ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ನಮ್ಮೂರ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ
6 ತಿಂಗಳ ಸತತ ಜನಹೋರಾಟಕ್ಕೆ ಸಂದ ಐತಿಹಾಸಿಕ ಜಯ!!
"ಯಾವುದೇ ಗ್ರಾಮದ ಶಾಲೆಯನ್ನು ಮುಚ್ಚಲ್ಲ! ಯಾವುದೇ ಶಿಕ್ಷಕರನ್ನು ವರ್ಗಾಯಿಸುವುದಿಲ್ಲ! ಯಾವ ಪೋಷಕರಿಗೂ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸೇರಲು ಒತ್ತಾಯಿಸುವುದಿಲ್ಲ!" -ಜಿಲ್ಲೆಯ ಪೋಷಕರು ಹಾಗೂ ಗ್ರಾಮಸ್ಥರ ಎದುರಿಗೆ ರಾಮನಗರದ ಡಿಡಿಪಿಐ ಘೋಷಣೆ!
AIDSO Karnataka
Official page of Karnataka state committee of All India Democratic Students' Organisation Official page of Karnataka State Committee of AIDSO
27/05/2026
ರಾಮನಗರ ಡಿಡಿಪಿಐ ಕಚೇರಿಗೆ ಮುತ್ತಿಗೆ! ಜನ ಹೋರಾಟಕ್ಕೆ ಸಂದ ಜಯ!
ಕಳೆದ ಆರು ತಿಂಗಳುಗಳಿಂದ ಸತತವಾಗಿ ಹಳ್ಳಿ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟಗಳನ್ನು ಕಟ್ಟಿ ಬೆಳೆಸುತ್ತಿರುವ AIDSO ವಿಧ್ಯಾರ್ಥಿ ಸಂಘಟನೆ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳಿಂದ ಇಂದು ಪಾದರಹಳ್ಳಿ, ಅವೆರಹಳ್ಳಿ ಮತ್ತು ಜಾಲಮಂಗಲ ಮ್ಯಾಗ್ನೆಟ್ ವ್ಯಾಪ್ತಿಗಳಿಗೆ ಬರುವಂತಹ 40 ಹಳ್ಳಿಗಳ ಶಾಲೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ DDPI ಕಚೇರಿಗೆ ಸಾರ್ವಜನಿಕರ ಬೃಹತ್ ನಿಯೋಗ ತೆರಳಿತು.
AIDSO ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ, ಅಭಯ ದಿವಾಕರ್, "ಸರ್ಕಾರ ತನ್ನ ಮೂಲ ಕರ್ತವ್ಯವನ್ನು ಮರೆತು, ಜನಸಾಮಾನ್ಯರನ್ನು ಕತ್ತಲೆಗೆ ತಳ್ಳುವ ಹೀನ ಕೆಲಸಕ್ಕೆ ಕೈಹಾಕಿದೆ. 'KPS ಮ್ಯಾಗ್ನೆಟ್ ಶಾಲೆಗೆ ಇಷ್ಟೊಂದು ದಾಖಲಾತಿ ಮಾಡಿಸಿದ್ದೇವೆ' ಎಂದು ಕೇವಲ ಅಂಕಿ-ಅಂಶಗಳನ್ನು ಪ್ರದರ್ಶಿಸಿ ಜಾರಿಕೊಳ್ಳಲು ಶಿಕ್ಷಕರು ಮತ್ತು ಪೋಷಕರ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಪೋಷಕರಿಗೆ ಸುಳ್ಳು ಭರವಸೆಗಳನ್ನು ನೀಡಿ, ಸಹಿ ಪಡೆದುಕೊಂಡು, ಊರಾಚೆ ಇರುವ ಮ್ಯಾಗ್ನೆಟ್ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಂತೆ ಬಲವಂತ ಮಾಡುತ್ತಿರುವುದು ಜನಸಾಮಾನ್ಯರ ಬೆನ್ನಿಗೆ ಚೂರಿ ಹಾಕಿದಂತೆ! ನಾವು ಸರ್ಕಾರ ತಂದಿರುವ ಈ KPS ಮ್ಯಾಗ್ನೆಟ್ ಯೋಜನೆಯ ಸಾಧಕ-ಬಾಧಕಗಳನ್ನು ಚೆನ್ನಾಗಿ ತಿಳಿದುಕೊಂಡೇ ಇಲ್ಲಿಗೆ ಬಂದಿದ್ದೇವೆ; ಯಾರೋ ದಾರಿ ತಪ್ಪಿಸಿ ಬಂದವರಲ್ಲ. ಇದರ ಹಿಂದಿರುವ ಹುನ್ನಾರವನ್ನು ಅರಿತೇ ಈ ನೀತಿಯ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ. ಹಿಂದೆ ಹೊಂಗನೂರಿನಲ್ಲಿ ಮ್ಯಾಗ್ನೆಟ್ ಯೋಜನೆಗೆ ಒಳಪಡುತ್ತಿದ್ದ ಶಾಲೆಗಳನ್ನು ನಾವು ಹೇಗೆ ಹೋರಾಡಿ ಉಳಿಸಿಕೊಂಡೆವೋ, ಅದೇ ರೀತಿ ನಮ್ಮೂರಿನ ಶಾಲೆಗಳನ್ನೂ ಸಹ ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಂಡೇ ತೀರುತ್ತೇವೆ!" ಎಂದು ಕರೆ ನೀಡಿದರು.
