂಮಿಕಾ ಕಲಾಲ ತಂಡದವರಿಂದ ಸಮೂಹ ನತ್ಯಗಳು ನೆಡೆಯಲಿದ್ದು ಕಲಾಸಕಕ್ತರು ಕಲಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.