Shri Sai PU Science and Commerce College Court Circle Dharwad

  • Home
  • India
  • Dharwad
  • Shri Sai PU Science and Commerce College Court Circle Dharwad

Shri Sai PU Science and Commerce College  Court Circle Dharwad An established Pre-University institution with 11 years of experience 📚, offering Science 🔬 & Commerce 📊 courses.

Committed to academic excellence 🌟 and holistic student development.
📞 7411300560,
82968 71062 | 🌐 shrisaicollegedharwad.com

*ಪಾಲಕರ ಸಭೆ* ನಮ್ಮ ಶ್ರೀ ಸಾಯಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ *ಪಾಲಕರ ಸಭೆ* ಯನ್ನು 19-08-2026 ರಂದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪಾಲಕರಿ...
24/08/2026

*ಪಾಲಕರ ಸಭೆ*

ನಮ್ಮ ಶ್ರೀ ಸಾಯಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ *ಪಾಲಕರ ಸಭೆ* ಯನ್ನು
19-08-2026 ರಂದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪಾಲಕರಿಗೆ
ಹಾಗೂ
20-08-2026 ರಂದು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪಾಲಕರಿಗೆ
ಏರ್ಪಡಿಸಲಾಯಿತು.

ವಿದ್ಯಾರ್ಥಿಗಳ ಅಭ್ಯಾಸ, ಕಿರು ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಕುರಿತು, ಮುಂದಿನ ಪರೀಕ್ಷೆಗೆ ಪಾಲಕರು ಮಕ್ಕಳನ್ನು ಮನೆಯಲ್ಲಿ ತಯಾರಿ ಮಾಡುವ , SATS, KSEAB, ಆಂತರಿಕ ಅಂಕಗಳ ಕುರಿತು, ಹಾಜರಾತಿ, ಪರೀಕ್ಷಾ ಮಾರ್ಗಸೂಚಿಗಳ ಕುರಿತು ಎಲ್ಲರಿಗೂ ವೈಯಕ್ತಿಕವಾಗಿ ತಿಳಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ
ಡಾ. ವೀಣಾ ಬಿರಾದಾರ ಮೇಡಂ ಇವರು ಮಕ್ಕಳನ್ನು ಬೆಳೆಸುವ ಬಗೆ, ವಿದ್ಯಾರ್ಥಿಗಳ ನಿರಂತರ ಅಧ್ಯಯನ, ಅವರ ಕ್ರಿಯಾಶೀಲತೆ, ಸೃಜನಾತ್ಮಕತೆ ಬೆಳೆಸುವ ರೀತಿ ,
ಹಾಗೂ ನಮ್ಮ ಕಾಲೇಜಿನಲ್ಲಿ ಮಾಡುತ್ತಿರುವ ವಿನೂತನ ಯೋಜನೆಗಳ ಬಗ್ಗೆ ಪಾಲಕರಿಗೆ ತಿಳಿಸಿದರು.

ವೈಯಕ್ತಿಕ ಕಾಳಜಿಯೊಂದಿಗೆ ವಿದ್ಯಾರ್ಥಿಗಳನ್ನು ಬೆಳೆಸುವ ಪರಿ ಹಾಗೂ ಸಂಸ್ಥೆಯ ಕಾರ್ಯಗಳನ್ನು ಅರಿತ ಪಾಲಕರು ಅನಿಸಿಕೆಗಳನ್ನು ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದರು.

ಪಾಲಕರ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರು, ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.

