BHS Banakal

BHS Banakal My School My Pride

14/01/2025

ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ... ಮತ್ತೆ ಹುಟ್ಟಿ ಬನ್ನಿ. 🙏

ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏
05/09/2024

ನನ್ನೆಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏

🙏🙏🙏
21/07/2024

🙏🙏🙏

19/11/2023

ಬಣಕಲ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ದೀಪ್ತಿ ರಾಜ್ಯ ಮಟ್ಟಕ್ಕೆ ಆಯ್ಕೆ
ಬಣಕಲ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ದೀಪ್ತಿ ಜಿಲ್ಲಾ ಮಟ್ಟದ ಅಥ್ಲೆಟಿಕ್ ಸ್ಪರ್ಧೆಯಲ್ಲಿ 100ಹಾಗೂ 200ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ.

ಕಲ್ಲೇಶ್ ಯಶೋದ ದಂಪತಿಯ ಪುತ್ರಿಯಾದ ಈಕೆ ಹೋಬಳಿ ಮಟ್ಟ, ತಾಲೂಕು ಮಟ್ಟದಲ್ಲಿಯೂ ಈ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳನ್ನು ಪಡೆದು ಇದೀಗ ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್‌ಶಿಪ್ ನೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರು ವುದಕ್ಕೆ ಶಾಲೆ ಮುಖ್ಯ ಶಿಕ್ಷಕ ಪಿ ವಾಸುದೇವ್ ಹಾಗೂ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.

🙏
05/09/2023

🙏

30/07/2023

*ಸಂಬಂಧಗಳ ಯುಗ*

ಇದು SSC ವರೆಗೆ ಒಂದೇ ಶಾಲೆಯಲ್ಲಿ ಓದಿದ ಶಾಲೆಯ ನಾಲ್ವರು ಆತ್ಮೀಯ ಸ್ನೇಹಿತರ ಕಥೆ.

ಆಗ ನಗರದಲ್ಲಿ ಒಂದೇ ಒಂದು ಐಷಾರಾಮಿ ಹೋಟೆಲ್ ಇತ್ತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರ ಆ ಹೋಟೆಲ್‌ಗೆ ಹೋಗಿ ಚಹಾ ಮತ್ತು ತಿಂಡಿ ತಿನ್ನೋಣ ಎಂದು ನಿರ್ಧರಿಸಿದರು. ನಾಲ್ವರಿಂದ ನಲವತ್ತು ರೂಪಾಯಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಅದೊಂದು ಭಾನುವಾರವಾದ್ದರಿಂದ ನಾಲ್ವರೂ ಸೈಕಲ್ ಹತ್ತಿ ಹತ್ತೂವರೆ ಗಂಟೆಗೆ ಹೋಟೆಲ್ ತಲುಪಿದರು.

ದಿನೇಶ್, ಸಂತೋಷ್, ಮನೀಶ್, ಮತ್ತು ಪ್ರವೀಣ್ ತಿಂಡಿ ಮತ್ತು ಚಹಾ ಸೇವಿಸುತ್ತಾ ಮಾತನಾಡತೊಡಗಿದರು. ನಾಲ್ವರೂ 40 ವರ್ಷಗಳ ನಂತರ ಅದೇ ಹೋಟೆಲ್‌ನಲ್ಲಿ ಏಪ್ರಿಲ್ 1 ರಂದು ಮತ್ತೆ ಭೇಟಿಯಾಗಲು ಸರ್ವಾನುಮತದಿಂದ ನಿರ್ಧರಿಸಿದರು.

"ಅಲ್ಲಿಯವರೆಗೆ ನಾವೆಲ್ಲರೂ ತುಂಬಾ ಶ್ರಮಿಸಬೇಕು, 40 ವರ್ಷಗಳ ನಂತರ ಎಷ್ಟು ಪ್ರಗತಿ ಸಾಧಿಸಲಾಗಿದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ" ಎಂದು ಅವರು ಚರ್ಚಿಸಿದರು.

ಅಂದು ಕೊನೆಯವನಾಗಿ ಹೋಟೆಲ್ ತಲುಪುವವನು ಆ ದಿನದ ಬಿಲ್ ನ್ನು ಪಾವತಿಸಬೇಕು ಎಂದು ನಿರ್ಧರಿಸಿದರು.

ಇವರಿಗೆ ಟೀ, ತಿಂಡಿ ಬಡಿಸಿದ ಮಾಣಿ ಕಾಳು ಇದನ್ನೆಲ್ಲ ಕೇಳುತ್ತಿದ್ದ. ಅಲ್ಲಿಯವರೆಗೆ ಇಲ್ಲೇ ಇದ್ದರೆ ನಿಮ್ಮೆಲ್ಲರಿಗಾಗಿ ನಾನು ಕಾಯುತ್ತಿರುತ್ತೇನೆ ಎಂದರು.

