AIDSO Karnataka

AIDSO Karnataka Official page of Karnataka state committee of All India Democratic Students' Organisation Official page of Karnataka State Committee of AIDSO

26/08/2026

ಕಾಲೇಜು ಚುನಾವಣೆ ನೆಪದಲ್ಲಿ ಕಾಲೇಜುಗಳಿಂದ ವಿದ್ಯಾರ್ಥಿ ಸಂಘಟನೆಗಳನ್ನು ಹೊರಗಿಡುತ್ತಿರುವ ರಾಜ್ಯ ಸರ್ಕಾರ: AIDSO ತೀವ್ರ ಖಂಡನೆ!!

ಕರ್ನಾಟಕ ರಾಜ್ಯ ಸರ್ಕಾರವು ಪಿಯು ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಆರಂಭಿಸುತ್ತಿದೆ. ಆದರೆ ಚುನಾವಣೆ ನೆಪದಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನೇ ಕ್ಯಾಂಪಸ್ ನಿಂದ ಹೊರಗಿಡಲು ಹೊರಟಿದೆ. ವಿದ್ಯಾರ್ಥಿಗಳು ಸಂಘಟನೆಗಳಲ್ಲಿ ಭಾಗಿಯಾಗದೇ, ಯಾವುದೇ ವೈಚಾರಿಕತೆಯನ್ನು ಅಳವಡಿಸಿಕೊಳ್ಳದಂತೆ ತಡೆಯುವುದೆಂದರೆ, ವಿದ್ಯಾರ್ಥಿಗಳು ಸರ್ಕಾರ ಮಾಡಿದ್ದನ್ನೆಲ್ಲ ಕುರುಡಾಗಿ ಒಪ್ಪಿಕೊಳ್ಳುವಂತೆ ಮಾಡುವುದಾಗಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸುಮ್ಮನೆ ಇರಬೇಕೆಂದರೆ ಎಂತಹ ವಿದ್ಯಾರ್ಥಿಗಳನ್ನು ಸರ್ಕಾರವು ಸೃಷ್ಟಿಸಲು ಹೊರಟಿದೆ?

26/08/2026

ಬಿಹಾರದಲ್ಲಿ ಪರೀಕ್ಷಾ ಅಕ್ರಮ ಹಾಗೂ ನಿರುದ್ಯೋಗ ಸಮಸ್ಯೆಯ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳೊಂದಿಗೆ ನಾವಿದ್ದೇವೆ

ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಸರ್ಕಾರಕ್ಕೆ ಧಿಕ್ಕಾರ!

25/08/2026

KPSC ಕರ್ಮಕಾಂಡ, NEET ಸೇರಿದಂತೆ ವಿವಿಧ ಪರೀಕ್ಷಾ ಅವಾಂತರಗಳನ್ನು ಖಂಡಿಸಿ, NEET ಕೈಬಿಡಿ, NTA ರದ್ದುಗೊಳಿಸಿ, KPSC ಹಗರಣಗಳನ್ನು ತಡೆಗಟ್ಟಲು ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆದ ಪ್ರತಿಭಟನೆ!

23/08/2026

KPSC ಕರ್ಮಕಾಂಡ, NEET ಸೇರಿದಂತೆ ವಿವಿಧ ಪರೀಕ್ಷಾ ಅವಾಂತರಗಳನ್ನು ಖಂಡಿಸಿ, NEET ಕೈಬಿಡಿ, NTA ರದ್ದುಗೊಳಿಸಿ, KPSC ಹಗರಣಗಳನ್ನು ತಡೆಗಟ್ಟಲು ಆಗ್ರಹಿಸಿ ಪ್ರತಿಭಟನೆ

ಶಿಕ್ಷಣ ವ್ಯವಸ್ಥೆಯು ಬದಲಾಗುವ ತನಕ ಹೋರಾಟ ಮುಂದುವರಿಯಲಿ; ಪ್ರೊ. ಎ ಮುರಿಗೆಪ್ಪ, ವಿಶ್ರಾಂತ ಕುಲಪತಿಗಳು, ಹಂಪಿ ವಿಶ್ವವಿದ್ಯಾನಿಲಯ ಹಾಗೂ ಅಧ್ಯಕ್ಷರು ಸಾರ್ವಜನಿಕ ಶಿಕ್ಷಣ ಉಳಿಸಿ ರಾಜ್ಯ ಸಮಿತಿ

