04/12/2025
ಅನೇಕಾಂತ
ಸತ್ಯ, ಸಂವಾದ ಮತ್ತು ಸಂಶೋಧನೆ
ಕನ್ನಡದಲ್ಲಿ ಉನ್ನತ ಮಟ್ಟದ ಸಂಶೋಧನೆ ಮತ್ತು ಆಳವಾದ ಅಧ್ಯಯನದಂತಹ ಶೈಕ್ಷಣಿಕ ಚಟುವಟಿಕೆಗಳಿಗೆ ಒಂದು ವೇದಿಕೆಯನ್ನು ಕಲ್ಪಿಸುವ ಪ್ರಯತ್ನವಾಗಿ ಸಮಾನ ಮನಸ್ಕರು ಪರಸ್ಪರ ಸೇರಿ 'ಅನೇಕಾಂತ' ಎನ್ನುವ ಅರ್ಧವಾರ್ಷಿಕ ವಿದ್ವತ್ ಪತ್ರಿಕೆಯನ್ನು ( ಇ - ಜರ್ನಲ್) ರೂಪಿಸುವ ಪ್ರಯತ್ನದಲ್ಲಿ ತೊಡಗಿರುತ್ತೇವೆ. ಈ ಪ್ರಯತ್ನದಲ್ಲಿ ನಾಡಿನ ಚಿಂತಕರು ಮತ್ತು ಯವ ಬರಹಗಾರರು ನಮ್ಮೊಂದಿಗಿರುತ್ತಾರೆಂಬ ಆಶಯ ನಮ್ಮದು.
ತಮ್ಮೆಲ್ಲರ ಪ್ರೋತ್ಸಾಹದ (ಮುಖ್ಯವಾಗಿ ಸಂಶೋಧನಾ ತ್ಮಕ ಲೇಖನಗಳನ್ನು ನೀಡುವುದರ ಮೂಲಕ) ನೆರವಿನಿಂದ ಮುಂದಿನ ವರ್ಷ ಅಂದರೆ ಜನವರಿ ೨೦೨೬ ರಲ್ಲಿ ಮೊದಲ ಸಂಚಿಕೆಯನ್ನು ಪ್ರಕಟಿಸುವ ಸಿದ್ಧತೆ ನಡೆಸಲಾಗಿದೆ.
ನಮ್ಮ ಪತ್ರಿಕೆಯ ಹೆಸರನ್ನು ಜೈನ ಚಿಂತನೆಯಿಂದ ಸ್ಪೂರ್ತಿಪಡೆದು "ಅನೇಕಾಂತ" ವೆಂದು ಇಡಲಾಗಿದೆ. ಈ ಪರಿಕಲ್ಪನೆಯು ಸತ್ಯವನ್ನು ಅನೇಕ ದೃಷ್ಟಿಕೋನಗಳಿಂದ ಅರಿಯಬೇಕೆಂದು ಸಾರುತ್ತದೆ. ಸಾಹಿತ್ಯ, ವಿಜ್ಞಾನ ಮತ್ತು ಮಾನವಿಕ ಕ್ಷೇತ್ರಗಳನ್ನು ಒಳಗೊಂಡು ಬಹುತ್ವವನ್ನು ಬೆಂಬಲಿಸುವ ನಮ್ಮ ಪತ್ರಿಕೆಯ ಉದ್ದೇಶಕ್ಕೆ ಈ ಹೆಸರು ಪೂರಕವಾಗಿದೆ. ಇದು ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಸಂವಾದ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ನಿರಂತರ ಪರಿಶೀಲನೆ ಮತ್ತು ಚಿಂತನೆಯ ಮೂಲಕ ಗಂಭೀರ ಸಂಶೋಧನೆಗೆ ಉತ್ತೇಜನ ನೀಡುವ ತತ್ತ್ವವಾಗಿರುವುದರಿಂದ, ನಮ್ಮ ಪತ್ರಿಕೆಯ ಶೈಕ್ಷಣಿಕ ಗಂಭೀರತೆ ಮತ್ತು ನವೀನತೆಯನ್ನು ಬಲಪಡಿಸುವ ಉದ್ದೇಶವನ್ನು ಸೂಚಿಸುತ್ತದೆ. ಹೀಗಾಗಿ "ಅನೇಕಾಂತ" ಎಂಬ ಹೆಸರು ನಮ್ಮ ಪತ್ರಿಕೆಯ ಚಿಂತನೆಗೆ ಅಧಾರವಾಗಿಯೂ, ಅದರ ಬಹುತ್ವ, ಸಂವಾದ ಮತ್ತು ಸಂಶೋಧನಾ ಮನೋಭಾವವನ್ನು ಪ್ರತಿನಿಧಿಸುವೊಂದರೊಂದಿಗೆ ಸಮರ್ಥನೆಯನ್ನೂ ಮಾಡುತ್ತದೆ.