*KPS ಮ್ಯಾಗ್ನೆಟ್ ಯೋಜನೆಯ ವಿರುದ್ಧ ಸಾರ್ವಜನಿಕರ ಆಕ್ರೋಶ!*
"ನಮ್ಮೂರ ಶಾಲೆಯಲ್ಲಿ 80 ಕ್ಕೂ ಹೆಚ್ಚು ಮಕ್ಕಳಿರುವಾಗ, ನಿಮಗೆ ನಾಚಿಕೆಯಾಗಬೇಕು ಇಂಥ ಶಾಲೆಯನ್ನು ಪಾದರಹಳ್ಳಿಗೆ ವಿಲೀನ ಮಾಡಲು. ನಾವು ಕೂಲಿಗೆ ಹೋಗುವವರು, ನಮ್ಮ ಮಕ್ಕಳನ್ನು ಬೆಳಗ್ಗೆ ಬಂದು ಬಸ್ ಗೆ ಹತ್ತಿಸಿ ಸಂಜೆ ಇಳಿಸಿಕೊಳ್ಳುವವರು ಯಾರು? ಬಸ್ ನಲ್ಲಿ ಹೋಗುವ ಮಕ್ಕಳು ಸುರಕ್ಷಿತವಾಗಿ ವಾಪಸ್ ಬರುತ್ತಾರೆಂದು ಜವಾಬ್ದಾರಿ ತೆಗೆದುಕೊಳ್ಳುವವರು ಯಾರು? ಎಲ್ಲಾ ಸೌಕರ್ಯಗಳನ್ನು ನಮ್ಮೂರ ಶಾಲೆಗಳಿಗೆ ಕೊಡಬೇಕೆಂದು ನಮ್ಮ ಆಗ್ರಹ!"
- ರಾಜು, ಕೆಂಪೇಗೌಡನ ದೊಡ್ಡಿ
"ಕೆಪಿಎಸ್ ಮ್ಯಾಗ್ನೆಟ್ ಯೋಜನೆಯು ಇಡೀ ಕರ್ನಾಟಕ ರಾಜ್ಯದಲ್ಲಿ ಜಾರಿಗೊಳ್ಳುತಿದೆ ಎಂದು ಎಷ್ಟು ಸುಲಭವಾಗಿ EO ಮೇಡಂ ಹೇಳುತ್ತಾರೆ, ಆದರೆ ನಮ್ಮೂರ ಶಾಲೆಗಳನ್ನು ಏಕೆ ಮುಚ್ಚಬೇಕು. ಊರಾಚೆ ಇರುವ ಮ್ಯಾಗ್ನೆಟ್ ಶಾಲೆಗೆ ಸೌಲಭ್ಯಗಳನ್ನು ಒದಗಿಸುವ ಬದಲು, ಎಲ್ಲಾ ಸೌಲಭಗಳನ್ನು ನಮ್ಮೂರ ಶಾಲೆಗೆ ಕೊಡಿ. ನಮ್ಮೂರ ಶಾಲೆ ನಮ್ಮೂರಲ್ಲಿಯೇ ಉಳಿಯಬೇಕು!"
- ತಿಮ್ಮೇಗೌಡನದೊಡ್ಡಿಯ ಹೋರಾಟ ನಿರತ ತಾಯಿ!
"ನಾವ್ಯಾರು ಕೂಡ KPS ಮ್ಯಾಗ್ನೆಟ್ ಯೋಜನೆಗೆ ಒಪ್ಪಿಗೆ ಸೂಚಿಸುವುದಿಲ್ಲ. ಕನಿಷ್ಠ 1ರಿಂದ 5ರ ವರೆಗೆ ನಮ್ಮೂರಲ್ಲಿ ನಮ್ಮಕ್ಕಳು ಓದಬೇಕು ಎಂಬ ಪರಿಜ್ಞಾನವೂ ಇಲ್ಲ ನಮ್ಮ ಸರ್ಕಾರಕ್ಕೆ. ಈಗಾಗಲೇ ಸರಕಾರಿ ಶಾಲೆಗಳಲ್ಲಿ ಕೊರತೆಗಳಿದ್ದು, ಅವುಗಳನ್ನು ನೀಗಿಸದೆ ಶಾಲೆಗಳನ್ನೇ ಮುಚ್ಚುತ್ತೇವೆ ಎಂದರೆ ಅದು ಒಪ್ಪಲು ಸಾಧ್ಯವೇ ಇಲ್ಲ. ರಾಷ್ಟ್ರೀಯ ಹಬ್ಬಗಳನ್ನು ನಮ್ಮೂರ ಶಾಲೆಗಳಲ್ಲಿ ನಾವು ಕೈಯಾರೆ ಆಚರಿಸಿದ್ದೇವೆ, ಸರ್ಕಾರವಲ್ಲ. ನಮ್ಮೂರ ಶಾಲೆಗಳು ನಮ್ಮೂರಲ್ಲೇ ಇರಬೇಕು. ನಮ್ಮ ಮಕ್ಕಳ ಒಂದು ವರ್ಷದ ಶಿಕ್ಷಣವೂ ವ್ಯರ್ಥವಾದರೂ ಪರವಾಗಿಲ್ಲ, ಮೋಸದ ಮ್ಯಾಗ್ನೆಟ್ ಶಾಲೆಗಳಿಗೆ ನಮ್ಮ ಮಕ್ಕಳನ್ನು ದಾಖಲಿಸುವುದು ನಮಗೆ ಒಪ್ಪಿಗೆ ಇಲ್ಲ!"