ಮುಂದಿನ ಶಿಕ್ಷಣಕ್ಕಾಗಿ ನಾಲ್ವರೂ ಬೇರೆಯಾದರು.

ದಿನೇಶ್ ತನ್ನ ತಂದೆ ಸ್ಥಳಾಂತರಗೊಂಡ ನಂತರ ನಗರವನ್ನು ತೊರೆದಿದ್ದರು, ಸಂತೋಷ್ ಹೆಚ್ಚಿನ ಅಧ್ಯಯನಕ್ಕಾಗಿ ತನ್ನ ಚಿಕ್ಕಪ್ಪನ ಬಳಿಗೆ ಹೋದರು‌. ಮನೀಶ್ ಮತ್ತು ಪ್ರವೀಣ್ ನಗರದ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದರು.
ಕೊನೆಗೆ ಮನೀಶ್ ಕೂಡ ಊರು ಬಿಟ್ಟರು.

ದಿನಗಳು, ತಿಂಗಳುಗಳು ಮತ್ತು ವರ್ಷಗಳು ಕಳೆದವು.

ನಲವತ್ತು ವರ್ಷಗಳಲ್ಲಿ, ನಗರವು ಆಮೂಲಾಗ್ರ ಬದಲಾವಣೆಗೆ ಒಳಗಾಯಿತು. ನಗರದ ಜನಸಂಖ್ಯೆಯು ಹೆಚ್ಚಾಯಿತು ಮತ್ತು ರಸ್ತೆಗಳು, ಮೇಲ್ಸೇತುವೆಗಳು ಮತ್ತು ಮಾಲ್‌ಗಳು ನಗರದ ನೋಟವನ್ನು ಬದಲಾಯಿಸಿದವು.

ಈಗ ಆ ಹೋಟೆಲ್ ಪಂಚತಾರಾ ಹೋಟೆಲ್ ಆಗಿ ಮಾರ್ಪಟ್ಟಿತ್ತು, ಮಾಣಿ ಕಾಳು ಈಗ ಈ ಹೋಟೆಲ್ ನ ಮಾಲೀಕ ಶ್ರೀ ಕಾಳು ಆಗಿಬಿಟ್ಟಿದ್ದ.

ನಲವತ್ತು ವರ್ಷಗಳ ನಂತರ, ನಿಗದಿತ ದಿನಾಂಕವಾದ ಏಪ್ರಿಲ್ 1 ರಂದು, ಮಧ್ಯಾಹ್ನ, ಐಷಾರಾಮಿ ಕಾರೊಂದು ಹೋಟೆಲ್‌ನ ಬಾಗಿಲಿಗೆ ಬಂದಿತು.

ದಿನೇಶ್ ಕಾರಿನಿಂದ ಇಳಿದು ವರಾಂಡದತ್ತ ನಡೆಯತೊಡಗಿದ. ಅವರು ಈಗ ಮೂರು ಆಭರಣ ಶೋರೂಮ್‌ಗಳನ್ನು ಹೊಂದಿದ್ದರು.

ದಿನೇಶ ಹೊಟೇಲ್ ಮಾಲಕ ಶ್ರೀ ಕಾಳು ಬಳಿಗೆ ಬಂದರು, ಇಬ್ಬರೂ ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಶ್ರೀ ಕಾಳು ಹೇಳಿದರು, "ಪ್ರವೀಣ್ ಸರ್, ನಿಮಗಾಗಿ ಒಂದು ತಿಂಗಳ ಹಿಂದೆನೇ ಟೇಬಲ್ ಕಾಯ್ದಿರಿಸಿದ್ದರು."

ನಾಲ್ವರಲ್ಲಿ ತಾನು ಮೊದಲಿಗನೆಂದು ದಿನೇಶನಿಗೆ ಮನಸಾರೆ ಸಂತೋಷವಾಯಿತು. ಈ ದಿನ ತಾನು ಬಿಲ್ ಕಟ್ಟಬೇಕಿಲ್ಲ. ಅದಕ್ಕಾಗಿ ಗೆಳೆಯರನ್ನು ಗೇಲಿ ಮಾಡುತ್ತಿದ್ದ.

ಸ್ವಲ್ಪ ಹೊತ್ತಿನ ನಂತರ ಸಂತೋಷ್ ಬಂದ. ಸಂತೋಷ್ ನಗರದ ದೊಡ್ಡ ಬಿಲ್ಡರ್ ಆಗಿದ್ದರು. ಅವರ ವಯಸ್ಸಿಗೆ, ಅವರು ಈಗ ವಯಸ್ಸಾದ ಹಿರಿಯ ನಾಗರಿಕರಂತೆ ಕಾಣುತ್ತಿದ್ದರು.