ಶಿಕ್ಷಣ ವ್ಯವಸ್ಥೆಯು ಬದಲಾಗುವ ತನಕ ಹೋರಾಟ ಮುಂದುವರಿಯಲಿ; ಪ್ರೊ. ಎ ಮುರಿಗೆಪ್ಪಬೆಂಗಳೂರು: KPSC ಕರ್ಮಕಾಂಡ, NEET ಸೇರಿದಂತೆ ವಿವಿಧ ಪರೀಕ್ಷಾ ಅ...
23/08/2026

ಶಿಕ್ಷಣ ವ್ಯವಸ್ಥೆಯು ಬದಲಾಗುವ ತನಕ ಹೋರಾಟ ಮುಂದುವರಿಯಲಿ; ಪ್ರೊ. ಎ ಮುರಿಗೆಪ್ಪ

ಬೆಂಗಳೂರು: KPSC ಕರ್ಮಕಾಂಡ, NEET ಸೇರಿದಂತೆ ವಿವಿಧ ಪರೀಕ್ಷಾ ಅವಾಂತರಗಳನ್ನು ಖಂಡಿಸಿ, NEET ಕೈಬಿಡಿ, NTA ರದ್ದುಗೊಳಿಸಿ, KPSC ಹಗರಣಗಳನ್ನು ತಡೆಗಟ್ಟಿ ಎಂದು ಆಗ್ರಹಿಸುತ್ತಾ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಇಂದು AIDSO ನೇತೃತ್ವದಲ್ಲಿ ಪ್ರತಿಭಟನೆಯನ್ನು ಸಂಘಟಿಸಲಾಗಿತ್ತು.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಅಧ್ಯಕ್ಷರಾದ ಪ್ರೊ. ಎ. ಮುರಿಗೆಪ್ಪ ಅವರು ಮಾತನಾಡಿ, "ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ಈ ಹೋರಾಟದ ಕೊನೆಯಲ್ಲ, ಇಡೀ ಶಿಕ್ಷಣ ವ್ಯವಸ್ಥೆಯು ಬದಲಾಗುವ ತನಕ ಈ ಹೋರಾಟ ಮುಂದುವರಿಯಬೇಕಿದೆ. ಕೆ. ಪಿ. ಎಸ್. ಸಿ. ಹಗರಣದಲ್ಲಿ ಭಾಗಿಯಾಗಿರುವ ಎಲ್ಲಾ ತಪ್ಪಿತಸ್ಥರಿಗೆ ವಿಳಂಬವಿಲ್ಲದೆ, ಈ ಕೂಡಲೇ ನಿದರ್ಶನೀಯ ಶಿಕ್ಷೆಯಾಗಬೇಕು. ಎಲ್ಲಿ ಪ್ರತಿಭಟನೆ ಬೆಳೆಯುತ್ತಾ ಹೋಗುತ್ತದೆಯೋ, ಅಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಲೇಬೇಕು" ಎಂದರು.