- ಮಂಜು, ಕೋಟಹಳ್ಳಿ
ಎರಡು ಗಂಟೆಗಳ ಕಾಲ ಕಾದ ನಂತರವೂ ಡಿಡಿಪಿಐ ಬರದ ಕಾರಣ ಊರಿನ ಗ್ರಾಮಸ್ಥರು ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿದರು. ಕಚೇರಿ ಆವರಣದಲ್ಲೇ ಘೋಷಣೆಗಳನ್ನು ಕೂಗಿದ ನಂತರ ಬಂದ ಡಿಡಿಪಿಐ ಸ್ವಾಮಿಯವರಿಗೆ ಎಲ್ಲಾ ಹಳ್ಳಿಗಳ ಮನವಿ ಪತ್ರವನ್ನು ಕೊಡುತ್ತಾ ಆ ಊರಿನಲ್ಲಿ ಶಾಲೆ ಏಕೆ ಉಳಿಯಬೇಕೆಂಬುದನ್ನು ಭಾವುಕರಾಗಿ ಪೋಷಕರು ತಮ್ಮ ಅಹವಾಲನ್ನು ತೋಡಿಕೊಂಡರು.
"ಯಾವುದೇ ಕಾರಣಕ್ಕೂ ಅಧಿಕಾರಗಳ ಮೂಲಕ, ಒಪ್ಪಿಗೆ ಪಾತ್ರಗಳನ್ನು ಸಹಿ ಮಾಡಿಸಿಕೊಳ್ಳುವುದು, ಬಸ್ ಕಳಿಸುತ್ತೇವೆ, ಯೋಗ - ಡ್ಯಾನ್ಸ್ ಕಲಿಸುತ್ತೇವೆ ಎಂದು ಪ್ರಚಾರ ಮಾಡಿ ಮಕ್ಕಳನ್ನು ಮ್ಯಾಗ್ನೆಟ್ ಶಾಲೆಗೆ ದಾಖಲಿಸುವುದಾಗಿ ಶಿಕ್ಷಕರ ಮೇಲೆ ಒತ್ತಡ ಹೇರುವುದು, ಅಲ್ಲಿರುವಂತಹ ಶಿಕ್ಷಕರನ್ನು ಮ್ಯಾಗ್ನೆಟ್ ಶಾಲೆಗೆ ವರ್ಗಾಯಿಸುತ್ತೇವೆ ಎಂದು ಬೆದರಿಸುವುದನ್ನು ಮಾಡಬಾರದು" - ಅಪೂರ್ವ, AIDSO ರಾಜ್ಯ ಉಪಾಧ್ಯಕ್ಷೆ
ಕೊನೆಯದಾಗಿ, ಪಾದರಹಳ್ಳಿ, ಅವ್ವೇರಹಳ್ಳಿ ಮತ್ತು ಜಾಲಮಂಗಲ ಮ್ಯಾಗ್ನೆಟ್ ವ್ಯಾಪ್ತಿಗಳಲ್ಲಿ ಬರುವಂತಹ ಹಳ್ಳಿಗಳ ಮನವಿ ಪತ್ರಗಳನ್ನು DDPI ಸ್ವಾಮಿ ರವರಿಗೆ ಸಲ್ಲಿಸಲಾಯಿತು. ಸಾರ್ವಜನಿಕರ ಕೂಗಿಗೆ ಮನ್ನಣೆ ನೀಡಿ"ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ, ಯಾವ ಶಿಕ್ಷಕರನ್ನು ವರ್ಗಾಯಿಸುವುದಿಲ್ಲ ಹಾಗೂ ಯಾವ ಪೋಷಕರನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸೇರಿಸಲು ತಮ್ಮ ಮಕ್ಕಳನ್ನು ಒತ್ತಾಯಿಸುವುದಿಲ್ಲ" ಎಂದು ನೆರೆದಿದ್ದ 20ಕ್ಕೂ ಹೆಚ್ಚಿನ ಗ್ರಾಮಗಳ 200ಕ್ಕೂ ಹೆಚ್ಚು ಗ್ರಾಮಸ್ಥರ, ಪೋಷಕರ ಮುಂದೆ DDPI ರವರು ಮಾತು ಕೊಟ್ಟರು.
AIDSO ರಾಜ್ಯಾಧ್ಯಕ್ಷರಾದ ಅಶ್ವಿನಿ ಕೆಎಸ್, ಕಾರ್ಯದರ್ಶಿಗಳಾದ ಅಜಯ್ ಕಾಮತ್, ಖಜಾಂಚಿಗಳಾದ ಸುಭಾಷ್ ಬೆಟ್ಟದಕೊಪ್ಪ, ರಾಜ್ಯ ಸೆಕ್ರೆಟರಿಯಟ್ ಸದಸ್ಯರಾದ ಕಲ್ಯಾಣ್ ಕುಮಾರ್ ಹಾಗೂ ಇನ್ನಿತರ ಕಾರ್ಯಕರ್ತರು, ಬೆಂಗಳೂರು ದಕ್ಷಿಣ ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ್, SDMC ನಾಯಕರುಗಳಾದ ಶಂಭು ಗೌಡ ಮತ್ತು ಉಮೇಶ್ ಉಪಸ್ಥಿತರಿದ್ದರು.
