SJM Vidyapeetha

SJM Vidyapeetha Contact information, map and directions, contact form, opening hours, services, ratings, photos, videos and announcements from SJM Vidyapeetha, Education, Sri Murugha Mata, MK Hatti, Chitradurga.

21/08/2025

ಶ್ರಾವಣಮಾಸದ ಪಥದರ್ಶನ ಕಾರ್ಯಕ್ರಮ
ಇದೇ 23ರಂದು ಸಮಾರೋಪ
ಚಿತ್ರದುರ್ಗ . 21 ಶ್ರಾವಣಮಾಸದ ಪ್ರಯುಕ್ತ ಮಹಾಸ್ವಾಮಿಗಳವರಿಂದ ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಏರ್ಪಡಿಸಲಾಗಿದ್ದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಸಾಗಿಬಂದ ಮುರುಘಾ ಗುರುಪರಂಪರೆಯ ಮಹಾಸ್ವಾಮಿಗಳವರ ಜೀವನಸಾಧನೆಯ ಪಥದರ್ಶನ ಹಾಗೆಯೇ ಈ ಮಾಸದಲ್ಲಿ ಬಂದ ಶಿವಶರಣರ ಜಯಂತಿ (ಶರಣೋತ್ಸವ) ಮತ್ತೆ 12ನೇ ಶತಮಾನದ ವಚನಕಾರ್ತೆಯರಲ್ಲಿ 14 ಶಿವಶರಣೆಯರ ಜೀವನ ಸಾಧನೆಯನ್ನು ಸ್ಮರಿಸುವಂತಹ ಕಾರ್ಯಕ್ರಮವು ದಿನಾಂಕ 23-8-2025ರ ಶನಿವಾರ ಬೆಳಗ್ಗೆ 8 ಗಂಟೆಯಿಂದ 9 ಗಂಟೆಯ ತನಕ ವಚನಾಭಿಷೇಕ, ವಚನಪಠಣ ಹಾಗೂ ಅಂದು ಲಿಂಗೈಕ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಪಥದರ್ಶನದೊಂದಿಗೆ ಸಂಪನ್ನಗೊಳ್ಳಲಿದೆ. ಎಂದಿನಂತೆ ಭಕ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಶರಣೆ ಆಯ್ದಕ್ಕಿ ಲಕ್ಕಮ್ಮ ಮತ್ತು ಶರಣೆ ಕನ್ನಡಿಕಾಯಕದ ರೇಮಮ್ಮ ಅವರುಗಳ ಸ್ಮರಣೆಚಿತ್ರದುರ್ಗ ಆ. 21 - ಎಂದಿಗೂ ಸಾವೇ ಇರದಂತಹ ಮೌಲ್ಯಯುತ ಬದುಕಿನ ನ...
21/08/2025

