Basavaraj Nyamagouda

Basavaraj Nyamagouda Contact information, map and directions, contact form, opening hours, services, ratings, photos, videos and announcements from Basavaraj Nyamagouda, Jamkhandi.

ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿ ಹಾಗೆ ಸಾವಳಗಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಇವತ್ತು ಜಮಖಂಡಿ ಬಂದ್ ಗೆ ಕರೆ ಕೊಟ್ಟಿದ್ದು ಈ ಒಂದು ಬಂದ್ ತಮ...
03/10/2019

ಜಮಖಂಡಿ ಜಿಲ್ಲಾ ಕೇಂದ್ರವನ್ನಾಗಿ ಹಾಗೆ ಸಾವಳಗಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಇವತ್ತು ಜಮಖಂಡಿ ಬಂದ್ ಗೆ ಕರೆ ಕೊಟ್ಟಿದ್ದು ಈ ಒಂದು ಬಂದ್ ತಮ್ಮೆಲ್ಲರ ಸಹಕಾರದಿಂದ ಯಶಸ್ವಿಯಾಗಿ ಪೂರ್ಣಗೊಂಡಿತು.ಈ ಒಂದು ಸಂದರ್ಭದಲ್ಲಿ ಎಲ್ಲ ಜಮಖಂಡಿಯ ಪೂಜ್ಯ ಗುರುಗಳು,ಪ್ರಗತಿಪರ ಚಿಂತಕರು,ವಿದ್ಯಾರ್ಥಿಗಳು ವಿವಿಧ ಸಂಘ- ಸಂಸ್ಥೆಗಳು, ವ್ಯಾಪಾರಸ್ಥರು, ಸಾರ್ವಜನಿಕರು,ಪತ್ರಿಕಾ ಬಳಗದವರು, ಮಾಧ್ಯಮ ಮಿತ್ರರು ಹಾಗೆ ಎಲ್ಲ ಪಕ್ಷದ ಮುಖಂಡರು ಹಾಗೆ ಕಾರ್ಯಕರ್ತರು ಪಕ್ಷಾತೀತವಾಗಿ ಬೆಂಬಲವನ್ನು ಸೂಚಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ🙏🏻ಈ ಒಂದು ಬಂದ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಲವೊಂದು ಚಿಕ್ಕ ಪುಟ್ಟ ತೊಂದರೆಗಳಾಗಿದ್ದಕ್ಕೆ ಕ್ಷಮೆ ಇರಲಿ🙏🏻ಆದರೆ ಜಮಖಂಡಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಹಾಗೆ ಬೆಳವಣಿಗೆಗೆ ಇದು ಅನಿವಾರ್ಯವಾಗಿದೆ.....