ಹಳ್ಳಿ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ಪರವಾಗಿ, ಕೆಂಪೇಗೌಡನದೊಡ್ಡಿಯಿಂದ ರಾಜು, ಸಂತೋಷ್, ನಂದೀಶ್, ಶಂಕರ್, ಆಶಾ, ರಂಜಿತಾ, ತಿಮ್ಮೇಗೌಡನದೊಡ್ಡಿಯಿಂದ ಮಾದೇಶಯ್ಯಾ, ಚಂದ್ರಶೇಖರ್, ರಂಗನಾಥ್, ಶಿವಕುಮಾರ್, ಶಿಲ್ಪಾ, ಹರೀಸಂದ್ರಯಿಂದ ಮಧು, ಶಿವಕುಮಾರ್, ಶಶಿಕಲಾ, ಸಂಜು, ಮದರ್ ಸಾಬರದೊಡ್ಡಿಯಿಂದ ಕೃಷ್ಣಮೂರ್ತಿ, ಕಿಶನ್ ಗೌಡ, ಕೃಷ್ಣಪ್ಪ, ಲೋಕೇಶ್, ಪಾಲಭೋವಿದೊಡ್ಡಿಯಿಂದ ಅದಿಶಾ, ಕೆ.ಜಿ ಹೊಸಹಳ್ಳಿಯಿಂದ ಭೀಮಾ ಹೆಚ್ ಎಸ್, ವೆಂಕಟಾಚಲ, ಗೌರಮ್ಮ, ಕೆಂಪಮ್ಮ, ಮುತ್ತುರಾಜ, ನೆಲೆಮಲೆಯಿಂದ ರಾಜಣ್ಣ, ಬಸವರಾಜಪ್ಪ, ಕೃಷ್ಣ, ದಿವ್ಯ, ತನುಜಾ, ಮಟಕಯ್ಯನದೊಡ್ಡಿಯಿಂದ ಆನಂದಯ್ಯ, ಶುವಕುಮಾರ್ ಎಂ ಎನ್, ಶಿವಕುಮಾರ್ ಎಂ ಎ, ರಂಗಸ್ವಾಮಯ್ಯ, ಮುತ್ತುರಾಜು, ರತ್ನಮ್ಮ, ತಿಂಮೇಗೌಡನದೊಡ್ಡಿಯಿಂದ ಮಾದೇಶ್, ರಂಗಸ್ವಾಮಿ, ರಶ್ಮಿ, ಶಿಲ್ಪ, ಜಯಶೀಲ, ಕುಮಾರ್ ಹಾಗೂ ನೂರಾರು ಜನ ಉಪಸ್ಥಿತರಿದ್ದರು.
26/05/2026
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ನಮ್ಮೂರ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ
6 ತಿಂಗಳ ಸತತ ಜನಹೋರಾಟಕ್ಕೆ ಸಂದ ಐತಿಹಾಸಿಕ ಜಯ!!
"ಯಾವುದೇ ಗ್ರಾಮದ ಶಾಲೆಯನ್ನು ಮುಚ್ಚಲ್ಲ! ಯಾವುದೇ ಶಿಕ್ಷಕರನ್ನು ವರ್ಗಾಯಿಸುವುದಿಲ್ಲ! ಯಾವ ಪೋಷಕರಿಗೂ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸೇರಲು ಒತ್ತಾಯಿಸುವುದಿಲ್ಲ!" -ಜಿಲ್ಲೆಯ ಪೋಷಕರು ಹಾಗೂ ಗ್ರಾಮಸ್ಥರ ಎದುರಿಗೆ ರಾಮನಗರದ ಡಿಡಿಪಿಐ ಘೋಷಣೆ!
ಎಐಡಿಎಸ್ಓ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ
ಬೆಂಗಳೂರು ದಕ್ಷಿಣ ಜಿಲ್ಲೆ
ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಧಿಕ್ಕಾರ!
ನಮ್ಮೂರ ಶಾಲೆ ನಮ್ಮ ಹಕ್ಕು!
ಪೋಷಕರ - ಗ್ರಾಮಸ್ಥರ ಕೂಗು !
ಪಾದರಹಳ್ಳಿ, ಅವ್ವೇರಹಳ್ಳಿ, ಜಾಲಮಂಗಲ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳ ಕೊಲ್ಲುವುದನ್ನು ವಿರೋಧಿಸಿ!
ಡಿಡಿಪಿಐ ಕಚೇರಿ, ರಾಮನಗರ
ಪಾದರಹಳ್ಳಿ, ಅವ್ವೇರಹಳ್ಳಿ, ಜಾಲಮಂಗಲ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳ ಕೊಲ್ಲುವುದನ್ನು ವಿರೋಧಿಸಿ!
ಪೋಷಕರ - ಗ್ರಾಮಸ್ಥರ ಬೃಹತ್ ನಿಯೋಗ
ಡಿಡಿಪಿಐ ಕಚೇರಿ, ರಾಮನಗರ
ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಧಿಕ್ಕಾರ!
