ಭಾರತ ಸರ್ಕಾರದ ಅಭಿನಂದನೆ ಪಾತ್ರವಾದ ಕನ್ನಡ ಪಾಠ ಶಾಲೆ ದುಬೈ.
ಯು.ಎ.ಇ ಪ್ರವಾಸದಲ್ಲಿದ್ದ ಶ್ರೀ ಪ್ರಹ್ಲಾದ್ ಜೋಶಿ -ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರು ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ದುಬೈನಲ್ಲಿ ದಿನಾಂಕ 13ನೇ ಜನವರಿ 2026 ರಂದು ಐಪಿಎಫ಼್ ಮತ್ತು ಭಾರತದ ಕಾನ್ಸುಲೇಟ್ ಜನರಲ್ ದುಬೈ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಪಾಠ ಶಾಲೆ ದುಬೈನ ಮತೃಭಾಷಾ ಸೇವೆಯನ್ನು ಅಭಿನಂದಿಸಿದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ರವರು ತಮ್ಮ “ ಮನದ ಮಾತು” ಕಾರ್ಯಕ್ರಮದಲ್ಲಿ ದುಬೈ ಕನ್ನಡ ಪಾಠ ಶಾಲೆಯು ಮಾತೃಭಾಷಾ ಪೋಷಣೆ ಗೆ ಒಂದು ಜಾಗತಿಕ ಮಾದರಿ ಎಂದು ಪ್ರಶಂಸಿದ್ದ ಹಿನ್ನೆಲೆಯಲ್ಲಿ ಶ್ರೀ ಪ್ರಹ್ಲಾದ್ ಜೋಶಿಯವರು ಭಾರತ ಸರ್ಕಾರದ ಪರವಾಗಿ ಕನ್ನಡ ಪಾಠ ಶಾಲೆಯ ಸ್ಥಾಪಕ ಅಧ್ಯಕ್ಷ ಶ್ರೀ ಶಶಿಧರ್ ನಾಗರಾಜಪ್ಪ ರವರನ್ನು ಸನ್ಮಾನಿಸಿ ಕಾರ್ಯಕಾರಿ ಸಮಿತಿಯನ್ನು , ಶಿಕ್ಷಕಿಯರು ಮತ್ತು ಸ್ವಯಂಸೇವಕರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಪುರಸ್ಕಾರದ ಅಭಿನಂದನೆ ಸ್ವೀಕರಿಸಿದ ಶಾಲೆಯ ಸಂಚಾಲಕಿ ಮತ್ತು ಮುಖ್ಯ ಶಿಕ್ಷಕಿ ರೂಪ ಹೆಚ್ ಜಿ, ಉಪಾಧ್ಯಕ್ಷ ಸಿದ್ದಲಿಂಗೇಶ್ , ಕಾರ್ಯದರ್ಶಿ ಸುನೀಲ್ ಕವಾಸ್ಕರ್, ಜಂಟಿ ಕಾರ್ಯದರ್ಶಿ ಶಶಿಧರ್ ಮುಂಡರಗಿ, ಖಜಾಂಚಿ ನಾರರಾಜ್ ರಾವ್, ಗೌರವ ಪೋಷಕರಾದ ಪ್ರವೀಣ್ ಶೆಟ್ಟಿ, ಮೋಹನ್ ನರಸಿಂಹಸಮೂರ್ತಿ, ಸಲಹೆಗಾರ ಮೊಹಮ್ಮದ್ ಇಬ್ರಾಹಿಂ ಮೊಳೂರು ಸಂತಸದ ಕೃತಜ್ಞತೆ ವ್ಯಕ್ತಪಡಿಸಿದರು
Kannada Mitraru - UAE
"ಮಾತೃಭಾಷಾ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ?
31/12/2025
NRIs thrilled as PM recognises Kannada teaching effort in Dubai | Mangaluru News - The Times of India Mangaluru: NRI Kannadigas associated with Kannada Patha Shaale Dubai by Kannada Mitraru UAE were elated when Prime Minister Narendra Modi, in his rece.
