14/06/2022
ಇಂದು ಕರ್ನಾಟಕದ ಸಿಡಿಲ ಸಂನ್ಯಾಸಿ ಪರಮಪೂಜ್ಯ #ಸ್ವಾಮಿ_ಪುರುಷೋತ್ತಮಾನಂದಜಿ_ಮಹಾರಾಜರವರ ಜನ್ಮದಿನದ ಶುಭಾಶಯಗಳು.
#ಜೈ_ರಾಮಕೃಷ್ಣ
https://en.m.wikipedia.org/wiki/Swami_Purushottamananda
ಪುರುಷೋತ್ತಮಾನಂದ ಮಹಾರಾಜರ ಜಯಂತಿ , ಇಂದು ಕರ್ನಾಟಕದಲ್ಲಿ ದಿವ್ಯತ್ರಯರ ಸಾಹಿತ್ಯ ಹಾಗೂ ಶ್ರೀ ರಾಮಕೃಷ್ಣ ಮಠ ಮತ್ತು ಮಿಷನ್ ಗಳು ಸ್ಥಾಪನೆಯಾಗಿ ನಾಡಿನಾದ್ಯಂತ ಅದರ ಪರಿಮಳ
ಹರಡಲು ಅದಕ್ಕೆ ಮೂಲ ಕಾರಣ ಪೂಜ್ಯ ಶ್ರೀಗಳು ,ಅಪಾರವಾದ ಯುವ ಸನ್ಯಾಸಿಗಳನ್ನು ತಮ್ಮ ಗರಡಿಯಲ್ಲಿ ತರಬೇತಿ ನೀಡಿ ದಿವ್ಯತ್ರಯರ ಸೇವೆಗೆ ವಿಶ್ವಕ್ಕೆ ಶಿಷ್ಯವೃಂದವನ್ನು ನೀಡಿದ ಮಹಾನ್ ಚೇತನ ಪೂಜ್ಯ ಸ್ವಾಮೀಜಿ , ವಿಶ್ವದಾದ್ಯಂತ ಅನೇಕ ರಾಮಕೃಷ್ಣ ಮಠ ಮಿಷನ್ ನಲ್ಲಿ ಶಿಷ್ಯ ವೃಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ , ಪೂಜ್ಯರ ದಿವ್ಯತ್ರಯರ ಕುರಿತಾದ ಸಾಹಿತ್ಯ ಅಪಾರವಾಗಿದೆ, ಅದರಂತೆ ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ ಸ್ವಾಮೀಜಿಯವರ ಪುಸ್ತಕಗಳಾದ ವಿದ್ಯಾರ್ಥಿಗಾಗಿ, ಯುವಶಕ್ತಿಯ ರಹಸ್ಯ ಮುಂತಾದ ಕೃತಿಗಳು ಯುವ ಸಮುದಾಯದವನ್ನು ಸರಿ ದಾರಿಯಲ್ಲಿ ಕೈ ಹಿಡಿದು ನಡೆಸುತ್ತಿವೆ , ಸಂಸಾರಿಗಳಿಗೂ ದಿವ್ಯತ್ರಯರ ಮಾರ್ಗದರ್ಶನ ನೀಡಿ ಸದೃಡ ಸಮಾಜ ಕಟ್ಟಲು ಪೂಜ್ಯರ ನೀಡಿದ ಆಶೀರ್ವಾದವಾಗಿದೆ.
ದಿವ್ಯತ್ರಯರ ಜೀವನ ಚರಿತ್ರೆಗಳು ಸ್ವಾಮೀಜಿಯವರಿಂದ ಮೂಡಿಬಂದ ಅದ್ಭುತ ಪುಸ್ತಕಗಳು , ಕನ್ನಡ ಸಾಹಿತ್ಯ ಲೋಕದಲ್ಲಿ ಪೂಜ್ಯ ಸ್ವಾಮೀಜಿಯವರ ಲೇಖನಗಳು ಎಲೆಯ ಮರಿಯ ಕಾಯಿಯಂತೆ ದಿವ್ಯತ್ರಯರ ಸಾಹಿತ್ಯವನ್ನು ಕರ್ನಾಟಕದ ಜನರಿಗೆ ಉಣಬಡಿಸಿದ್ದಾರೆ , ದುಂಬಿಗೆ ಮಕರಂದವನ್ನು ಸವಿಯುವುದು ಹೇಗೆ ಆಸೆಯೋ ಹಾಗೆ ಪೂಜ್ಯ ಶ್ರೀಗಳ ಸಾಹಿತ್ಯ ಕೂಡಾ ಅಷ್ಟೇ ಇಷ್ಟದ ಸಾಹಿತ್ಯವಾಗಿದೆ,
ಕರ್ನಾಟಕದಲ್ಲಿ ಇಂದು ಶ್ರೀ ರಾಮಕೃಷ್ಣರು, ಶ್ರೀ ಶಾರಾದಾಮಾತೆ, ಶ್ರೀ ವಿವೇಕಾನಂದರ ಸಾಹಿತ್ಯ, ಶ್ರೀ ರಾಮಕೃಷ್ಣ ಮಠ,ಮಿಷನ್ ಗಳ ಸೇವಾ ಕಾರ್ಯಗಳನ್ನು ಇಂದು ಪ್ರಸ್ತುತ ನೆನಪಿಸುವ ಕಾರ್ಯದ ಹಿಂದಿನ ಶಕ್ತಿ ದಿವ್ಯತ್ರಯರ ಆದರೂ ಕೂಡ ಒಬ್ಬರು ಸಮರ್ಥ ಗುರುಗಳು ಅಪಾರವಾದ ಶಿಷ್ಯವೃಂದ ತರಬೇತಿ ನೀಡಿ ಮಹಾಸಂಘದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರಸ್ತುತ ಸ್ವಾಮೀಜಿಗಳು ಅವರುಗಳ ಸೇವಾ ಕಾರ್ಯಗಳನ್ನು ನೋಡಿದರೆ ಶಿಷ್ಯರುಗಳೆ ಹೀಗೆ ಇರುವಾಗ ಆ ಮಹಾನ್ ಗುರುಗಳಾದ ಪೂಜ್ಯ ಶ್ರೀ ಸ್ವಾಮಿಯವರು ಅದ್ಭುತ, ಮಹಾನ್ ಪ್ರೀತಿಯ ಸಾಗರ ಇದ್ದಂತೆ, ಪೂಜ್ಯರ ಆಶೀರ್ವಾದ ಸದಾಕಾಲವೂ ನಮ್ಮ ಮೇಲೆ ಇರಲಿ .
*ಜೈ ರಾಮಕೃಷ್ಣ* *ಜೈ ಮಾ* 🙏🙏🙏🙏🙏