Nagasudhe Jagali ನಾಗಸುಧೆ ಜಗಲಿ

  • Home
  • India
  • Hubli
  • Nagasudhe Jagali ನಾಗಸುಧೆ ಜಗಲಿ

Nagasudhe Jagali ನಾಗಸುಧೆ ಜಗಲಿ ಕಲೆ , ಸಾಹಿತ್ಯ , ಓದು, ಚಿಂತನ, ಮಂಥನ, ಸಂವಾದ..

"ಅಂತರಾಷ್ಟ್ರೀಯ ಪುಸ್ತಕ ದಿನ" ದ ಶುಭಾಶಯಗಳೊಂದಿಗೆ 'ನಾಗಸುಧೆ' ಯ ಕೊಡುಗೆ😍😍😍🙏🙏🙏
23/04/2026

"ಅಂತರಾಷ್ಟ್ರೀಯ ಪುಸ್ತಕ ದಿನ" ದ ಶುಭಾಶಯಗಳೊಂದಿಗೆ 'ನಾಗಸುಧೆ' ಯ ಕೊಡುಗೆ😍😍😍🙏🙏🙏

ನಾಗಸುಧೆ ಟೆರೇಸಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮಪ್ರೊ. ಮಲ್ಲಮ್ಮ ಯಾಟಗಲ್ ಅವರಿಂದ ಉಪನ್ಯಾಸ "ನಾನೇಕೆ ಬರೆಯುತ್ತೇನೆ'
24/03/2026

ನಾಗಸುಧೆ ಟೆರೇಸಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಕಾರ್ಯಕ್ರಮ
ಪ್ರೊ. ಮಲ್ಲಮ್ಮ ಯಾಟಗಲ್ ಅವರಿಂದ ಉಪನ್ಯಾಸ "ನಾನೇಕೆ ಬರೆಯುತ್ತೇನೆ'

ಆತ್ಮೀಯ ಗೆಳತಿ ಮಾಧವಿ ಭಂಡಾರಿಯ "ಗುಲಾಬಿ ಕಂಪಿನ ರಸ್ತೆ" ಕಥಾಸಂಕಲನಕ್ಕೆ ಈ ಬಾರಿಯ ಕರ್ನಾಟಕ ಸಾಹಿತ್ಯ ಅಕೆಡೆಮಿ ಪ್ರಶಸ್ತಿ 😍ಅಕ್ಕರೆ ತುಂಬಿದ ಕಂಗ...
09/10/2025

ಆತ್ಮೀಯ ಗೆಳತಿ ಮಾಧವಿ ಭಂಡಾರಿಯ "ಗುಲಾಬಿ ಕಂಪಿನ ರಸ್ತೆ" ಕಥಾಸಂಕಲನಕ್ಕೆ ಈ ಬಾರಿಯ ಕರ್ನಾಟಕ ಸಾಹಿತ್ಯ ಅಕೆಡೆಮಿ ಪ್ರಶಸ್ತಿ 😍
ಅಕ್ಕರೆ ತುಂಬಿದ ಕಂಗ್ರಾಟ್ಸ್ ಮಾಧ್ವಿ🌹

*ಬಂಡಾಯದ ಸಹಜ ನೆಲೆಯಲ್ಲೇ ಜೀವ ತಳೆದ ಮಾಧವಿ ಭಂಡಾರಿಯವರ ಕಥನಲೋಕ*

-ಸುನಂದಾ ಕಡಮೆ

ಉಳುವ ನೆಲವೇ ಫಲವತ್ತಾಗಿದ್ದಾಗ ಅಲ್ಲಿ ಬಿದ್ದ ಬೀಜ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ ಆರೋಗ್ಯಕರ ಫಲವನ್ನೇ ಸಮಾಜಕ್ಕೆ ನೀಡುವುದು ಅಚ್ಚರಿಯೇನಲ್ಲ. ನೆಲದ ವಿಸ್ತಾರವನ್ನೂ ಆಳವನ್ನೂ ಗಹನವಾಗಿ ಹೀರಿ ಬೆಳೆವ ವಿವೇಚನೆ ಸಸಿಗಿದ್ದರೆ ಅಷ್ಟು ಸಾಕು. ಇಲ್ಲಿಯ ಕಥೆಗಾರ್ತಿ ಮಾಧವಿ ಅಂಥದೊAದು ಸಮಾಜಮುಖೀ ಚಿಂತನೆಗಳ ಆರೋಗ್ಯಪೂರ್ಣ ಪರಿಸರದಲ್ಲಿ ಬೆಳಕು ಕಂಡ ಒಬ್ಬ ಅನನ್ಯ ಕವಿ. ನಮ್ಮೆಲ್ಲರೊಳಗೆ ಅಂತಹ ಬಂಡಾಯ ಚಿಂತನೆಯ ಬೀಜ ಬಿತ್ತಿದವರು ಪೂಜ್ಯರಾದ ತಂದೆ ಡಾ. ಆರ್.ವಿ ಯವರು. ಅವರೊಳಗಿನ ಅಂತಃಸತ್ವ ಇಂದು ನಾವು ಮಾಧವಿ, ವಿಠ್ಠಲ ಮತ್ತು ಯಮುನಾ ಅವರು ನಿರಂತರ ನಡೆಸುತ್ತಿರುವ ಸಹಯಾನದ ಅಮೂಲ್ಯ ಕಾರ್ಯಕ್ರಮಗಳ ಮೂಲಕ ಕಾಣುತ್ತಿದ್ದೇವೆ.

ಹಾಗಾಗಿ ಮಾಧವಿ ಚಿತ್ರಿಸುವ ಪ್ರತಿ ಪಾತ್ರಗಳಲ್ಲೂ ಅಂತಹ ವೈಚಾರಿಕ ಕಿಡಿ ನಿಗಿನಿಗಿ ಹೊಳೆಯುತ್ತಿರುತ್ತದೆ.ಈಗಾಗಲೇ ಕವಿತೆಗಳ ಮೂಲಕ ಕನ್ನಡ ಕಾವ್ಯ ಕ್ಷೇತ್ರದಲ್ಲಿ ತನ್ನನ್ನು ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಗೆಳತಿ ಮಾಧವಿ ಇದೀಗ ಕತೆಗಳನ್ನೂ ಬರೆದಿದ್ದಾಳೆ. 'ಮಾನವನ ಮಾನಸಿಕ ವಿಕಾಸಕ್ಕೆ ಕಲೆ ಸಾಹಿತ್ಯ ಇವುಗಳು ಅತ್ಯಗತ್ಯ' ಎಂಬ ಆಂಗ್ಲ ಚಿಂತಕ ಬ್ರಾಡ್ಸ್ಕಿಯ ಮಾತನ್ನು ರಕ್ತಗತ ಮಾಡಿಕೊಂಡ ಮಾಧವಿ, ಕತೆ ಕಟ್ಟುವಾಗ ಸದಾ ಅದರ ಹೆಗಲ ಮೇಲೊಂದು ಹೊಸ ಚಿಂತನೆಯ ಸಾಮಾಜಿಕ ಜವಾಬ್ದಾರಿಯನ್ನು ವಹಿಸಿಕೊಡುವ ಅಪ್ಪಟ ಕವಿ. ಹೀಗೆ ಸಜೀವ ಸ್ಪಂದನೆಗೊಳಪಡಿಸುವ, ಮಂಥನಕ್ಕೆ ಇಂಬು ಕೊಡುವ, ಉತ್ತಮ ದರ್ಶನ ಒದಗಿಸುವ ಹಾಗೂ ತನ್ನ ಕತೆಗಳಲ್ಲಿ ಅಪಾರ ಸೂಚ್ಯತೆ ತೋರುವ ಶೈಲಿಯು ಮಾಧವಿಯೊಳಗೆ ಒಂದು ಸಮೃದ್ಧ ಭಾವಕೋಶವಿರುವುದನ್ನು ಎತ್ತಿತೋರಿಸುತ್ತವೆ.

ಅವಳ ಕಾವ್ಯದಲ್ಲಿ ಕಾಣಬರುವ ತೀವ್ರತೆ ಗದ್ಯದಲ್ಲಿ ಸಾವಧಾನವೂ ಸಂಯಮವೂ ಆಗಿ ರೂಪಾಂತರಗೊಳ್ಳುತ್ತದೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಕಾವ್ಯದಲ್ಲಿ ಕಿರಿದಾಗಿ ಕಾಣುವ ನೋಟವು ಕತೆಯಲ್ಲಿ ತನ್ನ ಗಡಿಯನ್ನು ಮೆಲ್ಲಗೆ ವಿಸ್ತರಿಸಿಕೊಳ್ಳುತ್ತಿದೆಯೇನೋ ಅನಿಸುತ್ತದೆ. ಈ ರೀತಿಯ ಎಲ್ಲ ಪ್ರಕಾರಗಳ ಸಾಹಿತ್ಯದ ಅವಿನಾಭಾವ ಓದು ಮತ್ತು ಬರವಣಿಗೆ ಮನಸ್ಸು ಹಾಗೂ ಚಿಂತನೆಗೆ ನಿರಂತರ ವ್ಯಾಯಾಮವಿದ್ದಂತೆ ಮತ್ತು ಇಂಥ ನಿರಂತರತೆಯು ಭಾಷೆಯನ್ನು ಪಳಗಿಸಲು ಕೂಡ ಸಹಕಾರಿ ಅಂದುಕೊAಡಿರುವೆ.'ಪಿತೃಪ್ರಧಾನ ವ್ಯವಸ್ಥೆಯಲ್ಲಿ ಅವಳ ಚರಿತ್ರೆಗೆ ಜಾಗವಿಲ್ಲ' ಎಂಬ ಮಾತನ್ನು ಹಿಮ್ಮೆಟ್ಟಿಸುತ್ತ, ನಮ್ಮ ಹೆಣ್ಣುಮಕ್ಕಳನ್ನು ರಕ್ತ ಮಾಂಸ ತುಂಬಿಕೊಂಡ ಒಬ್ಬಳು ಜೀವಿಯಾಗಿ, ವಿಚಾರವಂತಳಾಗಿ, ಸ್ವತಂತ್ರ ಮನಸ್ಥಿತಿಯವಳಾಗಿ ಚಿತ್ರಿಸುವಲ್ಲಿ ಇಲ್ಲಿಯ ಕತೆಗಳು ಅಧಮ್ಯವಾಗಿ ಯೋಚಿಸುತ್ತಿವೆ. 'ಲೋಕಾಂತದಲ್ಲೊAದು ಏಕಾಂತ' ಕತೆಯಲ್ಲಿ ಇದನ್ನು ನಾವು ಪ್ರಧಾನವಾಗಿ ಕಾಣಬಹುದು. ಇಲ್ಲಿ ಹೆಣ್ತನಕ್ಕೆ ಹೊಸ ಭಾಷ್ಯೆ ಬರೆವಂತಹ ವಿವೇಚನೆಯುಳ್ಳ ದ್ರೌಪದಿ ಇದ್ದಾಳೆ. ಇವಳು ಮಹಾಭಾರತದ ದ್ರೌಪದಿಯಂತಲ್ಲ, ರಾಜ್ಯಾಡಳಿತದ ಮಂತ್ರಾಲೋಚನಾ ಸಭೆಗೆ ತೆರಳಿ ಮಂತ್ರಿಗಳೊAದಿಗೆ ಸಮಾಲೋಚನೆ ನಡೆಸುವಷ್ಟು ಬುದ್ಧಿಮತ್ತೆಯುಳ್ಳ ವಿಚಾರಶೀಲಳು.'ಲೋಕಾಂತದಲ್ಲೊAದು ಏಕಾಂತ'ದಲ್ಲಾಗಲೀ ಅಥವಾ 'ತವರ ಕನ್ನಡಿ ಚೂರು'ನಲ್ಲಾಗಲೀ ಪುರಾಣ ಕತೆಯ ತುಣುಕೊಂದು ನಮ್ಮೆದುರು ಪಾತ್ರ-ಪ್ರಸಂಗಗಳಾಗಿ ಬಿಚ್ಚಿಕೊಳ್ಳುವಾಗ ಒಂದು ಬಗೆಯ ನಾಟಕೀಯ ಭಾವ ಸುಳಿದು ಬರುವುದನ್ನು ನಾವು ಗಮನಿಸುವುದಾದರೆ, ಅದು ಅಷ್ಟೇ ಸಹಜವಾಗಿಯೇ ಮೂಡಿರುವುದು ಢಾಳಾಗಿಯೇ ಅನುಭವಕ್ಕೆ ಬರುತ್ತದೆ. ಬದುಕನ್ನು ಕಷ್ಟ ನೋವುಗಳಿಂದಲೇ ಅನಿವಾರ್ಯವಾಗಿ ಭರಿಸಿದ ಹೆಣ್ಣುಮಕ್ಕಳಿಬ್ಬರ ಆತ್ಮಕಥನದಂತಿರುವ ಕಥೆಗಳ ಶೈಲಿಯಲ್ಲಿ ಭಾವನಾತ್ಮಕ ಲೋಕವೇ ಮೊದಲ ಸ್ಥಾನ ಪಡೆದುಕೊಳ್ಳುವುದು ಕೂಡ ತೀರಾ ಸಹಜವಾಗಿದೆ.

ಕುರುಕ್ಷೇತ್ರದ ಭಿತ್ತಿಯೊಳಗೆ ಹೆಣ್ಣಿನ ನೋವನ್ನು ವರ್ತಮಾನದ ಅಗತ್ಯಕ್ಕಾಗಿ ಕಾಣ ಹೊರಡುವ ಪ್ರಯತ್ನ 'ಲೋಕಾದಲ್ಲೊಂದು ಏಕಾಂತ' ಕತೆಯ ಹಿಂದಿದೆ. ಅಂತೆಯೇ ಇದು ಕೇವಲ ಮಹಾಭಾರತದ ಕತೆಯಲ್ಲ, ಇದು ಭಾರತದ ಕತೆ, ಅಂತೆಯೇ ಇದು ವಿಶ್ವದ ಕತೆಯೂ ಹೌದು. ಪ್ರಸ್ತುತ ಸಂದರ್ಭದ ಭಾರತದ ಸ್ಥಿತಿಗತಿಯನ್ನು ಕತೆ ತುಂಬ ಚೆನ್ನಾಗಿ ಕಟ್ಟಿಕೊಟ್ಟಿದೆ. ದುಷ್ಟರ ಶಿಕ್ಷೆ ಶಿಷ್ಟರ ರಕ್ಷೆಯ ಹೆಸರಿನಲ್ಲಿ ನಡೆವ ಹತ್ಯೆಯ ನಿರ್ಭಾವುಕತೆಯು ಇಂದಿನ ನಮ್ಮ ದೇಶದ ಮನಸ್ಥಿತಿಯನ್ನೇ ಪ್ರತಿಬಿಂಬಿಸುತ್ತಿದೆ.

ಮದುವೆ ಎಂಬ ಸಂಸ್ಥೆಯ ಉಳಿವಿನ ಕಾರಣಕ್ಕೆ, ಹುಟ್ಟಿದ ಮನೆಯನ್ನು ಬಿಟ್ಟು ಅಪರಿಚಿತವಾದ ಮನೆಯಲ್ಲಿ ತಳವೂರಿ ನಿಲ್ಲುವ ಎಲ್ಲ ಭಾರತೀಯ ಹೆಣ್ಣುಮಕ್ಕಳ ಒತ್ತಡದ ಪಾಡೂ ದ್ರೌಪದಿಯ ವೇದನೆಗಿಂತ ಹೆಚ್ಚು ಭಿನ್ನವಾದದ್ದಲ್ಲ ಮತ್ತು ತಾಯಿಯಿಲ್ಲದೇ ತಬ್ಬಲಿಯಾದ ಹೆಣ್ಣುಮಗುವಿಗೆ ಮಲತಾಯಿಯೊಬ್ಬಳ ಪ್ರವೇಶವಾದಾಗ ವಿಧುರ ತಂದೆಯ ಅಮಾನವೀಯ ನಿಲುವು ಮಾಧವಿಯ ಧಾರುಣ ಸ್ಥಿತಿಗಿಂತ ತುಂಬಾ ವ್ಯತ್ಯಾಸವಾಗುವಂಥದ್ದಲ್ಲ ಎಂಬಂತಿದೆ.