ಶರಣೆ ಆಯ್ದಕ್ಕಿ ಲಕ್ಕಮ್ಮ ಮತ್ತು ಶರಣೆ ಕನ್ನಡಿಕಾಯಕದ ರೇಮಮ್ಮ ಅವರುಗಳ ಸ್ಮರಣೆ
ಚಿತ್ರದುರ್ಗ ಆ. 21 - ಎಂದಿಗೂ ಸಾವೇ ಇರದಂತಹ ಮೌಲ್ಯಯುತ ಬದುಕಿನ ನಡೆಗೆ ಬಸವಾದಿ ಶಿವಶರಣೆಯರು ಕೊಟ್ಟಿರುವ ವಚನಗಳು ಚಿರನೂತನ. ಅಂತಹ ಕಾರ್ಯ ಶ್ರೀ ಬೃಹನ್ಮಠದಲ್ಲಿ ನಿರಂತರ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಮುಂದಿನ ತಿಂಗಳು ನಡೆಯುವ ಶರಣಸಂಸ್ಕೃತಿ ಉತ್ಸವದಲ್ಲಿ ಒಂದುದಿನ 4 ರಿಂದ 5 ಸಾವಿರ ಜನರನ್ನು ಸೇರಿಸಿ ಸಾಮೂಹಿಕ ವಚನ ಪಠಣ ಮತ್ತು ಅದರರ್ಥವನ್ನು ಹೇಳುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ನುಡಿದರು.
ಶ್ರೀಗಳು, ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತವಿನ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ವಚನಾಭಿಷೇಕ, ವಚನಪಠಣ ಹಾಗೂ 12ನೇ ಶತಮಾನದ ಆಯ್ದ ಶಿವಶರಣೆಯರ ಜೀವನಸಾಧನೆಯ ಪಥದರ್ಶನದ 27ನೆಯ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತ ಬಸವಾದಿ ಶಿವಶರಣರ ತತ್ತ್ವ ಪ್ರತಿಪಾದನೆಯಲ್ಲಿ ಶ್ರೀಮಠವು ಸದಾ ಮುಂಚೂಣಿಯಲ್ಲಿದೆ. ಈ ಬಗೆಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಮಹಿಳೆಯರು, ಪುರುಷರು, ಮಕ್ಕಳು ಒಟ್ಟಾರೆ ಆಸಕ್ತ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರು ಭಾಗವಹಿಸಬಹುದಾಗಿದೆ. ನಾಳೆಯಿಂದ ನೋಂದಣಿ ಕಾರ್ಯ ಆರಂಭವಾಗುತ್ತದೆ. ಅದಕ್ಕಾಗಿ ಬಸವಾದಿ ಶಿವಶರಣರ ವಚನಗಳಿಗೆ ಭಾವ ತುಂಬಿ ಹಾಡುತ್ತಿರುವ ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ಅವರಿಗೆ ವಹಿಸಲಾಗಿದೆ. ಅವರೊಂದಿಗೆ ಇನ್ನೊಬ್ಬ ಕಲಾವಿದರಾದ ಪರಮರತ್ನ ಸಂಗೀತಶಾಲೆಯ ಸುಜಿತ್ ಕುಲಕರ್ಣಿಯವರಿಗೂ ತಿಳಿಸಲಾಗಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ವ್ಯಕ್ತಿತ್ವ ಕುರಿತು ಮಾತನಾಡಿದ ಗಾನಯೋಗಿ ಸಂಗೀತ ಬಳಗದ ಸದಸ್ಯೆ ಉಮಾರಮೇಶ್ ಮಾತನಾಡಿ, ಈಗಿನ ರಾಚಯೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಅಮರೇಶ್ವರ ಗ್ರಾಮದವರು. ದಲಿತ ಕುಟುಂಬದ ಸ್ವಾಭಿಮಾನಿ ಧೀರಮಹಿಳೆ. ಪತಿ ಆಯ್ದಕ್ಕಿ ಮಾರಯ್ಯ ಬಡತನದಲ್ಲಿ ಹುಟ್ಟಿದ ಈಕೆಗೆ ಸೂಕ್ಷ್ಮಸಂವೇದನೆ ಗಂಭೀರ ಬದುಕನ್ನು ನಡೆಸಲು ಕಲಿಸಿತು. ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ಅಮರೇಶ್ವರ ಗ್ರಾಮದಿಂದ ಕಲ್ಯಾಣದತ್ತ ಸಾಗಿ ಅಲ್ಲಿ ಕಠಿಣ ಕಾಯಕ ಮಾಡಿ ಜೀವಿಸುತ್ತ ಯಾರನ್ನು ಬೇಡಬಾರದು ಎಂಬ ಧೈಯದಿಂದ ಲಕ್ಕಮ್ಮ ತನ್ನ ಹಿಡಿಯಕ್ಕಿಯಿಂದ ಸಾವಿರಾರು ಜನರಿಗೆ ನಿತ್ಯದಾಸೋಹ ಮಾಡುವ ಮಹಾಮಣಿಹವನ್ನು ಹೊತ್ತಿದ್ದರು. ಇದೆಲ್ಲವೂ ಭಕ್ತಿಯಿಂದ ಸಾಧ್ಯ ಉಳಿದಿದ್ದೆಲ್ಲವೂ ಮಿಥ್ಯ ಎನ್ನುವ ಧೋರಣೆ ಮತ್ತು ಆತ್ಮವಿಶ್ವಾಸ ದಂಪತಿಗಳದಾಗಿತ್ತು. ಲೋಕೋದ್ಧಾರ ಮತ್ತು ಆತ್ರೋದ್ಧಾರ ಎಂಬ ಆಶಯದೊಂದಿಗೆ ಕಾಯಕ ತತ್ತ್ವ, ನಿಶ್ಚಲನಿಲುವು. ಜ್ಞಾನದ ಅರಿವು, ಸಮತಾಭಾವ, ಇತರರನ್ನು ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲ ಎಂಬ ನಿಲುವು ಆಕೆಯಲ್ಲಿ ನಿರ್ಮಲ ವ್ಯಕ್ತಿತ್ವ ಅನಾವರಣಗೊಳ್ಳಲು ಸಾಧ್ಯವಾಯಿತು. ಇವರ ಸರಳ, ನಿರಾಡಂಬರ ಬದುಕು ಅಂದಿನ ಕಲ್ಯಾಣದ ಶರಣರಲ್ಲಿ ಅಭಿಮಾನ ಮೂಡಿಸಿ ಸೈ ಎನಿಸಿಕೊಂಡಿದ್ದರೆಂದು ಸ್ಮರಿಸಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರೂ ಕದಳಿ ವೇದಿಕೆಯ ಅಧ್ಯಕ್ಷರೂ ಆದ ಶ್ರೀಮತಿ ಎಂ.ಆರ್. ಜಯಲಕ್ಷ್ಮಿ ಅವರು ಶಿವಶರಣೆ ಕನ್ನಡಿಕಾಯಕದ ರೇಮಮ್ಮ ಅವರ ಬಗೆಗೆ ಮಾತನಾಡುತ್ತ, 12ನೇ ಶತಮಾನವೆನ್ನುವುದು ವಚನಯುಗ. ಅಲ್ಲಿ ಜಾತಿ, ಧರ್ಮ, ಮತ, ಪಂಥ, ಪಂಗಡ ಎಣಿಸದೆ ಸಮಸ್ತ ಮನುಕುಲ ಒಂದೇ ಎನ್ನುವಂತಹ ಭಾವ ಸಾರಿದ ಬಸವಣ್ಣನವರು ಮೇಲು-ಕೀಳು ಕಿತ್ತೊಗೆದು ಸ್ತ್ರೀ-ಪುರುಷ ತಾರತಮ್ಯ ಅಳಿಸಿ ಸರ್ವರೂ ಸಮಾನರು ಎಂಬ ಧೋರಣೆಯಿಂದ ಪ್ರಾಣಿ-ಪಕ್ಷಿಗಳಲ್ಲಿಯೂ ದಯೆ ತೋರಿದ ನಿರ್ಮಲ ವ್ಯಕ್ತಿತ್ವದವರಾದ್ದರಿಂದ ಅಲ್ಲಿ ಮೂಢನಂಬಿಕೆ. ಕಂದಾಚಾರವನ್ನು ಹಿಮ್ಮೆಟ್ಟಿಸಲು ಸತತ ಪ್ರಯತ್ನ. ಸಮಾಜದ ಅಂಕುಡೊಂಕು ತಿದ್ದುವ, ಸರ್ವ ಸಮಾಜದವರನ್ನು ಅಪ್ಪಿ ಒಪ್ಪಿಕೊಂಡಿದ್ದರಿಂದ ಅಲ್ಲಿಗೆ ದೇಶ-ವಿದೇಶಗಳಿಂದ ಕಲ್ಯಾಣಕ್ಕೆ ಬಂದರು. ಹಾಗೆಯೇ ಎಲ್ಲ ವರ್ಗದ ಮಹಿಳೆಯರು ವಚನ ಸಾಹಿತ್ಯ ರಚಿಸಿದರು. ನೂರಾರು ಶರಣೆಯರು ಬಂದು ಸೇರಿದರು. ಅದರಲ್ಲಿ ಕನ್ನಡಿ ಕಾಯಕದ ರೇಮಮ್ಮಳು ಒಬ್ಬರಾಗಿದ್ದು, ಈಕೆಯ ಬಗ್ಗೆ ಅಷ್ಟೇನು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆಕೆಯ ಕುಲಕಸುಬು ಕ್ಷೌರಿಕ ವೃತ್ತಿ ಎಂದು ಗೊತ್ತಾಗುತ್ತದೆ. ನಿರಂಗಲಿಂಗ ಎನ್ನುವ ನಾಮಾಂಕಿತದಲ್ಲಿ ಒಂದು ವಚನ ಲಭ್ಯವಿದೆ. ಆ ವಚನ ಪ್ರತಿಭಟನೆಯ ಸ್ವರೂಪದ್ದಾಗಿದ್ದು, ಯಾವುದನ್ನು ಪ್ರಶ್ನಿಸದೆ ಹಾಗೆಯೇ ತಪ್ಪು ಮಾಡಿದವರನ್ನು ದಂಡಿಸಬೇಕೆಂದು ಆಕೆಯ ವಚನದಲ್ಲಿ ನಿರೂಪಿತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ ಭಾಗವಹಿಸಿ ಮಾತನಾಡುತ್ತ ಕನ್ನಡ ಸಾಹಿತ್ಯಕ್ಕೆ ವಚನಸಾಹಿತ್ಯ ಶ್ರೇಷ್ಠ ಕೊಡುಗೆಯಾಗಿದೆ. ವಚನಸಂಸ್ಕೃತಿ ವಿಜೃಂಭಿಸಿ ಬದುಕು ಅನಾವರಣಗೊಳ್ಳಬೇಕು. ಬಸವಸಂಸ್ಕೃತಿ ಅಭಿಯಾನಕ್ಕೆ ಚಿಕ್ಕಮಗಳೂರಿನಿಂದಲೂ ನಾವು ಸಾವಿರಾರು ಸಂಖ್ಯೆಯಲ್ಲಿ ಚಿತ್ರದುರ್ಗಕ್ಕೆ ಬರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಸ್ಥಾಪಕರು, ಶರಣಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರೂ ಆದ ಕೆ.ಎಂ. ವೀರೇಶ್, ಟಿ.ಪಿ.ಜ್ಞಾನಮೂರ್ತಿ, ಬಸವರಾಜ ಕಟ್ಟಿ, ಮಠದಕುರುಬರಹಟ್ಟಿ ಗ್ರಾ.ಪಂ. ಅಧ್ಯಕ, ಗಣೇಶ್ ಮತ್ತಿತರ ಸದಸ್ಯರು, ಸೇವಾಕರ್ತರಾದ ಕೆ.ಎಂ. ಪ್ರಕಾಶ್, ನೀಲಾಂಬಿಕೆ ಕುಟುಂಬ, ಡಾ|| ಗೌರಮ್ಮ, ಚಳ್ಳಕೆರೆ ಪದವಿ ಕಾಲೇಜಿನ ಪ್ರಾಚಾರ್ಯ ಓ.ಬಾಬು ಹಾಗೂ ಗಾನಯೋಗಿ ಸಂಗೀತ ಬಳಗದವರು ವಹಿಸಿದ್ದರು.
ಈ ಸಂದರ್ಭದಲ್ಲಿ ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ತೋಟಪ್ಪ ಎಂ. ಉತ್ತಂಗಿ ಅವರ ಬಳಗದ ನೂರಾರು ಗಾಯಕರು, ಬಸವಾದಿ ಶಿವಶರಣೆಯರ ವಚನಗಳನ್ನು ಹಾಡಿ ಮುದ ನೀಡಿದರು. ಬಳಗದ ಕಾವ್ಯದರ್ಶಿ ಜಿ.ಟಿ. ನಂದೀಶ್ ಕಾರ್ಯಕ್ರಮ ನಿರ್ವಹಿಸಿದರು.