"ವಚನ ಪ್ರಭೆ" ಗ್ರಂಥ ಲೇಖಕರು : ಡಾ ವೀಣಾ ಬಿರಾದಾರ ಅಧ್ಯಕ್ಷರು, ಹೊಂಬೆಳಕು ಪ್ರತಿಷ್ಠಾನ ಮತ್ತು ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾ...
23/08/2026

"ವಚನ ಪ್ರಭೆ" ಗ್ರಂಥ
ಲೇಖಕರು : ಡಾ ವೀಣಾ ಬಿರಾದಾರ
ಅಧ್ಯಕ್ಷರು, ಹೊಂಬೆಳಕು ಪ್ರತಿಷ್ಠಾನ ಮತ್ತು
ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ

ವರದಿಗಾರರ ಲೇಖನ ಪ್ರಕಟಿಸಿದ ಪತ್ರಿಕೆಯ ಸಂಪಾದಕರಿಗೆ ಹಾಗೂ ಶ್ರೀ ಬಸವರಾಜ ಆನೆಗುಂದಿ ಸರ್ ಅವರಿಗೆ ಧನ್ಯವಾದಗಳು

ನಮ್ಮ ಶ್ರೀ ಸಾಯಿ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ  ಧ್ವಜಾರೋಹನ ಕಾರ್ಯಕ್ರಮದ ವರದಿ ಪ್ರಕಟಿಸಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.
19/08/2026

ನಮ್ಮ ಶ್ರೀ ಸಾಯಿ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹನ ಕಾರ್ಯಕ್ರಮದ ವರದಿ ಪ್ರಕಟಿಸಿದ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.

"ವಚನ ಪ್ರಭೆ" ಗ್ರಂಥ ಲೋಕಾರ್ಪಣೆ ಸಮಾರಂಭದ ವರದಿ ಪ್ರಕಟಿಸಿದ ಆತ್ಮೀಯ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು. "ವಚನ ಪ್ರಭೆ" ಗ್ರಂಥಲೇಖಕರು: ಡಾ. ವೀಣಾ...
19/08/2026

"ವಚನ ಪ್ರಭೆ" ಗ್ರಂಥ ಲೋಕಾರ್ಪಣೆ ಸಮಾರಂಭದ ವರದಿ ಪ್ರಕಟಿಸಿದ ಆತ್ಮೀಯ ಮಾಧ್ಯಮ ಮಿತ್ರರಿಗೆ ಧನ್ಯವಾದಗಳು.

"ವಚನ ಪ್ರಭೆ" ಗ್ರಂಥ
ಲೇಖಕರು: ಡಾ. ವೀಣಾ ಬಿರಾದಾರ
ಅಧ್ಯಕ್ಷರು, ಶ್ರೀ ಸಾಯಿ ಕಾಲೇಜು ಹಾಗೂ ಹೊಂಬೆಳಕು ಪ್ರತಿಷ್ಠಾನ, ಧಾರವಾಡ

Proud to be an INDIAN ಸ್ವಾತಂತ್ರೋತ್ಸವ ಅಂಗವಾಗಿ  ಧ್ವಜಾರೋಹಣ ಕಾರ್ಯಕ್ರಮ ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ
18/08/2026

Proud to be an INDIAN

ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ

ಶ್ರೀ ಸಾಯಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಧಾರವಾಡ

17/08/2026

*"ವಚನ ಪ್ರಭೆ" ಗ್ರಂಥ ಲೋಕಾರ್ಪಣೆ*
*ಲೇಖಕರು: ಡಾ. ವೀಣಾ ಬಿರಾದಾರ*

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೊಂಬೆಳಕು ಪ್ರತಿಷ್ಠಾನ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ. ವೀಣಾ ಬಿರಾದಾರ ಅವರು ರಚಿಸಿರುವ 'ವಚನ ಪ್ರಭೆ’ ಶ್ರಾವಣ ನಿತ್ಯ ವಚನೋತ್ಸವ ಮಾಲಿಕೆ-1 ಕೃತಿಯ ಲೋಕಾರ್ಪಣೆ ಯಶಸ್ವಿಯಾಗಿ ನೆರವೇರಿತು.
31 ಶಿವಶರಣರ ಸಂಕ್ಷಿಪ್ತ ಜೀವನ ಚರಿತ್ರೆ ಹಾಗೂ ಅವರ ಪ್ರಮುಖ ವಚನಗಳ ಸರಳ ಸುಂದರ ವಿಶ್ಲೇಷಣೆಯನ್ನು ಒಳಗೊಂಡಿರುವ ಈ ನೂತನ ಕೃತಿಯನ್ನು ಪ್ರೊ. ಸುರೇಶ ವಿ ನಾಡಗೌಡರ ಕುಲಪತಿಗಳು, ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಇವರು ಅಧಿಕೃತವಾಗಿ ಲೋಕಾರ್ಪಣೆ ಗೊಳಿಸಿದರು.