ಇಲ್ಲಿ ಎರಡೂ ಕತೆಗಳಿಗೆ ಸಹಜವಾದ ನಡಿಗೆ ದಕ್ಕಿದೆ. 'ಪಂಥ ಗೆಲ್ಲುವ ಶೌರ್ಯ ಮುಖ್ಯವೇ ಹೊರತು ಜಾತಿ ಮುಖ್ಯವಲ್ಲ ಎಂದು ಯೋಚಿಸಿದ್ದರೆ, ನಾನು ಕರ್ಣನ ಮನಧನ್ಯೆಯಾಗುತ್ತಿದ್ದೆ' ಎಂದೆಲ್ಲ ಪಶ್ಚಾತ್ತಾಪ ಪಡುವ ಪಾಂಚಾಲಿ, ಮುಕ್ತ ಮನಸ್ಸಿನ ಹೆಣ್ಣಾಗಿ ಬಿಂಬಿತವಾಗಿದ್ದಾಳೆ, ಇಲ್ಲಿ ನಾನು ಮುದ್ದಾಮಾಗಿ 'ಆಧುನಿಕ ಮನಸ್ಥಿತಿ' ಎಂಬ ಪದವನ್ನು ಬಳಸಿಲ್ಲ ಯಾಕೆಂದರೆ, ಆಧುನಿಕತೆ ಎಂಬುದನ್ನು ನಮ್ಮ ಜಾನಪದ ನಾಟಕಕಾರರ ಮುಂದುವರಿಕೆಯAತೆ ಹುಟ್ಟಿಕೊಂಡ ನಮ್ಮ ನವ್ಯದ ನಾಟಕಕಾರರು 'ವಾಂಛೆ' ಎಂಬ ಅರ್ಥ ಬರುವಂತೆ ಮತ್ತೆ ಮತ್ತೆ ಬಳಸಿ, 'ಹೆಣ್ಣಿನ ಆಧುನಿಕ ಮನಸ್ಥಿತಿ' ಎಂಬ ವಿಚಾರವನ್ನು ಸಂಕುಚಿತ ತಳಹದಿಯಲ್ಲಿ ಬಂಧಿಸಿದ್ದಾರೆ ಅನಿಸುತ್ತಿದೆ.'ತವರ ಕನ್ನಡಿ ಚೂರು' ಕತೆಯಲ್ಲಿ ಕಥಾನಾಯಕಿ ಮಾಧವಿ ಅನುಭವಿಸಿದ ಸಾಲು ಸಾಲು ಅತ್ಯಾಚಾರಗಳಿಗೆ ಮೂಲ ಕಾರಣವಾದ 'ಇನ್ನು ಮೇಲೆ ನೀನು ಗಾಲವಮುನಿಯ ವಸ್ತು' ಎಂದು ಮಗಳನ್ನೇ ದಾನ ಮಾಡಿದ ಯಯಾತಿ ಮಹಾರಾಜನ ಬೇಜವಾಬ್ದಾರಿಯುತ ಮಾತು. ಮಾಧವಿಯ ಜೀವ ಹಿಂಡುವ ಯಾತನೆಗಳೊಂದಿಗೆ ಆಕೆ ಕೇಳುವ ಒಂದೇ ಒಂದು ಪ್ರಶ್ನೆ ನಮ್ಮನ್ನು ನಡುಗಿಸುವಂತಿದೆ. 'ಅರಮನೆಯ ಹೆಣ್ಣಿನ ಬದುಕೇ ಹೀಗಾದರೆ ಇನ್ನು ಗುಡಿಸಲ ಹೆಣ್ಣಿನ ಕತೆಯೇನು?' ಈ ಪ್ರಶ್ನೆ ಎಲ್ಲರ ಅರಿವನ್ನು ಸಾಮಾಜಿಕವಾಗಿ ಹೆಚ್ಚಿಸುವಂತಿದೆ.

ಈ ಮಾತಿಗೆ ಪೂರಕವಾಗಿ 'ನಲವತ್ತೇಳರ ಸ್ವಾತಂತ್ರö್ಯ' ಕತೆಯಲ್ಲಿ ಹೆಗಡೇರ ಲೈಂಗಿಕ ಅಶಿಸ್ತಿಗೆ ಬಲಿಯಾಗುವ ಗದ್ದೆ ಕಾಯಕಕ್ಕೆ ಬಂದ ಕೆಳವರ್ಗದ ಹೆಣ್ಣುಮಗಳಾದ ನಾಗಿ ನೆನಪಾಗದೇ ಇರಲಾರಳು. ಈ ನಡುವೆ ಹೆಗಡೇರ ಹೆಂಡತಿಯ ಸೈರಣೆಯು ಹೆಣ್ಣುಮಕ್ಕಳ ನಿಸ್ಸಹಾಯಕತೆಯನ್ನು ತೆರೆದಿಡುತ್ತದೆ. 'ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು : ಕನಸಿಲ್ಲದ ದಾರಿಯಲ್ಲಿ ನಡೆಯಲಾಗದು. ಅವರ ಚರಿತ್ರೆಯಲ್ಲಿ ಅವಳಿಲ್ಲ, ಅವಳ ಚರಿತ್ರೆ ನನ್ನಿಂದಲೇ ಆರಂಭ' ಎನ್ನುವ ಮಾಧವಿ, ತನ್ನ ತವರಿನ ಕನ್ನಡಿ ಎಂದೋ ಒಡೆದು ಚೂರಾಗಿದ್ದುದನ್ನು ಸಾಂಕೇತಿಕವಾಗಿ ತೋರುತ್ತಾಳೆ.ಕೇವಲ ತನ್ನ ಧಾರ್ಮಿಕ ಕಲ್ಪನೆಗಳಿಂದ ಸತ್ಯ ಮರೆ ಮಾಚುತ್ತಿರುವ ಇಂದಿನ ರಾಜಕಾರಣದ ದುಷ್ಪರಿಣಾಮವಾಗಿ ದೇಶದಲ್ಲಿ ನಡೆವ ಅಶಾಂತಿಯನ್ನು ಬಿಂಬಿಸುವ ಕತೆ 'ಗುಲಾಬಿ ಕಂಪಿನ ರಸ್ತೆ' ಲೋಕದ ವ್ಯವಹಾರಕ್ಕೆ ಮನೆ ಬಾಗಿ¯ನ್ನೂ ಬೀದಿಯನ್ನೂ ಅಂತೆಯೇ ಮನದ ಕಿಟಕಿಯನ್ನೂ ಮುಚ್ಚುವ ಪರಿಯನ್ನು ಅನುಭವಕ್ಕೆ ನಿಲುಕುವಂತೆ ಸಾದೃಶವಾಗಿ ಹಿಡಿದ ಈ ಅಪರೂಪದ ಕತೆಯು ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಬಹುಮಾನಕ್ಕೆ ಪಾತ್ರವಾಗಿತ್ತು. ಧರ್ಮದ ಕಾರಣದಿಂದ ಪರಸ್ಪರ ಮನುಷ್ಯತ್ವ ಮುರುಟಿ ಹೋಗುವ ದಾರಿಯಲ್ಲಿ ಗುಲಾಬಿಯ ಕೆಂಪನ್ನೂ ಹರಿತ ಮುಳ್ಳನ್ನೂ ಒಟ್ಟಿಗೇ ಕಾಣುವಂತೆ ಕತೆ ಪ್ರೇರೇಪಿಸುತ್ತದೆ. ದಾರವಿಲ್ಲದ ಅಸಂಖ್ಯ ಹೊಲಿಗೆಗಳು ಬಿದ್ದ ನಮ್ಮ ಹೆಣ್ಣುಮಕ್ಕಳ ದೈನಿಕಗಳು ಮತ್ತು ಜತನದಿಂದ ಕಟ್ಟಿ ಹೊಲಿದ ಮನೆ-ಮನಗಳನ್ನು ಸುಡುವ ಬಹಿರಂಗದ ಅಂದಕಾರಗಳು ಈ ಕತೆಯ ಕೊರಳಲ್ಲಿ ಬಿಕ್ಕುತ್ತಿರುವ ಸದ್ದು ಓದುಗರಿಗೂ ಕೇಳುವಂತೆ ಅಭಿವ್ಯಕ್ತಗೊಂಡ ಬಗೆಯಲ್ಲೆ ಒಂದು ತಲ್ಲಣವಿದೆ.

ಪಾದರಸದಂತಹ ಬಾಲೆಯರು ಲೋಕದ ಭಾವಗಳಿಗೆ ಜಡವಾಗಿ ಹೋಗುವ ಸಾಮಾಜಿಕ ವ್ಯವಸ್ಥೆಯಲ್ಲಿ ಲೋಕಕ್ಕೆ ಬಣ್ಣದ ಬಟ್ಟೆ ತೊಡಿಸುವ ಸಮೀರಾಳ ಮಗುವಿನಂತಹ ಎಷ್ಟೋ ತರಳೆಯರು ಗಾಳಿಗೆ ಹತ್ತುರಿವ ಕೋಮುಜ್ವಾಲೆಯಲ್ಲಿ ಬಲಿಯಾಗುವ ಸಂದರ್ಭ ಹಾಗೂ ವ್ಯವಸ್ಥೆಯ ಎಲ್ಲ ತಪ್ಪಿಗೂ ಧರ್ಮ ಭೇದವಿಲ್ಲದೇ ಹೊಣೆಯಾಗುವ ಹೆಣ್ಣಿನ ಚಿತ್ರಣ ಇಲ್ಲಿ ಢಾಳಾದ ಸಂಕಟದಲ್ಲಿ ಮೈದಾಳಿದ್ದು ಈ ಕತೆಯ ಶಕ್ತಿ. ಮನಸ್ಸುಗಳ ನಡುವೆ ಗೋಡೆಯನ್ನು ನಿರ್ಮಿಸುವ ರಾಜಕೀಯ ಧರ್ಮಾಂಧತೆಯ ಏಕೈಕ ಗುರಿ ಕಟ್ಟಕಡೆಯಲ್ಲಿ ಮಾನವತೆಯ ವಿನಾಶವೇ ಆಗಿದೆ ಎಂಬುದನ್ನು ಕತೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿ ಕೊಡುವಂತಿದೆ. 'ಗುಲಾಬಿ ಕಂಪಿನ ರಸ್ತೆ' ಕತೆಯಲ್ಲಿ ಗುಲಾಬಿ ಕಂಪಿನ ರಸ್ತೆಗೆ ರಕ್ತದ ವಾಸನೆ ಮೆತ್ತಿದವರಾರು ? ಎಂಬ ಪ್ರಶ್ನೆ ಬರುತ್ತದೆ. ಲೋಕಕ್ಕೆ ಬಣ್ಣ ಬಣ್ಣದ ಬಟ್ಟೆ ತೊಡಿಸುವ ಮನಸ್ಸೊಂದು ಅಂತಃಕರಣ ಮಿಡಿದು ಒದ್ದಾಡುವ ಘಟ್ಟ ತಲುಪುವ ಕತೆಯ ವಿವರಗಳು ಓದುಗರನ್ನೂ ಅಂಥದೇ ಒಂದು ಒದ್ದಾಟಕ್ಕೆ ಪ್ರೇರೇಪಿಸುವಂತಿದೆ. ಈ ಕತೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ಮೌಲಿಕವಾದುದು.ಮದುವೆ ಎಂಬ ಸಂಸ್ಥೆಯು ಹೇಗೆ ಒಂದು ಹೆಣ್ಣನ್ನು ತನ್ನ ತೊತ್ತಾಗಿ ನೋಡುತ್ತ, ಸ್ವತ್ತು ಅಂತ ಭಾವಿಸಿಕೊಳ್ಳುತ್ತ, ಅಮಾನವೀಯ ಹಿಂಸೆಗೆ ನೂಕುತ್ತದೆ ಮತ್ತು ಪ್ರೀತಿ-ಗೌರವಗಳಿಗೆ ಅವಳನ್ನು ವಂಚಿಸಿ ಮಾನಸಿಕ ಹಾಗೂ ದೈಹಿಕ ಆಕ್ರಮಣ ನಡೆಸಿ, ಅವಳಿಗೆ ತೋರಬಾರದ ಕಡೆಯಲ್ಲಿ ಗಯ ನೀಡಿ, ಸಮಾಜದಿಂದ ತಪ್ಪಿಸಿಕೊಂಡು ತನ್ನ ಕ್ರೌರ್ಯವನ್ನು ಮೆರೆಯುತ್ತದೆ ಎಂಬುದಕ್ಕೆ 'ತೊಡೆದೇವು' ಕತೆಯಲ್ಲಿ ಬರುವ ಕಲಾವತಿ ಹಾಗೂ ಅವಳ ನೋವಿನ ಯಾತನೆಗಳೇ ಸಾಕ್ಷಿ.

ಸುಟ್ಟಗಾಯಗಳಿಂದ ರಕ್ತ ರಸಿಗೆ ಒಸರುತ್ತಿರುವ ಕಪ್ಪು ಗಡ್ಡೆಗಟ್ಟಿದ ಕಲಾವತಿಯ ತೊಡೆಯನ್ನು ವ್ಯವಸ್ಥೆಯ ಕಟುಸತ್ಯವಾಗಿ ಕಾಣಿಸುವಲ್ಲಿ ಕತೆ ಅನವರತ ಮಿಡಿಯುವಂತಿದೆ. ಓದಿ ಮುಗಿದಾಗ ಆವರಿಸುವ ವಿಷಾದ ಹಾಗೂ ಸಂಕಟವೊಂದು, ಈ ಕೌಟುಂಬಿಕತೆ ಹಾಗೂ ವಿವಾಹ ಸಂಸ್ಥೆಗಳ ಕುರಿತು ತಿರಸ್ಕಾರದ ಭಾವ ಉಕ್ಕಿಸುವಷ್ಟು ಸಶಕ್ತವಾಗಿದೆ.ಇಲ್ಲಿಯ 'ನಾಗಿ' ಕತೆಗೆ ಉತ್ತರಕನ್ನಡದ ಪ್ರಾದೇಶಿಕ ಭಾಷೆಯ ಬನಿಯು ದಕ್ಕಿದ್ದು ಆ ಕತೆಯ ನೋಟವನ್ನು ತೀವ್ರಗೊಳಿಸಿದಂತೆಯೇ ಮಾಧವಿ ಹವ್ವಿಕ ಸಮುದಾಯದ ಮಧ್ಯೆಯಿರುವ ಕಾರಣಕ್ಕೆ ಆ ಭಾಷೆಯೂ ತನ್ನ ಪ್ರಾದೇಶಿಕತೆಯನ್ನು ನೈಜವಾಗಿ ಬಿಂಬಿಸುತ್ತ ಕಟ್ಟಿಕೊಂಡದ್ದನ್ನು ನಾವು 'ನಮ್ಮನೆಯವ್ರ ಸಾಟಿ' ಕತೆಯಲ್ಲಿ ಕಾಣುತ್ತೇವೆ.

ಮಾಡರ್ನ ಅತ್ತೆಯೆಂದೇ ಹೆಸರಾದ ಸರೋಜತ್ತೆ ಒಂದು ತೆರನಾದ ಸಂಭ್ರಮದ ಹೆಣ್ಣು. ಸರೋಜಳಿಗೂ ಕಮಲಕ್ಕೂ ಬಿಜೆಪಿಗೂ ಸಂಬAಧ ಕಲ್ಪಿಸುವ ಒಗಟಿನ ರೀತಿಯಲ್ಲಿ ಕತೆ ಬೆಳೆದರೂ ಅದು ಮುಂದುವರೆದAತೆ ಸರೋಜಕ್ಕನ ಆತ್ಮ ಚರಿತ್ರೆಯಂತೆ ಭಾಸವಾಗುತ್ತದೆ. ಗಂಡನ ಜುಟ್ಟು ಯಾವಾಗಲೂ ಹೆಂಡ್ತೀ ಕೈಲೇ ರ‍್ಬೇಕು, ಅಂದ್ರೇ ಮಜಾ ಎನ್ನುವ ವೇದಾಂತ ಹೇಳುತ್ತಲೇ, ತನ್ನ ಗಂಡನ ವಿಪರೀತಗಳನ್ನು ಹೊಟ್ಟೆಯಲ್ಲಿ ಅಡಗಿಸಿಟ್ಟುಕೊಂಡು, ಎಲ್ಲವನ್ನೂ ಇತರರ ಭಾವನೆಗಳಿಗೆ ಹೊಂದಿಸಿಕೊಳ್ಳುತ್ತ ತನ್ನ ಸ್ವಭಾವವನ್ನು ರೂಪಿಸಿಕೊಂಡAತೆ ನಟಿಸುತ್ತಿದ್ದ ಸರೋಜತ್ತೆ ಕೊನೆಯಲ್ಲಿ ತನ್ನ ದಾಂಪತ್ಯದ ಹಲವು ಆಯಾಮಗಳನ್ನು ತೆರೆದು ತೋರುತ್ತಾಳೆ. ಗಂಡನನ್ನು ಕಳಕೊಂಡಾಗಲೂ ಕುಂಕುಮ ಹೂ ಇರಿಸಿಕೋ ಎಂದು ಗಂಡನೇ ಹೇಳಿದ್ದಾನೆ ಎಂದು ನಂಬಿಸುತ್ತಲೇ ನಡೆವ ಅವಳ ವೈಚಾರಿಕತೆಗೆ ಕತೆಯೇ ಚಲನಶೀಲವಾಗಿ ಸುತ್ತುತ್ತಿರುವಂತೆ ಭಾಸವಾಗುತ್ತದೆ.