AIDSO ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿನಯ್ ಚಂದ್ರ ಮಾತನಾಡುತ್ತಾ, ಭ್ರಷ್ಟಾಚಾರದ ಕೂಪವಾಗಿರುವ ಕರ್ನಾಟಕದ ಕೆಪಿಎಸ್ ಸಿ ಯಲ್ಲಿ ಇತ್ತೀಚೆಗಷ್ಟೇ ಹೊಸ ಹಗರಣ ನಡೆದಿದೆ. ಪಶುವೈದ್ಯಕೀಯ ಇಲಾಖೆಯ ನೇಮಕಾತಿಯಲ್ಲಿ ಅಕ್ರಮಗಳು ನಡೆದಿದೆ. ಅಭ್ಯರ್ಥಿಗಳಿಂದ ಒಂದು ಹುದ್ದೆಗೆ 70-80 ಲಕ್ಷ ರೂ. ತೆಗೆದುಕೊಳ್ಳಲಾಗಿದೆ. ಕಳೆದ 10 ವರ್ಷಗಳಲ್ಲಿ ಎಲ್ಲಾ ನೇಮಕಾತಿ ಇದೇ ರೀತಿಯಲ್ಲಿಯೇ ನಡೆಯುತ್ತಿರುವುದು ದುರಂತವೇ ಸರಿ. ಹಾಗಾಗಿ ಸರ್ಕಾರ ಕೂಡಲೇ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಬೇಕು. ಅಪರಾಧಿಗಳಿಗೆ ಶಿಕ್ಷೆ ವಿಧಿಸಿ, ಅರ್ಹ ಅಭ್ಯರ್ಥಿಗಳು ಆಯ್ಕೆ ಆಗುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
ಸರ್ಕಾರಗಳು ತಾವೇ ನಡೆಸಬೇಕಾದ ಪರೀಕ್ಷೆಗಳನ್ನು NTA ನಂತಹ ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿವೆ. ಖಾಸಗಿ ಸಂಸ್ಥೆಗಳ ಲಾಭಕ್ಕಾಗಿಯೇ ಇಂತಹ ವ್ಯವಸ್ಥೆಯನ್ನು ತರಲಾಗಿದೆ. ಕೇಂದ್ರದ ಬಿಜೆಪಿ ವಿರುದ್ಧ ಮಾತನಾಡುವ ಕಾಂಗ್ರೆಸ್ ಸರ್ಕಾರದಲ್ಲಿ ಈ ಹಗರಣ ನಡೆದಿದೆ. ಕಾಂಗ್ರೆಸ್-ಬಿಜೆಪಿ ಸೇರಿದಂತೆ ಇತರ ಎಲ್ಲ ಪಕ್ಷಗಳು ಕೂಡ ಈ ಭ್ರಷ್ಟಾಚಾರವನ್ನು ಪೋಷಿಸುತ್ತ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಳಿಂದ ಏನು ಸಾಧಿಸಲು ಸಾಧ್ಯ? ಎಂಬ ಪ್ರಶ್ನೆಗೆ ದೇಶದ ವಿದ್ಯಾರ್ಥಿ ಹಾಗೂ ಯುವಜನರ ಒಗ್ಗಟ್ಟಿನ ಹೋರಾಟವೇ ತಕ್ಕ ಉತ್ತರ ನೀಡಿದೆ. ಜನರ ಒಗ್ಗಟ್ಟಿನ ಮುಂದೆ ಯಾವುದೇ ಸರ್ಕಾರವಾದರೂ ತಲೆಬಾಗಿಸಲೇಬೇಕು ಎಂಬುದನ್ನು ವಿದ್ಯಾರ್ಥಿ ಚಳುವಳಿ ನಿರೂಪಿಸಿದೆ. KPSC ಅಕ್ರಮಗಳಲ್ಲಿ ಭಾಗಿಯಾದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸುತ್ತಾ, ಈ ಹೋರಾಟವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟೋಣ!" ಎಂದು ಕರೆ ನೀಡಿದರು.

ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು AIDSO ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಶಶಿಕಲಾ ಮೇಟಿ ರವರು ವಹಿಸಿದ್ದರು. ಈ ಪ್ರತಿಭಟನೆಯಲ್ಲಿ AIDSO ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್, ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದಕೊಪ್ಪ, ಉಪಾಧ್ಯಕ್ಷರುಗಳಾದ ಅಭಯ ದಿವಾಕರ್, ಚಂದ್ರಕಲಾ ಹಾಗೂ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಅವರು ಸೇರಿದಂತೆ ಹಲವು ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

21/08/2026

ನಮ್ಮೂರ ಶಾಲೆಗಳನ್ನು ರಕ್ಷಿಸಿ, ಬಲಪಡಿಸಿ!

ಅರಸೀಕೆರೆ ತಾಲೂಕಿನ ಬಂದೂರು ಅಂಚೆ ವ್ಯಾಪ್ತಿಯ ಲಿಂಗ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಕರ್ಯಕ್ಕಾಗಿ ಸಹಾಯದ ಮನವಿ

ಸಹಾಯಕ್ಕಾಗಿ ಸಂಪರ್ಕಿಸಿ:

9164220387
8904190147

ಸಾರ್ವಜನಿಕ ಶಿಕ್ಷಣ ಉಳಿಸಿ!