ಈಗ, ಇಬ್ಬರೂ ಮಾತನಾಡುತ್ತ ತಮ್ಮ
ಇತರ ಸ್ನೇಹಿತರಿಗಾಗಿ ಕಾಯುತೊಡಗಿದರು.
ಮೂರನೇ ಗೆಳೆಯ ಮನೀಶ್ ಕೂಡ ಅರ್ಧ ಗಂಟೆಯಲ್ಲಿ ಬಂದ. ಅವನೊಂದಿಗೆ ಮಾತನಾಡಿದಾಗ, ಮನೀಷ್ ಈಗ ಉದ್ಯಮಿ ಎಂಬುದು ಇಬ್ಬರಿಗೂ ತಿಳಿಯಿತು.

ಪ್ರವೀಣ್ ಯಾವಾಗ ಬರುತ್ತಾನೆ ಎಂದು ಆ ಮೂವರು ಗೆಳೆಯರು ಮತ್ತೆ ಮತ್ತೆ ಬಾಗಿಲ ಕಡೆ ನೋಡುತ್ತಿದ್ದರು.

ಆಗ, ಶ್ರೀ ಕಾಳು ಅವರ ಬಳಿಗೆ ಬಂದು, "ಪ್ರವೀಣ್ ಸರ್ ಅವರಿಂದ ಒಂದು ಸಂದೇಶ ಬಂದಿದೆ, ಅವರು ತಿಂಡಿಗಳೊಂದಿಗೆ ತಮ್ಮ ಸಂತೋಷಕೂಟ ಪ್ರಾರಂಭಿಸಲು ನಿಮ್ಮೆಲ್ಲರನ್ನು ಕೇಳಿಕೊಂಡಿದ್ದಾರೆ.
ಸ್ವಲ್ಪೇ ಸಮಯದಲ್ಲಿ ಅವರು ನಿಮ್ಮೊಂದಿಗೆ ಸೇರಿಕೊಳ್ಳುತ್ತಾರೆ" ಎಂದು ಹೇಳಿದರು.

ಮೂವರೂ ನಲವತ್ತು ವರ್ಷಗಳ ನಂತರ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಗಂಟೆಗಟ್ಟಲೆ ನಗುತ್ತಾ ತಮಾಷೆ ಮಾಡುತ್ತಾ ಖುಷಿಪಡುತ್ತಾ ಇದ್ದರು. ತುಂಬ ಸಮಯವಾದರೂ ಪ್ರವೀಣ್ ರವರು ಬರಲಿಲ್ಲ.

ಶ್ರೀ ಕಾಳು, "ಪ್ರವೀಣ್ ಸರ್ ಇನ್ನೊಂದು ಸಂದೇಶ ಕಳುಹಿಸಿದ್ದಾರೆ. "ನೀವು ಇಲ್ಲಿಯ ಮೂರೂ ಮೆನುಗಳಲ್ಲಿರುವ ನಿಮ್ಮ ಮೆಚ್ಚಿನ ತಿನಿಸುಗಳನ್ನು ಆರ್ಡರ್ ಮಾಡಿ, ಊಟ ಪ್ರಾರಂಭಿಸಲು ವಿನಂತಿಸಿದ್ದಾರೆ."

ಫುಡ್ ಆರ್ಡರ್ ಮಾಡಿದ್ರು. ತಿಂದು ಮುಗಿಸಿದರೂ ಪ್ರವೀಣ್ ಬರಲಿಲ್ಲ. ಮೂವರು ಬಿಲ್ ಕೇಳಿದಾಗ ಆನ್‌ಲೈನ್‌ನಲ್ಲಿ ಬಿಲ್ ಪಾವತಿ ಮಾಡಲಾಗಿದೆ ಎಂದು ಶ್ರೀ ಕಾಳುರವರು ತಿಳಿಸಿದರು. ಇವರಿಗೆ‌ ಅತಿ ಆಶ್ಚರ್ಯವಾಗಿತ್ತು.

ಸಂಜೆ ಎಂಟು ಗಂಟೆಗೆ ಒಬ್ಬ ಯುವಕ ಕಾರಿನಿಂದ ಇಳಿದು ಭಾರವಾದ ಹೃದಯದಿಂದ ಆಗಮಿಸಿದರು. ಹೋಟೆಲ್‌ನಿಂದ ಹೊರಡಲು ತಯಾರಾದ ಆ ಮೂವರು ಸ್ನೇಹಿತರನ್ನು ಸಂಪರ್ಕಿಸಿದರು. ಆ. ಮೂವರಿಗೂ ಈ ವ್ಯಕ್ತಿಯಿಂದ ಕಣ್ಣು ತೆಗೆಯಲಾಗಲಿಲ್ಲ.