ಯುಎಇ ಹಾಗೂ ಗಲ್ಫ್ ಪ್ರದೇಶದಲ್ಲಿರುವ ಅನಿವಾಸಿ ಭಾರತೀಯರಿಗೆ ಕನ್ನಡ ಭಾಷೆಯನ್ನು ಪೋಷಿಸಿ, ಪ್ರಚಾರ ಮಾಡುವಲ್ಲಿ ಕನ್ನಡ ಪಾಠಶಾಲೆ ದುಬೈ ಸಲ್ಲಿಸಿರುವ ನಿಸ್ವಾರ್ಥ ಸೇವೆಯನ್ನು ಮಾನ್ಯ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರು ಮೆಚ್ಚಿ, ಅಭಿನಂದಿಸಿರುವುದು ನಮ್ಮೆಲ್ಲರಿಗೂ ಅಪಾರ ಗೌರವ ಮತ್ತು ಹೆಮ್ಮೆಯ ಕ್ಷಣವಾಗಿದೆ.
ಈ ಗೌರವವು ಕನ್ನಡ ಪಾಠಶಾಲೆ ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಅತ್ಯಂತ ಭಾವನಾತ್ಮಕ ಹಾಗೂ ಗರ್ವಭರಿತ ಕ್ಷಣ. ಕಳೆದ 12 ವರ್ಷಗಳಿಂದ ಯಾವುದೇ ಸ್ವಾರ್ಥವಿಲ್ಲದೆ, ತ್ಯಾಗ, ಶ್ರದ್ಧೆ ಮತ್ತು ನಿಷ್ಠೆಯಿಂದ ಕನ್ನಡ ಭಾಷೆ, ಸಂಸ್ಕೃತಿ ಮತ್ತು ನಮ್ಮ ಗುರುತನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿರುವ ನಮ್ಮ ಶಿಕ್ಷಕರು ಮತ್ತು ಸ್ವಯಂಸೇವಕರಿಗೆ ಸಲ್ಲುವ ಗೌರವವೇ ಇದು.
ಈ ಸಾಧನೆ ಕೇವಲ ಸಂಸ್ಥೆಯದ್ದಲ್ಲ; ಇದು ಪ್ರತಿ ಶಿಕ್ಷಕ, ಸ್ವಯಂಸೇವಕ, ಪೋಷಕರು ಹಾಗೂ ಹಿತೈಷಿಗಳ ನಂಬಿಕೆ ಮತ್ತು ಸಹಕಾರದ ಫಲ. ನಿಮ್ಮ ಸಮರ್ಪಣೆಯಿಂದಲೇ ಮುಂದಿನ ತಲೆಮಾರಿಗೆ ಕನ್ನಡದ ಜೀವಂತ ಪರಂಪರೆ ತಲುಪುತ್ತಿದೆ.
ಹೃತ್ಪೂರ್ವಕ ಕೃತಜ್ಞತೆಯೊಂದಿಗೆ ನಿಮ್ಮೆಲ್ಲರಿಗೂ ಹಾರ್ದಿಕ ಧನ್ಯವಾದಗಳು.
ವಂದನೆಗಳೊಂದಿಗೆ,
ಶಶಿಧರ್ ನಾಗರಾಜಪ್ಪ
ಅಧ್ಯಕ್ಷರು – ಕನ್ನಡ ಪಾಠಶಾಲೆ ದುಬೈ
Honorable Prime minister of India Shri Narendra Modi ji today in his Man ki Baat appreciated Kannada Patha Shaale Dubai and congratulated our efforts to teach Kannada Language for NRIs in UAE and The gulf region
It’s moment of pride and honor to all those teacher and volunteers who are working for 12 years selflessly
Thank you all
Best Regards - Shashidhar Nagarajappa
President - Kannda Patha Shaale Dubai
26/11/2025
ಕನ್ನಡ ಮಿತ್ರರು ಯು.ಎ.ಇ ಆಯೋಜನೆ ಕನ್ನಡ ಪಾಠ ಶಾಲೆ ದುಬೈ ಪ್ರಾಯೋಜಿತ “ಕಡಲಾಚೆಯಿಂ ಕರುನಾಡಿಗೆ” ಯೋಜನೆಯಾಡಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ನೀಡುವ ಚತುರ ಶಾಲಾ ಸಾಮಗ್ರಿ
ಲ್ಯಾಪ್ ಟಾಪ್ 💻
ಪ್ರೊಜೆಕ್ಟರ್ 📽️
ಯು ಪಿ ಎಸ್ ಗಳನ್ನು ಹಿರಿಯ ಪ್ರಾಥಮಿಕ ಶಾಲೆ ಕೂಡಂಗಿ, ಬಿ ಸಿ ರೋಡ್ ಇಲ್ಲಿ ದೇಣಿಗೆಯಾಗಿ ನೀಡಲಾಯಿತು.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವ ಮಕ್ಕಳನ್ನು ಉತ್ತೇಜಿಸುವ ಈ ಕಾರ್ಯ ೧೦ ವರ್ಷಗಳಿಂದ ನಡೆಸಿತ್ತಿದ್ದೇವೆ.