20/08/2026

ಹಾಸನ ಜಿಲ್ಲೆಯ ಅಂಬೇಡ್ಕರ್ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಮೂಲಭೂತ ಸೌಕರ್ಯವನ್ನು ಒತ್ತಾಯಿಸಿ ವಿದ್ಯಾರ್ಥಿಗಳ ಯಶಸ್ವಿ ಪ್ರತಿಭಟನೆ

ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಜಯ!

ಹಾಸನ ಜಿಲ್ಲೆಯ ಅಂಬೇಡ್ಕರ್ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಕಾಟ್, ಬೆಡ್, ಕಿಟಕಿ ಪರದೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಯಶ...
19/08/2026

ಹಾಸನ ಜಿಲ್ಲೆಯ ಅಂಬೇಡ್ಕರ್ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಕಾಟ್, ಬೆಡ್, ಕಿಟಕಿ ಪರದೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಯಶಸ್ವಿ ಹೋರಾಟ.
ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಸಂದ ಜಯ!!

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಅಪೂರ್ವ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸುವಂತೆ ಆಗ್ರಹಿಸಿ, ಎಐಡಿಎಸ್ಓ (AIDSO) ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಯರಿಗೆ ಕಿಟಕಿ ಪರದೆಗಳು, ಸ್ಲಿಪ್ಪರ್ ಸ್ಟ್ಯಾಂಡ್, ಮ್ಯಾಟ್, ಮಸ್ಕ್ಯುಟೊ ಕಾಯಿಲ್, ಬೆಡ್ ಹಾಗೂ ಕಾಟ್‌ಗಳಂತಹ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರಿಯಾದ ಮಲಗುವ ವ್ಯವಸ್ಥೆಯಿಲ್ಲದಿರುವುದರಿಂದ ವಿದ್ಯಾರ್ಥಿನಿಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ವಿದ್ಯಾರ್ಥಿನಿಲಯದಲ್ಲಿ ಸಮರ್ಪಕ ಫ್ಯಾನ್ ವ್ಯವಸ್ಥೆ ಸಹ ಇಲ್ಲ. ಕಿಟಕಿಗಳಿಗೆ ಪರದೆಗಳಾಗಲಿ ಇಲ್ಲದಿರುವುದರಿಂದ ವಿದ್ಯಾರ್ಥಿನಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಿಟಕಿಗಳಿಗೆ ಪರದೆಗಳಿಲ್ಲದ ಕಾರಣ ಬಟ್ಟೆ ಬದಲಾಯಿಸುವ ಸಂದರ್ಭದಲ್ಲಿಯೂ ಬೆಡ್‌ಶೀಟ್‌ಗಳನ್ನು ಬಳಸಬೇಕಾದ ಮುಜುಗರದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿಯ ವೇಳೆ ಸೊಳ್ಳೆಗಳ ಕಾಟ ಹಾಗೂ ಉಸಿರುಗಟ್ಟುವ ವಾತಾವರಣದಿಂದ ವಿದ್ಯಾರ್ಥಿನಿಯರ ಶಿಕ್ಷಣ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತಿದೆ.

ಈ ಸಮಸ್ಯೆಗಳ ಕುರಿತು ವಿದ್ಯಾರ್ಥಿನಿಯರು ಈಗಾಗಲೇ ಹಾಸ್ಟೆಲ್ ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ಕೈಗೊಂಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ವಿದ್ಯಾರ್ಥಿನಿಯರು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗಳ ಹೋರಾಟ ಮತ್ತು ಒತ್ತಡಕ್ಕೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಹಾಗೂ ಉಪ ನಿರ್ದೇಶಕರು ವಿದ್ಯಾರ್ಥಿಗಳ ಮನವಿ ಪತ್ರವನ್ನು ಸ್ವೀಕರಿಸಿ, ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದರು.

ಒಂದು ವಾರದೊಳಗೆ ಕಿಟಕಿ ಪರದೆ, ಸ್ಲಿಪ್ಪರ್ ಸ್ಟ್ಯಾಂಡ್, ಮ್ಯಾಟ್ ಹಾಗೂ ಮಸ್ಕ್ಯುಟೊ ಕಾಯಿಲ್‌ಗಳನ್ನು ವಿದ್ಯಾರ್ಥಿನಿಲಯಕ್ಕೆ ಒದಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಅಲ್ಲದೆ, 110 ಪಿಯು ವಿದ್ಯಾರ್ಥಿಗಳು ಇರುವ ವಿದ್ಯಾರ್ಥಿನಿಲಯಕ್ಕೆ 15 ದಿನಗಳೊಳಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಬೆಡ್ ಒದಗಿಸುವುದಾಗಿ ತಿಳಿಸಲಾಗಿದೆ.