ಯುವಕ, "ನಾನು ನಿಮ್ಮ ಸ್ನೇಹಿತನ ಮಗ ರವಿ. ನನ್ನ ತಂದೆಯ ಹೆಸರು ಪ್ರವೀಣ್, ಇಂದಿನ ನಿಮ್ಮ ಗೆಟ್ ಟುಗೆದರ್ ಬಗ್ಗೆ ಅಪ್ಪ ಹೇಳಿದ್ದರು. ಅವರು ಈ ದಿನಕ್ಕಾಗಿಯೇ ನಿರೀಕ್ಷೆ ಮಾಡುತ್ತಲೇ ಇದ್ದರು. ಆದರೆ, ನನ್ನ ದುರ್ದೈವ! ತೀವ್ರ ಅನಾರೋಗ್ಯದಿಂದ ಅವರು ಕಳೆದ ತಿಂಗಳು ನಿಧನರಾದರು ...

ಇಂದು ನಾನು ಬೇಗ ಬಂದಿದ್ದರೆ ನಿಮಗೆಲ್ಲ ಬೇಸರವಾಗುತ್ತದೆ ಎಂದು ತಡವಾಗಿ ನನಗೆ ಬರಲು ತಿಳಿಸಿದ್ದರು. ‘ನನ್ನ ಗೆಳೆಯರಿಗೆ ' ನಾನು ಈ ಲೋಕದಲ್ಲಿಲ್ಲ'. ಎಂಬ ವಿಚಾರ ತಿಳಿದರೆ ಅವರು ಖಂಡಿತವಾಗಿಯೂ ನಗುವುದಿಲ್ಲ. ಆಗ ಒಬ್ಬರನ್ನೊಬ್ಬರು ಭೇಟಿಯಾದ ಖುಷಿಯನ್ನೇ ಕಳೆದುಕೊಳ್ಳುತ್ತಾರೆ... ಅದು ನನಗೆ ಇಷ್ಟವಿಲ್ಲ. ಅವರೆಲ್ಲ. ಸದಾಕಾಲ ಖುಷಿಯಿಂದ ಇರಬೇಕೆಂಬುದೇ ನನ್ನ. ಆಸೆ." ಎಂದು ಅಪ್ಪ ಹೇಳಿದ್ದರು.

ಅದಕ್ಕೇ ನನಗೆ ಇಲ್ಲಿಗೆ ತಡವಾಗಿ ಹೋಗುವಂತೆ ಆದೇಶಿಸಿದ್ದರು. "ತನ್ನ ಪರವಾಗಿ ಎಲ್ಲರನ್ನೂ ಪ್ರೀತಿ, ಗೌರವದಿಂದ ತಬ್ಬಿಕೋ" ಎಂದೂ ನನಗೆ ಸೂಚನೆ ನೀಡಿದ್ದರು.". ಹೀಗೆ ಹೇಳುತ್ತ, ರವಿ ಹರ್ಷಾಶ್ರುಗಳೊಂದಿಗೆ ತನ್ನೆರಡೂ ಬಾಹುಗಳನ್ನು ಅಗಲಿಸಿ ಅವರನ್ನು ಆಲಂಗಿಸಲು ಮುಂದಾದನು.
ಸುತ್ತಮುತ್ತಲಿನವರೆಲ್ಲರೂ ಈ ದೃಶ್ಯವನ್ನು ಕುತೂಹಲದಿಂದ ನೋಡುತ್ತಿದ್ದರು‌. ಅವರಿಗೆ 'ಈ ಯುವಕನನ್ನು ಎಲ್ಲೋ ನೋಡಿದ್ದೇವೆ' ಎಂದು ಅನಿಸತೊಡಗಿತ್ತು.

ಆಗ ರವಿಯವರೇ ಅವರ ಸಂಶಯ ನಿವಾರಣೆಗೆ ಮುಂದಾದರು. ‘ನನ್ನ ತಂದೆ ಶಿಕ್ಷಕರಾಗಿದ್ದರು. ಕಲೆಕ್ಟರ್ ಆಗಲು ಅಗತ್ಯವಿರುವ ಒಳ್ಳೆಯ ಶಿಕ್ಷಣವನ್ನು ನನಗೆ ನೀಡಿದರು. ಇಂದು ನಾನು ಈ ನಗರದ. ಡಿ.ಸಿ. ಆಗಿದ್ದೇನೆ…’ ಎಂದು ಹೇಳಿದರು.