ನಿವೃತ್ತ ಪ್ರಾಚಾರ್ಯರಾದ *ಪ್ರೊ. ಬಿ.ಸಿ ಬಿರಾದಾರ ಅವರು ಕೃತಿಯ ಕುರಿತು ಮಾತನಾಡಿದರು*.

*ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ* ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು*.

ಧಾರವಾಡದ ಬಸವ ಶಾಂತಿ ಮಿಷನ್ ಟ್ರಸ್ಟ್ ಅಧ್ಯಕ್ಷರಾದ *ಮಹದೇವ ಹೊರಟ್ಟಿ ಅವರ ಅಧ್ಯಕ್ಷತೆ ವಹಿಸಿದ್ದರು*.

*“ಶ್ರಾವಣ ನಿತ್ಯ ವಚನೋತ್ಸವಕ್ಕೆ ಉಪಯುಕ್ತ ಕೃತಿ, ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ಪ್ರತಿದಿನ ನಡೆಯುವ ನಿತ್ಯವಚನೋತ್ಸವದಲ್ಲಿ ಪ್ರತಿಯೊಬ್ಬರಿಗೂ ಶಿವಶರಣರ ಚಿಂತನೆ ಹಾಗೂ ವಚನಗಳ ಅರ್ಥೈಸುವಿಕೆ ಸುಲಭವಾಗಿ ತಲುಪಲಿ ಎಂಬ ಉದ್ದೇಶದಿಂದ ಈ ಪುಸ್ತಕವನ್ನು ರಚಿಸಲಾಗಿದೆ” ಎಂದು ಲೇಖಕರು ಡಾ. ವೀಣಾ ಬಿರಾದಾರ ಅವರು ಹೇಳಿದರು*.

ಕಾರ್ಯಕ್ರಮದಲ್ಲಿ ಡಾ. ಲಿಂಗರಾಜ ಅಂಗಡಿ, ಪ್ರೊ ಕುಂಬಾರ, ಡಾ ಎಸ್ ಬಿ ಗಾಡಿ, ಶ್ರೀಮತಿ ಮಂಜುಳಾ ಬಿರಾದಾರ, ಪ್ರೊ ಕೌಜಲಗಿ, ಶ್ರೀ ನರೇಗಲ್ ಹಾಗೂ ನಗರದ ಸಾಹಿತ್ಯಾಸಕ್ತರು, ಶರಣ ಬಂಧುಗಳು, ಚಿಂತಕರು, ಶ್ರೀ ಸಾಯಿ ಕಾಲೇಜಿನ ಉಪನ್ಯಾಸಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಲೇಖಕರಿಗೆ ಶುಭಕೋರಿದರು.

ನಾಗ ಪಂಚಮಿ ಹಬ್ಬದ ಶುಭಾಶಯಗಳು ಹಾಲೆರೆದು ಭಕ್ತಿಯಿಂದ ಪೂಜಿಸುವ ಈ ಪವಿತ್ರ ನಾಗ ಪಂಚಮಿ ಹಬ್ಬವು ಎಲ್ಲರ ಬಾಳಿನಲ್ಲಿ ಸಂತಸ ತರಲಿ...
16/08/2026

ನಾಗ ಪಂಚಮಿ ಹಬ್ಬದ ಶುಭಾಶಯಗಳು

ಹಾಲೆರೆದು ಭಕ್ತಿಯಿಂದ ಪೂಜಿಸುವ ಈ ಪವಿತ್ರ ನಾಗ ಪಂಚಮಿ ಹಬ್ಬವು ಎಲ್ಲರ ಬಾಳಿನಲ್ಲಿ ಸಂತಸ ತರಲಿ...