ವ್ಯಕ್ತಿ ಚಿತ್ರದ ಜೊತೆ ಜೊತೆಯಲ್ಲೇ ಎರಕಗೊಂಡ ಅವಳ ಅಳು ನಗು ಕುಶಾಲು ನೋವು ಸಂಕಟ ದ್ವಂದ್ವ ದಿಗಿಲುಗಳು ಅನೇಕ ಕತೆಗಳನ್ನು ಬಿಚ್ಚಿಡುತ್ತದೆ. ಈ ರೀತಿಯ ಕತೆಗಳಲ್ಲಿ ಹೇಳಲಾಗದ ಭಾವಗಳು ಒಟ್ಟಾಗಿ ನಿಂದು ಓದುಗರ ನೋಟಕ್ಕೆ ತಕ್ಕಂತೆ ಕತೆ ಕಟ್ಟಿಕೊಳ್ಳುವ ಹೊಸ ಸಾಧ್ಯತೆಯನ್ನೂ ಕತೆ ನಿಲುಕುತ್ತದೆ. ಹಾಗಾಗಿ ಇಂಥ ಕತೆಗಳು ಓದುಗರನ್ನು ಸರಳ ಮತ್ತು ನೇರವಾಗಿ ಆವರಿಸಿಕೊಂಡು ಓದಿಸಿಕೊಳ್ಳುವ ಶಕ್ತಿಯನ್ನು ಪಡೆಯಬಲ್ಲವು.ಮನಸ್ಸಿನ ತಾಳಕ್ಕೆ ಹೆಜ್ಜೆ ಹಾಕುವ ಮನುಷ್ಯನ ಭಾವ ಜಗತ್ತು ಮತ್ತದು ಕಲ್ಪನೆಯ ಹಂತದಲ್ಲಿ ಪ್ರೇಮವನ್ನು ಆವಾಹಿಸುವ ವಿಚಿತ್ರ ಪ್ರಕೃತಿ ಚಿತ್ರವನ್ನು ನೀಡುವ ಇಲ್ಲಿಯ ವಿಶಿಷ್ಟ ಕತೆ 'ನೋಟವೊಂದೇ ಸಾಕು' ದಲ್ಲಿ, ದೆಹಲಿ ಎನ್ ಎಸ್ ಡಿಯಲ್ಲಿ ನಡೆದ ಮಕ್ಕಳ ನಾಟಕೋತ್ಸವಕ್ಕೆ ಹೋಗುವಾಗ ರೈಲಿನಲ್ಲಿ ಸಿಕ್ಕ ಅಪರಿಚಿತ ವ್ಯಕ್ತಿಯ ಭಾವನಾತ್ಮಕ ಸಂಬAಧದ ಅಲೆಯೊಂದು ನಿರೂಪಕಿಯ ಅಂತರಂಗದಲ್ಲಿ ಕಟ್ಟಿಕೊಳ್ಳುತ್ತ ಹೋಗುವ ಪರಿ ಅನನ್ಯವಾಗಿದೆ. ಈ ಶೀಲ, ಸಂಸ್ಕೃತಿ, ಸಂಪ್ರದಾಯ, ಸನಾತನ ಸಂಸ್ಕೃತಿಯ ಬೇಲಿಯ ಬಂಧನಗಳನ್ನು ಮೀರಿ ಪುರಣ ಕತೆಯ ಚಿತ್ರಾಂಗಧೆಯ ಮನಸ್ಥಿತಿಯನ್ನು ನಿರೂಪಕಿಯು ಕಂಡುಕೊಳ್ಳುತ್ತಾಳೆ.

ಹೆಣ್ಣು ಗಂಡಿನ ಭಾವನಾತ್ಮಕ ಸಂಬಂಧದ ಹಲವು ಮುಖಗಳನ್ನು ತೆರೆದು ತೋರುವ ಈ ಕತೆ ಎರಡು ವಿರುದ್ಧ ಲಿಂಗಿಗಳ ನಡುವಿನ ವಿನಾಕಾರಣ ಆಕರ್ಷಣೆಯನ್ನು ಕತೆ ನವಿರಾಗಿ ಕಟ್ಟಿಕೊಡುತ್ತದೆ.ತಾಯಿಯಾಗುವ ಹಂಬಲದಲ್ಲಿ ಮೀಯುವ ಮನಸ್ಸೊಂದು 'ಎದೆಹಾಲು ಸುರಿಯಿತು' ಕತೆಯು ಆಳವಾದ ಬರೆಯನ್ನು ಮೂಡಿಸುತ್ತ ಹೆಣ್ಣಿನ ಶೋಷಣೆಯ ಎಲ್ಲ ಮುಖಗಳನ್ನು ತೋರುತ್ತಿದೆ. ಹೆಣ್ಣೊಬ್ಬಳನ್ನು ಬೆನ್ನುಬಿದ್ದು ಕಾಡುವ ಹುಡುಗ ವಿನಾಕಾರಣ ನೀಡುವ ಹಿಂಸೆಯಿAದ ಕೊನೆಗೂ ಬಚಾವಾಗುವ ರೀತಿಯಲ್ಲಿ 'ಬಾನ್ಗಾಡಿ ಯಾಪಾರ ಮಾರಾಯ್ರೇ' ಕತೆಯಲ್ಲಿ ಹೊಸಾಕುಳಿ ತೇರಿನ ಚಿತ್ರಗಳಲ್ಲಿ ಅಡಗಿರುವ ಅವ್ಯಕ್ತ ನೆರಳು ಕೌಶಲ್ಯದಲ್ಲಿ ಮೂಡಿದೆ.

'ಮೊಹಬತ್ ಕಿ ಘರ್' ಅಂಕಲ್ ಮತ್ತು ಆಂಟಿಯ ಕಷ್ಟ ಸುಖಕ್ಕಾಗಿ ಓಡೋಡಿ ಬರುವ ಯಮ್ನಾ ಎದುರು ಬಿಚ್ಚಿಕೊಳ್ಳುವ ಅವರ ಕೌಟುಂಬಿಕ ಚಿತ್ರಗಳು ಮತ್ತು ಮುಸ್ಲಿಂ ಜನಾಂಗ ಕನ್ನಡವನ್ನು ಆಡುವ ವಿಶಿಷ್ಟ ಲಯ ಅದರದೇ ಆದ ಆವರಣವೊಂದನ್ನು ಸೃಷ್ಟಿಸಿ, 'ಖುಷಿ ಮನೆನಲ್ಲಿ ಇಲ್ಲ ಯಮ್ನ, ಮನಸ್ನಾಗ ಐತೆ' ಎನ್ನುವ ಅಂಕಲ್ ಮಾತಿಗೆ ವಿವಿದ ಅರ್ಥಗಳು ಸ್ಪುರಿಸುತ್ತಿದ್ದಂತೆಯೇ, ಇಲ್ಲಿಯೂ ಸಹ ದಾಂಪತ್ಯದ ಹಲವು ಮಗ್ಗಲುಗಳು ಕಾಣುತ್ತವೆ. 'ಇವರು' ಎಂಬ ಪದದಲ್ಲಿ ಅಡಗಿರುವ ಮನೆ ಗಂಡಸು, ಜೀವನ ಪರ್ಯಂತ ಕುಟುಂಬಕ್ಕೆ ಎರವಾಗುವುದರ ಜೊತೆಗೆ ಪತ್ನಿಯ ಅಸ್ತಿತ್ವಕ್ಕೆ ಘನತೆಯನ್ನು ತೋರದ ಹಟವಾದಿಯಾಗಿ 'ಒಡಲ ಬೆಂಕೀಲಿ ಹೆಣ ಬೆಂದೊ' ಕತೆಯಲ್ಲಿ ಮೂಡಿದ್ದಾನೆ.

ಗಂಡನ ಶವವನ್ನು ಹೆಂಡತಿ ಶಾರದೆಯೇ ಅಂತ್ಯಸಂಸ್ಕಾರ ಮಾಡಿದ ಪರಿಯಲ್ಲೇ ಅವಳ ಮಾನಸಿಕ ವೇದನೆ ವೇದ್ಯವಾಗಿದೆ.ಆಧುನಿಕ ತಂತ್ರಜ್ಞಾನದಿಂದ ಇಂದು ಚಿಕ್ಕ ಮಕ್ಕಳ ಕೈಯಲ್ಲೂ ಬಳಕೆಗೆ ಸಾಮಾನ್ಯವಾಗಿ ಹೋದ ಮೊಬೈಲ್, ಶಾಲೆಗೆ ಹೋಗುವ ಮಕ್ಕಳ ಮೇಲೆ ಎಂಥ ದುಷ್ಪರಿಣಾಮ ಬೀರಲಿದೆ ಎಂಬುದಕ್ಕೆ ಎಚ್ಚರಿಕೆಯ ಘಂಟೆಯೆಂಬಂತೆ ಇಲ್ಲಿಯ 'ಚಂದುವಿನ ಕನಸು' ಕತೆ ಮೂಡಿಬಂದಿದೆ. ಸರಕಾರಿ ಪ್ರೌಢ ಶಾಲೆಯಲ್ಲಿ ಒಂಬತ್ತನೇ ವರ್ಗದಲ್ಲಿ ಓದುತ್ತಿದ್ದ ಚಂದೂನೊಟ್ಟಿಗೆ ಸೇರಿಕೊಂಡ ಸ್ನೇಹಿತ ಮಿಥುನ್, ಎಲ್ಲ ದುರಾಚಾರಗಳನ್ನೂ ಕಲಿಸಿ ಚಂದುವನ್ನು ತಪ್ಪುದಾರಿಗೆ ಎಳೆಯುತ್ತಾನೆ.

ಕಲಿಕೆಯಲ್ಲಿ ಸದಾ ಮೊದಲ ಸ್ಥಾನದಲ್ಲಿದ್ದ ಚಂದೂ ಫೇಲ್ ಆಗುತ್ತಾನೆ. ಕತೆಯ ಕೊನೆ ಧ್ವನಿಪೂರ್ಣವಾಗಿದೆ. ಮೊಬೈಲ್ ಆಕಾರಕ್ಕೆ ಚಿಮ್ಮುವ ಭಾವದಲ್ಲಿ ಒಂದು ರೀತಿಯ ಅಪ್ಯಾಯಮಾನತೆ ಅಡಗಿದೆ.ಹೀಗೆ ಅಧ್ಯಯನಶೀಲ ದಾರಿಯಲ್ಲಿ ಹುಟ್ಟಿದ ಮಾಧವಿಯ ಇಲ್ಲಿಯ ಹನ್ನೆರಡು ಸಜಹ ಲಯದ ಕತೆಗಳಿಗೆ ಮನುಷ್ಯ ಸಂಬಂಧಗಳ ಕುರಿತಾದ ತೀವ್ರ ಕಾಳಜಿಯಿದೆ, ಕಳಕಳಿಯಿದೆ. ಮಹತ್ವಾಕಾಂಕ್ಷೆಯಿದೆ. ನೋವು, ದುಃಖ, ದ್ವಂದ್ವ, ದಿಗಿಲು ಹೀಗೆ ಹಲವಾರು ನೆಲೆಗಳಲ್ಲಿ ಇಲ್ಲಿಯ ಕತೆಗಳು ತುಡಿಯುತ್ತಿವೆ. ಕತೆಗಳಲ್ಲಿ ಒಂದು ರೀತಿಯ ಉದ್ವಿಘ್ನತೆಯಿದೆ, ಒಂದೊಂದು ಕತೆಯೂ ವಿಭಿನ್ನ ವಸ್ತು ವೈವಿಧ್ಯಗಳಿಂದ ಕೂಡಿವೆ. ಕತೆಗಳ ಭಾಷೆ ಪರಿಸರ ಕಣ್ಣಿಗೆ ಕಟ್ಟುವಂತಿವೆ. ನಿರ್ವಹಿಸಿದ ರೀತಿಯೂ ಆಪ್ತವಾಗಿದೆ,

ಬದುಕಿನ ಸಣ್ಣಪುಟ್ಟ ಸಂಗತಿಗಳ ಜೊತೆ ಜೊತೆಗೇ ಅನೇಕ ಗಂಭೀರ ವಸ್ತುಗಳನ್ನು ಒಡಲಲ್ಲಿಟ್ಟುಕೊಂಡ ಒಂದು ವಿಭಿನ್ನ ಮಾದರಿಯ ಕಥಾಲೋಕ ನಮಗಿಲ್ಲಿ ವೇದ್ಯವಾಗುತ್ತದೆ. ಈ ಮೂಲಕ ಕನ್ನಡಕ್ಕೆ ಒಳ್ಳೆಯ ಕತೆಗಳು ದೊರೆತದ್ದು ಸಂತೋಷದ ಸಂಗತಿ. ಇಲ್ಲಿ ಬರುವ ಕಥಾ ನಾಯಕಿಯರು ಕಟ್ಟು ನಿಟ್ಟಾದ ಗಂಭೀರ ವಾಸ್ತವವಾದಿಗಳು. ಇಲ್ಲಿಯ ಸ್ತ್ರೀಪಾತ್ರಗಳು ಮಹಿಳಾ ಸಬಲೀಕರಣದ ಪ್ರತಿನಿಧಿಯಂತಿದ್ದಾರೆ. ಹಳ್ಳಿಯ ಆಡುನುಡಿ ಮತ್ತು ನಿತ್ಯದ ಬಳಕೆಯ ಭಾಷೆಗಳು ಸಾಹಿತ್ಯದ ಭಾಷೆಯಾಗಿ ಪರಿವರ್ತನೆ ಹೊಂದಿರುವುದರಿAದ ಕೃತಿಗೆ ಹೆಚ್ಚಿನ ಕಸುವು ದೊರೆತಿದೆ.ಓದುವ ಕ್ಷಣದಲ್ಲಿ ನಮ್ಮನ್ನು ಆವರಿಸಿಕೊಳ್ಳುವ ಪರಿಯಿಂದಲೇ ಕತೆ ಅನುಭವಕ್ಕೆ ಬರುತ್ತದೆ,

'ಹೆಣ್ಣಿನ ನಿಶ್ಯಕ್ತಿ ಮತ್ತು ವ್ಯಥೆಗಳ ಗುರುತುಗಳು ಅವಳ ನೆರಳುಗಳೇ ಆಗಿವೆ' ಎನ್ನುವ ಖ್ಯಾತ ಲೇಖಕಿ ವರ್ಜಿಯಾ ವುಲ್ಫ್ ಮಾತಿನಂತೆ ವ್ಯವಸ್ಥೆಯ ಕ್ರೌರ್ಯ ಎಲ್ಲೆಡೆ ತನ್ನ ದುಷ್ಟ ನಾಲಿಗೆಯನ್ನು ಚಾಚಿದೆ, ಮಾಧವಿ ತಮ್ಮ ಕಣ್ಣಾಚೆಗೂ ಬೆಳೆವ ನಿಲುಕುಗಳಿಗೆ ಕೈಚಾಚುವವಳು.

ಅವಳ ಇಡೀ ವ್ಯಕ್ತಿತ್ವದ ಗಮ್ಯತೆಯನ್ನು ಹಿಡಿಯುವ ಅನುಭಾವ ಕೂಡ ಕತೆಗಾರ್ತಿಯ ಅನುಭವದ ನೆಲೆಯಲ್ಲಿ ಕಟ್ಟಿಕೊಂಡ ಅಪೂರ್ವ ಶಕ್ತಿಯೇ. ಅಷ್ಟೇ ಏಕಾಗ್ರತೆಯಿಂದ ಅತ್ಯಂತ ಉತ್ಕಟವಾಗಿ ತನ್ನ ದೈನಿಕಕ್ಕೆ ಸ್ಪಂದಿಸುತ್ತ ಪ್ರಾಮಾಣಿಕಳಾಗಿ ಬದುಕುತ್ತಿರುವ ಮಾಧವಿಯ, ಬೆರಗು ಮತ್ತು ನಿಗೂಢತೆ ತುಂಬಿದ ಇಲ್ಲಿಯ ಕತೆಗಳ ಭಾವ-ಭಾಷೆಗಳ ಪಾಕ ಅಪ್ರತಿಮ. ಬುದ್ದಿಗೆ ಬೆಳಕು, ಎದೆಗೆ ಸಾಂತ್ವನ, ಬದುಕಿಗೆ ದಾರಿ ಕಾಣಿಸುವ ಕತೆಗಳನ್ನು ಮೂಡಿಸಿದ ಈ ಕತೆಗಾರ್ತಿಗೆ ಒಂದು ಅಕ್ಕರೆಯ ನಮಸ್ಕಾರ.