ಎಲ್ಲರೂ ಇನ್ಬೂ ಆಶ್ಚರ್ಯಚಕಿತರಾದರು, "ಇನ್ನು ಮುಂದೆ, ಇದು ನಲವತ್ತು ವರ್ಷಗಳಿಗೊಮ್ಮೆ ಆಗಬಾರದು. ಬದಲಿಗೆ, ನಾವು ಪ್ರತಿ ತಿಂಗಳು ಇದೇ ಹೋಟೆಲ್ ನಲ್ಲಿ ಭೇಟಿಯಾಗೋಣ. ಆಗೆಲ್ಲ ಪ್ರತಿ ಬಾರಿಯೂ ನನ್ನ ಕಡೆಯಿಂದ ಹಿರಿಯರೂ, ನನ್ನ ಅಪ್ಪನ ಆತ್ಮೀಯ ಸ್ನೇಹಿತರೂ ಆಗಿದ್ದ ತಮಗೆಲ್ಲರಿಗೂ ಪ್ರೀತಿ, ಅಭಿಮಾನಪೂರ್ವಕ ಒಂದು ಗ್ರ್ಯಾಂಡ್ ಪಾರ್ಟಿ ಇರುತ್ತದೆ....ದಯವಿಟ್ಟು ನೀವೆಲ್ಲರೂ ಇದರಲ್ಲಿ ತಪ್ಪದೇ ಭಾಗಿಯಾಗಬೇಕು" ಎಂದು ಕೇಳಿಕೊಂಡರು.

*ಸ್ನೇಹಿತರೇ, ನಿಮ್ಮ ಪ್ರೀತಿಪಾತ್ರರನ್ನು ಆಗಾಗ ಭೇಟಿಯಾಗುತ್ತಿರಿ. ಯಾರನ್ನಾದರೂ ಭೇಟಿಯಾಗಲು ಯಾವುದೇ ಪ್ರತ್ಯೇಕ ಅವಕಾಶಕ್ಕಾಗಿ ಕಾಯಬೇಡಿ‌. ಯಾವಾಗ ಬೇರ್ಪಡುವ ಸಮಯ ಬರುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ‌ ‌

ಬದುಕಿನ ಪಯಣ ರೈಲು ಪ್ರಯಾಣದಂತೆ. ಯಾರದ್ದೋ ಸ್ಟೇಷನ್ ಬಂದಾಗ, ಆ ಕ್ಷಣವೇ ಅವರು ಡ್ರಾಪ್ ಆಗುತ್ತಾರೆ. ಕೆಲವು ಮಸುಕಾದ ನೆನಪುಗಳು ಮಾತ್ರ ಉಳಿಯುತ್ತವೆ!

*ಕುಟುಂಬದೊಂದಿಗೆ ಇರಿ, ಅನುಭವಿಸಿ!
ವಿಶೇಷ ದಿನಗಳಲ್ಲಿ ಮಾತ್ರವಲ್ಲದೆ ಇತರ ಸಂದರ್ಭಗಳಲ್ಲಿ ಮತ್ತು ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ನಿಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಿ. ನಮ್ಮ ಸಂಬಂಧಗಳೆಂಬ ಮರವು ಪ್ರೀತಿಯೆಂಬ ನೀರಿನಿಂದ ಪೋಷಿಸಲ್ಪಡಲಿ‌. ಯಾರನ್ನಾದರೂ ಭೇಟಿಯಾಗಲು ನಾವು ಯಾವುದೇ ಕಾರಣಕ್ಕಾಗಿ ಅಥವಾ ಅವಕಾಶಕ್ಕಾಗಿ ಕಾಯಬೇಕಾಗಿಲ್ಲ.

ಆತ್ಮೀಯ ಸ್ನೇಹಿತರೇ, ನೀವು ಈ ಕಥೆಯನ್ನು ಓದಿದಾಗ,
ಯಾರಾದರೂ ನಿಮ್ಮ ಸ್ನೇಹಿತರ ನೆನಪು ಆದರೆ, ತಕ್ಷಣ ಅವರೊಂದಿಗೆ ಎರಡು ನಿಮಿಷ ಮಾತನಾಡಿ. ಇಂದು ನಮ್ಮಲ್ಲಿ ಅದಕ್ಕಾಗಿ ಅವಶ್ಯವಿರುವ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಿವೆ.


*"ನಾವು ನಮ್ಮ ಸುತ್ತಮುತ್ತಲಿನ ಜನರಿಗಾಗಿ, ನಮ್ಮ. ಆಪ್ತರಿಗಾಗಿ ಸ್ವಲ್ಪ ಸಮಯವನ್ಬು ಮೀಸಲಿಡಲೇಬೇಕು
ಮತ್ತು ಜೀವನದ ಸೌಂದರ್ಯವನ್ನು ಆದಷ್ಟು ಆನಂದದಿಂದ. ಆಸ್ವಾದಿಸಬೇಕು."*

ನನ್ನೆಲ್ಲಾ ಗುರುವೃಂದಕ್ಕೆ ಗುರು ಪೂರ್ಣಿಮೆಯ ಶುಭಾಶಯಗಳು
03/07/2023

ನನ್ನೆಲ್ಲಾ ಗುರುವೃಂದಕ್ಕೆ ಗುರು ಪೂರ್ಣಿಮೆಯ ಶುಭಾಶಯಗಳು

30/06/2023

*ಜಪಾನ್‌ನಲ್ಲಿ ಶಿಕ್ಷಕರ ದಿನಾಚರಣೆ ಇಲ್ಲ*

ಜಪಾನ್‌ನಲ್ಲಿ ಶಿಕ್ಷಕರ ದಿನಾಚರಣೆ ಇಲ್ಲ.