ಶಾಲೆಯ ಖಜಾಂಚಿ ಶ್ರೀ ನಾಗರಾಜ್ ರಾವ್ ಈ ಶಾಲೆಗೆ ಭೇಟಿ ನೀಡಿ ದೇಣಿಗೆ ಸಮರ್ಪಣೆ ಮಾಡಿದರು.
*ಶಾಲಾ ಶಿಕ್ಷಕ ವೃಂದ ಈ ಕೆಳಗಿನ ಧನ್ಯವಾದ ಸಂದೇಶ ನೀಡಿರುತ್ತಾರೆ.*
ನಮ್ಮ ಶಾಲೆಗೆ ಇಂದು ಕನ್ನಡ ಮಿತ್ರರು ದುಬೈ ಇವರ ಪರವಾಗಿ ಸಂಘಟನೆಯ ಶ್ರೀ ನಾಗರಾಜ್ ರವರು ಲ್ಯಾಪ್ಟಾಪ್ ಪ್ರೊಜೆಕ್ಟರ್ ಹಾಗೂ ಯುಪಿಎಸ್ ಅನ್ನು ನೀಡಿರುತ್ತಾರೆ.
ಕನ್ನಡ ಮಿತ್ರರು ದುಬೈ ಮತ್ತು ಕನ್ನಡ ಪಾಠಶಾಲೆ ದುಬೈ ಇವರಿಗೆ ಶಾಲಾ ಎಸ್ಡಿಎಂಸಿ ಪರವಾಗಿ ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯ ಪರವಾಗಿ ಹಾಗೂ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕ ವೃಂದ ದ ಪರವಾಗಿ ಅನಂತಾನಂತ ಧನ್ಯವಾದಗಳು.
ಕೊಡುವ ಕೈಗಳಿಗೆ ಭಗವಂತ ಮತ್ತಷ್ಟು ಶಕ್ತಿಯನ್ನು ಕರುಣಿಸಲಿ.
🙏🙏🙏🙏🙏
25/11/2025
06/11/2025
ಉಚಿತ ಪ್ರವೇಶಕ್ಕೆ ಇಲ್ಲಿ ನೋಂದಾಯಿಸಿಕೊಳ್ಳಬೇಕು.
https://konfhub.com/ksdrajyotsava2025
ಕರ್ನಾಟಕ ಸಂಘ ದುಬೈ ಆಯೋಜನೆಯ ಶೀರ್ಷಿಕೆ ಪ್ರಾಯೋಜಕರು ಯುಮಿ ವೆಂಚರ್ಸ್ ಮತ್ತು ಸಹ ಪ್ರಾಯೋಜಕರು ಪರ್ವ ಗ್ರೂಪ್ ಪ್ರಸ್ತುತಪಡಿಸುವ
ಕರ್ನಾಟಕ ರಾಜ್ಯೋತ್ಸವ – 2025 ದುಬೈ ಆಚರಣೆ ಮತ್ತು ಗ್ಲೋಬಲ್ ಬಿಸಿನೆಸ್ ಫೋರಮ್ ದುಬೈ ಉದ್ಘಾಟನೆ ಕಾರ್ಯಕ್ರಮಕ್ಕೆ
ಕರ್ನಾಟಕ ಸರ್ಕಾರದ ಮಾಜಿ ಸಚಿವೆ, ಕನ್ನಡ ಚಿತ್ರರಂಗದ ಹಿರಿಯ ನಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷೆ ಡಾ. ಜಯಮಾಲ ಅವರ ಆಗಮನಕ್ಕೆ ನಮ್ಮ ಹೃತ್ಪೂರ್ವಕ ಸ್ವಾಗತ. 🙏
ಸಿನಿಮಾ, ಸಾಹಿತ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ಅಸಾಧಾರಣ ಕೊಡುಗೆ ನೀಡಿರುವ ಡಾ. ಜಯಮಾಲ ಅವರು ಕನ್ನಡ ರಂಗದ ಅಭಿಮಾನ – ಅವರ ಅನುಭವ ಮತ್ತು ನೈಪುಣ್ಯ ನಮ್ಮ ಕಾರ್ಯಕ್ರಮಕ್ಕೆ ಅತ್ಯುನ್ನತ ಗೌರವ ತಂದುಕೊಡುತ್ತದೆ.
