Maths Techy

Maths Techy

Share

Maths Techy,
youtube channel and facebook is created to publish videos related to educational, infor

26/03/2022

ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಬಿಗ್ ಶಾಕ್ ನೀಡಿದ್ದು, ಮುಂದಿನ ವರ್ಷವೂ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

17/03/2021

Karnataka Education latest news

14/03/2021

Fake circular : 15 days holidays due to covid 19

ಪತ್ನಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ನವರಸ ನಾಯಕ ಜಗ್ಗೇಶ್ - ಕರ್ನಾಟಕ ನ್ಯೂಸ್ ಹಂಟ್ 27/10/2020

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನ ಹಿರಿಯ ನಟ ನವರಸ ನಾಯಕ ಜಗ್ಗೇಶ್ ತಮ್ಮ ಪತ್ನಿ ಪರಿಮಳ ಅವರ ಜನ್ಮದಿನಕ್ಕೆ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ. ಪರಿಮಳ ಆಗ ಸಿಕ್ಕಾಗ 15 ನೇ ವರ್ಷದ ಹುಟ್ಟುಹಬ್ಬ ಇಂದು ಆಕೆಗೆ 52ನೇ ವರ್ಷದ ಹುಟ್ಟುಹಬ್ಬ ಹುಟ್ಟುಹಬ್ಬ ಶುಭಾಶಯ ಆತ್ಮೀಯಳಿಗೆ ಶುಭದಿನ ಶುಭೋದಯ ಎಂದು ಬರೆದುಕೊಂಡಿದ್ದಾರೆ.

ಪತ್ನಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ನವರಸ ನಾಯಕ ಜಗ್ಗೇಶ್ - ಕರ್ನಾಟಕ ನ್ಯೂಸ್ ಹಂಟ್ Karnataka news educational political movies sandalwood sports healthtips jobs

ಕೃಷಿಕನ ಮಗ IITಗೆ ಆಯ್ಕೆ - ಕರ್ನಾಟಕ ನ್ಯೂಸ್ ಹಂಟ್ 27/10/2020

ಕೂಡ್ಲಿಗಿಸರ್ಕಾರಿ ವಸತಿ ಶಾಲೆಗಳಲ್ಲೇ ಸತತ ಪರಿಶ್ರಮ ಪಟ್ಟು ಅಭ್ಯಾಸ ನಡೆಸಿದ ಇಲ್ಲಿನ ಕೃಷಿ ಕುಟುಂಬದ ಗೋಂವಿದ್ ಕಾಲ್ಚೆಟ್ಟಿ, ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ವಾರಾಣಸಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ ಆಯ್ಕೆಯಾಗಿದ್ದಾರೆ. JEE ಅಡ್ವಾನ್ಸ್ ಪರೀಕ್ಷೆಯ ಪರಿಶಿಷ್ಟ ಪಂಗಡ ಕೋಟಾದಡಿ ರಾಷ್ಟ್ರ ಮಟ್ಟದಲ್ಲಿ 611ನೇ ರ್ಯಾಂಕ್ ಪಡೆದ ಅವರು ಸಿರಮಿಕ್ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪರೀಕ್ಷೆಗಾಗಿ ಅವರು ಯಾವುದೇ ಕೋಚಿಂಗ್‌ ತರಗತಿಗಳಿಗೆ ಹೋಗಿಲ್ಲ ಎಂಬುದು ವಿಶೇಷ. ರಮೇಶ್ ಮತ್ತು ನಾಗರತ್ನ ದಂಪತಿಯ ಮೂವರು ಮಕ್ಕಳ ಪೈಕಿ ಎರಡನೆಯವರಾದ ಗೋವಿಂದ್ ಪಟ್ಟಣದ ಸ್ಪಂದನ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಓದಿದ್ದರು. [ 74 more words ]

ಕೃಷಿಕನ ಮಗ IITಗೆ ಆಯ್ಕೆ - ಕರ್ನಾಟಕ ನ್ಯೂಸ್ ಹಂಟ್ Karnataka news educational political movies sandalwood sports healthtips jobs

2 ವಾರಗಳಲ್ಲಿ ದೇಶದಲಿ 10 ಲಕ್ಷ ಕೊರೋನಾ ಸೋಂಕಿತರು ಗುಣಮುಖ - ಕರ್ನಾಟಕ ನ್ಯೂಸ್ ಹಂಟ್ 27/10/2020