ಒಂದು ದಿನ, ನಾನು ನನ್ನ ಜಪಾನಿನ ಸಹೋದ್ಯೋಗಿ, ಶಿಕ್ಷಕ ಯಮಮೋಟಾ ಅವರನ್ನು ಕೇಳಿದೆ: "ಜಪಾನ್‌ನಲ್ಲಿ ನೀವು ಶಿಕ್ಷಕರ ದಿನವನ್ನು ಹೇಗೆ ಆಚರಿಸುತ್ತೀರಾ?" ಎಂದು.

ನನ್ನ ಪ್ರಶ್ನೆಯಿಂದ ಆಶ್ಚರ್ಯಗೊಂಡ ಅವರು ಉತ್ತರಿಸಿದರು: "ನಮಗೆ ಶಿಕ್ಷಕರ ದಿನವಿಲ್ಲ" ಎಂದರು.

ಅವರ ಉತ್ತರವನ್ನು ಕೇಳಿದಾಗ, ನನಗೆ ಅವರನ್ನು ನಂಬಬೇಕೋ ಬೇಡವೋ ಎಂದು ಗೊತ್ತಾಗಲಿಲ್ಲ.

ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಹಾದುಹೋಯಿತು: "ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಷ್ಟು ಮುಂದುವರಿದ ದೇಶವು, ಶಿಕ್ಷಕರು ಮತ್ತು ಅವರ ಕೆಲಸದ ಬಗ್ಗೆ ಏಕೆ ಅಗೌರವ ತೋರುತ್ತಿದೆ?" ಎಂದು.

ಒಮ್ಮೆ, ಕೆಲಸದ ಮುಗಿದ ಅನಂತರ ಸಂಜೆ, ಯಮಮೋಟಾ ನನ್ನನ್ನು ಅವರ ಮನೆಗೆ ಆಹ್ವಾನಿಸಿದರು.

ಅವರ ಮನೆ ದೂರ ಇದ್ದುದರಿಂದ ಮೆಟ್ರೋ ಹತ್ತಿದೆವು . ಅದು ಸಂಜೆಯ ಪೀಕ್ ಅವರ್ ಆಗಿತ್ತು. ಮೆಟ್ರೋ ರೈಲಿನಲ್ಲಿನ ವ್ಯಾಗನ್‌ಗಳು ತುಂಬಿ ತುಳುಕುತ್ತಿದ್ದವು. ನಾನು ಓವರ್ಹೆಡ್ ರೈಲನ್ನು ಬಿಗಿಯಾಗಿ ಹಿಡಿದುಕೊಂಡು ನಿಲ್ಲಲು, ಜಾಗವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ.

ಇದ್ದಕ್ಕಿದ್ದಂತೆ, ನನ್ನ ಪಕ್ಕದಲ್ಲಿ ಕುಳಿತಿದ್ದ ವಯಸ್ಸಾದ ಹಿರಿಯ ವ್ಯಕ್ತಿ, ನನಗೆ ತನ್ನ ಸ್ಥಾನವನ್ನು ನೀಡಿದರು.

ವಯಸ್ಸಾದ ವ್ಯಕ್ತಿಯ ಈ ಗೌರವಾನ್ವಿತ ನಡವಳಿಕೆಯನ್ನು ಅರ್ಥಮಾಡಿಕೊಳ್ಳದೆ, ನಾನು ನಿರಾಕರಿಸಿದೆ.

ಆದರೆ ಅವರು ನನ್ನನ್ನು ಕುಳಿತುಕೊಳ್ಳಲು ಒತ್ತಾಯಿಸಿದರು.

ಅನಂತರ ನಾನು ಮೆಟ್ರೋದಿಂದ ಇಳಿದು ಹೊರಬಂದಾಗ, ಬಿಳಿಗಡ್ಡದ ಆ ಹಿರಿಯ ವ್ಯಕ್ತಿಯ ವರ್ತನೆಯ ಬಗ್ಗೆ ಯಮಮೋಟಾರನ್ನು ವಿವರಿಸಲು ಕೇಳಿದೆ.