ಇಂದು( 21-8-2025)ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಹನ್ನೆರಡನೆಯ ಶತಮಾನದ ಶಿವಶರಣೆಯರ ಜೀವನ ಸಾಧನೆಯ ಪಥ ದರ್ಶನ  ಜತೆಗೆ ವಚನಾಭಿಷೇಕ ಇತ್ಯಾದ...
21/08/2025

ಇಂದು( 21-8-2025)ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಹನ್ನೆರಡನೆಯ ಶತಮಾನದ ಶಿವಶರಣೆಯರ ಜೀವನ ಸಾಧನೆಯ ಪಥ ದರ್ಶನ ಜತೆಗೆ ವಚನಾಭಿಷೇಕ ಇತ್ಯಾದಿ ವಿಶೇಷ ಕಾರ್ಯಕ್ರಮಗಳು
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಂಜಾನೆಯಿಂದ ಮೂಲ ಕರ್ತೃವಿನ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳವರ ಸಾನಿಧ್ಯದಲ್ಲಿ, ಬಸವ ಮುರುಘೇಂದ್ರ ಶ್ರೀಗಳವರ ಸಮ್ಮುಖದಲ್ಲಿ ಶಿವಶರಣೆಯರಾದ ಆಯ್ದಕ್ಕಿ ಲಕ್ಕಮ್ಮ ಅವರ ಕುರಿತಾಗಿ ಶ್ರೀಮತಿ ಉಮಾರಮೇಶ್, ಕನ್ನಡಿ ಕಾಯಕದ ರೇಮಮ್ಮ ಅವರ ಕುರಿತಾಗಿ ಅವರುಗಳು ವಿಷಯಾವಲೋಕನ ಮಾಡಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರಿನ ಕಸಾಪ ಅಧ್ಯಕ್ಷ ಸೂರಿಶ್ರೀನಿವಾಸ್,ಶಸಾಪ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ,
ಇಂದಿನ ಸೇವಾಕರ್ತಾರಾಗಿ ಓ. ಬಾಬು ಕುಮಾರ್ , ಪ್ರಾಚಾರ್ಯರು ಬಾಪೂಜಿ ಪ್ರಥಮ ದರ್ಜೆ ಕಾಲೇಜು ಚಳಕೆರೆ ,ಶ್ರೀ ಆರ್ ಗಣೇಶ್, ಪೈಲ್ವಾನ್ ರಾಜಪ್ಪ ಮತ್ತು ಕುಟುಂಬದವರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಠದ ಕುರುಬರಹಟ್ಟಿ,
ಡಾ .ಗೌರಮ್ಮ ಮತ್ತು ಕುಟುಂಬದವರು ನಿವೃತ್ತ ಪ್ರಾಚಾರ್ಯರು ದಂತ ಮಹಾವಿದ್ಯಾಲಯ , ಚಿತ್ರದುರ್ಗ
ಶ್ರೀಮತಿ ಗಂಗಾಂಬಿಕೆ ಶ್ರೀ ಪ್ರಕಾಶ್ ಕೆ.ಎಂ. ಮತ್ತು ಮಕ್ಕಳು ,ಚಿತ್ರದುರ್ಗ ಶ್ರೀ ಗಾನಯೋಗಿ ಸಂಗೀತ ಬಳಗ ಚಿತ್ರದುರ್ಗ
ಇವರು ವಹಿಸಿದ್ದರು.ವಿವಿಧ ಸಮಾಜದವರು,ಭಕ್ತರು,ಅಭಿಮಾನಿಗಳು,ವಿದ್ಯಾರ್ಥಿಗಳು sjm ವಿದ್ಯಾಪೀಠದ ಕೆಲ ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ತೋಟಪ್ಪ ಉತ್ತಂಗಿ ಅವರ ಶಿಷ್ಯರಿಂದ ಬಸವಾದಿಶರಣರ ವಚನಗಳ ಗಾಯನ ನಡೆಯಿತು.

ಇಂದು( 18-8-2025)ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಹನ್ನೆರಡನೆಯ ಶತಮಾನದ ಶಿವಶರಣೆಯರ ಜೀವನ ಸಾಧನೆಯ ಪಥ ದರ್ಶನ  ಜತೆಗೆ ವಚನಾಭಿಷೇಕ ಇತ್ಯಾದ...
18/08/2025

ಇಂದು( 18-8-2025)ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಹನ್ನೆರಡನೆಯ ಶತಮಾನದ ಶಿವಶರಣೆಯರ ಜೀವನ ಸಾಧನೆಯ ಪಥ ದರ್ಶನ ಜತೆಗೆ ವಚನಾಭಿಷೇಕ ಇತ್ಯಾದಿ ವಿಶೇಷ ಕಾರ್ಯಕ್ರಮಗಳು
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಂಜಾನೆಯಿಂದ ಮೂಲ ಕರ್ತೃವಿನ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆಯಿತು. ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳವರು,ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳವರು ಬಸವ ಮುರುಘೇಂದ್ರ ಶ್ರೀಗಳವರ ಸಮ್ಮುಖದಲ್ಲಿ ಶಿವಶರಣೆ ನೀಲಾಂಬಿಕೆಯವರ ಕುರಿತಾಗಿ ಶ್ರೀಮತಿ ಶಿಲ್ಪಾ.ಎಂ.ಆರ್. ಉಪನ್ಯಾಸಕರು,ದುಗ್ಗಳೆ ಅವರ ಕುರಿತಾಗಿ ಶ್ರೀಮತಿ ಜಿ.ಯು.ಹೇಮಲತಾ ಅವರುಗಳು ವಿಷಯಾವಲೋಕನ ಮಾಡಿದರು.
ಇಂದಿನ ಸೇವಾಕರ್ತಾರಾಗಿ
ರೇವಣ ಸಿದ್ಧೇಶ್ವರ ಭಕ್ತ ಬಳಗ ಎಂ.ಕೆ.ಹಟ್ಟಿ,ಹೊಳೆಯಪ್ಪಕುಟುಂಬ, ಶಂಕರ ಅಥಣಿ ಕುಟುಂಬ ಹಾಗೂ ಎಸ್.ಜೆ.ಎಂ.ಕಾನೂನು ಕಾಲೇಜಿನ ಸಿಬ್ಬಂದಿ ವಹಿಸಿದ್ದರು.ವಿವಿಧ ಸಮಾಜದವರು,ಭಕ್ತರು,ಅಭಿಮಾನಿಗಳು,ವಿದ್ಯಾರ್ಥಿಗಳು sjmನ ಕೆಲ ನೌಕರರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು,

ಇಂದು( 13-8-2025)ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಮುರುಘಾ ಪರಂಪರೆಯ ಜಗದ್ಗುರು ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ...
13/08/2025