27/09/2019

ಎಲ್ಲರಿಗೂ ನಮಸ್ಕಾರ..🙏🙏 ಐತಿಹಾಸಿಕ ಜಮಖಂಡಿ
ನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ತಂದೆಯವರಾದ ದಿವಂಗತ ಸಿದ್ದು.ಭೀ. ನ್ಯಾಮಗೌಡರ ಕನಸುಗಳಲ್ಲಿ ಇದು ಅತಿ ಪ್ರಮುಖವಾಗಿತ್ತು, ಹಾಗೂ ಜಮಖಂಡಿ ಮತಕ್ಷೇತ್ರದ ಜನರ ಬಹುದಿನದ ಬೇಡಿಕೆ ಕೂಡಾ ಆಗಿತ್ತು. ಅದಕ್ಕಾಗಿ 1995/96 ರ ರಲ್ಲಿ ಬೃಹತ್ ಪ್ರಮಾಣದ ಹೋರಾಟಕೂಡಾ ಮಾಡಿದ್ದರು, ಆದರೆ ಅದು ಕೆಲವು ಕಾರಣಾಂತರಗಳಿಂದ ಈಡೇರಲಿಲ್ಲ. ನಂತರ
ಸಿದ್ದು ಭೀ ನ್ಯಾಮಗೌಡರು ಜಿಲ್ಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒಂದೊಂದಾಗಿ ಮಾಡುತ್ತಾ ಹೋದರು. ಅದಕ್ಕಾಗಿ ಈಗ ಜಮಖಂಡಿಯು ಜಿಲ್ಲೆ ಆಗಲು ಬೇಕಾದ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದಿದೆ, ಹಾಗೂ ಬಾಗಲಕೋಟೆ ಜಿಲ್ಲೆ ಯಲ್ಲಿ ಹೊಸದಾಗಿ 3-4 ತಾಲೂಕುಗಳು ಆಗುತ್ತಿರುವದರಿಂದ ಜಮಖಂಡಿಗೆ 5 ತಾಲೂಕುಗಳನ್ನು ಸೇರಿಸಿ ಜಿಲ್ಲೆಯನ್ನು ಮಾಡಬಹುದು ಮತ್ತು ಜಮಖಂಡಿಯಲ್ಲಿ ಇಗ ಪ್ರಾದೇಶಿಕ ಸಾರಿಗೆ ಕಛೇರಿಯೂ ಇದೆ, ಜಿಲ್ಲಾ ನ್ಯಾಯಾಲಯೂ ಇದೆ. ಅತಿ ಶೀಘ್ರವಾಗಿ ರೈಲು ಮಾರ್ಗವುಕೂಡಾ ಸಿದ್ದವಾಗುತ್ತಿದೆ.
ಕೆಟ್ಟಿ ಕೆರೆಯಿಂದ ಜಮಖಂಡಿ ಪ್ರವಾಸಿ ತಾಣವೂ ಆಗಿದೆ. ಸುತ್ತಮುತ್ತ ಎಲ್ಲಿಯೂ ಸಹ ಈಜುಕೊಳ ಇಲ್ಲ ಆದರೆ ಜಮಖಂಡಿಯಲ್ಲಿ ಇದೆ. ಉನ್ನತ ಮಟ್ಟದ ಶಿಕ್ಷಣ ಸೌಲಭ್ಯಗಳು ಕೂಡ ಜಮಖಂಡಿಯಲ್ಲಿವೆ.
ಅದಕ್ಕಾಗಿ ಜಮಖಂಡಿ ನಗರವನ್ನು ಜಿಲ್ಲೆ ಮಾಡಬೇಕೆಂಬ ದಿವಂಗತ ಸಿದ್ದು ನ್ಯಾಮಗೌಡರ ಹಾಗೂ ಮತಕ್ಷೇತ್ರದ ಜನರ ಕನಸನ್ನು ನನಸಾಗಿಸೋದು ನಮ್ಮೆಲ್ಲರ ಮೇಲಿದೆ..
ಅದಕ್ಕಾಗಿ ಇದೆ ರವಿವಾರ ದಿನಾಂಕ 29/09/2019 ರಂದು ಸಾಯಂಕಾಲ 04:00 ಗಂಟೆಗೆ ಸಂಕಲ್ಪ ಸಭೆಯನ್ನು ಪಕ್ಷಾತೀತವಾಗಿ ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಬಸವ ಭವನದಲ್ಲಿ ಸಭೆ ಕರೆಯಲಾಗಿದೆ.. ದಯಮಾಡಿ ಎಲ್ಲರು ಆ ಸಭೆಗೆ ಆಗಮಿಸಿ ಜಮಖಂಡಿ ಜಿಲ್ಲೆಯಾಗಲು ಬೆಂಬಲ
ನೀಡಬೇಕಾಗಿ ವಿನಂತಿ
ಇಂತಿ,
ಬಸವರಾಜ್ ಸಿದ್ದು ನ್ಯಾಮಗೌಡ.
ನಮ್ಮ ಹೆಮ್ಮೆ
ನಮ್ಮ ಜಮಖಂಡಿ.

18/09/2019

Guys I am not able to add more friends in my profile..On my friends request I am creating a page to be in touch with all of you..This is my only page..Thanks

Address

Jamkhandi

Website

Alerts

Be the first to know and let us send you an email when Basavaraj Nyamagouda posts news and promotions. Your email address will not be used for any other purpose, and you can unsubscribe at any time.

Shortcuts

Share