ಯಮಮೋಟಾ ಮುಗುಳ್ನಗುತ್ತಾ ನಾನು ಧರಿಸಿದ್ದ ಟೀಚರ್‌ನ ಟ್ಯಾಗ್‌ನ ಕಡೆಗೆ ತೋರಿಸಿ ಹೇಳಿದರು :
"ಆ ಹಿರಿಯ ವ್ಯಕ್ತಿ ನಿಮ್ಮ ಬಳಿಯಲ್ಲಿರುವ, ಶಿಕ್ಷಕರ ಟ್ಯಾಗ್ ಅನ್ನು ನೋಡಿದ್ದಾರೆ. ನಿಮ್ಮ ಸ್ಥಾನಮಾನವನ್ನು ಅರಿತು ಗೌರವದ ಸಂಕೇತವಾಗಿ ತಾವು ಕುಳಿತಿರುವ ಸ್ಥಾನವನ್ನು ನಿಮಗೆ ನೀಡಿದ್ದಾರೆ' ಎಂದರು.

ನಾನು ಮೊದಲ ಬಾರಿಗೆ ಜಪಾನಿಗೆ ಭೇಟಿ ನೀಡಿದ್ದರಿಂದ, ಖಾಲಿ ಕೈಗಳಿಂದ ಯಮಮೋಟಾರ ಮನೆಗೆ ಹೋಗುವುದು ನನಗೆ ಸರಿಯಲ್ಲವೆನಿಸಿತು. ಆದ್ದರಿಂದ ಉಡುಗೊರೆಯನ್ನು ಖರೀದಿಸಲು ನಿರ್ಧರಿಸಿದೆ.

ನಾನು ಯಮಮೋಟಾ ಅವರೊಂದಿಗೆ ನನ್ನ ಉಡುಗೊರೆಯ ಆಲೋಚನೆಯನ್ನು ಹಂಚಿಕೊಂಡೆ. ಅವರು ನನ್ನ ಕಲ್ಪನೆಯನ್ನು ಬೆಂಬಲಿಸಿದರು. ಮತ್ತು "ಸ್ವಲ್ಪ ಮುಂದೆ ಶಿಕ್ಷಕರಿಗಾಗಿಯೇ ಒಂದು ಅಂಗಡಿ ಇದೆ. ಅಲ್ಲಿ ಶಿಕ್ಷಕರು ಮಾತ್ರ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಖರೀದಿಸಬಹುದು" ಎಂದು ಹೇಳಿದರು.

'ಶಿಕ್ಷಕರಿಗಾಗಿಯೇ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳಿವೆ' ಎಂದು ಯಮಮೋಟಾ ಹೇಳಿದಾಗ, ನನಗೆ ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಕೇಳಿದೆ
"ಶಿಕ್ಷಕರಿಗಾಗಿಯೇ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಅಂಗಡಿಗಳಿವೆಯೇ?" ಎಂದೆ.

ನನ್ನ ಮಾತುಗಳನ್ನು ದೃಢೀಕರಿಸುತ್ತಾ, ಯಮಮೋಟಾ ಹೇಳಿದರು: "ಜಪಾನ್‌ನಲ್ಲಿ ಬೋಧನೆಯು, ಅತ್ಯಂತ ಗೌರವಾನ್ವಿತ ವೃತ್ತಿಯಾಗಿದೆ. ಇಲ್ಲಿ ಶಿಕ್ಷಕ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿರುತ್ತಾನೆ. ಶಿಕ್ಷಕರು ತಮ್ಮ ಅಂಗಡಿಗಳಿಗೆ ಬಂದಾಗ ಜಪಾನಿನ ವಾಣಿಜ್ಯೋದ್ಯಮಿಗಳು ತುಂಬಾ ಸಂತೋಷಪಡುತ್ತಾರೆ. ಅವರು ಅದನ್ನು ತಮ್ಮ ಗೌರವವೆಂದು ಪರಿಗಣಿಸುತ್ತಾರೆ" ಎಂದರು.

ನಾನು ಜಪಾನ್‌ನಲ್ಲಿದ್ದಾಗ, ಶಿಕ್ಷಕರ ಬಗ್ಗೆ ಜಪಾನೀಯರಿಗೆ ಇರುವ, ಅಪಾರ ಗೌರವವನ್ನು ನಾನು ಗಮನಿಸಿದ್ದೇನೆ.

*ಮೆಟ್ರೋದಲ್ಲಿ ಅವರಿಗೆ ವಿಶೇಷ ಆಸನಗಳನ್ನು ನಿಗದಿಪಡಿಸಲಾಗಿದೆ.*

*ಅವರಿಗಾಗಿ ವಿಶೇಷ ಅಂಗಡಿಗಳಿವೆ.*

ಅಲ್ಲಿ *ಶಿಕ್ಷಕರು ಯಾವುದೇ ರೀತಿಯ ಸಾರಿಗೆಗೆ, ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.*

ಅದಕ್ಕಾಗಿಯೇ ಜಪಾನಿನಲ್ಲಿ ಶಿಕ್ಷಕರಿಗೆ ವಿಶೇಷ ದಿನದ ಅಗತ್ಯವಿಲ್ಲ.