ಇಂದು( 13-8-2025)ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಮುರುಘಾ ಪರಂಪರೆಯ ಜಗದ್ಗುರು ಶ್ರೀಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ಪಥ ದರ್ಶನದ ವಿಷಯಾವಲೋಕನ , ವಚನಾಭಿಷೇಕ ಇತ್ಯಾದಿ ವಿಶೇಷ ಕಾರ್ಯಕ್ರಮಗಳು
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಂಜಾನೆಯಿಂದ ಮೂಲ ಕರ್ತೃವಿನ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆಯಿತು.
ಬಸವ ಮುರುಘೇಂದ್ರ ಶ್ರೀಗಳವರ ಉಪಸ್ಥಿತಿಯಲ್ಲಿ ,ಹೇಮರಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾಧ್ಯಕ್ಷ ಡಾ.ಪಾಲಾಕ್ಷಪ್ಪ,ಕಾರ್ಯದರ್ಶಿ ಶ್ರೀ ಶಿವಾನಂದಪ್ಪ ಹಾಗೂ ಪದಾಧಿಕಾರಿಗಳು, ಭಕ್ತರು,ವಿವಿಧ ಸಮಾಜದ ಮುಖಂಡರು, ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. Sjmಕಾನೂನು ಮಹಾವಿದ್ಯಾಲಯದ ಮಾಜಿ ಪ್ರಾಂಶುಪಾಲ, ಹಿರಿಯ ಪ್ರಾಧ್ಯಾಪಕರೂ ಆದ ಶ್ರೀ ಕೆ.ಎನ್.ವಿಶ್ವನಾಥ ಅವರು ವಿಷಯಾವಲೋಕನ ನಡೆಸಿಕೊಟ್ಟರು. sjmವಿದ್ಯಾಪೀಠದ ಕೆಲ ನೌಕರರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಂದು( 11-8-2025)ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಮುರಘಾಪರಂಪರೆಯ ಹೆಬ್ಬಾಳು ಶ್ರೀರುದ್ರೇಶ್ವರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿ...
11/08/2025

ಇಂದು( 11-8-2025)ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಮುರಘಾಪರಂಪರೆಯ ಹೆಬ್ಬಾಳು ಶ್ರೀರುದ್ರೇಶ್ವರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ಪಥ ದರ್ಶನದ ವಿಷಯಾವಲೋಕನ , ವಚನಾಭಿಷೇಕ ಇತ್ಯಾದಿ ವಿಶೇಷ ಕಾರ್ಯಕ್ರಮಗಳು
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಂಜಾನೆಯಿಂದ ಮೂಲ ಕರ್ತೃವಿನ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆಯಿತು.
ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ,ಬಸವ ಮುರುಘೇಂದ್ರ ಶ್ರೀಗಳವರು,ವನಕಲ್ ಸಂಸ್ಥಾನದ ಡಾ.ಬಸವರಮಾನಂದ ಶ್ರೀಗಳವರ,ಡಾ.ಬಸವ ಚೇತನ ಶ್ರೀಗಳವರ ಉಪಸ್ಥಿತಿಯಲ್ಲಿ ಭಕ್ತರು,ವಿವಿಧ ಸಮಾಜದ ಮುಖಂಡರು, ಸೇರಿದಂತೆ ಕಾರ್ಯಕ್ರಮದಲ್ಲಿ ಅಭಿಮಾನಿಗಳು,ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. Sjm ಕಲಾ,ವಾಣಿಜ್ಯ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ ವಿಷಯಾವಲೋಕನ ನಡೆಸಿಕೊಟ್ಟರು.
ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಎಸ್ ಜೆ ಎಂ ಕಲಾ,ವಾಣಿಜ್ಯ ಪದವಿ ಮಹಾವಿದ್ಯಾಲಯ ,ಬೋಧಕೇತರ ಸಿಬ್ಬಂದಿ ವ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ,
ಮುರುಘಾವನ ಸಿಬ್ಬಂದಿ ವರ್ಗದವರು, ಮತ್ತಿತರರು ಇಂದಿನ ಸೇವಾಕರ್ತಾರಾಗಿದ್ದರು.
sjmವಿದ್ಯಾಪೀಠದ ಕೆಲ ನೌಕರರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.

-ಚಿತ್ರದುರ್ಗ, ಆ. 8 ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆವರಣ(ಎಸ್.ಜೆ.ಎಂ. ಕ್ಯಾಂಪಸ್)ದಲ್ಲಿ ಶುಕ್ರವಾರ ಶ್ರೀ ಜಗದ್ಗುರು ಮುರುಘರಾಜೇಂದ್...
08/08/2025

-ಚಿತ್ರದುರ್ಗ, ಆ. 8 ನಗರದ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆವರಣ(ಎಸ್.ಜೆ.ಎಂ. ಕ್ಯಾಂಪಸ್)ದಲ್ಲಿ ಶುಕ್ರವಾರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸ್ಮರಣೋತ್ಸವದ ನಿಮಿತ್ತ ಅವರ ಹೆಸರಿನಲ್ಲಿ ಅಂದಾಜು 13 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 126 ಕೊಠಡಿಗಳುಳ್ಳ 4 ಅಂತಸ್ತಿನ ವಿದ್ಯಾರ್ಥಿ ನಿಲಯ ಕಟ್ಟಡಕ್ಕೆ ಭೂಮಿಪೂಜೆಯನ್ನು ನೆರವೇರಿಸಲಾಯಿತು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ.ಕಳಸದ ಐಎಎಸ್(ನಿ.), ಸದಸ್ಯರಾದ ಡಾ. ಪಿ.ಎಸ್. ಶಂಕರ್ ಗುದ್ದಲಿ ಪೂಜೆ ಮಾಡಿ ಚಾಲನೆ ಕಾಮಗಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು, ಎಸ್.ಎನ್. ಚಂದ್ರಶೇಖರ್, ಶ್ರೀ ಮೋಕ್ಷಪತಿ ಮಹಾಸ್ವಾಮಿಗಳು, ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮಿಗಳು, ಗುರುಮಠಕಲ್‌ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಕೆಇಬಿ ಷಣ್ಮುಖಪ್ಪ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ॥ ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ| ರಾಜೇಶ್, ನಾಗೇಂದ್ರಗೌಡ, ನಾಗರಾಜ್, ಡಾ॥ ಕೊಟ್ರೇಶ್ ಮತ್ತು ಸಿಬ್ಬಂದಿವರ್ಗದವರು ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಗಸ್ಟ್ 8ರಂದು ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ 31ನೇ ಸ್ಮರಣೋತ್ಸವಚಿತ್ರದುರ್...
06/08/2025