---------------------

*ಓದುಗನನ್ನು ಮಾನವೀಯಗೊಳಿಸುವ ಕಥೆಗಳು*-ಸುನಂದಾ ಕಡಮೆಮೂಲತಃ ಕವಿಗಳಾದ ಸಿದ್ದರಾಮ ತಳವಾರ ಅವರ ಈ 'ಕೇರಿಯ ಹುಡುಗನ ಕತೆಗಳ' ಲೋಕವು ವೈವಿಧ್ಯಮಯ ವಿಷಯ...
03/10/2025

*ಓದುಗನನ್ನು ಮಾನವೀಯಗೊಳಿಸುವ ಕಥೆಗಳು*

-ಸುನಂದಾ ಕಡಮೆ

ಮೂಲತಃ ಕವಿಗಳಾದ ಸಿದ್ದರಾಮ ತಳವಾರ ಅವರ ಈ 'ಕೇರಿಯ ಹುಡುಗನ ಕತೆಗಳ' ಲೋಕವು ವೈವಿಧ್ಯಮಯ ವಿಷಯ ವಸ್ತುಗಳನ್ನು ಒಳಗೊಂಡದ್ದು. ಕತೆ ಹೇಳುವ ಸೂಕ್ಷö್ಮವಾದ ಭಾಷೆ ಅವರಿಗೆ ಒಲಿದಿರುವುದು ಕತೆಗಳ ಒಡಲಲ್ಲಿ ಹುದುಗಿರುವ ಮಾನವೀಯತೆಯನ್ನು ಪ್ರತಿಪಾದಿಸುವ ಹಂತದಲ್ಲೇ ನಮ್ಮ ಗಮನಕ್ಕೆ ಬರುತ್ತದೆ. ಇಲ್ಲಿಯ ಕತೆಗಳು ಸಮಾಜದ ಅನೇಕ ಅಂತರತಮವನ್ನು ಬೆರಳಿಟ್ಟು ಗುರುತಿಸುತ್ತಲೇ ಅವು ಇಡಿಯಾದ ಕೇರಿಯ ಸಮುದಾಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ತೆರೆದಿಡುತ್ತ ಸಾಗುತ್ತವೆ. ನಮ್ಮ ಕಿತ್ತೂರು ಕರ್ನಾಟಕದ ಕನ್ನಡದ ಕಂಪನ್ನು ವಿಸ್ತೃತವಾಗಿ ಬಳಸಿಕೊಂಡಿದ್ದಾರೆ ಸಿದ್ದರಾಮ,

ಒಂದು ಸುದೀರ್ಘ ಕಾದಂಬರಿಗೆ ಒದಗಿ ಬರುವ ವಸ್ತು ವಿಷಯವನ್ನು ಒಳಗೊಂಡ 'ಕತೆಯಾದಳು ಇಂದಿರೆ' ಯಂತಹ ಕತೆಗಳು ಬರಗಾಲದ ದುರ್ದರ ದಿನಗಳು ಗ್ರಾಮೀಣ ಭಾಗದ ಜನರ ಅಸಹಾಯಕತೆಯನ್ನು ಬಿಚ್ಚಿಡುತ್ತವೆ. ಸಾವು ನೋವುಗಳು ಇಲ್ಲಿಯ ಮನುಷ್ಯ ಸಂಬAಧಗಳ ತೀವ್ರತೆಯನ್ನು ಹೆಚ್ಚಿಸಿವೆ. ಅನಾಥ ಶಿಶುವನ್ನು ಸಂಬAಧವೇ ಇಲ್ಲದ ಜೀವವೊಂದು ಜೋಪಾನ ಮಾಡುವ 'ಪಡ್ಡಲಗಿಯೊಳಗಿನ ಪೆನ್ನು' ಎಲ್ಲ ಕತೆಗಳಿಗಿಂತಲೂ ಹೆಚ್ಚು ಗಾಢವಾಗಿ ನಮ್ಮನ್ನು ತಟ್ಟುತ್ತದೆ. ಅವ್ವ ಭಾಗೀರತಿ ಮಗಳು ಸಾವಂತ್ರಿಗೆ 'ಈ ಪಡ್ಡಲಗಿ ಸಾವಾಸ ಸಾಕು, ನನ್ನ ಕೂಡೆ ಇದನ್ನು ಮಣ್ಣು ಮಾಡಿಬಿಡು' ಅನ್ನುವ ಮಾತು ಬಂಧನದಿAದ ಹೊರಬರುವ ಕ್ಷಿತಿಜದಂತೆ ಇಡೀ ಸಮುದಾಯಕ್ಕೆ ದಕ್ಕುತ್ತದೆ. ಪಡ್ಡಲಗಿಯೊಳಗಿಟ್ಟ ಪೆನ್ನು ಹೆಣ್ಣುಮಕ್ಕಳ ಶಿಕ್ಷಣದ ಸಂಕೇತವಾಗಿ ಬಿಂಬಿತವಾಗಿದೆ.

ಅಪ್ಪನ ಜೊತೆ ಕೆಲಸಕ್ಕೆ ಹೋದ ಮಗಳು ಪಾರ್ವತಿ ದುರುಳನ ಮೋಸಕ್ಕೆ ಬಲಿಯಾಗುವ 'ತಲಾಖ್' ಕತೆ ಹೆಣ್ಣಿನ ಅನುದಿನದ ಬವಣೆಯನ್ನು ಆತ್ಯಂತಿಕವಾಗಿ ತೋರಲು ಹವಣಿಸುತ್ತಿದೆ. ಪಾರ್ವತಿಯನ್ನು ಇಮಾಮ ಸಾಬಿಗೆ ಮದುವೆ ಮಾಡಿ ಕೊಡಲು ಕೇರಿಯ ಜನ ಒಪ್ಪದೇ. ತಲಾಖ್ ಅವಳನ್ನು ನರಕದಿಂದ ಹೊರತಂದು ಸುರಕ್ಷಿತ ಬಾಳಿಗೆ ನಾಂದಿಹಾಡಿದAತಿದೆ. ಮಾದೇಗೌಡನ ಜಗುಲಿಯಲ್ಲಿ ಬಿಸಾಕಿ ಬಂದ ಮಾಲಿಂಗನ ಹೆಣ ಪುನಃ ಅವನದೇ ದನದ ಹಕ್ಕೆ ಸೇರುವುದು 'ಮಾಲಿಂಗ' ಕತೆಯ ಪರವಶಗೊಳ್ಳುವ ಗುಣವನ್ನು ಎತ್ತಿ ಹಿಡಿದಿದೆ.

ರಾಜಕಾರಣಿಗಳನ್ನೆಲ್ಲ ಒಳಗೆ ಹಾಕಿಕೊಂಡು ದೇವಸ್ಥಾನದ ಆಗುಹೋಗುಗಳನ್ನು ಶ್ರೀಮಂತಗೊಳಿಸಿದ ಶಾಮರಾಯರ ವರ್ಚಸ್ಸು ಇಲ್ಲಿ ಅವರಿಗೆ ಬದುಕುವ ಯಾವ ವಿಶ್ವಾಸವನ್ನೂ ತಂದುಕೊಡಲಿಲ್ಲ ಎಂಬುದು 'ಅಗ್ರಹಾರದ ಹೂ' ಕತೆಯಲ್ಲಿ ಸ್ಪಷ್ಟವಾಗುತ್ತದೆ. ೨೦ ರ ಹರೆಯದ ಹೂಹುಡುಗಿ ಅಗ್ರಹಾರದ ಐವತ್ತರ ಹರೆಯದ ಅರ್ಚಕ ಶಾಮರಾಯರೂ ಕೇವಲ ಗಂಡು ಮತ್ತು ಹೆಣ್ಣು ಎಂಬ ಕಾರಣಕ್ಕೆ ಪರಸ್ಪರ ಒಂದಾಗುವ ನಿರ್ಧಾರವನ್ನು ಒಪ್ಪದ ಈ ವ್ಯವಸ್ಥೆಯು ಒಂದು ಜೀವವನ್ನು ಬಲಿಪಡೆಯುವ ಮಟ್ಟಕ್ಕೆ ಹೋಗುವ ಸಂದರ್ಭವು ಕತೆಯ ವಿಸ್ತಾರವನ್ನು ಇಂಟೆನ್ಸ್ ಆಗಿ ಹಿಡಿದಿಟ್ಟಿದೆ.

ಬಣ್ಣ ಬಣ್ಣದ ಹರಕು ಸೀರೆಗಳ ಚಿತ್ತಾರವನ್ನು ಹಾಸಿಹೊದ್ದ ಕಲರ್ ಫುಲ್ ಕೌದಿ ಎಂಬ ರೂಪಕವು 'ಪರಸಂಗದ ಯಮನ್ಯಾ' ಕತೆಯ ಶಂಕರನ ಬದುಕಿನ ಅವಸ್ಥೆಯನ್ನು ಅಂತಃಕರಣದಿAದ ಹಿಡಿದಿಡುತ್ತದೆ. ಭೋರ್ಗರೆವ ಮಳೆಗೆ ಶಾಪ ಹಾಕುವ ಗುಡಿಸಲಿನ ಜನರ ಸಂಕಷ್ಟಗಳು ಕಣ್ಣಮುಂದೆ ನಡೆದಂತೆ ಭಾಸವಾಗುತ್ತವೆ. ಊರಗೌಡರನ್ನು ಕಂಡ ಶಂಕರ ತನ್ನ ತಲೆಯ ಮೇಲಿದ್ದ ಟವಲನ್ನು ಕೈಯಲ್ಲಿ ಹಿಡಿದು ಮಾತಿಗಾರಂಭಿಸುವುದು ಅವನ ದಯನೀಯ ಸ್ಥಿತಿಯನ್ನು ನಿರಾಯಾಸ ಹೇಳುವಂತಿದೆ. 'ಇಷ್ಟ ದಿನಾ ನೀ ನನಗ ಹೇಂತಿ ಆಗಿದ್ದೀ, ಇನ್ ಮ್ಯಾಗ ನೀ ನನಗ ಅವ್ವ ಆಗೀದಿ. ನನ ಹಲ್ಕಟ ಕೆಲಸಕ ಕ್ಷಮಾ ಮಾಡು' ಅನ್ನುವ ಗೌಡನ ಮಾತು, ಬದಲಾದ ಸಂದರ್ಭದ ಬದಲಾದ ಗುಣ ಸ್ವಭಾವಗಳು ಎಂಥ ಸಹನಶೀಲತೆಯನ್ನು ಕಲಿಸಿಕೊಡುತ್ತವೆ ಎಂಬುದಕ್ಕೆ ಸಾಕ್ಷಿ, ಆದರೆ ಅಷ್ಟು ದಿನಗಳ ಕಾಲ ನೀಲವ್ವ ಅನುಭವಿಸಿದ ದುಃಖ ಸಂಕಟಗಳಿಗೆ ಯಾರು ಹೊಣೆ ಎಂಬ ಪ್ರಶ್ನೆ ನಮ್ಮನ್ನು ಎಚ್ಚರಿಸುವಂತಿದೆ.

ಅಪ್ಪ ಕೊಟ್ಟ ಒಂಟಿತನದ ಉಡುಗೊರೆ ಹೊತ್ತು ಬದುಕಿದ ಲತಾ ತನ್ನ ಅವ್ವನ ಜೊತೆಗೆ ಹಂಚಿಕೊಳ್ಳುವ ಎಷ್ಟೋ ವಿಷಯಗಳನ್ನು ಮನಸ್ಸಿನಲ್ಲಿಟ್ಟೇ ಜೀವಿಸುವ ಸಂದಿಗ್ದಗಳು 'ಲಯ ತಪ್ಪಿದ ರಾಗ' ಕತೆಯಲ್ಲಿ ಸಂಯಮದ ವಿಶಿಷ್ಟ ಅನಾವರಣದಂತೆ ನಮ್ಮನ್ನು ಕಾಡುತ್ತದೆ. 'ಎಲೆಕ್ಷನ್' ಕತೆಯಂತೂ ಇಂದಿನ ನಮ್ಮ ರಾಜಕೀಯ ವಾಸ್ತವಕ್ಕೆ ಹಿಡಿದ ಕನ್ನಡಿ.

ನಿರೂಪಣೆಯ ಹಂತದಲ್ಲಿ ಇನ್ನಷ್ಟು ಪರಿಣಾಮಕಾರಿಯಾದ ವಿಧಾನವನ್ನು ಬಳಸುವ ಸೃಜನಶೀಲ ಅಂಶವನ್ನು ಹೆಚ್ಚಿಸಿಕೊಂಡರೆ ಇನ್ನೂ ಒಳ್ಳೊಳ್ಳೆಯ ಕಥೆಗಳು ಸಿದ್ದರಾಮರ ಕಥಾ ಬತ್ತಳಿಕೆಯಲ್ಲಿವೆ ಎಂಬ ಆತ್ಮವಿಶ್ವಾಸವನ್ನು ಈ ಮೊದಲ ಕಥಾ ಸಂಕಲನದಲ್ಲೇ ಅವರು ನಮಗೆ ಢಾಳಾಗಿಯೇ ಕಾಣಿಸಿದ್ದಾರೆ. ಸಿದ್ದರಾಮ ಒಳ್ಳೆಯ ಮನಸ್ಸಿನ ಕತೆಗಾರ. ಅವರಿಂದ ಹೆಚ್ಚೆಚ್ಚು ಕತೆಗಳು ಹೊರಹೊಮ್ಮಲಿ.

------------------------

*ರೂಪಕವಾಗಿ ಮೂಡಿ ಬಂದ 'ಖಾಲಿಕೊಡ'*-ಸುನಂದಾ ಕಡಮೆಖಾಲಿಕೊಡಗಳ ಚಿತ್ರವತ್ತಾದ ಬರವಣಿಗೆಯ ಶೖಲಿ ಇಷ್ಟವಾಗುತ್ತದೆ. ಬದುಕಿನ ಪಯಣದ ಸೂಕ್ಷ್ಮ ಅವಲೋಕನ ಮ...
29/09/2025

*ರೂಪಕವಾಗಿ ಮೂಡಿ ಬಂದ 'ಖಾಲಿಕೊಡ'*
-ಸುನಂದಾ ಕಡಮೆ

ಖಾಲಿಕೊಡಗಳ ಚಿತ್ರವತ್ತಾದ ಬರವಣಿಗೆಯ ಶೖಲಿ ಇಷ್ಟವಾಗುತ್ತದೆ. ಬದುಕಿನ ಪಯಣದ ಸೂಕ್ಷ್ಮ ಅವಲೋಕನ ಮತ್ತು ಧ್ವನಿಪೂರ್ಣ ಅಭಿವ್ಯಕ್ತಿ ರಾಜು ಅವರದು.

ವಿದ್ಯುತ್ ಇಲಾಖೆಯ ಗುತ್ತಿಗೆ ನೌಕರರ ಖಾಯಮಾತಿಯ ಸಂಕಷ್ಟಗಳು ಮನಸ್ಸು ಕಲಕುವಂತೆ ನಿರೂಪಿಸಿದ್ದಾರೆ. ಪ್ರತಿ ತಿಂಗಳೂ ಮಳೆ ಬಿಸಿಲೆನ್ನದೇ ಮೀಟರ್ ಓದಿ ಬಿಲ್ ನೀಡುವ ಸೋದರರ ಸ್ಥಿತಿಗತಿಗಳು ಕಣ್ಣಿಗೆ ಕಟ್ಟಿ ನಿಂತವು.

ಸಂಘಟಿತರಾಗಿ ಮಾಡುವ ಹೋರಾಟದ ಮಹತ್ವವನ್ನು ಕಾದಂಬರಿ ಹಿಡಿದಿಟ್ಟಿದೆ. ಬೆಣ್ಣೆಹಳ್ಳದ ರೌದ್ರಾವತಾರಕ್ಕೆ ಮಕಾಡೆ ಮಲಗಿದ ವಿದ್ಯುತ್ ಕಂಬಗಳ ಚಿತ್ರ ಕಣ್ಣೆದುರು ಬಂದವು.

ಕಥನ ನಡೆವ ಕಾಲದ ರಾಜಕೀಯ ಆರ್ಥಿಕ ಸಾಮಾಜಿಕ ಪರಿಸ್ಥಿತಿಗಳನ್ನೂ ಇಲ್ಲಿ ದಾಖಲಿಸಿದ್ದು ಕಾದಂಬರಿಗೊಂದು ಎಕ್ಯುರೇಟ್ ಆದ ನೆಲದ ಪ್ರಜ್ಞೆ ಒಲಿದುಬಂದಿದೆ.