*ಜಪಾನೀಯರ ಜೀವನದಲ್ಲಿ ಪ್ರತಿ ದಿನವೂ ಶಿಕ್ಷಕರ ದಿನ.*

ಈ ಕಥೆಯನ್ನು ಎಲ್ಲರಿಗೂ ಹರಡಿ. ಈ ಮಟ್ಟಕ್ಕೆ ಶಿಕ್ಷಕರನ್ನು ಮೆಚ್ಚುವ ಸಮಾಜ ಬೆಳೆಯಲಿ. ನಿಮ್ಮ ಸಹೋದ್ಯೋಗಿಗಳಿಗೆ ಈ ಕಥೆಯನ್ನು ಮತ್ತೆ ಮತ್ತೆ ಹೇಳಿ.

ಇದರಿಂದ ಬೋಧಕರ ಎದೆಯು ಹೆಮ್ಮೆಯಿಂದ ಉಬ್ಬುತ್ತದೆ.

ನಾನು ಕೂಡ ರಾಷ್ಟ್ರ ನಿರ್ಮಾಪಕ
ಗುರುವಾಗುವುದಕ್ಕಿಂತ ಪುಣ್ಯ ಇನ್ನೇನಿದೆ🙏💐

Congrats 🎉🎉
22/11/2022

Congrats 🎉🎉

16/09/2022

ಗುಂಡನ ಡೈರಿಯ ಸಾಲುಗಳು:

ನನಗಿನ್ನೂ ಆ ದಿನ ಚೆನ್ನಾಗಿ ನೆನಪಿದೆ.

ಶಾಲೆಯಿಂದ ಮನೆಗೆ ಬಂದವನೇ ನನ್ನ ಮಾರ್ಕ್ಸ್ ಕಾರ್ಡ್ ಅಪ್ಪನಿಗೆ ತೋರಿಸಿದೆ. ಗಣಿತದಲ್ಲಿ "90" ಅಂಕಗಳು ಬಂದಿದ್ದವು.

ಹೆಮ್ಮೆಯಿಂದ ಅಪ್ಪನ ಮುಖವನ್ನೊಮ್ಮೆ ನೋಡಿದೆ.

ಅಪ್ಪನಿಗೆ ಅನುಮಾನ, "90" ,ತೆಗೆಯುವ ಮುಸುಡಿ ಇವನದಲ್ಲ. "90' ಮಾರ್ಕ್ಸ್ ಹೇಗೆ ಬಂದಿರಬಹುದು ಅಂತ!

ಮತ್ತೊಮ್ಮೆ ಕೂಲಂಕುಶವಾಗಿ ಅದರ ಮೇಲೆ ಕಣ್ಣು ಹಾಯಿಸಿ, ನನಗೆ ಮಾತನಾಡಲೂ ಬಿಡದೆ ಎಗ್ಗಾಮುಗ್ಗಾ ಹೊಡೆದರು!! ತೆಗೆದಿರುವ ಮಾರ್ಕ್ಸ್ ಗೆ
"0" ಸೇರಿಸಿದ್ದೀಯಾ ಭಡವಾ ಅಂತ !!

ತುಂಬಾ ಅಳು ಬಂತು, ದೇವರ ಮೇಲೆ ಆಣೆ ಮಾಡಿ ಹೇಳಿದೆ - "ಅಪ್ಪಾ ನಾನು "0" ಸೇರಿಸಿಲ್ಲ" ಅಂತ, ಆದರೂ ಕೇಳಲಿಲ್ಲ!

ಈಗಲೂ ಆ ದಿನ ನೆನೆದರೆ ಕಣ್ತುಂಬಿ ಬರುತ್ತದೆ..

ಅಪ್ಪನ ಫೊಟೋ ಮುಂದೆ ನಿಂತು ಸತ್ಯ ಹೇಳುತ್ತಿರುತ್ತೇನೆ..
"ಅಪ್ಪಾ, ನಾನು ಅಂದು ಸುಳ್ಳು ಹೇಳಿಲ್ಲ. ನಾನು ಮಾರ್ಕ್ಸ್ ನಲ್ಲಿ " *0* ' ಖಂಡಿತಾ ಸೇರಿಸಿಲ್ಲ!

ನಾನು ಸೇರಿಸಿದ್ದು " *9*"!!

😃😃😌😌😃

Address

K M Road
Mudigere
577113

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+919739940577

Website

Alerts

Be the first to know and let us send you an email when BHS Banakal posts news and promotions. Your email address will not be used for any other purpose, and you can unsubscribe at any time.

Shortcuts

Share

Category