ಆಗಸ್ಟ್ 8ರಂದು ಹೊಳಲ್ಕೆರೆ ಒಂಟಿಕಂಬದ ಮುರುಘಾಮಠದಲ್ಲಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ 31ನೇ ಸ್ಮರಣೋತ್ಸವ
ಚಿತ್ರದುರ್ಗ/ಹೊಳಲ್ಕೆರೆ, ಆ.6 : ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಲಿಂಗೈಕ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 31ನೇ ಸ್ಮರಣೋತ್ಸವವು ಇದೇ 8ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದ ಅವರ ಲೀಲಾವಿಶ್ರಾಂತಿ ತಾಣದಲ್ಲಿ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಅಂದು ಲಿಂಗೈಕ್ಯ ಮಹಾಸ್ವಾಮಿಗಳವರ 30ನೇ ಸ್ಮರಣೋತ್ಸವ ಸಂಪುಟ 'ಚಿನ್ಮೂಲಾದ್ರಿ ಚಿತ್ಕಳೆ' ಪರಿಷ್ಕೃತ ಮತ್ತು ವಿಸೃತ ಆವೃತ್ತಿಯ ಲೋಕಾರ್ಪಣೆಯೂ ಇರಲಿದೆ. ಈ ಸಮಾರಂಭದಲ್ಲಿ ನಾಡಿನ ಮಠಾಧೀಶರು, ಶ್ರೀ ಜಗದ್ಗುರು ಮುರುಘರಾಜೇಂದ್ರ ಗುರುಕುಲದ ಬಸವತತ್ತ್ವ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಸರ್ವ ಸಮಾಜದ ಸ್ವಾಮಿಗಳು, ಬೃಹನ್ಮಠದ ಖಾಸಾ-ಶಾಖಾಮಠದ ಸ್ವಾಮಿಗಳವರು, ಜಿಲ್ಲೆಯ ಜನಪ್ರತಿನಿಧಿಗಳು ಸಾಹಿತಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಶ್ರೀಮಠದ ಅಭಿಮಾನಿ ಭಕ್ತರು, ಸರ್ವ ಬಸವಕೇಂದ್ರಗಳ ಪದಾಧಿಕಾರಿಗಳು, ತಾಲ್ಲೂಕಿನ ಮಹಾಜನತೆ ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಎಂದಿನಂತೆ ಈ ಸ್ಮರಣೀಯ ಸಮಾರಂಭಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ. ಕಳಸದ ಐ.ಎ.ಎಸ್.(ನಿ.) ಅವರು ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ವಿದ್ಯಾರ್ಥಿ ನಿಲಯ ಕಟ್ಟಡದ ಅಡಿಗಲ್ಲು ಸಮಾರಂಭ ಅಂದು ಬೆಳಗ್ಗೆ 9 ಗಂಟೆಗೆ ಎಸ್.ಜೆ.ಎಂ. ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಶ್ರಾವಣ : ಸಣ್ಣಬರಹದ ಶ್ರೀ ರಾಚವಟ್ಟಿ ಸ್ವಾಮಿಗಳ ಸ್ಮರಣೆಚಿತ್ರದುರ್ಗ, ಆ. 6 – ಚಿತ್ರದುರ್ಗದ ಶೂನ್ಯಪೀಠದ ಮುರುಘಾಪರಂಪರೆಯಲ್ಲಿ ಬರುವ ಸಣ್ಣಬರಹದ ...
06/08/2025