ಒಂದೇ ಬಗೆಯ ಸಂಕಷ್ಟದಲ್ಲಿ ಸಿಲುಕಿದ ನಾಲ್ವರ ಬದುಕಿನ ವೖಯಕ್ತಿಕ ಕಥೆಗಳು ಪರಸ್ಪರ ಭಿನ್ನವಾಗಿ ಮೂಡಿವೆ, ಅವರ ರೇಲು ಪ್ರಯಾಣದಿಂದ ಸುರುವಾಗುವ ಕಾದಂಬರಿ ಕುತೂಹಲದಿಂದ ಓದಿಸಿಕೊಳ್ಳುವ ಶಕ್ತಿ ಹೊಂದಿದೆ.

ರೂಪಕವಾಗಿ ಮೂಡಿ ಬಂದ ಖಾಲಿಕೊಡಗಳು ಕೆಲವರ ಸ್ವಾರ್ಥಕ್ಕಾಗಿ ಕೊನೆಗೂ ತುಂಬದೇ ಇರುವ ದುರಂತವನ್ನು ಢಾಳಾಗಿ ಕಾಣಿಸುತ್ತಿದೆ ಮತ್ತು ಅಷ್ಟೇ ವಿಷಾದ ತುಂಬಿದ ಆಶಯವನ್ನು ಕಾದಂಬರಿ ನೖಜವಾಗಿ ಹೇಳುತ್ತಿದೆ.

ಸತ್ಯ ಸಂಗತಿಯ ಪ್ರತಿಬಿಂಬದಂತಿರುವ ಈ ಕಥನ ಆತ್ಮಕತೆಯ ತುಣುಕಿನಂತೆಯೂ ಭಾಸವಾಗುತ್ತದೆ. ರಾಜು ಅವರ ಮೊದಲ ಕಾದಂಬರಿಗಿಂತ ಇದು ನಿರೂಪಣೆಯ ದೃಷ್ಟಿಯಿಂದ ನನಗೆ ಬಹಳ ಮೆಚ್ಚಿಗೆಯಾಯಿತು. ರಾಜು ಇನ್ನೂ ಹೆಚ್ಚು ಹೆಚ್ಚು ಬರೆಯಿರಿ. ಒಳ್ಳೆಯದಾಗಲಿ.

SUCI ಸಂಗಾತಿಗಳೊಂದಿಗೆ
25/06/2025

SUCI ಸಂಗಾತಿಗಳೊಂದಿಗೆ

ಮೇ ಸಾಹಿತ್ಯ ಮೇಳ ತಂಡ
25/06/2025

ಮೇ ಸಾಹಿತ್ಯ ಮೇಳ ತಂಡ

ಅಂಕೋಲೆಯ ಆರ್ಯ ನಿವ್ಸ್ ತಂಡ
25/06/2025

ಅಂಕೋಲೆಯ ಆರ್ಯ ನಿವ್ಸ್ ತಂಡ

ರವಿಕುಮಾರ್‌ಗೆ ಕವಿತೆಯೆಂದರೆ ಒಡಲ ಕಿಚ್ಚು-ಸುನಂದಾ ಕಡಮೆಟೆಲೆಕ್ಸ್ ರವಿಕುಮಾರ್ ಅವರ 'ನಂಜಿಲ್ಲದ ಪದಗಳು' ಸಂಕಲನದಲ್ಲಿಯ ಕವಿತೆಗಳು ತನ್ನ ಹಾಗೂ ತನ...
04/06/2025

ರವಿಕುಮಾರ್‌ಗೆ ಕವಿತೆಯೆಂದರೆ ಒಡಲ ಕಿಚ್ಚು

-ಸುನಂದಾ ಕಡಮೆ

ಟೆಲೆಕ್ಸ್ ರವಿಕುಮಾರ್ ಅವರ 'ನಂಜಿಲ್ಲದ ಪದಗಳು' ಸಂಕಲನದಲ್ಲಿಯ ಕವಿತೆಗಳು ತನ್ನ ಹಾಗೂ ತನ್ನ ಸುತ್ತಲಿನ ಜಗತ್ತಿನ ನೋವುಗಳನ್ನು ಹರಿತವಾದ ರೂಪಕಗಳಲ್ಲಿ ಹಿಡಿದಿಡುತ್ತವೆ ಮತ್ತು ಇಲ್ಲಿ ವರ್ಣ ವ್ಯವಸ್ಥೆ ರೂಪಿಸಿದ ಜಾತಿ ಧರ್ಮ ದೇವರು ಸಂಸ್ಕೃತಿ ಕುರಿತು ಇರುವ ಎಲ್ಲ ಕರಾಳ ಸ್ವರೂಪಗಳ ವಿರುದ್ಧ ಕವಿ ಎತ್ತಿರುವ ಪ್ರತಿಭಟನೆಗಳಾಗಿವೆ.

ಇದನ್ನು ರವಿಕುಮಾರ್ ತಮ್ಮ ಮೊದಲ ಕವಿತೆ "ಅಪ್ಪ"ದಲ್ಲಿಯೇ ಹೀಗೆ ಕಾಣಿಸುತ್ತಾರೆ.

/ಸತ್ತ ದನ ಹೊತ್ತ ಹೆಗಲು
ಸವೆ ಸವೆದು ಸಾಕಾಗಿದೆ
ಕೂಳಿಲ್ಲದೇ ಹೊಟ್ಟೆ ಕಿಬ್ಬೊಟ್ಟೆಗೆ ಸೇರಿದೆ
ಗುದ್ದಲಿ ಪಿಕಾಸಿ ಮಣ್ಣೆಂಟೆಗಳೊAದಿಗೆ
ಕಾಳು ಕಡಿ ಉಪ್ಪು ಮೆಣಸು ಸತ್ತ ದನದ ಬಾಡು
ಅಂಗೈಯಗಲ ಪಂಚೆ ಮೂಲೆಗೆ ಗಂಟಿಕ್ಕಿಕೊAಡು
ನೂರು ತೇಪೆಗಳ ಪಟ್ಟಿ ಪಟ್ಟಿ ಚಡ್ಡಿಯೊಳಗೆ
ನನ್ನ ಹಟ್ಟಿಯೊಳ ತಟ್ಟಾಡಿ
ತಾಕಲಾಟದ ರಾಜಠೀವಿ
ನೀ ನನ್ನ ದಳವಾಯಿ /

ಕವಿಯ ಮಡುಗಟ್ಟಿದ ನೋವಿಗೆ ಇನ್ನೊಂದು ತಾಜಾ ಉದಾಹರಣೆಯೆಂದರೆ ಅವರ 'ಕುರುಡು ದೀಪದ ಮಾತು' ಎಂಬ ಕವಿತೆ.

/ಮೋಟುಗೋಡೆ ಮೇಲೆ
ಕುರುಡು ದೀಪವೊಂದು
ಈ ಅಪರಾತ್ರಿಯಲ್ಲಿ
ಬಿಕ್ಕಿ ಬಿಕ್ಕಿ ಅಳುತ್ತಿದೆ
ಅಂಗಾತ ಬಿದ್ದ ಹಸಿವ ಕಂಡು
ರಂಗೋಲಿ ಸತ್ತು ಮಲಗಿದೆ..

ಅಷ್ಟಕ್ಕೂ ನನ್ನ ಕೊಲ್ಲುವ ಮುಂಚೆ
ಕಾರಣವಾದರೂ ಹೇಳಿಬಿಡಿ
ಅವುಗಳನ್ನೆಲ್ಲ ಬುದ್ದನಿಗೊಪ್ಪಿಸಿ ಬಂದು
ಗೋಣು ಒಡ್ಡುತ್ತೇನೆ/

ಹೀಗೆ ರವಿಕುಮಾರ್ ಗೆ ಕವಿತೆಯೆಂದರೆ ತನ್ನ ಬದುಕನ್ನು ಶೋಧಿಸುವ ಮತ್ತು ತನ್ನ ಜನರ ಮಾತಾಗುವ ಒಂದು ಅರ್ಥಪೂರ್ಣ ಮಾರ್ಗವಾಗಿದೆ.

/ಈ ಕಾವ್ಯವೇ ಹೀಗೆ
ಹಡೆದ ಸಂಕಟದಂತೆ ಭಾದಿಸುತ್ತದೆ/

ಎನ್ನುತ್ತಾರೆ ಕವಿ ಒಂದೆಡೆ, ರವಿಕುಮಾರ್ ಅವರಿಗೆ ಕವಿತೆಯೆಂದರೆ ಒಡಲ ಕಿಚ್ಚು. ಅದು ಅವರ 'ಯುದ್ಧಗಳು ಬೇಕಾಗಿವೆ' ಕವಿತೆಯಲ್ಲಿ ಅನುರಣಿಸುತ್ತಿದೆ.

/ಯುದ್ಧಗಳು ಬೇಕಾಗಿವೆ ಹೆಣದ ವ್ಯಾಪಾರಿಗೆ !
ಗಂಗಾನದಿಯ ವಿಧವೆಯರ ವಾಡಿಗಳು ಸ್ವಚ್ಛಗೊಳ್ಳುತ್ತಿವೆ
ಹಿಮದ ತೊರೆಯೀಗ ಕೆಂಪು ಕೆಂಪು

ಮನೆ ಮನೆಯಲ್ಲೀಗ ತುಪ್ಪದ ದೀಪ ಹಚ್ಚಲಾಗಿದೆ..

ಅವನು ಸುಮ್ಮನಿಲ್ಲ
ಥೈಲಿ ತುಂಬಬೇಕು
ಮದ್ದು ಗುಂಡುಗಳು ತುಕ್ಕು ಹಿಡಿವ ಮುಂಚೆ ಮಾರಿಕೊಂಡು
ಮಾಯವಾಗಲು ಕಾದಿದ್ದಾನೆ ಮಹಾ ಸಂಚುಕೋರ/

ಎನ್ನುವಾಗಲೆಲ್ಲ ಇವರ ಕವಿತೆಗಳು ಸಮಕಾಲೀನ ವೇದನೆಯ ಕುರಿತು ಮಿಡಿವ ನಾಡಿಯಾಗುತ್ತದೆ. ತಮ್ಮ ನಂಬಿಕೆ ನಿಲುವುಗಳನ್ನು ಆಳವಾಗಿ ಪರೀಕ್ಷಿಸಿಕೊಳ್ಳುವ ಬಗೆಯಲ್ಲಿ ರವಿಕುಮಾರ್ ಕವಿತೆ ಕಟ್ಟುತ್ತಾರೆ.

ಹೀಗೆ ಇಲ್ಲಿಯ ಆಹುತಿ, ಚಿತೆಗಳ ಗತಿ ಗೀತೆ, ನಾನು ಆಸೀಫಾ' ನಾನು ಸೂಳೆ, ಪದ್ಯ ಉರಿವ ಕಥೆ, ಮರಣ ಮೃದಂಗ ಮುಂತಾದ ಇನ್ನೂ ಹಲವಾರು ಕವಿತೆಗಳು ಅನ್ಯಾಯಗಳಿಗೆ ಮೂಲವಾಗಿರುವ ಧಾರ್ಮಿಕ ಸಾಮಾಜಿಕ ಮೊದಲಾದ ಪಾರಂಪರಿಕ ಮೌಲ್ಯಗಳ ಯಥಾರ್ಥತೆಯನ್ನು ಪ್ರಶ್ನಿಸುತ್ತಿದೆ.

ಅವಮಾನಿತ ವ್ಯಕ್ತಿಯೊಬ್ಬ ಸ್ವಾಭಿಮಾನಿಯೂ ಆದಾಗ ಹುಟ್ಟುವ ಕವಿತೆಗಳಿಗೆ ಇಂಥದೊಂದು ಗುಣವಿರುತ್ತದೆ.

ಡಾ, ಬಾಬಾಸಾಹೇಬ ಅಂಬೇಡ್ಕರ್ ಶಕೆ ಆರಂಭಗೊಂಡಾಗಿನಿಂದ ದಲಿತರಿಗೂ ಮತ್ತು ಮಹಿಳೆಯರಿಗೂ ಅಕ್ಷರ ಮತ್ತು ಇತಿಹಾಸ ಕೊಟ್ಟಿದೆ ಎಂಬುದೇ ಒಂದು ಆತ್ಮಸಮ್ಮಾನದ ಸಂಗತಿ. ಈ ರೀತಿಯ ಸಂವಾದ ಸಂಸ್ಕೃತಿಯನ್ನು ಬೆಳೆಸುವ ಹೊಣೆಗಾರಿಕೆ ಕನ್ನಡದ ಕವಿಗಳ ಹೆಗಲ ಮೇಲಿದೆ ಎಂಬುದಂತೂ ಸತ್ಯ.

ಸಮಾಜದ ಮರುನಿರ್ಮಾಣದ ಆಶಯ, ಆದರ್ಶ ಪರಿಸರದ ಕನಸು ಮತ್ತು ಸಮಾನತೆಯ ಹಂಬಲವಿರುವ ಇಂಥದ್ದೊಂದು ಆರ್ದ್ರ ಸಂವೇದನೆಯ ಕವಿತೆಗಳ ಆಯ್ಕೆಯು ನಮ್ಮ ವಿಭಾ ಸ್ಪರ್ಧೆ-೨೦೧೮ ಸಮಿತಿಗೆ ಅತ್ಯಂತ ಖುಷಿ ತಂದಿದೆ.

03/06/2025
ಕಾಯಕ ದಾಸೋಹ ನಂಬಿದ ಮೋಳಿಗೆ ಮಹಾದೇವಿ -ಸುನಂದಾ ಕಡಮೆಶರಣ ಪರಂಪರೆಯ ವಚನಗಳ ಜಗತ್ತಿನಲ್ಲಿ ನಾವು ಮಹಾದೇವಿ ಅಕ್ಕನನ್ನು ಹೆಚ್ಚು ಹೆಚ್ಚು ಕೇಳಿದ್ದೇವ...
02/06/2025

ಕಾಯಕ ದಾಸೋಹ ನಂಬಿದ ಮೋಳಿಗೆ ಮಹಾದೇವಿ

-ಸುನಂದಾ ಕಡಮೆ

ಶರಣ ಪರಂಪರೆಯ ವಚನಗಳ ಜಗತ್ತಿನಲ್ಲಿ ನಾವು ಮಹಾದೇವಿ ಅಕ್ಕನನ್ನು ಹೆಚ್ಚು ಹೆಚ್ಚು ಕೇಳಿದ್ದೇವೆ, ಆದರೆ ಇನ್ನೊಬ್ಬ ಮಹಾದೇವಿಯು ವಚನಗಳ ಕೃಷಿಯಲ್ಲಿ ಹೆಸರು ಮಾಡಿದ್ದು ಹೆಚ್ಚು ಮುನ್ನಲೆಗೆ ಬಂದಿಲ್ಲ, ಅವಳೇ ಮೋಳಿಗೆ ಮಹಾದೇವಿ.

ಈ ವಚನಕಾರ್ತಿಯು ವಚನಕಾರ ಮೋಳಿಗೆ ಮಾರಯ್ಯನ ಪತ್ನಿಯೂ ಹೌದು. ಮೋಳಿಗೆ ಮಹಾದೇವಿಯವರು ಹನ್ನೆರಡನೇ ಶತಮಾನದ ಹೊತ್ತಿನಲ್ಲಿ ಕಾಶ್ಮೀರದ ಮಾಂಡವ್ಯಪುರ ಎಂಬ ದೇಶವನ್ನು ಆಳುತ್ತಿದ್ದ ಮಹಾರಾಜ ಮಹಾದೇವ ಭೂಪಾಲನ ಪತ್ನಿ, ಇವರ ಮೊದಲಿನ ಹೆಸರು ರಾಣಿ ಗಂಗಾದೇವಿ.

ಆ ಸಮಯದಲ್ಲೇ ನಮ್ಮ ಕಲ್ಯಾಣದಲ್ಲಿ ಬಸವಣ್ಣನವರ ಮುಂದಾಳತ್ವದೊಂದಿಗೆ ಮನುಕುಲದ ಉದ್ದಾರ ಮಾಡುವ 'ಮಹಾಮಣಿಹ' ನಡೆದಿತ್ತು.

ಶರಣರ ಮಾನವೀಯ ಮೌಲ್ಯಗಳು, ಆಧ್ಯಾತ್ಮದ ಹಂಬಲ, ಮೃದು ವಚನಗಳನ್ನಾಡುವ ಅವರ ಸಾತ್ವಿಕ ನಡವಳಿಕೆಗಳನ್ನು ಕಂಡು, ಮರುಳಾಗಿ, ಅನೇಕ ಜನರು ಈ ಶರಣ ಚಳುವಳಿಗೆ ಶರಣಾಗಿದ್ದರು. ಮತ್ತು ಜಂಗಮರ ಕಾಲ್ನಡಿಗೆಯ ಪ್ರವಾಸದಿಂದ ಇದು ಕಾಶ್ಮೀರದವರೆಗೂ ಹರಡಿತ್ತು.