📅 ದಿನಾಂಕ : 09-ನವೆಂಬರ್ 2025 (ಭಾನುವಾರ)
🕐 ಸಮಯ : ಬೆಳಿಗ್ಗೆ 11:00 ರಿಂದ ಸಂಜೆ 7:00 ರವರೆಗೆ
📍 ಸ್ಥಳ : ನ್ಯೂ ಡಾನ್ ಪ್ರೈವೇಟ್ ಸ್ಕೂಲ್, ಮೂಹೇಶ್ನ ದುಬೈ
🎟 ಪ್ರವೇಶ : ನೋಂದಣಿಯಿಂದ ಮಾತ್ರ ಉಚಿತ
🍛 ಉಚಿತ ಊಟ : ಮಧ್ಯಾಹ್ನ 1 ರಿಂದ 2 ರವರೆಗೆ
ಸ್ಯಾಂಡಲ್ವುಡ್ ಚಿತ್ರರಂಗದ ತಾರೆಯರು, ರಾಜಕೀಯ ನಾಯಕರು, ಉದ್ಯಮಿಗಳು, ಸಾಹಿತ್ಯ ದಿಗ್ಗಜರು ಮತ್ತು ಸಾಂಸ್ಕೃತಿಕ ಕಲಾವಿದರ ಸಮ್ಮುಖದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಅರ್ಥಪೂರ್ಣ ಆಚರಣೆ.
—
ಶಶಿಧರ್ ನಾಗರಾಜಪ್ಪ ಮತ್ತು ಟೀಮ್ ಕೆಎಸ್ಡಿ
ಅಧ್ಯಕ್ಷರು – ಕರ್ನಾಟಕ ಸಂಘ ದುಬೈ
📞 +971 506251366
#ಡಾ_ಜಯಮಾಲ #ಕರ್ನಾಟಕಸಂಘದುಬೈ #ಯುಮಿವೆಂಚರ್ಸ್ #ಪರ್ವಗ್ರೂಪ್ #ರಾಜ್ಯೋತ್ಸವದುಬೈ #ಕನ್ನಡಹೆಮ್ಮೆ #ಗ್ಲೋಬಲ್ಬಿಸಿನೆಸ್ಫೋರಮ್ #ಸಿನಿಮಾಹೆಮ್ಮೆ
05/11/2025
ಕನ್ನಡ ಮಿತ್ರರು ಯು.ಏ.ಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈ ಕರ್ನಾಟಕ ಸರ್ಕಾರದ ವತಿಯಿಂದ ಆಯೋಜಿಸಿಲಾಗಿರು “ಕೌಶಲ್ಯ ಕರ್ನಾಟಕ” ಶೃಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ.