AIDSO ಕರ್ನಾಟಕ ರಾಜ್ಯ ಸಮಿತಿ
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳು
ಪಾದರಹಳ್ಳಿ, ಅವ್ವೇರಹಳ್ಳಿ, ಜಾಲಮಂಗಲ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳ ಕೊಲ್ಲುವುದನ್ನು ವಿರೋಧಿಸಿ!
ಪೋಷಕರ - ಗ್ರಾಮಸ್ಥರ ಬೃಹತ್ ನಿಯೋಗ
ಡಿಡಿಪಿಐ ಕಚೇರಿ, ರಾಮನಗರ
26 ಮೇ 2026
ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಧಿಕ್ಕಾರ!
ನಮ್ಮೂರ ಶಾಲೆ ನಮ್ಮ ಹಕ್ಕು!
AIDSO ಕರ್ನಾಟಕ ರಾಜ್ಯ ಸಮಿತಿ
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳು
"ರಕ್ತ ಕೊಡುವೆವು ನಮ್ಮೂರ ಶಾಲೆ ಬಿಡುವುದಿಲ್ಲ" ಎಂದು ಘೋಷಣೆಗಳನ್ನು ಕೂಗುತ್ತಾ ಬಸವೇಶ್ವರ ಸರ್ಕಲ್ ನಿಂದ BEO ಕಚೇರಿಯವರಿಗೆ ಬೃಹತ್ ರ್ಯಾಲಿ ಮಾಡಲಾಯಿತು ಮಾಡಲಾಯಿತು.
ಕೆಪಿಎಸ್ ಮ್ಯಾಗ್ನೆಟ್ ವಿರೋಧಿಸಿ ಅರಸೀಕೆರೆ ತಾಲೂಕು ಮಟ್ಟದ ಬೃಹತ್ ಸಮಾವೇಶ ನಡೆಯಿತು. 300ಕ್ಕೂ ಹೆಚ್ಚು ಜನರು ಭಾಗವಹಿಸಿ ಒಕ್ಕೊರಲಿನಿಂದ ಮ್ಯಾಗ್ನೆಟ್ ಯೋಜನೆಯ ಧಿಕ್ಕರಿಸಿದರು.
25/05/2026
KPS ಮ್ಯಾಗ್ನೆಟ್ ಹೆಸರಿನಲ್ಲಿ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಬಾಣವಾರ, ಕುರವಂಕ, ಡಿ.ಎಂ ಕುರ್ಕೆ, ಜಾವಗಲ್ ಹಾಗೂ ಚಿಂದೇನಹಳ್ಳಿ ಗೇಟ್ ಸೇರಿದಂತೆ 5 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ನಿರ್ಮಿಸಿ, ಸುತ್ತಲಿನ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಇದನ್ನು ವಿರೋಧಿಸಿ AIDSO ವಿದ್ಯಾರ್ಥಿ ಸಂಘಟನೆ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಬಿಇಓ ಕಚೇರಿ ಮುಂಭಾಗ ಪ್ರತಿರೋಧ ಸಮಾವೇಶವನ್ನು ಆಯೋಜಿಸಲಾಗಿತ್ತು. ಅರಸೀಕೆರೆ ಸುತ್ತಲಿನ 25ಕ್ಕೂ ಹೆಚ್ಚು ಹಳ್ಳಿಗಳಿಂದ 300ಕ್ಕೂ ಹೆಚ್ಚು ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸಮಾವೇಶದಲ್ಲಿ ಎಐಡಿಎಸ್ಓ ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದ ಕೊಪ್ಪ ಅವರು ಮಾತನಾಡಿ, "ಅಕ್ಟೋಬರ್ 15 ಹಾಗೂ 30 ಡಿಸೆಂಬರ್ 2025 ರಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ, ಕೇವಲ 6,000 ಶಾಲೆಗಳು ಉಳಿದು 40,000 ಸರ್ಕಾರಿ ಶಾಲೆಗಳು ನಶಿಸುವವು. ಅಂದರೆ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಉಳಿದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ. 6ನೇ ತರಗತಿಯಿಂದ ಮಕ್ಕಳಿಗೆ ಮಣ್ಣಿನ ಹಣತೆ ಮಾಡುವ, ಅಡಿಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು, ಕಾರ್ಮಿಕರನ್ನಾ ಗಿಯೇ ಉಳಿಸುವ ಕುತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣಕ್ಕೆ 8 ಗ್ಯಾರಂಟಿಗಳನ್ನು ನೀಡಿ ದೇಶದಲ್ಲೇ ಮಾದರಿ ಶಾಲಾ ವ್ಯವಸ್ಥೆ ನಿರ್ಮಿಸುತ್ತೇವೆ ಎಂದು ಸರ್ಕಾರವು ಹೇಳುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಂಶವನ್ನು ನಯವಾಗಿ ತಳ್ಳಿ ಹಾಕುತ್ತಾ ಗ್ಯಾರಂಟಿಗಳ ಮುಖವಾಡದಲ್ಲಿ ನಾಡಿನ ಜನತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಮೋಸ ಮಾಡುತ್ತಿದೆ. ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಈ ಮೂಲಕ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರ ತಯಾರಿ ಮಾಡುತ್ತಿದೆ ಎಂದರು."