ಆಗಲೇ ಅಲ್ಲಿಯ ಮಾಂಡವ್ಯಪುರದ ರಾಜ ದಂಪತಿಗಳು ಈ ವಿಷಯಗಳಿಂದ ಸ್ಪೂರ್ತಿ ಪಡೆದು ತಮ್ಮ ಅರಮನೆಯಲ್ಲೇ ದಾಸೋಹವನ್ನು ನಡೆಸಲಾರಂಭಿಸಿದ್ದರು.

ಆ ಸಮಯದಲ್ಲೇ ಅವರಲ್ಲಿಗೆ ಹೋದ ಶರಣರೊಬ್ಬರು 'ನಿಮ್ಮ ಸ್ವಂತ ದುಡಿಮೆಯ ಹಣದಿಂದ ಮಾತ್ರ ನನ್ನನ್ನು ಉಪಚರಿಸಬೇಕು, ಸ್ವಂತ ದುಡಿಮೆಯ ಹಣದಿಂದ ಮಾಡಿದ ಸೇವೆಯೇ ಸಾರ್ಥಕವಾದಂತಹ ಪೂಜೆ, 'ನಿನ್ನ ಕಾಣಿಕೆಯಲ್ಲಿ ನಿಮ್ಮ ಕಾಯ-ಕಷ್ಟದ ಬೆವರು ಅಂಟಿರಬೇಕು' ಎಂದು ಹೇಳಿ ಅವರ ಕಣ್ಣು ತೆರೆಸುತ್ತಾರೆ.

ಶರಣರ ಈ ಶರತ್ತಿಗೆ ತಲೆಬಾಗಿ, ರಾಜ ಮಹಾದೇವ ಭೂಪಾಲನು ಪತ್ನಿ ಗಂಗಾದೇವಿಯೊAದಿಗೆ ಮಾರುವೇಷದಲ್ಲಿ ಕಮ್ಮಾರನೊಬ್ಬನ ಬಳಿ ಕೂಲಿ ಮಾಡಿ, ಅದಕ್ಕೆ ಪ್ರತಿಯಾಗಿ ಬಂದ ಹಣದಿಂದ ಜಂಗಮರಿಗೆ ದಾಸೋಹವನ್ನು ನೀಡುವ ಪ್ರಸಂಗವೂ ಎದುರಾಗುತ್ತದೆ.

ಆ ಕಾಯಕದಿಂದ ರಾಜ-ರಾಣಿಯರ ಒಳಗಣ್ಣು ತೆರೆದು, ವೈರಾಗ್ಯವು ಅವರ ತನುಮನಗಳನ್ನು ಆವರಿಸಿ, ಅವರು ಜಗತ್ತನ್ನು ನೋಡುವ ದೃಷ್ಟಿಯೇ ಬದಲಾಗಲು ಒಂದು ಮೆಟ್ಟಿಲಾಯಿತು ಅನ್ನಬಹುದು.

ನಮ್ಮ ಶರಣರು ಅಂಧಶೃದ್ಧೆ, ಶೋಷಣೆ, ಅರ್ಥಹೀನ ಸಂಪ್ರದಾಯ, ದೇವಾಲಯ ಸಂಸ್ಕೃತಿ ಮತ್ತು ಪುರೋಹಿತಶಾಹಿ ವ್ಯವಸ್ಥೆಗಳ ವಿರುದ್ಧ ದನಿಯೆತ್ತಿದ್ದಷ್ಟೇ ಅಲ್ಲದೇ ಇವೆಲ್ಲದರ ವಿರುದ್ಧ ಸಿಡಿದೆದ್ದ ವಿಷಯಗಳೆಲ್ಲವೂ ಆ ದಂಪತಿಗಳ ಮನಸ್ಸಿನಲ್ಲಿ ಹೊಸ ವಿಚಾರಧಾರೆಗಳನ್ನೇ ಹುಟ್ಟುಹಾಕಲು ಕಾರಣವಾಯಿತು.

ಯಾವುದೇ ಪವಾಡಗಳಿಂದಲ್ಲದೇ ನಮ್ಮ ಶರಣರು ತಮ್ಮ ಅಂತಃಸತ್ವದಿಂದಲೇ ದೊಡ್ಡವರೆನಿಸಿಕೊಂಡದ್ದು ಅವರಿಗೆ ಬಹು ಅಪರೂಪದ ಸಂಗತಿಯೆನಿಸಿತು.

ಮುಂದೆ ಕಾಶ್ಮೀರದ ಮಾಂಡವ್ಯಪುರದ ಆ ರಾಜಸತ್ತೆಯು ಜಂಗಮರ ದಾಸೋಹದ ಕೇಂದ್ರಬಿಂದುವೇ ಆಗಿ ಹೋಯಿತು, ಆ ಸಮಯದಲ್ಲೇ ನಮ್ಮ ಶರಣರ ಭಾಷೆಯನ್ನು ಕೂಡ ಕಲಿತುಕೊಂಡ ರಾಜ ದಂಪತಿಗಳು ಆಗಲೇ ಕೆಲವು ವಚನಗಳನ್ನು ಕೂಡ ರಚಿಸಿದರು ಎಂಬ ಪ್ರತೀತಿ ಇದೆ. ಮುಂದೆ ಹೋದಂತೆ ಕಲ್ಯಾಣದೆಡೆ ಆ ದಂಪತಿಗಳ ಅಂತರಂಗ ಸೆಳೆಯತೊಡಗುತ್ತದೆ.

ಇಲ್ಲಿಯ ಕಲ್ಯಾಣ ದ ಶರಣ ಚಳುವಳಿಯ ಬಗ್ಗೆ ತಿಳಿದ ಮೇಲೆ ಕಲ್ಯಾಣದವರಷ್ಟೇ ಅಲ್ಲ ದೇಶದ ಇನ್ನೂ ನಾನಾ ಭಾಗದ ಜನರು ಬಸವಣ್ಣನವರ ಕೈಯನ್ನು ಬಲಪಡಿಸಿದರು ಮತ್ತು ನೈತಿಕ ಸ್ತೖರ್ಯವನ್ನು ಹೆಚ್ಚಿಸಲು ಮುಂದೆ ಬಂದರು ಎಂಬುದನ್ನು ನಾವೆಲ್ಲ ಕೇಳಿದ್ದೇವೆ.

ಹೀಗೆ ಅಷ್ಟಭೋಗಗಳನ್ನು ಅನುಭವಿಸುತ್ತ ದೇಶವನ್ನಾಳುವ ಅನೇಕ ರಾಜ-ಮಹಾರಾಜರೂ ಸಹ ತಮ್ಮ ಸಕಲ ವೈಭವವನ್ನು ತ್ಯಜಿಸಿ ಕಲ್ಯಾಣಕ್ಕೆ ಬಂದು ಅಣ್ಣನ 'ಮಹಾಮಣಿಹ'ದಲ್ಲಿ ಭಾಗಿಯಾಗಿದ್ದರು, ಅಂಥವರಲ್ಲಿ ಪ್ರಮುಖರಾದವರೆಂದರೆ ಮಹಾದೇವ ಭೂಪಾಲ ಮತ್ತು ರಾಣಿ ಗಂಗಾದೇವಿಯವರು.

ಒಂದು ಸುದಿನದಲ್ಲಿ ರಾಜ-ರಾಣಿಯರಿಬ್ಬರೂ ಸ್ವಇಚ್ಛೆಯಿಂದ ತಮ್ಮ ಸಿರಿ ಸಂಪತ್ತನ್ನೆಲ್ಲ ಜಂಗಮರಿಗೆ ದಾನ ನೀಡಿ, ಯುವರಾಜ ಲಿಂಗರತಿಗೆ ರಾಜ್ಯವನ್ನು ಅರ್ಪಿಸಿ, ಕಲ್ಯಾಣದತ್ತ ಪ್ರಯಾಣ ಬೆಳೆಸುವ ಮನಸ್ಸು ಮಾಡುತ್ತಾರೆ.

ರಾಜ ವೈಭವವನ್ನು ರಾಜಧಾನಿಯಲ್ಲೇ ಬಿಟ್ಟು ಕಾಯಕ ಮಾಡಿ ಸರಳ ಜೀವನ ನಡೆಸಲು ನಿರ್ಧರಿಸಿದ್ದ ಮಹಾದೇವ ಭೂಪಾಲ ರಾಜನಿಗೆ- ಸುಕೋಮಲೆಯಾದ ತನ್ನ ಪತ್ನಿ ನಿರಂತರ ಈ ಕಷ್ಟಗಳನ್ನು ಸಹಿಸಲು ಸಾಧ್ಯವಿಲ್ಲವೆಂದೆನಿಸಿ, ಅವಳನ್ನು ಅಲ್ಲೇ ತಡೆದು

'ಅತಿಸಿರಿ ಸುಖಮಿರ್ಧ ಸ್ಥಿತಿ- ನಿನಗೆಲ್ಲಿಯ ಪಥ? ಇಲ್ಲೇ ನಿನ್ನ ಸುತರೊಳಿರು'

ಎನ್ನುತ್ತಾನೆ ಮಾರಯ್ಯ.

ಆದರೆ ಆಗಲೇ ಕಾವಿ ಸೀರೆ ಉಟ್ಟು ರುದ್ರಾಕ್ಷಿಯನ್ನು ಧರಿಸಿ ನಿಂತಿದ್ದ ರಾಣಿ ಗಂಗಾದೇವಿ ಗಂಡನನ್ನು ಕುರಿತು ಒಂದು ಮಾತನ್ನು ಹೇಳುತ್ತಾಳೆ.

'ಇದುವರೆವಿಗೂ ನಾವು ಅಮೃತದ ಸಾನಿಧ್ಯದಲ್ಲಿದ್ದರೂ ಅದನ್ನು ಕಾಣದೇ ಕೆಚ್ಚಲಿನ ಉಣ್ಣೆಯಂತೆ ಬದುಕಿದೆವು. ಇನ್ನಾದರೂ ಅರ್ಥಪೂರ್ಣವಾಗಿ ಸಾರ್ಥಕ ಬದುಕನ್ನು ಸಾಗಿಸೋಣ, ಉಣ್ಣೆಯಂತಾಗುವುದು ಬೇಡ' ಎಂದಿದ್ದರಲ್ಲಿ ನಾವು ಅವಳ ಮೇಲೆ ಪರಿಣಾಮ ಬೀರಿದ್ದ ಶರಣ ಚಿಂತನೆಯ ತೀವ್ರತೆಯನ್ನು ಗಮನಿಸಬೇಕು.

ಆಗಲೇ ರಚಿಸಿದ ಅವಳ ವಚನವೊಂದು ಭ್ರಮೆಯ ಸಂಸಾರದ ಕುರಿತು ಹೀಗೆ ಹೇಳುತ್ತದೆ..

ಸಂಸಾರ / ಸಂಗದಿಂದಲುದಯಿಸಿದ / ಸುಖವೆ ದುಃಖವೆಂದರಿಯದೆ / ಆ ಸುಖವನೆ ಮೆಚ್ಚಿ / ಭವದುಃಖವೆಂಬ ಕ್ರೂರ / ಜನ್ಮಚಕ್ರಕ್ಕೀಡಾಗಿ, ಅಲ್ಲಿ ತನ್ನ / ಮರೆದು, ತನಗಿಲ್ಲದುದ / ಭ್ರಮೆಯಿಂದ ತನ್ನದೆಂದು, ಬಾಳಿದರೇನು ಬಂತು? /

ಎಂಬಲ್ಲಿ- ಮನುಷ್ಯನು ಪರಶಿವನ ಅಂಗ. ಇದನ್ನು ಮರೆತು ತಾನು ಪ್ರತ್ಯೇಕ ವ್ಯಕ್ತಿಯೆಂದೂ ಐಹಿಕ ಸುಖವೇ ಜೀವನದ ಧ್ಯೇಯವೆಂದು ತಿಳಿದವ ಅನೇಕ ರೀತಿಯ ಕೆಟ್ಟ ಕೆಲಸವನ್ನು ಮಾಡುತ್ತಾನೆ, ಅದಕ್ಕೆ ತಕ್ಕ ಫಲವನ್ನು ಅವನು ಈ ಜನ್ಮದಲ್ಲಿಯೂ ತೀರಿಸದಿದ್ದರೆ, ಅದೇ ಮರೆವು ಮುಂದುವರೆದು, ಫಲಗಳನ್ನು ಭೋಗಿಸಲು ಮುಂದಿನ ಜನ್ಮವೆತ್ತುತ್ತಾನೆ.

ಹೀಗೆ ಜೀವನು ಹುಟ್ಟುವುದು ಕೆಟ್ಟ ಕರ್ಮ ಮಾಡುವುದು, ಸಾಯುವುದು, ಮತ್ತೆ ಹುಟ್ಟುವುದು ಹೀಗೆ ಒಂದು ಚಕ್ರದಂತೆ ಉರುಳುತ್ತಲೇ ಇರುತ್ತದೆ ಎಂದೆಲ್ಲ ಸಂಸಾರ ದಾರಿಯ ಕುರಿತು ಮಹಾದೇವಿ ವಿಶ್ಲೇಷಿಸುತ್ತಾರೆ.

ಮಹದೇವ ಭೂಪಾಲ ಮಾರಯ್ಯನಾಗಿ, ರಾಣಿ ಗಂಗಾದೇವಿ ಮಹಾದೇವಿಯಾಗಿ ಕಲ್ಯಾಣದತ್ತ ಸಾಗುತ್ತಾರೆ. ಆ ಸುದ್ದಿಯನ್ನು ತನ್ನ ಶರಣರ ಬಾಯಿಂದ ಕೇಳಿದ ಬಸವಣ್ಣನವರು ತಾವೇ ಸ್ವತಃ ತಮ್ಮ ಶಿವಶರಣ ಸಮೂಹದೊಂದಿಗೆ ಎದುರುಗೊಂಡು ಮಾರಯ್ಯ-ಮಹಾದೇವಿ ದಂಪತಿಯನ್ನು ಬರಮಾಡಿಕೊಳ್ಳುತ್ತಾರೆ.

ಇದರಿಂದಾಗಿ ಈ ದಂಪತಿಗಳಿಗೆ ಬಸವಣ್ಣನವರ ಮೇಲೆ ಮತ್ತಷ್ಟು ಭಕ್ತಿಭಾವ ಮೂಡಿ ನಿಲ್ಲುತ್ತದೆ. ಆಗ ಮಹಾದೇವಿ ಹೇಳಿದ ವಚನ ನೋಡಿ.

/ ಅಯ್ಯಾ ನಿಮ್ಮಾದ್ಯರ / ವಚನವ ಕೇಳಿ ಎನ್ನಂಗದ / ಭಂಗ ಹಿಂಗಿತ್ತು ನೋಡಾ / ಅಯ್ಯಾ ನಿಮ್ಮ ಶರಣರ / ಸಂಗದಿAದ ಮಹಾಲಿಂಗದ / ಸಂಯೋಗವಾಯಿತ್ತು ನೋಡಾ / ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ /

ಎನ್ನುವ ಭಕ್ತಿಭಾವವನ್ನು ಇವಳು ತೋರ್ಪಡಿಸುತ್ತಾಳೆ.

ಹಾಗೆಯೇ ಕಲ್ಯಾಣಕ್ಕೆ ಬಂದ ದಂಪತಿಗಳು ಊರ ಹೊರಗೆ ಒಂದು ಗುಡಿಸಲನ್ನು ಕಟ್ಟಿಕೊಂಡು ಕಾಡಿನಿಂದ ಸೌಧೆಯನ್ನು ತಂದು ಕಲ್ಯಾಣದ ಬೀದಿಗಳಲ್ಲಿ ಮಾರಿ ಹಣ ಸಂಪಾದಿಸಿ, ಮಹಾದೇವಿಯಮ್ಮ ತುಂಬ ರುಚಿಯಾದ ಅಂಬಲಿಯನ್ನು ಭಕ್ತಿಯಿಂದ ಸಿದ್ದಪಡಿಸುತ್ತಾಳೆ.

ದಂಪತಿಗಳಿಬ್ಬರೂ ಮೊದಲು ಜಂಗಮರಿಗೆ ಅದನ್ನು ಉಣಬಡಿಸಿ, ಅವರು ಸಂತೃಪ್ತರಾದ ನಂತರ ಉಳಿದದ್ದನ್ನು ತಾವು ಭಕ್ತಿಯಿಂದ ಸ್ವೀಕರಿಸುತ್ತಾರೆ.

ಅಂಥ ದಾಸೋಹದ ಬಗ್ಗೆ ಮಹಾದೇವಿಯವರ ಒಂದು ವಚನವೇ ಇದೆ.