ಶ್ರಾವಣ : ಸಣ್ಣಬರಹದ ಶ್ರೀ ರಾಚವಟ್ಟಿ ಸ್ವಾಮಿಗಳ ಸ್ಮರಣೆ
ಚಿತ್ರದುರ್ಗ, ಆ. 6 – ಚಿತ್ರದುರ್ಗದ ಶೂನ್ಯಪೀಠದ ಮುರುಘಾಪರಂಪರೆಯಲ್ಲಿ ಬರುವ ಸಣ್ಣಬರಹದ ರಾಚವಟ್ಟಿ ಸ್ವಾಮಿಗಳವರು ವಿಶಿಷ್ಟ ವ್ಯಕ್ತಿತ್ವದವರಾಗಿದ್ದ ಕಾರಣ ಇಂದಿನ ದಿನಪತ್ರಿಕೆಗಳಲ್ಲಿನ ಅಕ್ಷರವನ್ನು ಸಣ್ಣದಾಗಿರುವುದನ್ನು ನೋಡುತ್ತೇವೆ. ಅದೇ ರೀತಿಯ ಮುದ್ದಾದ ಮುದ್ದಿನಂತೆ ಪೋಣಿಸಿದ ಸಣ್ಣಬರಹಕ್ಕೆ ಅವರು ಹೆಸರಾಗಿದ್ದವರು. ಒಂದು ರೀತಿಯಲ್ಲಿ ಇವರು ಸರ್ವಜ್ಞರಾಗಿದ್ದರು. ಜ್ಞಾನದ ಬಲ ಅಷ್ಟೊಂದು ಅವರಿಗೆ ಸಿದ್ಧಿಸಿತ್ತು. ಶೂನ್ಯಪೀಠ ಮುರುಘಾ ಪರಂಪರೆಯಲ್ಲಿ ಸಕಲ ಜೀವರಾಶಿಗೆ ಲೇಸನ್ನೆ ಬಯಸುವ ಮಹಾಮೇರುಗುಣ ಪೀಠದ ಸ್ವಾಮಿಗಳವರು ಹೊಂದಿದ್ದರು. ಕೇವಲ ಮಾನವರ ಕಲ್ಯಾಣ ಬಯಸಲಿಲ್ಲ. ಲೇಸಾಗಲಿ ಎಂದು ಹೇಳಲಿಲ್ಲ. ಸಕಲ ಜೀವರಾಶಿಗೂ ಲೇಸಾಗಲಿ ಎನ್ನುವ ಸದ್ಗುಣ ಸ್ವಭಾವದವರಾಗಿದ್ದರಿಂದ ಅವರಿಗೆ ಸರ್ವಶಕ್ತರೆನ್ನಬಹುದು. ಹಾಗೆಯೇ ನಮಗೆ ನಿಮಗೆ ಎರಡು ಕಣ್ಣುಗಳಿವೆ. ಮತ್ತೆ ಕಣ್ಮುಚ್ಚಿದರೆ ಹೊರಗಿನ ಪ್ರಪಂಚ ಕಾಣುವುದಿಲ್ಲ. ಆದರೆ ಈ ಮಹಾಸ್ವಾಮಿಗಳಿಗೆ ಕಣ್ಣು ತೆರೆದು, ಕಣ್ಮುಚ್ಚಿಯೂ ಪ್ರಪಂಚದ ಆಗುಹೋಗುಗಳನ್ನು ಗಮನಿಸಬಲ್ಲ ಆಧ್ಯಾತ್ಮ ಶಕ್ತಿ ಪ್ರಾಪ್ತವಾಗಿತ್ತು ಎಂದು ಮುರುಘಾಮಠದ ಸಾಧಕ ಗುರುಗಳಾದ ಮುರುಘಂದ್ರ ಶ್ರೀಗಳು ಮುರುಘಾ ಪರಂಪರೆ ಘನತೆಯನ್ನು ತಮ್ಮ ನುಡಿಯಲ್ಲಿ ಹೇಳಿದರು.
ಶ್ರೀಗಳವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತವಿನ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ವಚನಾಭಿಷೇಕ, ವಚನ ಪಠಣ ಹಾಗೂ ಮುರುಘಾ ಗುರುಪರಂಪರೆಯ ಮಹಾಸ್ವಾಮಿಗಳವರ ವ್ಯಕ್ತಿತ್ವದರ್ಶನದ ಪಥದರ್ಶನ ಕಾರ್ಯಕ್ರಮದ 13ನೇ ದಿನದ ಪೀಠ ಪರಂಪರೆಯ 11ನೇ ಗುರುಗಳ ಬಗೆಗೆ ಮಾತನಾಡುತ್ತ, ನಾವೀಗ ನಮ್ಮ ಮನೆ ಮುಂದೆ ಎಚ್ಚರಿಕೆ ಅದು ಇದೆ ಅಂತ ಬೋರ್ಡ್ ಹಾಕಿರುತ್ತೇವೆ. ಆದರೆ ಅದ್ಯಾವುದನ್ನು ಹಾಕಿಸದೆ ಮಠದ ಒಳಹೊರಗನ್ನು ಗಮನಿಸುತ್ತ ಮಠದ ಕಾರ್ಯವನ್ನು ಸುಗಮವಾಗಿ ನಡೆಸುವಂತಹ ವ್ಯವಸ್ಥೆ ಮಾಡಿದ್ದರು. ಹಾಗೆಯೇ ನಾವು ನಮ್ಮ ಅಂತರಂಗ ಬಹಿರಂಗ ಶುದ್ದಿಯೊಂದಿಗೆ ನಮ್ಮ ನಡೆ-ನುಡಿ ಮತ್ತು ಕಾಯಕಗಳು ಸತ್ಯ ಮತ್ತು ಶುದ್ದವಾಗಿದ್ದರೆ ಬದುಕು ನೆಮ್ಮದಿಯಿಂದ ಸಾಗುತ್ತದೆಂದು ನುಡಿದರು.
ವಿಷಯಾವಲೋಕನ ಮಾಡಿದ ಭರಮಸಾಗರ ಬಾಪೂಜಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತ ತಿಪ್ಪಣ್ಣ ಮಾತನಾಡಿ, ಸಣ್ಣಬರಹದ ರಾಚವಟ್ಟಿ ಸ್ವಾಮಿಗಳವರು ನೈಘಂಟಿನ ಸಿದ್ದಬಸವ ಸ್ವಾಮಿಗಳವರು ಬಯಲಾದ ನಂತರ ಇವರಿಗೆ ಪಟ್ಟಾಧಿಕಾರ ನೆರವೇರಿತು. ನಂತರ ಪರಂಪರೆಯಲ್ಲಿ ಸಾಗಿಬಂದ ದಾಸೋಹ ಕಾಯಕ ಶಿವಯೋಗ ಧಾರ್ಮಿಕ ಪ್ರಸಾರದಂತಹ ಕಾರ್ಯಗಳು ಶ್ರೀಗಳವರಿಂದ ಮುಂದುವರೆದವು. ಸಂಚಾರದ ವೇಳೆ ಭಕ್ತರು ನೀಡಿದ ದವಸ-ಧಾನ್ಯ-ಧನ ಇತ್ಯಾದಿಗಳು ಶ್ರೀಮಠಕ್ಕೆ ಬರುತ್ತಿದ್ದವು. ಇದರಿಂದ ನಿತ್ಯದಾಸೋಹ, ಜಂಗಮಪೂಜೆ, ಮಠದ ಕಟ್ಟಡಗಳ ಜೀರ್ಣೋದ್ದಾರದಂತಹ ಕೆಲಸಗಳು ನಡೆದವು. ಶ್ರೀಗಳು ಸಮಾಜೋಧಾರ್ಮಿಕ ಕೆಲಸಗಳ ಪ್ರಭಾವ ಮೈಸೂರಿನ ಅಂದಿನ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿದು, ಮುರುಘಾ ಪರಂಪರೆಯ ಶ್ರೀಗಳನ್ನು ಸಂದರ್ಶಿಸಲು ಉತ್ಸುಕತೆ ತೋರಿ ಸಕಲ ಬಿರುದಾವಳಿಗಳೊಂದಿಗೆ ಬಿನ್ನಹದ ಓಲೆ ಕಳುಹಿಸಿದರು. ಅದಕ್ಕೆ ಒಪ್ಪಿದ ಗುರುಗಳು ಮೈಸೂರಿಗೆ ದಯಮಾಡಿಸುತ್ತಾರೆ. ಅರಸರೂ ಸಹ ಪೀಠ ಪರಂಪರೆಗೊಪ್ಪುವಂತೆ ಗೌರವಾದರಗಳಿಂದ ಗುರುಗಳನ್ನು ಸತ್ಕರಿಸುತ್ತಾರೆ. ಆನಂತರದ ಕೆಲದಿನಗಳಲ್ಲಿ ಅವರ ಶಿಷ್ಟರೊಬ್ಬರನ್ನು ಕರೆದು ನನಗೆ ನನ್ನ ಬಯಲಾಗುವ ಲಿಂಗೈಕ್ಯ ಸ್ಥಿತಿ ಹತ್ತಿರ ಬರುತ್ತಿದೆ ಎಂದು ಹೇಳಲು ಆಗ ಭಕ್ತಗಣಕ್ಕೆ ಕಂಪನ, ಆಶ್ಚರ್ಯ ಒಮ್ಮೆಲೆ ಆಗುತ್ತದೆ. ನಂತರ ಶ್ರೀಗಳು ತಮ್ಮ ಬಯಲಾಗುವ ದಿನ ನಿಗಧಿಯಾಗಿದೆ. ನಾವು ಹೊರಡುತ್ತೇವೆಂದು ಹೇಳಿದ್ದಕ್ಕೆ ಸಿದ್ಧತೆ ನಡೆದು ಮುರಿಗೆ ಶಾಂತವೀರರ ಗದ್ದುಗೆ ಮುಂಭಾಗದ ಮಂಚದ ಮೇಲೆ ಪವಡಿಸಿದ ಶ್ರೀಗಳು ಅಂದು ಶಿವಾನುಭವ ಗೋಷ್ಠಿ ನಡೆಸದೆ ಮೌನವಾಗಿದ್ದು ನಂತರದಲ್ಲಿ ಲಿಂಗದಲ್ಲಿ ಲೀನವಾಗುವಂತೆ ಬಯಲಲ್ಲಿ ಬಯಲಾಗುತ್ತಾರೆ. ಅವರ ಲೀಲಾವಿಶ್ರಾಂತಿ ತಾಣ ಬೃಹನ್ಮಠದಲ್ಲಿ ನಿರ್ಮಾಣವಾಗಿದೆ ಎಂಬಿತ್ಯಾದಿ ಘಟನಾವಳಿಗಳನ್ನು ಹೇಳಿದರು.
ಬೃಹನ್ಮಠ ಪ್ರೌಢಶಾಲೆ, ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆ ಹಾಗೂ ಸಿಬಿಎಸ್‌ಇ ಶಾಲೆ ಹಾಗೂ ಗೊಡಬನಹಾಳ್ ಮುರಿಗೆಮ್ಮ ಮತ್ತು ಮಕ್ಕಳು ಇಂದಿನ ಸೇವಾಕರ್ತರಾಗಿದ್ದರು. ಬಸವರಾಜ ಕಟ್ಟಿ, ದಗ್ಗೆ ತಿಪ್ಪೇರುದ್ರಪ್ಪ, ಎಸ್.ಜೆ.ಎಂ. ಶಾಲಾಕಾಲೇಜುಗಳ ಕೆಲ ಸಿಬ್ಬಂದಿ, ಭಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಮೇಶ್ ಪತ್ತಾರ್ ಅವರ ವಚನಗಳ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭವಾಯಿತು. ಶಿಕ್ಷಕಿ ಭಾರತಿ ಸ್ವಾಗತಿಸಿದರು. ಮತ್ತೋರ್ವ ಶಿಕ್ಷಕಿ ಶ್ರೀಮತಿ ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಆಶಾರಾಣಿ ಶರಣು ಸಮರ್ಪಣೆ ಮಾಡಿದರು.