ಅಖಿಲಾ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ವಿ. ಎನ್ ರಾಜಶೇಖರ್ ಅವರು ಮಾತನಾಡಿ, "'ಈಗಾಗಲೇ ರಾಜ್ಯದಲ್ಲಿ 62 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ, 7,000ಕ್ಕೂ ಹೆಚ್ಚು ಏಕೋಪಾದ್ಯಾಯ ಶಾಲೆಗಳಿವೆ. 23 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಕಟ್ಟಡಗಳು ದುರಸ್ತಿಯಾಗಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರಿ ಶಾಲೆಗಳು ಸೊರಗುವಂತೆ ಮಾಡಿ ಸರ್ಕಾರ ಹಿಂಬಾಗಿಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ."
ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಸರ್ಕಾರಿ ಶಾಲೆ ಉಳಿಸಿ ಎಂದು ಹೋರಾಟ ಮಾಡುವ ದುಸ್ಥಿತಿ ಬಂದಿದೆ. ಕರ್ನಾಟಕ ಯಾವುದೇ ಪಕ್ಷದ ಶಾಸಕರು ಸರ್ಕಾರಿ ಶಾಲೆ ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿಲ್ಲ.ಸದನದಲ್ಲಿ ಒಂದೇ ಒಂದು ಮಗು ಇದ್ದರೂ ಶಾಲೆ ಮುಚ್ಚುವುದಿಲ್ಲವೆಂದು ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಆದರೆ , ಇನ್ನೊಂದೆಡೆ ನೂರಾರು ಮಕ್ಕಳು ಓದುತ್ತಿರುವ ಅರಸಿಕೆರೆ ತಾಲೂಕಿನ 50ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚುವುದಾಗಿ ಸರ್ಕಾರ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ . ಇದು ಅರಸೀಕೆರೆ ತಾಲೂಕಿನ ಜನತೆಗೆ ನಯವಂಚಕ ರಾಜ್ಯ ಸರ್ಕಾರವು ಮಾಡಿದ ದ್ರೋಹವಾಗಿದೆ. ರಾಜ್ಯದಲ್ಲಿ ಒಂದೇ ಒಂದು ಮಗು ಇರುವ ಶಾಲೆಗಳ ಪಟ್ಟಿಯನ್ನು ಸರ್ಕಾರ ನೀಡಲಿ. ತಾಲೂಕಿನ ಕೆಲ ಗ್ರಾಮಗಳಲ್ಲಿ ಮೋಸದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರವು ಗ್ರಾಮಸ್ಥರ ಸಹಿ ಸಂಗ್ರಹಿಸುತ್ತಿದೆ. ಇದು ಅತ್ಯಂತ ಖಂಡನೀಯ.ಜನರು ಜಾಗೃತರಾಗಿದ್ದು, ಸರ್ಕಾರದ ಈ ಜನವಿರೋಧಿ ನೀತಿ ವಿರುದ್ಧ ಒಗ್ಗಟ್ಟಾಗಿ ತೀವ್ರ ಪ್ರತಿರೋಧ ಒಡ್ಡಬೇಕು ಎಂದು ಕರೆಕೊಟ್ಟರು.
ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷರಲ್ಲಿ ಒಬ್ಬರಾದ ಉಗ್ರ ನರಸಿಂಹೇಗೌಡರು ಮಾತನಾಡಿ, "ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಮುಚ್ಚಿ ಜನರನ್ನು ಅಜ್ಞಾನದಲ್ಲಿ ಇಟ್ಟು, ವ್ಯವಸ್ಥಿತವಾಗಿ ಜೀತ ಪದ್ಧತಿಯನ್ನು ತಂದು, ಅಳಿದುಳಿದ ಪ್ರಜಾಪ್ರಭುತ್ವವನ್ನು ನಾಶಮಾಡಲು ಸರ್ಕಾರ ಹೊರಟಿದೆ.ನಾವು ಕಟ್ಟುವ ತೆರಿಗೆಯಿಂದ ಸರ್ಕಾರಿ ಶಾಲೆಗಳನ್ನು ಸರ್ಕಾರ ಬಲಪಡಿಸಲಿ. ಒಂದು ವೇಳೆ ಗ್ರಾಮದ ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ ಶ್ರಮ ಜೀವಿಗಳ ಮಕ್ಕಳಿಗೆ ಶಿಕ್ಷಣ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು."
ಸಮಾವೇಶದಲ್ಲಿ ಬಿಇಓ ಮೋಹನ್ ಕುಮಾರ್ ಅವರಿಗೆ ನಮ್ಮೂರ ಸರ್ಕಾರಿ ಶಾಲೆಗಳನ್ನು ಮುಚ್ಚಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿ ಮನವಿ ಪತ್ರ ಕೊಟ್ಟರು.
ವಿವಿಧ ಹಳ್ಳಿಗಳ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ಮಾತನಾಡಿದರು.
ಸಮಾವೇಶದ ಅಧ್ಯಕ್ಷತೆಯನ್ನು AIDSO ಹಾಸನ ಜಿಲ್ಲಾ ಘಟಕದ ಅಧ್ಯಕ್ಷರಾದ ಚೈತ್ರ ಅವರು ವಹಿಸಿಕೊಂಡಿದ್ದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಸುಷ್ಮಾ, ಉಪಾಧ್ಯಕ್ಷರಾದ ಅಭಿಷೇಕ್ ಮತ್ತು ಅರಸೀಕೆರೆ ತಾಲೂಕಿನ ಹಳ್ಳಿಗಳ ವಿದ್ಯಾರ್ಥಿಗಳು, ಪೋಷಕರು ನೆರೆದಿದ್ದರು.