ಕನ್ನಡ ಪಾಠ ಶಾಲೆಯ ಪ್ರದರ್ಶನ ಚಾವಡಿಗೆ ಭೇಟಿ ಕೊಡಲು ವಿನಂತಿ
ಎಲ್ಲಾ ಪ್ರೋತ್ಸಾಹಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಮಾತೃಭಾಷಾ ಆಂದೋಲನದಲ್ಲಿ ಭಾಗಿಯಾಗಬೇಕಾಗಿ ವಿನಂತಿ
* ದಿನಾಂಕ : ೬ ನವೆಂಬರ್ 2025
* ಸ್ಥಳ : ದಿ ಲಲಿತ್ ಅಶೋಕ್,ಬೆಂಗಳೂರು
* ಸಮಯ : ಬೆಳಗ್ಗೆ 10:30 ರಿಂದ
ಇಂತಿ
ಶಶಿಧರ್ ನಾಗರಾಜಪ್ಪ
ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ
ಶಿಕ್ಷಕರು ಹಾಗೂ ಪೋಷಕರು
26/10/2025
https://v4news.com/kannada-patha-shale-dubai-organized-by-kannada-friends-uae-receives-border-achievement-international-award/
🛑🛑 *ಕನ್ನಡ ಮಿತ್ರರು ಯು.ಎ.ಇ ಆಯೋಜನೆಯ “ಕನ್ನಡ ಪಾಠ ಶಾಲೆ ದುಬೈ” ಗೆ ಗಡಿನಾಡು ಸಾಧಕ ಅಂತಾರಾಷ್ಟ್ರೀಯ ಪುರಸ್ಕಾರ*
⏩ *For more such videos, subscribe to our YouTube channel ►https://bit.ly/2Omfzlb Don't forget to push the Bell 🔔 icon to never miss an update*
🔵 *V4 NEWS* 🔵
⏩ 🔘 *ಕ್ಷಣ ಕ್ಷಣದ ಸುದ್ದಿ, ಮಾಹಿತಿ ಅಪ್ಡೇಟ್ಗಾಗಿ ನಮ್ಮ Whatsapp ಗ್ರೂಪ್ಗೆ ಜಾಯಿನ್ ಆಗಿ ಹಾಗೂ Instagram ಪೇಜನ್ನು ಪಾಲೋ ಮಾಡಿ*
💥*WHATSAPP*►
https://chat.whatsapp.com/I7xEdFgbL9h8EE0n8BDyBO
💥*INSTAGRAM*► https://www.instagram.com/v4news24x7/reels/
02/10/2025
*ಕನ್ನಡ ಮಿತ್ರರು ಯುಎಇ* ಆಯೋಜನೆಯ
ಕನ್ನಡ ಪಾಠಶಾಲೆ ದುಬೈನ 12ನೇ ವರ್ಷದ ಉಚಿತ ಕನ್ನಡ ಕಲಿಕಾ ತರಗತಿಗಳು ಆರಂಭವಾಗಲಿದ್ದು, ಈ ಉಚಿತ ತರಗತಿಗೆ ಮಧ್ಯಪ್ರಾಜ್ಯದ ಎಲ್ಲಾ ಕನ್ನಡಿಗರಿಗೂ ತಮ್ಮ ಮಕ್ಕಳನ್ನು ನೋಂದಾಯಿಸಬೇಕಾಗಿ ಈ ಮೂಲಕ ಕೋರುತ್ತಿದ್ದೇವೆ.
ತರಗತಿಗಳು ನವಂಬರ್ ತಿಂಗಳಿಂದ ಆರಂಭವಾಗಿ ಆರು ತಿಂಗಳ ಕಾಲ ನಡೆಯಲಿದ್ದು, ವಾರ್ಷಿಕ ಪರೀಕ್ಷೆ ಮತ್ತು ವಾರ್ಷಿಕೋತ್ಸವದೊಂದಿಗೆ ಮೇ -2026 ಕ್ಕೆ ಮುಕ್ತಾಯವಾಗಲಿದೆ.
ಕನ್ನಡ ಪಾಠಶಾಲೆ ದುಬೈನ ಉಚಿತ ತರಗತಿಗಳಿಗೆ ನೋಂದಾಯಿಸಲು ನೊಂದಾವಣೆ ಲಿಂಕ್.