/ ಪೂಜೆಯಲ್ಲಿ ಲಕ್ಷಿತವಪ್ಪವರು / ಪುಣ್ಯದ ಆಗಿಂಗೆ ಒಡಲು / ದಾಸೋಹವೆಂಬ ಸೋಹವನರಿದಲ್ಲಿ / ಚತುರ್ವಿಧಫಲಪದದಾಸೆಗೆ / ಒಡಲು, ಇಂತೀ ಉಭಯದ / ಪ್ರೀತಿಯನರಿತು ತೋರಿದ / ತೋರಿಕೆ ಬಂದಂತೆ ನೋಡ ನಿಕಃಳಂಕ ಮಲ್ಲಿಕಾರ್ಜುನಾ/

ಅಂದರೆ- ಲಿಂಗಾಂಗ ಸಾಮರಸ್ಯಕ್ಕೆ ಬಹಳ ಅವಶ್ಯವಾದ ಒಂದು ಅಂಶವೆಂದರೆ ನಿಸ್ವಾರ್ಥತೆ. ಇಲ್ಲಿ ಸತ್ಯ ಶುದ್ಧ ಕಾಯಕದಿಂದ ಸಂಪಾದಿಸಿದುದಷ್ಟನ್ನೇ ದಾಸೋಹಕ್ಕೆ ಉಪಯೋಗಿಸಬೇಕೇ ಹೊರತು ಉಳಿದ ಮಾರ್ಗಗಳಾದ ಹಿಂಸೆ ಕ್ರೌರ್ಯ ಮೋಸ ಮುಂತಾದವುಗಳಿಂದ ಸಂಪಾದಿಸಿದುದನ್ನಲ್ಲ.

ದಾಸೋಹವು ಭಕ್ತನ ನಿಷ್ಕಳಂಕ ಭಾವವನ್ನು ಪ್ರತಿಬಿಂಬಿಸಬೇಕೇ ಹೊರತು ಡಾಂಭಿಕತನ ವ್ಯವಹಾರ ಬುದ್ಧಿ ಅಹಂಕಾರವನ್ನಲ್ಲ. ದಾಸೋಹವು ಪ್ರಾಪಂಚಿಕ ವಸ್ತುಗಳ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡುತ್ತದೆಯಲ್ಲದೇ ಪರಶಿವನಿಂದ ಪಡೆದುದನ್ನು ಅವನಿಗೇ ದಾಸೋಹದ ರೂಪದಲ್ಲಿ ಹಿಂತಿರುಗಿಸಿದ ಒಂದು ರೀತಿಯ ಋಣಮುಕ್ತ ಭಾವವನ್ನು ಪ್ರಕಟಿಸುತ್ತದೆ ಎಂಬ ಭಾವಾರ್ಥವು ಇಲ್ಲಿ ವೇದ್ಯವಾಗಿದೆ.

ಮಹಾದೇವಿ ಮಾಡುವ ಅಂಬಲಿ ಅಮೃತದಷ್ಟೇ ರುಚಿಯಾಗಿರುತ್ತದೆ ಎಂಬ ವಿಷಯ ತಿಳಿದ ಬಸವಣ್ಣನವರು ಒಮ್ಮೆ ಮಾರಯ್ಯನ ಗುಡಿಸಲಿಗೇ ಬಂದುಬಿಡುತ್ತಾರೆ.

ಮಾಹಾರಾಣಿಯಾಗಿದ್ದ ಮಹಾದೇವಿ ಒಮ್ಮೆಯಾದರೂ ಪಾಕಶಾಲೆಗೆ ಹೋಗಿದ್ದಳೋ ಇಲ್ಲವೋ, ಆದರೆ ಅವಳು ಅಂದು ಭಕ್ತಿಯಿಂದ ತಯಾರಿಸುವ ಆಹಾರ ಅಷ್ಟು ರುಚಿಕಟ್ಟಾಗಿತ್ತು, ಅದನ್ನು ಅರುಹಿದ ಬಸವಣ್ಣನಿಗೆ ಮಾಹಾದೇವಿ

'ಹಾಗೇನಿಲ್ಲ, ಶಿವಪ್ರಸಾದವೆಂದು ಸ್ವೀಕರಿಸಿದ ನಿಮ್ಮಂಥ ಜಂಗಮರ ಮನವೇ ಬಹಳಷ್ಟು ರುಚಿ' ಎಂದು ವಚನ ಕಟ್ಟಿ ಹಾಡುತ್ತಾಳೆ.

ಯಾರ ದರ್ಶನಕ್ಕಾಗಿ ಸಾಮಿಪ್ಯಕ್ಕಾಗಿ ದೂರದ ಕಾಶಿಯಿಂದ ಈ ದಂಪತಿಗಳು ಕಲ್ಯಾಣಕ್ಕೆ ಆಗಮಿಸಿದ್ದರೋ ಅಂಥ ಬಸವಣ್ಣನವರೇ ತಮ್ಮ ಗುಡಿಸಲಿಗೆ ಆಗಮಿಸಿದ್ದನ್ನು ಕಂಡು ಮೋಳಿಗೆ ಮಹಾದೇವಿಗೆ ಅತ್ಯಂತ ಸಂತೋಷವಾಗುತ್ತದೆ. ಅಲ್ಲಿ ಬಸವಣ್ಣ ನಡೆಸಿದ ಲಿಂಗಪೂಜೆಯನ್ನು ನೋಡಿ ಹರ್ಷದಿಂದ ನುಡಿದ ಮಹಾದೇವಿಯ ಇನ್ನೊಂದು ವಚನ ಇಂತಿದೆ..

/ಹೃತ್ಕಮಲ ಮಧ್ಯದಲ್ಲಿಪ್ಪ / ಲಿಂಗದ ಸರ್ವಾಂಗದಲ್ಲಿ / ವೇಧಿಸಿ, ಪರಿಪೂರ್ಣವಪ್ಪ/ ಲಿಂಗವ ಅಂತರ್ಮುಖದಿAದ / ಬಹಿರ್ಮುಖಕ್ಕೆ ತಂದು / ಪಂಚಸ್ಥಾನದಲ್ಲಿಪ್ಪ ಲಿಂಗವ / ಕರಸ್ಥಲದಲ್ಲಿ / ಮೂರ್ತಿಗೊಳಿಸಲಿಕ್ಕಾಗಿ /

ಎಂಬಲ್ಲಿ- ಜೀವಾತ್ಮನ ವಾಸಸ್ಥಾನವಾದ ಹೃದಯಕಮಲದ ಮಧ್ಯದಲ್ಲಿದ್ದ ಲಿಂಗವನ್ನು ಸರ್ವಾಂಗದಲ್ಲಿ ಬೆರೆಸಿ, ಹಾಗೆ ಪರಿಪೂರ್ಣವಾದಂತಹ ಲಿಂಗವ ಅಂತರ್ಮುಖದಿAದ ಬಹಿರ್ಮುಖಕ್ಕೆ ತಂದು, ಪಂಚಸ್ಥಾನದಲ್ಲಿದ್ದ ಲಿಂಗವನು ಅಂಗೈಯಲ್ಲಿ ಪ್ರತಿಷ್ಟಾಪಿಸಿಕೊಂಡು ನಾವು ಶುದ್ಧರಾಗಬೇಕು ಎಂಬ ಮಾತನ್ನು ಹೇಳುತ್ತಾರೆ ಮಹಾದೇವಿ.

ಇಲ್ಲಿ ಲಿಂಗ ಎಂಬ ಪದಕ್ಕೆ ಇಷ್ಟಲಿಂಗ, ಪರಶಿವ ಎಂಬಂತಹ ಹಲವಾರು ಅರ್ಥಗಳಿವೆ. ಇಷ್ಟಲಿಂಗವೆಂದರೆ ಕೇವಲ ಪೂಜಿಸಲ್ಪಡುವ ವಸ್ತುವಷ್ಟೇ ಅಲ್ಲ, ಸಾಧಕನ ವಿಚಾರಶಕ್ತಿ ವಿಕಾಸವಾದಂತೆಲ್ಲ ಅವನು ಇಷ್ಟಲಿಂಗವನ್ನು ಒಂದು ಧ್ಯಾನವಸ್ತುವನ್ನಾಗಿ ಮಾಡಿಕೊಳ್ಳುತ್ತಾನೆ.

ಲಿಂಗದಲ್ಲಿ ಪರಶಿವನನ್ನು ಕಾಣುವುದೇ ನಿಜವಾದ ಇಷ್ಟಲಿಂಗ ಪೂಜೆ ಎಂದಿದ್ದಾರೆ ಶರಣರು ಕೂಡ. ಪೂಜಾವಿಧಿಗಳು ಮುಗಿದ ನಂತರ ಸಾಧಕನು ಇಷ್ಟಲಿಂಗವನ್ನೇ ದಿಟ್ಟಿಸಿ ನೋಡುತ್ತಾ ಧ್ಯಾನಮಗ್ನನಾಗಿ ಬಾಹ್ಯ ಪ್ರಪಂಚವನ್ನೂ ಮರೆತು, ತನು ಪರಶಿವನಲ್ಲಿ ಒಂದಾಗುವುದನ್ನು ಅನುಭವಿಸಿ ಕೊನೆಯಲ್ಲಿ ತನ್ನನ್ನೂ ತಾನು ಮರೆಯಬೇಕು ಎಂಬುದು ಈ ಮಾತಿನ ತಾತ್ಪರ್ಯ.

ಈ ಸಿದ್ದಿ ಸ್ಥಾವರ ಲಿಂಗದಿಂದ ಸಾಧುವಾಗುವುದಿಲ್ಲ. ಅಂದರೆ ಪರಿಪೂರ್ಣ ವ್ಯಕ್ತಿತ್ವದವರಾಗಬೇಕು ಎಂಬ ಸಾಂಕೇತಿಕ ಅರ್ಥವನ್ನು ಮೋಳಿಗೆ ಮಹಾದೇವಿ ಇಲ್ಲಿ ಹಿಡಿದಿಡುತ್ತಾರೆ. ಇಲ್ಲಿ ನಮಗೆ ಕಾಣುವುದು ಆಧ್ಯಾತ್ಮಿಕ ಬಾಳಿಗೆ ಬೆಳಕಾಗಬಲ್ಲ ಜೀವನ ದರ್ಶನ.

ಲಿಂಗಪೂಜೆಯ ಧ್ಯಾನದ ಕುರಿತು ಇನ್ನೂ ಹಲವಾರು ವಚನಗಳು ನಮಗೆ ದೊರಕುತ್ತವೆ, ಅವುಗಳಲ್ಲಿ ಒಂದು ಹೀಗಿದೆ..

/ ಬೀಜದೊಳಗಣ ವೃಕ್ಷದ ಹಣ್ಣು / ಅದನಾರು ಮೆಲಬಹುದು? / ಸಸಿಯೊಳಗಣ ಲತೆಪರ್ಣ / ತಲೆದೋರದ ನಸುಗಂಪಿನ / ಕುಸುಮವ ಅದಾರು / ಮುಡಿವರು ? ಇಂತೀ ಅರಿವಿನ / ಅರಿವ ಕುರುಹಿಟ್ಟು / ಕೂಡುವನೆ ಲಿಂಗಾಂಗಿ ?/

ಎಂಬ ಮಾಹಾದೇವಿಯವರ ಪ್ರಶ್ನೆಗಳಲ್ಲಿ- ಒಂದು ಬೀಜದೊಳಗೆ ವೃಕ್ಷ ಮೈತಳೆಯುತ್ತದೆ. ವೃಕ್ಷವು ಹಣ್ಣು ಕೊಡುತ್ತದೆ, ನಂತರ ಆ ಹಣ್ಣು ಯಾರ ಪಾಲಾಗುತ್ತದೆ ಗೊತ್ತಿಲ್ಲ. ಒಂದು ಸಸಿಯೊಳಗೆ ಎಲೆ ಬಳ್ಳಿಗಳಿರುತ್ತವೆ, ಅದು ಹೂ ಬಿಟ್ಟು ನಂತರ ಆ ಹೂ ಯಾರ ಪಾಲಾಗುತ್ತದೆ ಬಲ್ಲವರಾರು ?

ಈ ತರಹದ ಅರಿವನ್ನು ಗುರುತಿಟ್ಟುಕೊಂಡು ಲಿಂಗಾಂಗಿಯನ್ನು ಕೂಡಲು ಸಾಧ್ಯವೇ? ಲಿಂಗಾಂಗಿ ಅಂದರೆ ವಿಶಾಲಾರ್ಥದಲ್ಲಿ ಲಿಂಗವನ್ನೇ ದೇಹವನ್ನಾಗಿ ಮಾಡಿಕೊಂಡ ಅಂಗ ಅಂದರೆ ಲಿಂಗದೇಹಿ. ಹೀಗೆ ಇಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದದ್ದನ್ನು ನಾವು ಗಮನಿಸಬಹುದು.

ತತ್ವದರ್ಶನ ನೀಡುವ ಮತ್ತೊಂದು ವಚನದಲ್ಲಿ-

ಕಲ್ಲ ಬಿತ್ತಿ ನೀರನೆರೆದಲ್ಲಿ ಪಲ್ಲವಿಸುವುದೆ / ದಿಟದ ಬೀಜದ ವೃಕ್ಷದಂತೆ? /

ಮಹಾದೇವಿಯವರ ಮಹತ್ವದ ಈ ಒಂದು ವಚನದಲ್ಲಿ ಅವರು ಕಲ್ಲನ್ನು ಭೂಮಿಯಲ್ಲಿ ಬಿತ್ತಿ ಎಷ್ಟು ನೀರು ಎರೆದರೂ ನಿಜವಾದ ಒಂದು ವೃಕ್ಷದಂತೆ ಚಿಗುರಿ ನಿಲ್ಲಲು ಸಾಧ್ಯವೇ? ಅಂತ ಕೇಳುತ್ತಾರೆ.

ಇನ್ನೂ ಮುಂದುವರೆದು, ಶಿವಲಿಂಗ ಪೂಜೆಯಲ್ಲಿ ಶ್ರದ್ಧೆ ಸನ್ಮಾರ್ಗಗಳು ಇಲ್ಲದ ಭಕ್ತಿಯೂ ಹಾಗೆಯೇ, ಯಾವ ಪ್ರಯೋಜನಕ್ಕೂ ಬಾರದು ಮತ್ತು ಅದು ವ್ಯರ್ಥ ಎಂಬ ತಾತ್ಪರ್ಯದಲ್ಲಿ ಈ ವಚನವು ಜೀವಂತವಾಗಿದೆ.

ದೇಹವನ್ನು ದಂಡಿಸಿ ದುಡಿದು ಬಂದ ಹಣದಲ್ಲಿ ಕೆಲವು ಜನರಿಗಾದರೂ ದಾಸೋಹ ನಡೆಸಿ ಉಳಿದದ್ದನ್ನು ತಾವು ಸ್ವೀಕರಿಸುವ ಶರಣರ ವೃತದಂತೆ ಮೋಳಿಗೆ ಮಹಾದೇವಿ ದಂಪತಿಗಳಿಬ್ಬರೂ 'ಕಾಯಕ ದಾಸೋಹ' ಕೈಗೊಂಡು ನೆಮ್ಮದಿ ಸಂತೃಪ್ತಿಯಿಂದ ಜೀವಿಸುತ್ತಾರೆ.

ಏಕದೇವೋಪಾಸಕರಾದ ಶಿವಶರಣರಿಂದ ಪ್ರಭಾವಿತಳಾಗಿ, ಪರಶಿವನ ಪರಮ ಭಕ್ತೆಯಾದಂತಹ ಮಹಾದೇವಿ, ಪರಶಿವ ಒಬ್ಬನೇ ದೇವರು ಎಂಬಂತಹ ತಮ್ಮದೊಂದು ವಚನದಲ್ಲಿ,

/ಆರು ದೇವರ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ / ಮೂರು ದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ / ಗುರು ತೋರಿದ್ದು ಒಂದೇ ದೇವರು ಸಾಕು /

ಎಂದು ಹೇಳಿದ್ದನ್ನು ನಾವು ಗಮನಿಸಬಹುದು. ಆ ನಂತರದಲ್ಲಿ ಪ್ರತಿನಿತ್ಯವೂ ಕಾಯಕದಿಂದ ಬಂದ ಪ್ರತಿಫಲದಿಂದಲೇ ಅತ್ಯಂತ ಭಕ್ತಿಯಿಂದ ಜಂಗಮರ ಆರಾಧನೆ ನಡೆಸುವುದು ಮೋಳಿಗೆ ಮಹಾದೇವಿಯ ಒಂದು ವ್ರತವೇ ಆಗಿ ಹೋಗುತ್ತದೆ.