*ಅರಸೀಕೆರೆ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ*
ಸಲಹೆಗಾರರು
1. ಶಿವಲಿಂಗಪ್ಪ
ಜಿಲ್ಲಾ ರೈತ ಮುಖಂಡರು, ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಸನ ಜಿಲ್ಲೆ
2. ಮಹೇಶ್ ಬಾಣವಾರ
ತಾಲೂಕು ದಲಿತ ಮುಖಂಡರು
ದಲಿತ ಸಂಘರ್ಷ ಸಮಿತಿ ಅರಸೀಕೆರೆ
3. ಕಿರಣ್ ಕುಮಾರ್
ತಾಲೂಕು ಅಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ ಅರಸೀಕೆರೆ
ಅಧ್ಯಕ್ಷರು - ಗಿರೀಶ್ ಲಿಂಗಲಾಪುರ
ಉಪಾಧ್ಯಕ್ಷರು
1. ಸುಬ್ಬಣ್ಣ ಹರಳಕಟ್ಟ
2. ಕಾಟಯ್ಯ ಕೊಂಡವಾಗಿಲು ಗೊಲ್ಲರಹಟ್ಟಿ
3. ದೇವರಾಜು ಚಿಕ್ಕಣ್ಣನ ಕೊಪ್ಪಲು
4. ಮಂಜಣ್ಣ ಮರಟಗೆರೆ
5. ನರಸಿಂಹಮೂರ್ತಿ ಧನಂಜಯಪುರ
6. ಶಶಿಧರ್ ಬಕ್ಕಪ್ಪನಕೊಪ್ಪಲು
7. ಮಹೇಶ್ ಬಂದೂರು
8. ಕೊಟ್ರೇಶ್ ಮಾಡಾಳು
ಕಾರ್ಯದರ್ಶಿ - ಸುಷ್ಮಾ
102 ಮಕ್ಕಳು ಓದುತ್ತಿರುವ ಬಂದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚುತ್ತಿರುವ ರಾಜ್ಯ ಸರ್ಕಾರ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಂದೂರು ಗ್ರಾಮ ಪಂಚಾಯಿತಿ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಸೇರಿ 160ಕ್ಕೂ ಹೆಚ್ಚಿನ ಮಕ್ಕಳು ಇಲ್ಲಿ ಓದುತ್ತಿದ್ದಾರೆ..
ಎಲ್ಲಾ ಶಾಲೆಗಳನ್ನು ಐದು ಕಿಲೋಮೀಟರ್ ದೂರ ಇರುವ ಜಾವಗಲ್ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನ ಮಾಡುತ್ತಿದ್ದಾರೆ.
24/05/2026
ಕರ್ತಾರ್ ಸಿಂಗ್ ಗೊತ್ತೇನು ನಮಗೆ!?
ಪಂಜಾಬಿನ ಸರಬಾ ಗ್ರಾಮದಲ್ಲಿ ಮೇ 24 1896ರಲ್ಲಿ ಜನಿಸಿದ ಕರ್ತಾರ್ 8 ವರ್ಷದ ಬಾಲಕನಿದ್ದಾಗಲೇ ತಂದೆಯನ್ನು ಕಳೆದುಕೊಂಡು ತಾತನ ಆಶ್ರಯದಲ್ಲಿ ಬೆಳೆದವನು. ಅವನು ಮೆಟ್ರಿಕ್ ಶಿಕ್ಷಣ ಮುಗಿಸಿದ್ದು ಕಟಕ್ಕಿನ ರಾವೆನ್ ಷಾ ಕಾಲೇಜಿಯಟ್ ಶಾಲೆಯಲ್ಲಿ. ಕುತೂಹಲದ ಸಂಗತಿ ಎಂದರೆ ನೇತಾಜಿ ಸುಭಾಷರು ಓದಿದ್ದು ಕೂಡ ಇದೇ ಶಾಲೆಯಲ್ಲಿ! ಕರ್ತಾರ್ ಸುಭಾಷರಿಗಿಂತ ಎರಡು ವರ್ಷ ಹಿರಿಯರು. ಈ ಇಬ್ಬರ ಮೇಲು ಕೂಡ ಪ್ರಭಾವ ಬೀರಿದ್ದವರು ಆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ವೇಣಿ ಮಾಧವದಾಸ್! ಎರಡನೇ ವಿಶ್ವ ಯುದ್ಧವು ಭಾರತದ ಸ್ವಾತಂತ್ರ್ಯ ಗಳಿಕೆಯಲ್ಲಿ ಸುವರ್ಣ ಅವಕಾಶವೆಂದು ಅರಿತು ಭಾರತದ ಸ್ವಾತಂತ್ರ್ಯಕ್ಕಾಗಿ ವಿದೇಶಿ ನೆಲದಲ್ಲಿ ನೇತಾಜಿಯವರು ಸೈನ್ಯ ಸಂಘಟಿಸಿ ಭಾರತದ ಮುಕ್ತಿಗಾಗಿ ಶ್ರಮಿಸಿದ್ದರೆ ಕರ್ತಾರ್ ಹಾಗೂ ಅವರ ಸಂಗಡಿಗರು ಮೊದಲನೆಯ ಮಹಾಯುದ್ಧದ ಸಂದರ್ಭವನ್ನು ಬಳಸಿಕೊಂಡು ವಿದೇಶಿ ನೆಲದಲ್ಲಿ, ಅಂದರೆ ಅಮೆರಿಕಾದ ಕ್ಯಾಲಿಫೋರ್ನಿಯದಲ್ಲಿ ಘದರ್ ಪಕ್ಷವನ್ನು ಸ್ಥಾಪಿಸಿ, ಭಾರತಕ್ಕೆ ಬಂದು ಬ್ರಿಟಿಷ್ ಸರ್ಕಾರದ ವಿರುದ್ಧ ಸಶಸ್ತ್ರ ಬಂಡಾಯವನ್ನು ಹೂಡುವ ಪ್ರಯತ್ನ ನಡೆಸಿದ್ದರು ಎಂಬುದು ಇಂದಿಗೆ ಇತಿಹಾಸವಾಗಿದೆ!! ( ಜಪಾನ್ ನೆಲದಲ್ಲಿ ಐಎನ್ಎ ನಾಯಕರಾಗಿದ್ದ ಭಾರತದ ಅಪ್ರತಿಮ ಸಾಹಸಿ, ಕ್ರಾಂತಿಕಾರಿ ರಾಷ್ ಬಿಹಾರಿ ಬೋಸ್ ಈ ಬಂಡಾಯದ ಪ್ರಯತ್ನದಲ್ಲಿ ಭಾಗಿಯಾಗಿದ್ದರು!!)