https://forms.gle/jLic4PdE6WqYG5i97
ಶಾಲಾ ತರಗತಿಗಳು ಆನ್ಲೈನ್ Zoom ನಲ್ಲಿ ಪ್ರತಿ ಶುಕ್ರವಾರ ಮತ್ತು ಶನಿವಾರ ಹಲವು ಹಂತಗಳಲ್ಲಿ ನಡೆಯಲಿದೆ
ಇಂತಿ
ಶಶಿಧರ್ ನಾಗರಾಜಪ್ಪ -ಅಧ್ಯಕ್ಷರು
ಕನ್ನಡ ಪಾಠಶಾಲೆ ದುಬೈ
ಹಾಗೂ *ಕಾರ್ಯಕಾರಿ ಸಮಿತಿ*
ರೂಪಾ ಶಶಿಧರ್-ಮುಖ್ಯ ಶಿಕ್ಷಕಿ ಮತ್ತು ಸಂಚಾಲಕಿ
ಸಿದ್ದಲಿಂಗೇಶ್ ಬಿ ರೇವಪ್ಪ -ಉಪಾಧ್ಯಕ್ಷರು
ಸುನಿಲ್ ಗವಾಸ್ಕರ್ -ಪ್ರಧಾನ ಕಾರ್ಯದರ್ಶಿಗಳು
ಶಶಿಧರ್ ಮುಂಡರ್ಗಿ-ಸಹಾಯ ಕಾರ್ಯದರ್ಶಿ
ನಾಗರಾಜ್ ರಾವ್ ಉಡುಪಿ - ಖಜಾಂಚಿ
*ಮಾತೃಭಾಷೆ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು*
*ನವ ಪೀಳಿಗೆಗೆ ಕನ್ನಡ ಕಲಿಸಿ ಭಾಷೆ ಬೆಳಸಿ*
01/10/2025
*ಕನ್ನಡ ಮಿತ್ರರು ಯುಎಇ* ಆಯೋಜನೆಯ
ಕನ್ನಡ ಪಾಠಶಾಲೆ ದುಬೈನ 12ನೇ ವರ್ಷದ ಉಚಿತ ಕನ್ನಡ ಕಲಿಕಾ ತರಗತಿಗಳು ಆರಂಭವಾಗಲಿದ್ದು, ಈ ಉಚಿತ ತರಗತಿಗೆ ಮಧ್ಯಪ್ರಾಜ್ಯದ ಎಲ್ಲಾ ಕನ್ನಡಿಗರಿಗೂ ತಮ್ಮ ಮಕ್ಕಳನ್ನು ನೋಂದಾಯಿಸಬೇಕಾಗಿ ಈ ಮೂಲಕ ಕೋರುತ್ತಿದ್ದೇವೆ.
ತರಗತಿಗಳು ನವಂಬರ್ 1 ರಿಂದ ಆರಂಭವಾಗಿ ಆರು ತಿಂಗಳ ಕಾಲ ನಡೆಯಲಿದ್ದು, ವಾರ್ಷಿಕ ಪರೀಕ್ಷೆ ಮತ್ತು ವಾರ್ಷಿಕೋತ್ಸವದೊಂದಿಗೆ ಮೇ -2026 ಕ್ಕೆ ಮುಕ್ತಾಯವಾಗಲಿದೆ.
ಕನ್ನಡ ಪಾಠಶಾಲೆ ದುಬೈನ ಉಚಿತ ತರಗತಿಗಳಿಗೆ ನೋಂದಾಯಿಸಲು ನೊಂದಾವಣೆ ಲಿಂಕ್.
https://forms.gle/jLic4PdE6WqYG5i97
ಶಾಲಾ ತರಗತಿಗಳು ಆನ್ಲೈನ್ Zoom ನಲ್ಲಿ ಪ್ರತಿ ಶುಕ್ರವಾರ ಮತ್ತು ಶನಿವಾರ ಹಲವು ಹಂತಗಳಲ್ಲಿ ನಡೆಯಲಿದೆ
ಇಂತಿ
ಶಶಿಧರ್ ನಾಗರಾಜಪ್ಪ -ಅಧ್ಯಕ್ಷರು
ಕನ್ನಡ ಪಾಠಶಾಲೆ ದುಬೈ
ಹಾಗೂ *ಕಾರ್ಯಕಾರಿ ಸಮಿತಿ*
ರೂಪಾ ಶಶಿಧರ್-ಮುಖ್ಯ ಶಿಕ್ಷಕಿ
ಸಿದ್ದಲಿಂಗೇಶ್ ಬಿ ರೇವಪ್ಪ -ಉಪಾಧ್ಯಕ್ಷರು
ಸುನಿಲ್ ಗವಾಸ್ಕರ್ -ಪ್ರಧಾನ ಕಾರ್ಯದರ್ಶಿಗಳು
ಶಶಿಧರ್ ಮುಂಡರ್ಗಿ-ಸಹಾಯ ಕಾರ್ಯದರ್ಶಿ
ನಾಗರಾಜ್ ರಾವ್ ಉಡುಪಿ - ಖಜಾಂಚಿ
*ಮಾತೃಭಾಷೆ ಸಾಕ್ಷರತೆ ಪ್ರತಿಯೊಬ್ಬ ಕನ್ನಡ ಕಂದನ ಹಕ್ಕು*
*ನವ ಪೀಳಿಗೆಗೆ ಕನ್ನಡ ಕಲಿಸಿ ಭಾಷೆ ಬೆಳಸಿ*
Click here to claim your Sponsored Listing.
Location
Category
Contact the school
Telephone
Website
Address
Dubai