17/11/2025
700 ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಪಂಚಾಯತಿಯಲ್ಲಿ ಬರುವ ಸುತ್ತಮುತ್ತಲಿನ ಸರ್ಕಾರಿ ಶಾಲೆ / ಪದವಿ ಪೂರ್ವ ಕಾಲೇಜುಗಳನ್ನು ವಿಲೀನಗೊಳಿಸುವ ಹೆಸರಿನಲ್ಲಿ 5,000 ಕ್ಕೂ ಹೆಚ್ಚು ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜುಗಳನ್ನು ಮುಚ್ಚುತ್ತಿರುವುದನ್ನು ಖಂಡಿಸಿ ಎಸ್.ಎಫ್.ಐ ಜಿಲ್ಲಾ ಸಮಿತಿಯು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
02/02/2025
ಕೇಂದ್ರ ಸರ್ಕಾರದ ಬಜೆಟ್ ಶಿಕ್ಷಣ ಕ್ಷೇತ್ರ ನಿರ್ಲಕ್ಷ, ಪಕ್ಷಪಾತಿ ಬಜೆಟ್.
ಕೇಂದ್ರ ಸರ್ಕಾರವು ಇಂದು ಮಂಡಿಸಿದ ಬಜೆಟ್ ಸಂಪೂರ್ಣವಾಗಿ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷ ಮಾಡಿದೆ ಮತ್ತು ಅನುದಾನ ಹಂಚಿಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿ ಪಕ್ಷಪಾತಿ ಧೋರಣೆಯನ್ನು ತೋರಿದೆ.
ಕಳೆದ ಬಜೆಟ್ ನಲ್ಲಿ ಶಿಕ್ಷಣಕ್ಕೆ ಮೀಸಲಿಟ್ಟಸಟ್ಟು ಇಂದಿನ ಬಜೆಟ್ ನಲ್ಲಿ ಇಟ್ಟಿಲ್ಲ ಮತ್ತೆ ಕಡಿತ ಮಾಡಲಾಗಿದೆ.
2.5% ರಷ್ಟು ಮಾತ್ರವೇ ಶಿಕ್ಷಣ ಕ್ಷೇತ್ರಕ್ಕೆ ಹಣವನ್ನು ಮಿಸಲಿರಿಸುವ ಮೂಲಕ ಸಂಪೂರ್ಣವಾಗಿ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಕೇವಲ ಐಐಟಿ ಮತ್ತು ವೈದ್ಯಕೀಯ ಸೀಟು ಹೆಚ್ಚಿಸುವ ಮೂಲಕ ಶಿಕ್ಷಣ ಒಂದು ವ್ಯಾಪಾರ ಕೇಂದ್ರೀತ ಸರಕು ಎಂಬುದನ್ನು ಈ ಬಜೆಟ್ ಮೂಲಕ ಮತ್ತೆ ಎತ್ತಿ ತೋರಿಸಿದೆ.
ಖಾಸಗಿ ರಂಗಕ್ಕೆ ಉತ್ತೇಜಿಸುವ ಅನೇಕ ತೆರಿಗೆ ವಿನಾಯಿತಿ ಮತ್ತು ಮೈಕ್ರೋ ಫೈನಾನ್ಸ್ ಗಳಿಗೆ ಹೆಚ್ಚಿನ ಒತ್ತು ನೀಡಿ ಕ್ರೆಡಿಟ್ ಕಾರ್ಡ್ಗಳನ್ನು 5 ಲಕ್ಷದವರಿಗೆ ಅವಕಾಶ ನೀಡಿರುವ ಈ ಬಜೆಟ್ ಮತ್ತಷ್ಟು ಆರ್ಥಿಕ ದಿವಾಳಿತನಕ್ಕೆ ದೇಶದ ಜನಸಾಮಾನ್ಯರನ್ನು ತಳ್ಳುವ ಕೆಲಸ ಮಾಡಿದೆ.
ಶಿಕ್ಷಣವನ್ನು ಸಂಪೂರ್ಣವಾಗಿ ಕೇಂದ್ರೀಕರಿಸುವ ನಿಟ್ಟಿನಲ್ಲಿ ಯುಜಿಸಿಯ ಕತ್ತು ಹಿಚಕುವ ಕೆಲಸವನ್ನು ಮಾಡಲು ಹೋರಟಿರುವ NEP-2020 ಜಾರಿಯ ಕುರಿತು ಬಜೆಟ್ ಚಕಾರೆತ್ತಿಲ್ಲಾ ಯಾಕೆಂದರೆ ದೇಶದಲ್ಲಿ ಒಂದು ಶಿಕ್ಷಣ ನೀತಿಯೇ ಇರಬಾರದು ಎಂದು ಕೇಂದ್ರದಲ್ಲಿ ಆಡಳಿತ ಮಾಡುವ ಪಕ್ಷದವರು ಬಯಸುತ್ತಾರೆ. ಹಾಗಾಗಿಯೇ ಈ ದಿವಾಳಿತನಕ್ಕೆ ದಾರಿ ತೋರುವಂತೆ NEP ಜಾರಿ ಒಂದು ಕಡೆ ಹೇಳಿ ಇನೊಂದು ಕಡೆ ಅದಕ್ಕೆ ಅನುದಾನವೇ ನೀಡದೆ. ಯುಜಿಸಿಯನ್ನು ನಾಶ ಮಾಡುವ ಕೆಲಸವನ್ನು ಈ ರೀತಿಯಲ್ಲಿ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸಿ ಆರ್ ಎಸ್ ಎಸ್ ನ ಅಜೆಂಡಾವನ್ನು ಜಾರಿ ಮಾಡಲು ಹೋರಟಿದೆ.
ಮೂರನೇ ಅವಧಿಗೆ ಮೋದಿಯವರು ಅಧಿಕಾರಿದಲ್ಲಿ ಇರಲು ಸಹಕಾರಿಯಾದ ಬಿಹಾರ ರಾಜ್ಯದ ನಿತೀಶ್ ಕುಮಾರ್ ಅವರಿಗೆ ಬಜೆಟ್ ನಲ್ಲಿ ಬಂಫರ್ ಕೊಡುಗೆ ನೀಡಿ ಅತಿ ಹೆಚ್ಚು ತೆರಿಗೆ ನೀಡುವ ಕರ್ನಾಟಕದಂತಹ ರಾಜ್ಯಗಳಿಗೆ ಅನ್ಯಾಯ ಮಾಡಿದೆ ಹಾಗಾಗಿ ಕೇಂದ್ರ ಸರ್ಕಾರದ ಬಜೆಟ್ ಸಂಪೂರ್ಣ ಪಕ್ಷಪಾತಿ ಬಜೆಟ್ ಆಗಿದೆ.
ಭಾರತ ವಿದ್ಯಾರ್ಥಿ ಫೆಡರೇಷನ್
ಕೊಪ್ಪಳ ಜಿಲ್ಲಾ ಸಮಿತಿ
02/10/2024
ಗಂಗಾವತಿಯ ಅಲ್ಪಾ ಸಂಖ್ಯಾತರ ಕಾಲೇಜ್ ಎಸ್ಎಫ್ಐ ಹಾಸ್ಟೆಲ್ ಘಟಕದಲ್ಲಿ ಮಹಾತ್ಮ ಗಾಂಧೀಜಿ ಯವರ ಜಯಂತಿ ಆಚರಿಸಲಾಯಿತು.
Sfi Gangavathi