ವಿದ್ಯಾರ್ಥಿಗಳ ಹೋರಾಟ ಮತ್ತು ಒತ್ತಡಕ್ಕೆ ಮಣಿದು ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿರುವುದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ.

ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಖಾತರಿಪಡಿಸಬೇಕು ಹಾಗೂ ಅಧಿಕಾರಿಗಳು ನೀಡಿರುವ ಭರವಸೆಗಳನ್ನು ನಿಗದಿತ ಅವಧಿಯೊಳಗೆ ಈಡೇರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಅಧಿಕಾರಿಗಳು ನೀಡಿರುವ ಭರವಸೆಗಳಂತೆ ಬೇಡಿಕೆಗಳು ನಿಗದಿತ ಅವಧಿಯಲ್ಲಿ ಈಡೇರದಿದ್ದರೆ, ಎಐಡಿಎಸ್ಓ ಹಾಗೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರ ಹೋರಾಟ ಸಮಿತಿ ಹೋರಾಟವನ್ನು ಮುಂದುವರಿಸಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು.

ಈ ಪ್ರತಿಭಟನಾ ಹೋರಾಟದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಚೈತ್ರಾ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಉಪಾಧ್ಯಕ್ಷರಾದ ಅಭಿಷೇಕ್ ಹಾಗೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

19/08/2026

ರಾಯಚೂರಿನ ಸರ್ಕಾರಿ ಬಾಲಕರ ಪಿಯು ಕಾಲೇಜಿನ ಶಿಥಿಲಗೊಂಡ ಎರಡು ಕೊಠಡಿಗಳ ಮೇಲ್ಚಾವಣಿ ಬಿದ್ದಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ!!

ಪ್ರತಿಭಟನೆಯ ನಂತರ ಕಟ್ಟಡದ ದುರಸ್ತಿ ಮತ್ತು ಮರುನಿರ್ಮಾಣ ಕಾರ್ಯ ಆರಂಭವಾಗಿದೆ!!

ಸಾರ್ವಜನಿಕ ಶಿಕ್ಷಣ ಉಳಿಸಿ!!

ಜಾರ್ಖಂಡ್: ಜಂತರ್ ಮಂತರ್ ನಂತರ ವಿದ್ಯಾರ್ಥಿ ಚಳವಳಿಗೆ ಮತ್ತೊಂದು ಬೃಹತ್ ಗೆಲುವು!JPSC, JSSC ಮತ್ತು CGL ನಲ್ಲಿನ ಭ್ರಷ್ಟಾಚಾರದ ವಿರುದ್ಧ ವಿದ್...
18/08/2026

ಜಾರ್ಖಂಡ್: ಜಂತರ್ ಮಂತರ್ ನಂತರ ವಿದ್ಯಾರ್ಥಿ ಚಳವಳಿಗೆ ಮತ್ತೊಂದು ಬೃಹತ್ ಗೆಲುವು!

JPSC, JSSC ಮತ್ತು CGL ನಲ್ಲಿನ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳ ನಿರಂತರ ಚಳುವಳಿಯ ಒತ್ತಡದ ಮೇರೆಗೆ, ಜಾರ್ಖಂಡ್ ರಾಜ್ಯ ಸರ್ಕಾರವು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಿದೆ.

ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಸಂದ ಜಯ!!

ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಬಲಿಷ್ಠವಾದ ವಿದ್ಯಾರ್ಥಿಗಳ ಸಂಘಟಿತ ಹೋರಾಟವನ್ನು ಕಟ್ಟಿ ಬೆಳೆಸೋಣ!!

Address

#31, 3rd Cross, Malleshwaram
Bangalore
560003

Alerts

Be the first to know and let us send you an email when AIDSO Karnataka posts news and promotions. Your email address will not be used for any other purpose, and you can unsubscribe at any time.

Contact The School

Send a message to AIDSO Karnataka:

Shortcuts

Share