ಬ್ರಿಟಿಷರ ಅಧೀನದಲ್ಲಿದ ಭಾರತದ ಜನರು ಪರಕೀಯ ನೆಲದಲ್ಲಿ ಅನುಭವಿಸುತ್ತಿದ್ದ ಯಾತನೆ ಅಪಮಾನಗಳನ್ನು ಸಹಿಸಲಾಗದೆ ಅದರ ವಿರುದ್ಧ ಸಿಡಿದು ನಿಂತರು! ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಕರ್ತಾರ್ ಸಿಂಗ್ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಕೆಮಿಸ್ಟ್ರಿ ಅಧ್ಯಯನ ನಡೆಸುತ್ತಿದ್ದರು. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋದ ಕರ್ತಾರ್ ಜನತೆಗೆ ನೆಮ್ಮದಿಯ ಬದುಕನ್ನು ಕಲ್ಪಿಸುವ ಸಲುವಾಗಿ ವ್ಯಾಸಂಗವನ್ನು ತೊರೆದು ಹೋರಾಟದ ಉನ್ನತ ಬದುಕನ್ನು ಆಯ್ದುಕೊಂಡವರು. ಭಾರತದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ 19ರ ಹರೆಯದಲ್ಲೇ 16 ನವೆಂಬರ್ 1915ರಂದು ಗಲ್ಲಿಗೇರಿದ ಕರ್ತಾರ್ ಸಿಂಗ್ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ರತ್ನ ಶಹೀದ್ ಎ ಆಝಮ್ ಭಗತ್ ಸಿಂಗರಿಗೆ ಸ್ಪೂರ್ತಿಯಾದರು!!
ಭಗತ್ ಸಿಂಗ್ ರ ಜೇಬಿನಲ್ಲಿ ಯಾವಾಗಲೂ ಕರ್ತಾರ್ ನ ಭಾವಚಿತ್ರವಿರುತ್ತಿತ್ತು.
ಅತ್ಯಂತ ಸಣ್ಣ ವಯಸ್ಸಿನಲ್ಲೇ ಉನ್ನತ ವ್ಯಕ್ತಿತ್ವವನ್ನು ಗಳಿಸಿಕೊಂಡಿದ್ದ ಕರ್ತಾರ್ ಯಾವಾಗಲೂ ಹೇಳುತ್ತಿದ್ದಿದ್ದು-
" ದೇಶಭಕ್ತಿಯ ಕುರಿತು ಭಾಷಣಗಳನ್ನು ಮಾಡುವುದು ಸುಲಭ ಆದರೆ ನಿಜವಾಗಲೂ ದೇಶದ ಸೇವೆಗೈಯಲು ನಡೆಯುವ ದಾರಿ ಅಪಾರ ಯಾತನೆಗಳಿಂದ ಕೂಡಿರುತ್ತದೆ!!"
ಹಲವು ಮಹಾನ್ ಚೇತನಗಳ ತ್ಯಾಗ ಬಲಿದಾನಗಳ ನಂತರವೂ ಅಸಮಾನತೆ, ಬಡತನ ದಾರಿದ್ರ್ಯದಲ್ಲಿ ಮುಳುಗಿರುವ ಭಾರತವನ್ನು ಮೇಲಕ್ಕೆತ್ತಿ ಜನತೆಯ ಬದುಕಿನಲ್ಲಿ ನೆಮ್ಮದಿಯನ್ನು ನೆಲೆಯಾಗಿಸುವ ಹೋರಾಟದ ಹಾದಿಯಲ್ಲಿ ಕರ್ತಾರ್ ನಮ್ಮೆಲ್ಲರಿಗೆ ಸ್ಪೂರ್ತಿಯಾಗಲಿ!!
Click here to claim your Sponsored Listing.
Location
Contact the school
Website
Address
#31, 3rd Cross, Malleshwaram
Bangalore
560003