ಮುರುಘಾಮಠದಲ್ಲಿ 6 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವಚಿತ್ರದುರ್ಗ, ಆ. 5 ವಿವಾಹದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದು ಒಂದು ರೀತಿಯ ಭ್ರಷ್ಟಾಚಾ...
06/08/2025

ಮುರುಘಾಮಠದಲ್ಲಿ 6 ಜೋಡಿಗಳ ಸಾಮೂಹಿಕ ಕಲ್ಯಾಣ ಮಹೋತ್ಸವ
ಚಿತ್ರದುರ್ಗ, ಆ. 5 ವಿವಾಹದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದು ಒಂದು ರೀತಿಯ ಭ್ರಷ್ಟಾಚಾರ. ಸಾಮೂಹಿಕ ವಿವಾಹದ ಮುಖಾಂತರ ಗುರುಗಳ ಆಶೀರ್ವಾದ ಪಡೆದು ವಿವಾಹವಾಗುವುದು ಶ್ರೇಷ್ಠ. ಶ್ರೀಮಠವು ಕಳೆದ 35 ವರ್ಷಗಳಿಂದ ಸಾಮೂಹಿಕ ವಿವಾಹಗಳಿಗೆ ಸಾಕ್ಷಿಯಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ನುಡಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ ಮೂವತ್ತೈದನೇ ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಸತಿ-ಪತಿಗಳು ಒಂದಾದ ಭಕ್ತಿ ಹಿತವಾಗುವುದು ಶಿವಂಗೆ ಎಂದು ಬಸವಣ್ಣ ಹೇಳಿದ್ದಾರೆ. ಒಳ್ಳೆಯ ಮಾತುಗಳನ್ನು ಪ್ರಸನ್ನತೆಯಿಂದ ಕೇಳಿದರೆ ಅದು ಪ್ರಸಾದ. ಯಾರೂ ಸಹ ಕೆಟ್ಟ ಪದಗಳನ್ನು ಕೇಳಬಾರದು. ಕಿವಿಗೆ ಪ್ರಸಾದ ಲಿಂಗ ಎಂದಿದ್ದಾರೆ ಶರಣರು. ನಾಲಿಗೆಯು ಕೆಟ್ಟದಾಗಿ ಮಾತನಾಡುತ್ತದೆ ಅದನ್ನು ತಡೆಯಬೇಕು. ಮಾತಿಗೆ ಮಾತು ಬೆಳೆಸಬಾರದು. ಅದು ಸಂಸ್ಕಾರಯುತವಾಗಿರಬೇಕು ಆದ್ದರಿಂದ ನಾಲಗೆಯನ್ನು ಗುರುಲಿಂಗ ಎಂದಿದ್ದಾರೆ ಶರಣರು. ಮನೆಯಲ್ಲಿ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕು. ಎಲ್ಲವೂ ನಿಮ್ಮದೇ ಎಂಬ ಪದ ಬಳಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ನನ್ನದೇ ಎಲ್ಲಾ ಎಂದರೆ ದಾರಿಯೇ ಬೇರೆಯಾಗುತ್ತದೆ. ಮೂರನೆಯ ಲಿಂಗ ಕಣ್ಣು. ಅದನ್ನು ಇಷ್ಟಲಿಂಗ ಎನ್ನುತ್ತಾರೆ. ಒಳ್ಳೆಯದನ್ನೇ ನೋಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಮುರುಘಾಮಠವು ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಮಠದಲ್ಲಿ ಅನ್ನದಾಸೋಹ ನಿರಂತರವಾಗಿ ನಡೆದಿದೆ. ಅಂತೆಯೇ ಜ್ಞಾನದಾಸೋಹ. ಈ ರೀತಿಯ ಕಾರ್ಯಗಳ ಮೂಲಕ ಅರಿವನ್ನು ನೀಡುತ್ತಿದೆ. ಜ್ಞಾನ ಎಂದರೆ ತಿಳುವಳಿಕೆ. ಅಕ್ಷರ ದಾಸೋಹ ರೂಪದಲ್ಲಿ ಶಾಲೆ-ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುತ್ತಾ ಬಂದಿದೆ. ತ್ರಿವಿಧ ದಾಸೋಹದ ಜೊತೆಗೆ 4ನೇ ದಾಸೋಹವಾಗಿ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಮಾಡಿದರೆ, 5ನೇ ದಾಸೋಹವಾಗಿ ಆರೋಗ್ಯ ದಾಸೋಹವನ್ನು ಉಚಿತ ಆರೋಗ್ಯ ತಪಾಸಣೆ ಮಾಡುವುದರ ಮುಖಾಂತರ ಪಂಚದಾಸೋಹದ ಕತೃವಾಗಿ ಮುರುಘಾಮಠ ಸೇವೆ ಸಲ್ಲಿಸುತ್ತಿದೆ. ದೇವರಿಗೆ ಹಾಲಿನ ಪಂಚಾಮೃತ ಅಭಿಷೇಕ ಮಾಡುತ್ತಾರೆ. ಆದರೆ ಶ್ರೀಮಠವು ಹಸಿದವರಿಗೆ ಅನ್ನ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ನವಜೋಡಿಗಳಿಗೆ ಕಿವಿಮಾತಾಗಿ ಅತ್ತೆ-ಸೊಸೆಯರು ಹೊಂದಿಕೊಂಡು ಬಾಳಬೇಕು. ಮನುಷ್ಯನಾದ ಮೇಲೆ ಏನಾದರೊಂದು ಸೇವೆ ಸಲ್ಲಿಸುವ, ಒಳ್ಳೆಯದನ್ನು ಮಾಡುವ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.
ಶ್ರೀ ಬಸವ ಮುರುಘಂದ್ರ ಸ್ವಾಮಿಗಳು ಮಾತನಾಡಿ, ಮದುವೆ ಎಂಬುದು ಕೇವಲ ವ್ಯವಹಾರಿಕವಲ್ಲ. ಎರಡು ಸಂಬಂಧಗಳನ್ನು ಒಟ್ಟುಗೂಡಿಸುವುದು. ಬಸವಣ್ಣನವರು ಹೇಳುವಂತೆ ಸತಿಪತಿ ಒಂದಾಗಿ ನಡೆದರೆ ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಗಂಡ-ಹೆಂಡತಿಯರು ಜ್ಞಾನದ ಜ್ಯೋತಿಯಾಗಿ ಬೆಳಗಬೇಕು. ಅದಕ್ಕೆ ಪ್ರೀತಿಯೆಂಬ ತೈಲವನ್ನು ಹಾಕಿದರೆ ಮಾತ್ರ ಬೆಳಕು ಚೆಲ್ಲುತ್ತದೆ. ಇದು ದುಬಾರಿ ಕಾಲ. ಬಡವರು ಮದುವೆ ಮಾಡುವುದು ಕಷ್ಟವಿರುವ ಕಾಲವಿದು. ಹಾಗಾಗಿ ಇಂಥವರಿಗೆ ಶ್ರೀಮಠವು ಸಾಮೂಹಿಕ ಕಲ್ಯಾಣದ ಮೂಲಕ ಸಹಕಾರಿಯಾಗಿದೆ. ಜೀವನದಲ್ಲಿ ಸಹಬಾಳ್ವೆ ಮುಖ್ಯ. ಶುಭ ಅಶುಭಗಳಿಗೆ ಶ್ರೀಮಠದಲ್ಲಿ ಅರ್ಥವೇ ಇಲ್ಲ. ಶಿವಶರಣರ ಗುರುಹಿರಿಯರ ಆಶೀರ್ವಾದ ಯಾವುದೇ ಶುಭ-ಅಶುಭಕ್ಕೆ ಎಡೆಮಾಡಿಕೊಡದು ಎಂದರು.
ಮುಂಬೈನ ಕೆ.ಇ.ಎಂ. ಆಸ್ಪತ್ರೆಯ ವೈದ್ಯ ಡಾ. ಬ್ರಿಜೇಶ್ ಕೆ. ಶ್ರೀಮಠದ ಗೌರವವನ್ನು ಸ್ವೀಕರಿಸಿ ಮಾತನಾಡುತ್ತ, ಶ್ರೀಮಠದಲ್ಲಿ 25 ಸಾವಿರ ಜೋಡಿಗಳ ವಿವಾಹಗಳು ನೆರವೇರಿಸಿರುವುದು ಶ್ಲಾಘನೀಯ ಕಾರವಾಗಿದೆ. ಎಲ್ಲರೂ ಆರೋಗ್ಯದ ಕಡೆ ಗಮನ ನೀಡಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ 6 ಜೋಡಿಗಳ ವಿವಾಹ ನೆರವೇರಿಸಲಾಯಿತು. ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಲಾವಣಿಗೀತೆ ಹಾಡಿದರು.
ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ವೀರಭದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.

