#ಮೈಸೂರು
Raghu Kautilya BJP
ಕನ್ನಡಿಗ; President-Karnataka State BJP OBC Morcha; Ex Chairman- D.Devaraja Urs Backward Class Develop
03/04/2026
03/04/2026
ದಾವಣಗೆರೆಯಲ್ಲಿ ಅತೀ ಹಿಂದುಳಿದ ಸಮುದಾಯಗಳು ಸರಕಾರದಿಂದ ಸಿಗಬೇಕಾದ ಸವಲತ್ತು ಮತ್ತು ಸೌಲಭ್ಯಗಳಿಂದ ವಂಚಿತವಾಗಿವೆ. ಹಿಂದುಳಿದವರಿಗೆ ಸವಲತ್ತುಗಳನ್ನು ನೀಡದೆ ವಂಚಿಸಿದ ಕಾಂಗ್ರೆಸ್ ಸರ್ಕಾರ: ಶ್ರೀ ಆರ್. ರಘು ಕೌಟಿಲ್ಯಾ, ರಾಜ್ಯಾಧ್ಯಕ್ಷರು, ಓಬಿಸಿ ಮೋರ್ಚಾ ಕರ್ನಾಟಕ.
18/02/2026
09/02/2026
ಪ್ರಾಚೀನ ಕಾಲದಿಂದಲೂ ತಮ್ಮ ಕೌಶಲ್ಯತೆಯಿಂದ ಸಮಾಜ ಕಟ್ಟಿದ ಮುಂಚೂಣಿ ಕಾಯಕ ಸಮುದಾಯ ಅಕ್ಕಸಾಲಿಗ ಸಮಾಜ. ದಿಢೀರನೆ ಹುಬ್ಬೇರಿಸುವಂತೆ ಬೆಲೆಯೇರಿಕೆಯ ಉತ್ತುಂಗಕ್ಕೇರಿದ ಚಿನ್ನ-ಬೆಳ್ಳಿ ಇಂದು ಸಾಮಾನ್ಯ ಜನರ ಪಾಲಿಗೆ ಮರೀಚಿಕೆಯಾಗಿದೆ. ಇದರ ಪರಿಣಾಮದ ಬಿಸಿ ಶ್ರಮಿಕ ಅಕ್ಕಸಾಲಿಗ ಸಮುದಾಯವನ್ನು ಬಾಧಿಸುತ್ತಿದೆ. ಚಿನ್ನ-ಬೆಳ್ಳಿ ಕೆಲಸವನ್ನೇ ಕಾಯಕ ಮಾಡಿಕೊಂಡಿದ್ದ ಲಕ್ಷಾಂತರ ಕುಟುಂಬಗಳು ಚಿನ್ನ-ಬೆಳ್ಳಿಯ ಬೆಲೆ ಹೇರಿಕೆಯ ತತ್ತರದ ನಡವೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ. ಚಿನ್ನ-ಬೆಳ್ಳಿ ಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಈ ಸಮುದಾಯ ಕೆಲಸವಿಲ್ಲದೇ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಈ ಸಮುದಾಯದ ನೆರವಿಗೆ ಬಂದು, ದಿನದ ಆದಾಯವನ್ನೇ ನಂಬಿ ಬದುಕುತ್ತಿದ್ದ ಇವರಿಗೆ ಪರಿಹಾರ ಹಾಗೂ ತಮ್ಮ ಕೌಶಲ್ಯತೆ ಮುಂದುವರೆಸಲು ಪರ್ಯಾಯ ಮಾರ್ಗವನ್ನು ರೂಪಿಸುವಂತೆ ಒತ್ತಾಯಿಸುವೆ. ಕೊರೋನಾ ಸಂಕಷ್ಟ ಕಾಲದಲ್ಲಿ ಮಡಿವಾಳ, ಕ್ಷೌರಿಕ ಸಮುದಾಯಗಳೂ ಸೇರಿದಂತೆ ಶ್ರಮಿಕ ವರ್ಗಗಳ ತುರ್ತು ನೆರವಿಗೆ ಧಾವಿಸಿ ಆರ್ಥಿಕ ನೆರವು ನೀಡಿದ ಅಂದಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ಮಾನವೀಯ ಮೌಲ್ಯದ ನಿರ್ಧಾರ ಕಾಂಗ್ರೆಸ್ ಸರ್ಕಾರಕ್ಕೆ ಮಾದರಿಯಾಗಲಿ: ಶ್ರೀ ಆರ್. ರಘು ಕೌಟಿಲ್ಯಾ, ರಾಜ್ಯಾಧ್ಯಕ್ಷರು, ಬಿಜೆಪಿ ಓಬಿಸಿ ಮೋರ್ಚಾ ಕರ್ನಾಟಕ.
22/01/2026
Congress Govt in Karnataka has not implemented any schemes/programs for the welfare of OBC communities. It has not released adequate grants for the welfare of backward classes. Over the past 2.5 years, the Congress govt has consistently neglected Backward Communities by denying them Economic, Educational & Employment opportunities.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಜಿಬಿಎ ಚುನಾವಣೆಯಲ್ಲಿ ಓಬಿಸಿ ಸಮುದಾಯಗಳಿಗೆ ಅವಕಾಶ ನೀಡಬೇಕು ಹಾಗೂ ಓಬಿಸಿಯಲ್ಲಿ ಬರುವ ಸಣ್ಣ ಸಣ್ಣ ಸಮುದಾಯವನ್ನು ಗುರುತಿಸಿ ಮುಂಬರುವ ಸಂಘಟನಾ ಪರ್ವದಲ್ಲಿ ಪಕ್ಷದ ಜವಾಬ್ದಾರಿಯನ್ನು ನೀಡಬೇಕೆಂದು ವರಿಷ್ಠರಿಗೆ ಮನವಿ ಮಾಡಲಾಗುವುದು. ಓಬಿಸಿ ಸಮುದಾಯಗಳಿಗೆ ಕಾಂಗ್ರೆಸ್ ಸರ್ಕಾರ ಯಾವುದೇ ಕಾರ್ಯಕ್ರಮವನ್ನು ಕೊಟ್ಟಿಲ್ಲ. ವಿವಿಧ ಸಮುದಾಯಗಳ ಪ್ರಮುಖರ ಸಭೆಯಲ್ಲಿ ಸೇರಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನುದಾನ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಕಳೆದ 2.5 ವರ್ಷದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅವಕಾಶ ನೀಡದೆ ನಿರಂತರವಾಗಿ ಈ ಸಮುದಾಯಗಳನ್ನು ತುಳಿಯುತ್ತಾ ಇದೆ. ಕರ್ನಾಟಕದಲ್ಲಿ ಓಬಿಸಿ ಸಮುದಾಯಗಳಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಹಾಗೂ ಸಮುದಾಯವನ್ನು ಸಂಘಟಿಸಲು ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ಶಾಸಕರಾದ ಶ್ರೀ Vijayendra Yediyurappa ರವರ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಸಭೆಗಳನ್ನು ಆಯೋಜಿಸಲಾಗುವುದು: ಶ್ರೀ ಆರ್. ರಘು ಕೌಟಿಲ್ಯ.
21/01/2026
ಕರ್ನಾಟಕ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾದ ವಿಶೇಷ ಸಭೆಯನ್ನು ಜನವರಿ 20 ರಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಆಯೋಜಿಸಲಾಯಿತು.
Click here to claim your Sponsored Listing.