PIC BY GOOGLE ನವದೆಹಲಿದೇಶದಲ್ಲಿ ಕೊರೋನಾ ಸೋಂಕು ಇಳಿಮುಖವಾಗಿದೆ. ಜೊತೆಗೆ ಕಳೆದ 13 ದಿನಗಳಲ್ಲಿ 10 ಲಕ್ಷ ಕೊರೋನಾ ಸೋಂಕಿತರು ಚೇತರಿಕೆಯಾಗಿರುವುದು ತೃಪ್ತಿದಾಯಕ ಸಂಕೇತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ದೇಶದಲ್ಲಿನ ಕೋವಿಡ್-19 ಪರಿಸ್ಥಿತಿ ಕುರಿತು ಮಾತನಾಡಿದ ಅವರು, ಹಬ್ಬದ ಸಂದರ್ಭದಲ್ಲಿ ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದಾಗಿ ಹೇಳಿದರು. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಛತ್ತೀಸ್ ಗಢ ಮತ್ತು ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಶೇ. 58 ರಷ್ಟು ಹೊಸ ಸಾವಿನ ಪ್ರಕರಣ ವರದಿಯಾಗಿರುವುದಾಗಿ ಹೇಳಿದರು. ಸದ್ಯ ದೇಶದಲ್ಲಿನ ಚೇತರಿಕೆ ಪ್ರಮಾಣ ಶೇ. 90. 62 ರಷ್ಟಾಗಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಉತ್ತಮ ಸಂಕೇತವಾಗಿದೆ ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.

2 ವಾರಗಳಲ್ಲಿ ದೇಶದಲಿ 10 ಲಕ್ಷ ಕೊರೋನಾ ಸೋಂಕಿತರು ಗುಣಮುಖ - ಕರ್ನಾಟಕ ನ್ಯೂಸ್ ಹಂಟ್ Karnataka news educational political movies sandalwood sports healthtips jobs

ಪಾಕಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಪೋಟ - ಕರ್ನಾಟಕ ನ್ಯೂಸ್ ಹಂಟ್ 27/10/2020

PIC BY GOOGLE ಇಸ್ಲಮಾಬಾದ್​ಮಂಗಳವಾರ ಬೆಳಿಗ್ಗೆ ವಾಯುವ್ಯ ಪಾಕಿಸ್ತಾನದ ಪೇಶಾವರ ಹೊರವಲಯದಲ್ಲಿರುವ ಇಸ್ಲಾಮಿಕ್ ಸೆಮಿನರಿಯ ಧಾರ್ಮಿಕ ಶಾಲೆಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು, ಕನಿಷ್ಠ 7 ಮಕ್ಕಳು ಮರಣ ಹೊಂದಿದ್ದಾರೆ, ಮತ್ತು 70 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಆಸ್ಪತ್ರೆಯ ವಕ್ತಾರರು ಹೇಳಿದ್ದಾರೆ. ಜಾಮಿಯಾ ಜುಬೈರಿಯಾ ಮದರಸಾದ ಮುಖ್ಯ ಸಭಾಂಗಣದಲ್ಲಿ ಧರ್ಮಗುರು ಉಪನ್ಯಾಸ ನೀಡುತ್ತಿರುವಾಗ ಬಾಂಬ್ ಸ್ಫೋಟ ಘಟನೆ ಉಂಟಾಗಿದೆ ಎಂದು ಪೊಲೀಸ್ ಅಧಿಕಾರಿ ವಾಕರ್ ಅಜೀಮ್ ಹೇಳಿದ್ದಾರೆ. ಮದರಸಾದಲ್ಲಿ ಯಾರೋ ಓರ್ವ ವ್ಯಕ್ತಿ ಒಂದು ಚೀಲವನ್ನು ಬಿಟ್ಟು ಹೊರಟ ಕೆಲವೇ ನಿಮಿಷಗಳಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಆರಂಭಿಕ ತನಿಖೆಗಳಿಂದ ತಿಳಿದುಬಂದಿದೆ. ಬಾಂಬ್​ ಸ್ಫೋಟದಲ್ಲಿ ಗಾಯಗೊಂಡ ಅನೇಕರ ಸ್ಥಿತಿ ಗಂಭೀರವಾಗಿದೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಪೋಟ - ಕರ್ನಾಟಕ ನ್ಯೂಸ್ ಹಂಟ್ Karnataka news educational political movies sandalwood sports healthtips jobs

ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಪತ್ನಿ ಆತ್ಮಹತ್ಯೆ - ಕರ್ನಾಟಕ ನ್ಯೂಸ್ ಹಂಟ್ 27/10/2020