ತನ್ನ ಜೀವನದ ಸಾರ್ಥಕತೆಯಿರುವುದೇ ಅದಕ್ಕೆ ಚ್ಯುತಿ ಬರದಂತೆ ನಡೆಸಿಕೊಂಡು ಹೋಗುವುದರಲ್ಲಿ ಎಂದು ಬಲವಾಗಿ ನಂಬಿದ ಅವಳ ಇನ್ನೊಂದು ವಚನದಲ್ಲಿ

/ಇಂದಿಗೆಂದು ನಾಳೆಗೆಂದು ಚಿಂತಿಸಲೇಕೆ ?/ ತಂದಿಕ್ಕುವ ಶಿವಂಗೆ ಬಡತನವೇ?/

ಎಂದು ಕೇಳುತ್ತಾಳೆ. ಮೋಳಿಗೆ ಮಹಾದೇವಿಯವರ ವಚನಗಳ ವಿಶೇಷವೆಂದರೆ, ಇವರು ಹಲವು ಛಿದ್ರ ಚಿತ್ರಗಳನ್ನು ಕೊಡುತ್ತಾರೆ, ಅದರ ಒಟ್ಟಾರೆ ಅರ್ಥಗಳು ಒಂದು ಇಡಿಯಾದ ತತ್ವಜ್ಞಾನ ಮತ್ತು ಆಧ್ಯಾತ್ಮಿಕ ನಿಲುವನ್ನು ಸ್ಪಷ್ಟಪಡಿಸುತ್ತವೆ.

ಅಂತರಂಗ ಬಹಿರಂಗದ ವಿಚಾರವುಳ್ಳ ಇನ್ನೊಂದು ವಚನವನ್ನು ಉಲ್ಲೇಖಿಸಬೇಕೆಂದರೆ,

/ ಕಪಟಕ್ಕೆ ಒಳಗು ಹೊರಗಲ್ಲದೆ ಸ್ವಯಂಭು / ಹೇಮಕ್ಕುಂಟೇ ಒಳಗು ಹೊರಗು? /

ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ಇಲ್ಲಿ ಪ್ರತಿಯೊಂದು ವಸ್ತುವಿನ ಅಸ್ತಿತ್ವಕ್ಕೂ ಪರಶಿವನೇ ಕಾರಣ, ಆದರೆ ಪರಶಿವನ ಅಸ್ತಿತ್ವಕ್ಕೆ ಅವನೇ. ಹಾಗಾಗಿ ಅವನಿಗೆ ಹೊರಗೊಂದು ಒಳಗೊಂದು ಇಲ್ಲ, ಆತ ಹೇಮದಂತೆ, ಒಳಹೊರಗೆಲ್ಲವೂ ಇರುವುದು ಒಂದೇ ಹೊಳಪು.

ಆದರೆ ಕಪಟ ಮನುಷ್ಯನೊಳಗೆ ಒಳಗು ಹೊರಗು ಬೇರೆಯಾಗಿರುವಂಥದ್ದು. ಕುಟಿಲ ಬುದ್ದಿಯಿಟ್ಟುಕೊಂಡು ನೀವು ತೋರಿಕೆಗಾಗಿ ಪೂಜೆ ಪುನಸ್ಕಾರವ ಮಾಡಿದರೆ, ಪರಶಿವಂಗೆ ಅದು ಮೆಚ್ಚಿನ ಪೂಜೆಯಾಗದು. ನನ್ನ ನಿಃಕಳಂಕ ಮಲ್ಲಿಕಾರ್ಜುನನೂ ಅದನ್ನು ತೃಣವಾಗಿ ಕಾಣುತ್ತಾನೆ ಅನ್ನುತ್ತಾಳೆ ಮಹಾದೇವಿ. ಇಲ್ಲಿ ಇಹದ ಬದುಕಿಗೆ ಆದ್ಯತೆ ನೀಡುವ ಅನುಭಾವದ ದೃಷ್ಟಿಕೋನವಿದೆ.

ಅದೇ ಅನುಭಾವ ಮುಂದುವರೆದು ಇನ್ನೊಂದು ವಚನದಲ್ಲಿ

/ನೀರು ನೆಲ ನಿಲ್ಲದೇ ಇರಬಹುದೇ? / ಬೀಜ ನೆಲೆಯಿಲ್ಲದೇ ಹುಟ್ಟಬಹುದೇ? / ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೇ ? /

ನೀರು ನಿಲ್ಲಲು ನೆಲ ಬೇಕು, ಹಾಗೆಯೇ ಬೀಜ ಹುಟ್ಟಲೂ ನೆಲ ಬೇಕು, ಜ್ಞಾನ ಅರಿಯಲು ಕ್ರಿಯೆಯೇ ಮುಖ್ಯ. ಹಾಗೆಯೇ ನಮ್ಮ ಬುದ್ದಿಯಲ್ಲಿ ತನ್ಮಯತೆಯಿಲ್ಲದೇ ಪರಶಿವನನ್ನು ಗ್ರಹಿಸಲು ಅಸಾದ್ಯ ಎಂಬ ಮಾತನ್ನು ಮಹಾದೇವಿ ಮತ್ತೆ ಮತ್ತೆ ಹೇಳುತ್ತಾಳೆ.

ಮಹಾದೇವಿಯವರು ತಮ್ಮ ಬಹುತೇಕ ರಚನೆಗಳಲ್ಲಿ ಹೆಣೆಯುವ ಪ್ರತಿಮಾ ರೂಪಕಗಳು ಅವರ ವಚನಗಳನ್ನು ಹೆಚ್ಚು ಧ್ವನಿಪೂರ್ಣವನ್ನಾಗಿಸಿವೆ. ಅವುಗಳಿಗೆ ಬಹಳಷ್ಟು ಉದಾಹರಣೆಗಳನ್ನು ನಾವು ಕೊಡುತ್ತಾ ಹೋಗಬಹುದು.

/ಸುಗಂಧದ ಮೂಲದ ಬೇರಿನ / ಗಂಧ ಎಲೆ ಬಳ್ಳಿಯನೇತಕ್ಕೆ / ವೇಧಿಸದು ? /

ಎಂಬಂತಹ ಒಂದು ವಚನದಲ್ಲಿ ಮರದ ಮೂಲ ಬೇರಿನಲ್ಲಿರುವ ಗಂಧ, ಪರಿಮಳವು ಮೇಲೆ ಎಲೆ ಬಳ್ಳಿಗೆ ಅಂಟಿರುವುದಿಲ್ಲ, ಹೂವಿನ ಸುವಾಸನೆ ತನ್ನ ತೊಟ್ಟು ಎಲೆ ಚಿಗುರು ಬೇರಿಗೆ ಅಂಟಿರುವುದಿಲ್ಲ. ಇದು ಆತನೇ ಅಂದರೆ ಇಷ್ಟಲಿಂಗನೇ ಮಾಡಿದ್ದು, ಇವೆಲ್ಲವೂ ಸದ್ವಿವೇಕದ ಕುರುಹು ಅನ್ನುತ್ತಾಳೆ ಮಹಾದೇವಿ. ಸಮಾನತೆ ಮತ್ತು ಸಮಷ್ಟಿ ಪ್ರಜ್ಞೆಗೆ ಅವಳು ಇಲ್ಲಿ ಆದ್ಯತೆ ನೀಡುತ್ತಾಳೆ.

ಇನ್ನೂ ಮುಂದುವರೆಯುವ ಅರ್ಥವನ್ನು ನಾವು ಶೋಧಿಸುವುದಾದರೆ, ಇಲ್ಲಿ ಒಂದು ಪ್ರಗತಿಪರವಾದ ಸಮಾಜ ರಚನೆಯ ಹಂಬಲವಿದ್ದದ್ದನ್ನು ನಾವು ಗ್ರಹಿಸಬಹುದು, ಹೀಗೆ ಸಮಾಜದಿಂದ ಪಡೆದುದನ್ನು ಸಮಾಜಕ್ಕೇ ಕೊಡುವ ದಾಸೋಹ ತತ್ವವನ್ನು ಉಳಿದೆಲ್ಲ ಶರಣರಂತೆ ಮಹಾದೇವಿಯೂ ಎತ್ತಿ ಹಿಡಿದಳು.

ಇದೇ ತರಹದ ಇನ್ನೊಂದು ವಚನದಲ್ಲಿ-

/ಸ್ಥಾಣು ನರನೆಂದು, ರಜ್ಜು / ಸರ್ಪನೆಂದು, ಸ್ಪಟಿಕದ / ಘಟದಲ್ಲಿ ನಿಂದ ಗಜ/ ದಿಟವೆಂದು ನಿಬದ್ಧಿಸಿ / ನೋಡಲಿಕ್ಕಾಗಿ /

ಮರದ ಕೊರಡು ಮನುಷ್ಯನೆಂದು, ಹಗ್ಗವನ್ನು ಸರ್ಪವೆಂದು, ಕೊಡದ ಪ್ರತಿಬಿಂಬದಲ್ಲಿ ಕಂಡಂತಹ ಆನೆಯನ್ನು ಸತ್ಯವೆಂದು ಒಂದಾಗಿಸಿ ನೋಡಲಿಕ್ಕೆ, ಇಂಥ ಸಂದೇಹಗಳು ಇದ್ದಲ್ಲಿ ನಿಜಗುಣ ಹೇಗೆ ನಿಂತಾನು? ಇಂಥ ಸಂದೇಹಗಳನ್ನು ತೆಗೆದು ಹಾಕಿದರೆ ನೀವು ಪರಶಿವನಿಗೆ ಇಷ್ಟವಾಗುತ್ತೀರಿ ಎಂಬುದು ಇಲ್ಲಿಯ ತಾತ್ಪರ್ಯ.

ಇಲ್ಲಿ ಏಕಭಾವದ ಭಕ್ತಿ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತಾದ ಚಿಂತನೆಯುಳ್ಳ ಮಾನವ್ಯ ಧೋರಣೆಯನ್ನು ನಾವು ಗಮನಿಸಬಹುದು.

ಉಳಿಸಿ ಕೂಡಿಟ್ಟು ಆಸ್ತಿ ಮಾಡುವುದು ನಿಸ್ಪçಯೋಜಕವಾದುದು ಎಂಬ ಆಶಯದಿಂದಲೇ ಹಿಂದಿನ ರಾಜ ವೈಭೋಗವನ್ನು ಮರೆತು ಶರಣರ ತತ್ವಕ್ಕೆ ಅನುಸಾರವಾಗಿ ಬಾಳುತ್ತಿದ್ದರು ಈ ಮಹಾದೇವಿ ದಂಪತಿಗಳು ಎಂಬುದು ಅವರ ಹಲವು ವಚನಗಳಲ್ಲಿ ಒಡಮೂಡಿದೆ.

ಸ್ತ್ರೀ ಸಮಾನತೆಯ ಕುರಿತಾದ ಅರಿವಿಗೂ ದನಿಯೆತ್ತಿದ ಅನೇಕ ವಚನಗಳನ್ನೂ ನಾವಿಲ್ಲಿ ಕಾಣಬಹುದು. / ಚಿತ್ರದ ಬೊಂಬೆಯ ಹಾಹೆ / ಎಲ್ಲಕ್ಕೂ ಆತ್ಮನಿಂದ ಚೇತರಿಸಿ / ನಡೆಯುತ್ತಿಹವೆ ? / ಅವು ಸೂತ್ರಾದಿಕನ ಭೇದ, ಎನ್ನ / ಶಕ್ತಿ ಜಾತಿಯ ಲಕ್ಷಣ, ನಿಮ್ಮ / ಭಕ್ತಿಸೂತ್ರದಿಂದ ಎನ್ನ/ ಸ್ತಿçÃಜಾತಿ ನಿಮ್ಮ ಶ್ರೀಪಾದದಲ್ಲಿ / ಅಡಗಿತ್ತು / ಎಂಬಲ್ಲಿ ಸ್ತಿçà ಸಂವೇದನೆಯ ಹಲವು ಮಗ್ಗುಲುಗಳು ಕಾಣುತ್ತವೆ. ಇಂಥ ವಚನವು ತತ್ವಜ್ಞಾನವನ್ನು ಬೋಧಿಸುತ್ತಲೇ ಆಂತರ್ಯದಲ್ಲಿ ಸಾಮಾಜಿಕ ತರತಮ ಧೋರಣೆಗಳನ್ನೂ ತಿದ್ದುತ್ತಿರುತ್ತವೆ.

ಹೀಗೆ ಇವರ ವಚನಗಳು ಸಾಕಷ್ಟು ವೈವಿಧ್ಯಮಯವಾಗಿದ್ದು ನಮ್ಮ ದೈನಂದಿನ ಬದುಕಿಗೆ ಬೇಕಾದ ಸಮಗ್ರ ವಿಚಾರಧಾರೆಗಳು ಇಲ್ಲಿವೆ. ದುಡಿಮೆಯ ಮಹತ್ವವನ್ನು ಹಾಗೂ ಶ್ರಮ ಸಂಸ್ಕೃತಿಯ ಪ್ರತಿಪಾದನೆಯನ್ನು ದಾಖಲು ಮಾಡುತ್ತಲೇ ಮೋಳಿಗೆ ಮಹಾದೇವಿಯವರ ವಚನಗಳು ಸಾರ್ವಕಾಲಿಕ ಮಾನವ ಧರ್ಮದ ಚಿಂತನೆ ಮತ್ತು ಜೀವಪರ ನಿಲುವುಗಳನ್ನು ತನ್ನೊಡಲಲ್ಲಿರಿಸಿಕೊಂಡು ಹುಟ್ಟಿದ್ದು ಎದ್ದು ಕಾಣುತ್ತದೆ.

ಇನ್ನೂ ಹಲವಾರು ವಚನಗಳಲ್ಲಿ ಆತ್ಮ ವಿಮರ್ಶೆಯಷ್ಟೇ ವಿಫುಲವಾಗಿ ಸಮಾಜ ವಿಮರ್ಶೆಯನ್ನೂ ನಾವು ಕಾಣಬಹುದು. ಮೋಳಿಗೆ ಮಹಾದೇವಿಯರಂಥ ಅನುಭಾವಿಗಳು ಮಾತ್ರ ತಮ್ಮ ಚಿಂತನೆಯನ್ನು ಹೃದಯದಿಂದ ಸಹೃದಯಕ್ಕೆ ಮುಟ್ಟುವಂತೆ ಹೀಗೆ ಬಿಡಿ ಮಾತುಗಳ ಮೂಲಕ ಹೇಳಬಲ್ಲರು, ಇವರ ವಚನಗಳು ಅಕ್ಕನ ವಚನಗಳಿಗೆ ತೀರ ಹತ್ತಿರದ ತತ್ವಜ್ಞಾನವನ್ನು ಒಡಮೂಡಿಸಿಕೊಂಡು ಬೆಳೆಯುತ್ತಲೇ ತನ್ನದೇ ಆದ ಛಾಪನ್ನು ಕೂಡ ಉಳಿಸಿಕೊಂಡಿವೆ ಎಂಬುದು ಗಮನಾರ್ಹವಾಗಿದೆ.

ಇಂದಿನವರೆಗೆ ಇವರ ಕೇವಲ ಎಪ್ಪತ್ತು ವಚನಗಳು ಮಾತ್ರ ನಮ್ಮ ಸಂಶೋಧಕರಿಗೆ ಸಿಕ್ಕಿವೆ, ಅವು 'ವಚನ ಸಂಚಯ' ಸಂಪುಟಗಳಲ್ಲಿ ನಮ್ಮ ಓದಿಗೆ ದಕ್ಕುತ್ತವೆ. ಇನ್ನೂ ಹಲವಾರು ವಚನಗಳನ್ನೂ ಸಹ ಇವರು ರಚಿಸಿರಬಹುದು ಎಂಬ ಮಾತೂ ಕೂಡ ಇತಿಹಾಸಕಾರರು ಹೇಳಿದ್ದಾರೆ. 'ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು' ಎಂಬ ಮಾತನ್ನು ಸಾಕ್ಷಾತ್ಕರಿಸುವಂತಿದೆ ಮಹಾದೇವಿಯವರ ವಚನಗಳ ಜಗತ್ತು.

ಮೋಳಿಗೆ ಮಹಾದೇವಿಯವರು ಒಂದೆಡೆ ಅಕ್ಕಮಹಾದೇವಿಯವರ ವಚನಗಳಿಂದ ಪ್ರಭಾವಿತರಾದದ್ದನ್ನೂ ನಾವಿಲ್ಲಿ ಗಮನಿಸಬೇಕು ಮತ್ತು ಅವರು ತಮ್ಮ ಅಂಕಿತನಾಮವನ್ನು ಕೂಡ 'ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ' ಎಂದು ಬಳಸುತ್ತಿದ್ದುದು ಕೂಡ ಇದಕ್ಕೆ ಪುಷ್ಟಿಯನ್ನು ಒದಗಿಸುತ್ತದೆ.

--------------------

Address

Nagasudhe Jagali
Hubli
580031

Telephone

+19845779387

Website

Alerts

Be the first to know and let us send you an email when Nagasudhe Jagali ನಾಗಸುಧೆ ಜಗಲಿ posts news and promotions. Your email address will not be used for any other purpose, and you can unsubscribe at any time.

Contact The School

Send a message to Nagasudhe Jagali ನಾಗಸುಧೆ ಜಗಲಿ:

Shortcuts

Share

Category