ಪತ್ರಿಕೆಯ ಉದ್ದೇಶ
1. ಅಂತರಶಾಸ್ತ್ರೀಯ ಸಂವಾದ ವೇದಿಕೆಯಾಗಿ ರೂಪಿಸುವುದು: ಸಾಹಿತ್ಯ, ವಿಜ್ಞಾನ ಮತ್ತು ಮಾನವಿಕ ಕ್ಷೇತ್ರಗಳನ್ನು ಒಳಗೊಂಡಂತೆ ವಿವಿಧ ಜ್ಞಾನ ಕ್ಷೇತ್ರಗಳನ್ನು ಒಳಗೊಂಡು ಬಹುತ್ವವನ್ನು ಬೆಂಬಲಿಸುವ ವೇದಿಕೆಯಾಗುವುದು, ಕನ್ನಡದ ಜೊತೆಗೆ ಬೇರೆ ಭಾಷೆಗಳ ಸಂಶೋಧನೆಗೂ ಅವಕಾಶ ನೀಡಿ, ಬಹುಭಾಷಾ ಸಂವಾದವನ್ನು ಬೆಂಬಲಿಸುವುದು. ಪ್ರಕಟಿತ ಲೇಖನಗಳ ಬಗ್ಗೆ ಚರ್ಚೆ, ವಿಮರ್ಶೆ ಮತ್ತು ಪ್ರತಿಕ್ರಿಯೆಗಳನ್ನು ಉತ್ತೇಜಿಸಿ, ಜ್ಞಾನವನ್ನು ವಿಸ್ತರಿಸುವುದು.
2. ಉತ್ತಮ ಸಂಶೋಧನೆಗೆ ಉತ್ತೇಜನ – ನಿಖರತೆ, ತರ್ಕಬದ್ಧತೆ ಮತ್ತು ಶೈಕ್ಷಣಿಕ ಶಿಸ್ತಿನೊಂದಿಗೆ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು. ಇದರ ಮೂಲಕ ಹೊಸ ಪರಿಕಲ್ಪನೆಗಳು, ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಉತ್ತೇಜಿಸುವುದುಹೊಸದಾಗಿ ಬರೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಯುವ ಸಂಶೋಧಕರಿಗೆ ತಮ್ಮ ಬರಹಗಳನ್ನು ಪ್ರಕಟಿಸಲು ಅವಕಾಶ ನೀಡುವುದು.
3. ಭಿನ್ನ ದೃಷ್ಟಿಕೋನಗಳಿಗೆ ಅವಕಾಶ - ವಿಭಿನ್ನ ಚಿಂತನೆಗಳು, ಅಭಿಪ್ರಾಯಗಳು ಮತ್ತು ಸೃಜನಾತ್ಮಕ ಅಭಿವ್ಯಕ್ತಿಗಳಿಗೆ ವೇದಿಕೆಯನ್ನು ಒದಗಿಸುವುದು.
ಪ್ರಧಾನ ಸಂಪಾದಕರು
ಡಾ. ಮಾಧವ ಪೆರಾಜೆಯವರು
ಸಂಪಾದಕ ಮಂಡಲಿ
ಡಾ. ಹೆಚ್. ಎಸ್. ರಾಘವೇಂದ್ರ ರಾವ್
ಡಾ. ಬಸವರಾಜ ಕಲ್ಲುಡಿ,
ಡಾ. ರೇಖಾದತ್ತ,
ಡಾ. ಅಶ್ವಿನ್ ಕುಮಾರ್,
ಡಾ. ಸಿ. ಎಸ್ ಮಹೇಶ್ ಕುಮಾರ್,
ಡಾ. ಸಿರಾಜ್ ಅಹಮ್ಮದ್