PIC BY GOOGLE ಬೆಂಗಳೂರುನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರಿಗೆ ಜಯಪ್ರಕಾಶ್ ಆಪ್ತ ಕೆ.ಆರ್ ಪುರಂ ಕ್ಷೇತ್ರದ ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಅವರ ಪತ್ನಿ ವಿನೋದಾ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಯ ಕೋಣೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿನೋದಾ ಅವರು ಇತ್ತೀಚೆಗಷ್ಟೇ ಅಪೆಂಡಿಕ್ಸ್ ಆಪರೇಷನ್ ಮಾಡಿಸಿಕೊಂಡಿದ್ದರು. ಇನ್ನು ಪತ್ನಿಯ ಸಾವಿನ ಸುದ್ಧಿ ಕೇಳಿ ಜಯಪ್ರಕಾಶ್ ಸಹ ಅಸ್ವಸ್ಥಗೊಂಡಿದ್ದಾರೆ ಎಂದು ಸುದ್ದಿ ತಿಳಿದುಬಂದಿದೆ. ಜಯಪ್ರಕಾಶ್ ಮತ್ತು ವಿನೋದಾ ದಂಪತಿಗೆ 3 ವರ್ಷದ ಮಗುವಿದೆ. ಸದ್ಯ ಕೆಆರ್ ಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಪತ್ನಿ ಆತ್ಮಹತ್ಯೆ - ಕರ್ನಾಟಕ ನ್ಯೂಸ್ ಹಂಟ್ Karnataka news educational political movies sandalwood sports healthtips jobs

ಉಪ ಚುನಾವಣೆ ಆದಮೇಲೆ ನಾನು ಮಂತ್ರಿಯಾಗ್ತಿನಿ ಎಂದು ಹೇಳಿದ - ಕರ್ನಾಟಕ ನ್ಯೂಸ್ ಹಂಟ್ 27/10/2020

ತುಮಕೂರುಉಪಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು. ಶಿರಾ ಕ್ಷೇತ್ರದಲ್ಲಿ BJP ಅಭ್ಯರ್ಥಿ ರಾಜೇಶ್‍ಗೌಡ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಚುನಾವಣೆಯಾದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನನಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ. ಅವರು ಕೊಟ್ಟ ಭರವಸೆಯನ್ನು ಈಡೇರಿಸುವ ನಾಯಕರು. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಂದವರು ಮಂತ್ರಿಯಾಗೇ ಆಗುತ್ತೇವೆ ಎಂದು ಹೇಳಿದರು. CM ಬದಲಾವಣೆ ಮಾಡಲು ಮುಖ್ಯಮಂತ್ರಿಗಳ ಕುರ್ಚಿ ಖಾಲಿಯಿಲ್ಲ. [ 64 more words ]

ಉಪ ಚುನಾವಣೆ ಆದಮೇಲೆ ನಾನು ಮಂತ್ರಿಯಾಗ್ತಿನಿ ಎಂದು ಹೇಳಿದ - ಕರ್ನಾಟಕ ನ್ಯೂಸ್ ಹಂಟ್ Karnataka news educational political movies sandalwood sports healthtips jobs

ಮತ್ತೊಮ್ಮೆ ಬಿಡುಗಡೆಯಾಗಲಿದೆ *ರಂಗನಾಯಕಿ* ಸಿನಿಮಾ - ಕರ್ನಾಟಕ ನ್ಯೂಸ್ ಹಂಟ್ 27/10/2020

ದಯಾಳ್ ಪದ್ಮನಾಭನ್ ನಿರ್ದೇಶನದ ಅದಿತಿ ಪ್ರಭುದೇವ ಅಭಿನಯದ ರಂಗನಾಯಕಿ ಚಿತ್ರವನ್ನು OCTOBER‌ 30ರಂದು ಮರುಬಿಡುಗಡೆ ಆಗಲಿದೆ. ಈ ಚಿತ್ರ 2019 NOVEMBER 1 ರಂದು ಬಿಡುಗಡೆ ಮಾಡಲಾಗಿತ್ತು. ರಂಗನಾಯಕಿ ಸಿನಿಮಾದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದರು. ಇವರ ಜೊತೆ ಶ್ರೀನಿ ತ್ರಿವಿಕ್ರಂ ಅಭಿನಯಿಸಿದ್ದರು. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿತ್ತು. ಈಗ ಮತ್ತೊಮ್ಮೆ ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದು ಪ್ರೇಕ್ಷಕರಿಗೆ 2ನೇ ಬಾರಿ ಸಿನಿಮಾವನ್ನು ನೋಡುವ ಅವಕಾಶ ಸಿಗಲಿದೆ.

ಮತ್ತೊಮ್ಮೆ ಬಿಡುಗಡೆಯಾಗಲಿದೆ *ರಂಗನಾಯಕಿ* ಸಿನಿಮಾ - ಕರ್ನಾಟಕ ನ್ಯೂಸ್ ಹಂಟ್ Karnataka news educational political movies sandalwood sports healthtips jobs

Want your school to be the top-listed School/college in Gulbarga?

Click here to claim your Sponsored Listing.

Location

Category

Telephone

Address


Kalaburagi
Gulbarga