"ಶ್ರೀ ಸಾಯಿ ಕಾಲೇಜಿನಲ್ಲಿ 80 ನೆಯ ಸ್ವಾತಂತ್ರ್ಯ ದಿನಾಚರಣೆ" ಯ ಅಂಗವಾಗಿ ಧ್ವಜಾರೋಹಣ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳ಧಾರವಾಡದ ನಮ್ಮ ಶ್ರೀ ಸಾಯಿ ಪದವ...
15/08/2026

"ಶ್ರೀ ಸಾಯಿ ಕಾಲೇಜಿನಲ್ಲಿ 80 ನೆಯ ಸ್ವಾತಂತ್ರ್ಯ ದಿನಾಚರಣೆ" ಯ ಅಂಗವಾಗಿ ಧ್ವಜಾರೋಹಣ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

ಧಾರವಾಡದ ನಮ್ಮ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 80 ನೆಯ ಸ್ವಾತಂತ್ರ್ಯ ದಿನಾಚರಣೆಯ ಆಚರಿಸಲಾಯಿತು.

ವಿದ್ಯಾರ್ಥಿಗಳು ಪೆರೇಡ್ ಮಾಡುವುದರ ಮೂಲಕ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶ್ರೀಮತಿ ವೀಣಾ ಬಿರಾದಾರ ಮೇಡಂ ಮತ್ತು ನಿರ್ದೇಶಕರಾದ ಡಾ. ಎಸ್. ಬಿ. ಗಾಡಿ ಸರ್ ಇವರನ್ನು ಸ್ವಾಗತಿಸಿದರು. ನಂತರ ಧ್ವಜಾರೋಹಣ ನೆರವೇರಿಸಿದ ಡಾ. ವೀಣಾ ಬಿರಾದಾರ ಮೇಡಂ ಅವರು ಸ್ವಾತಂತ್ರ್ಯಕ್ಕಾಗಿ ಮಡಿದ ಯೋಧರ ತ್ಯಾಗ-ಬಲಿದಾನಗಳನ್ನು ಸ್ಮರಿಸಿ, ಸ್ವಾತಂತ್ರ್ಯೋತ್ಸವದ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳು ಸ್ವಾತಂತ್ರ್ಯದಿನದ ಅಂಗವಾಗಿ ಭಾಷಣ ಮಾಡಿ, ದೇಶಭಕ್ತಿಗೀತೆಗಳನ್ನು ಹಾಡಿ ದೇಶಭಕ್ತಿಯನ್ನು ಮೆರೆದರು.

ಈ ಸಂದರ್ಭದಲ್ಲಿ ಪ್ರಾಚಾರ್ಯರು, ಬೋಧಕ - ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ ಸುಂದರ ಕ್ಷಣಗಳು...😊

On this 80th Independence Day, Shri Sai Science and Commerce College, Dharwad wishes everyone a very Happy Independence ...
14/08/2026

On this 80th Independence Day, Shri Sai Science and Commerce College, Dharwad wishes everyone a very Happy Independence Day!

Let us honor the sacrifices of our freedom fighters and commit ourselves to building a brighter, stronger, and educated nation.

ವಂದೇ ಮಾತರಂ... ಜೈ ಹಿಂದ್!

🇮🇳
80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ✨

Address

Banashankari Avenue, Opposite NTTF, Above State Bank Of India Sangam Circle, Hosayellapur
Dharwad
580001

Alerts

Be the first to know and let us send you an email when Shri Sai PU Science and Commerce College Court Circle Dharwad posts news and promotions. Your email address will not be used for any other purpose, and you can unsubscribe at any time.

Contact The School

Send a message to Shri Sai PU Science and Commerce College Court Circle Dharwad:

Shortcuts

Share

Category