ಇಂದು ಮುರುಘಾ ಗುರುಪರಂಪರೆಯ ಮೂರು ಸಾವಿರದ ಶ್ರೀ ಸಿದ್ಧಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳವರ  ವ್ಯಕ್ತಿತ್ವ ಸಾಧನೆಯ ಪಥ ದರ್ಶನದ ವಿಷಯಾವಲೋಕನ ,...
02/08/2025

ಇಂದು ಮುರುಘಾ ಗುರುಪರಂಪರೆಯ ಮೂರು ಸಾವಿರದ ಶ್ರೀ ಸಿದ್ಧಲಿಂಗ ಮುರುಘರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವ ಸಾಧನೆಯ ಪಥ ದರ್ಶನದ ವಿಷಯಾವಲೋಕನ , ವಚನಾಭಿಷೇಕ ಇತ್ಯಾದಿ ವಿಶೇಷ ಕಾರ್ಯಕ್ರಮಗಳು
ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮುಂಜಾನೆಯಿಂದ ಮೂಲ ಕರ್ತೃವಿನ ಶ್ರೀಮಠದ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ನಡೆಯಿತು.ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ
ಬಸವ ಮುರುಘೇಂದ್ರ ಶ್ರೀಗಳವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ,ಭಕ್ತರು,ಆಭಿಮಾನಿಗಳು,ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಶ್ರೀ ಜಗದ್ಗುರು ಮುರುಘರಾಜೇಂದ್ರ ಪದವಿ ಮಹಾವಿದ್ಯಾಲಯದ ಅಧ್ಯಾಪಕರಾದ ಶ್ರೀ ವಿಶ್ವನಾಥ .ಸಿ.ಎಂ. ವಿಷಯಾವಲೋಕನ ನಡೆಸಿಕೊಟ್ಟರು.ನಗರದ ಶ್ರೀಮತಿ ಗಂಗಬಿಕಾ ಮಕ್ಕಳು,ಮಠದ ಕುರುಬರಹಟ್ಟಿಯ ಶ್ರೀಶಿವಯೋಗಿ ಕುಟುಂಬ, ಬೆಂಗಳೂರಿನ ಕುಟುಂಬದವರು ಇಂದಿನ ಸೇವಾಕರ್ತರಾಗಿದ್ದರು.

ನಗರದ ಎಸ್ ಜೆ ಎಂ  ಫಾರ್ಮಸಿ ಕಾಲೇಜಿನ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಅಂಗವಾಗಿ ಗುತ್ತಿ ನಾಡು ಗ್ರಾ...
01/08/2025

ನಗರದ ಎಸ್ ಜೆ ಎಂ ಫಾರ್ಮಸಿ ಕಾಲೇಜಿನ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಅಂಗವಾಗಿ ಗುತ್ತಿ ನಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಯಿಯ ಹಾಲಿನ ಮಹತ್ವದ ಬಗ್ಗೆ ಕಾರ್ಯಕ್ರಮವನ್ನು ಇಂದು
ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾಂಶುಪಾಲರಾದ ಡಾ. ಟಿ.ಎಸ್ ನಾಗರಾಜ್, ವಿಭಾಗದ ಮುಖ್ಯಸ್ಥರಾದ ಡಾ ಯೋಗಾನಂದ ಆರ್, ಡಾ ಮಾರುತಿ ಟಿ. ಏಕ್ಬೋಟೆ ಮತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ ಲತಾ ರಮೇಶ್ ಪ್ರಾಧ್ಯಾಪಕರು ಹಾಗೂ ಸ್ತ್ರೀ ಮತ್ತು ಪ್ರಸೂತಿ ವಿಭಾಗದ ಮುಖ್ಯಸ್ಥರು ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಲ್ಲಿಕಾರ್ಜುನಯ್ಯ ನವರು ನೆರವೇರಿಸಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ ಲತಾ ರಮೇಶ್ ಅವರು ಮಾತನಾಡಿ ತಾಯಿಯ ಹಾಲು (Breast milk) ಶಿಶುಗಳಿಗೆ ಅಮೃತವಿದ್ದಂತೆ. ಇದು ಬಾಲ್ಯದಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳಿಂದ ಶಿಶುಗಳನ್ನು ರಕ್ಷಿಸಲು ಸಹಾಯ ಮಾಡುವ ಪ್ರತಿಕಾಯಕಗಳನ್ನು ಹೊಂದಿರುತ್ತದೆ. ತಾಯಿಯ ಎದೆ ಹಾಲು ಮಗುವಿಗೆ ಅತ್ಯುತ್ತಮವಾದ ಪೋಷಣೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎದೆಹಾಲು ಮಗುವಿನ ಅರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಹೊಂದಿದ್ದು, ಇದು ಮಗುವಿನ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಹಾಲುಣಿಸುವುದರಿಂದ ತಾಯಿ ಮತ್ತು ಮಗುವಿನ ನಡುವಿನ ವಾತ್ಸಲ್ಯ, ಬಾಂಧವ್ಯ ಮತ್ತು ಪ್ರೀತಿ ಸಹ ಹೆಚ್ಚಾಗುತ್ತದೆ ಎಂದು ತಿಳಿಸಿದರು. ತಾಯಿಯ ಎದೆಹಾಲಿನ ಮಹತ್ವ ಮತ್ತು ಎದೆ ಹಾಲಿನ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಡಾ ಟಿ ಎಸ್ ನಾಗರಾಜ್ ಪ್ರಾಂಶುಪಾಲರು ಮಾತನಾಡಿ ತಾಯಿಯ ಎದೆಹಾಲನ್ನು ಜೀವಾಮೃತ ಎಂದೇ ಹೇಳಬಹುದು. ಶಿಶು ಆರೋಗ್ಯಕರವಾಗಿರಬೇಕೆಂದರೆ, ತಾಯಿಯ ಎದೆಹಾಲನ್ನು ಕಡ್ಡಾಯವಾಗಿ ಕುಡಿಸಲೇಬೇಕು. ಅಲ್ಲದೆ ಶಿಶುವಿನ ಬೆಳವಣಿಗೆ ಪ್ರಯಾಣದಲ್ಲಿ ಸ್ತನ್ಯಪಾನವು ಅತ್ಯಂತ ಅವಶ್ಯಕ ಭಾಗವಾಗಿದೆ. ತಾಯಿ ಎದೆ ಹಾಲಿನ ಮಹತ್ವ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್‌ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ನಂದೀಶ್ ಭೂಮಿಕ ಮತ್ತು ವಿನಾಯಕ್ ದೇಸಾಯಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಐದನೇ ಹಾಗೂ ಅಂತಿಮ ವರ್ಷದ ಫಾರ್ಮ ಡಿ ವಿದ್ಯಾರ್ಥಿಗಳು ಮತ್ತು ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Address

Sri Murugha Mata, MK Hatti
Chitradurga
577503

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm
Sunday 10am - 6pm

Alerts

Be the first to know and let us send you an email when SJM Vidyapeetha posts news and promotions. Your email address will not be used for any other purpose, and you can unsubscribe at any time.

Shortcuts

Share

Category