Basanagouda Patil

Basanagouda Patil Chancellor-BLDE Univ. | Co-founder, Alt Co | Management Education (Penn State Univ.) | Dipl. in International Relations (Geneva School of Diplomacy)

ನಾಡಿನ ಸಮಸ್ತ ಜನತೆಗೆ ಆಷಾಢ ಏಕಾದಶಿಯ ಶುಭಾಶಯಗಳು ಈ ಪವಿತ್ರ ಆಷಾಢ ಏಕಾದಶಿಯಂದು ಶ್ರೀ ಪಾಂಡುರಂಗನ ಕೃಪಾಕಟಾಕ್ಷವು ಎಲ್ಲರ ಮೇಲಿರಲಿ.ಎಲ್ಲರ ಕುಟುಂ...
25/07/2026

ನಾಡಿನ ಸಮಸ್ತ ಜನತೆಗೆ ಆಷಾಢ ಏಕಾದಶಿಯ ಶುಭಾಶಯಗಳು

ಈ ಪವಿತ್ರ ಆಷಾಢ ಏಕಾದಶಿಯಂದು ಶ್ರೀ ಪಾಂಡುರಂಗನ ಕೃಪಾಕಟಾಕ್ಷವು ಎಲ್ಲರ ಮೇಲಿರಲಿ.

ಎಲ್ಲರ ಕುಟುಂಬದಲ್ಲಿ ಸುಖ, ಶಾಂತಿ, ಆರೋಗ್ಯ, ಸಮೃದ್ಧಿ ಹಾಗೂ ನೆಮ್ಮದಿ ಸದಾ ನೆಲೆಸಲಿ!

ವಿಜಯಪುರ ಸೈಕ್ಲಿಂಗ್ ತಂಡ ಸೇರಿದಂತೆ ಬೆಳಗಾವಿ, ಕಾರವಾರಗಳಿಂದ 'ಸೈಕಲ್ ವಾರಿ' ಮೂಲಕ, ಪಾದಯಾತ್ರೆ ಮೂಲಕ ಪಂಢರಾಪುರಕ್ಕೆ ತೆರಳಿರುವ ಪ್ರತಿಯೊಬ್ಬರಿಗೂ ಪಾಂಡುರಂಗನ ಕೃಪೆಯಿಂದ ಸುಲಭ ದರ್ಶನ ಲಭಿಸಿ, ಸುಕ್ಷೇಮವಾಗಿ ಹಿಂತಿರುಗಲೆಂದು ಹಾರೈಸುತ್ತೇನೆ.
#ಆಷಾಢಏಕಾದಶಿ

16/07/2026

ಬಬಲೇಶ್ವರ ಮತ ಕ್ಷೇತ್ರ, ಸೋಮದೇವರ ಹಟ್ಟಿ: ಶ್ರೀ ಮಾತಾ ದುರ್ಗಾ ದೇವಿ ಜಾತ್ರಾಮಹೋತ್ಸವದಲ್ಲಿ ದೇವರ ದರ್ಶನದಿಂದ ಧನ್ಯವಾದ ಕ್ಷಣಗಳು...

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಸೋಮದೇವರಹಟ್ಟಿ ತಾಂಡಾದ ಐತಿಹಾಸಿಕ ಶ್ರೀ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವವು ತನ್ನದೇ ಆದ ಹಲವು ದಶಕಗಳ ಸಮೃದ್...
14/07/2026

ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಸೋಮದೇವರಹಟ್ಟಿ ತಾಂಡಾದ ಐತಿಹಾಸಿಕ ಶ್ರೀ ಮಾತಾ ದುರ್ಗಾದೇವಿ ಜಾತ್ರಾ ಮಹೋತ್ಸವವು ತನ್ನದೇ ಆದ ಹಲವು ದಶಕಗಳ ಸಮೃದ್ಧ ಇತಿಹಾಸವನ್ನು ಹೊಂದಿದೆ. ಈ ಜಾತ್ರೆಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಷ್ಟೇ ಅಲ್ಲದೆ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಈ ದಿನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ, ಶ್ರೀ ಮಾತಾ ದುರ್ಗಾದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದಿದ್ದು ಅಪಾರ ಸಂತಸ ತಂದಿದೆ. ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಜಗನು ಮಹಾರಾಜರು ಎಲ್ಲರಿಗೂ ಆಶೀರ್ವಚನ ನೀಡಿ ಹರಸಿದರು.

ಈ ಸಂದರ್ಭದಲ್ಲಿ ಖ್ಯಾತ ಬಾಲಿವುಡ್ ನಟರಾದ ಶ್ರೀ ಗೋವಿಂದ, ಗೋವಾ ರಾಜ್ಯದ ಪ್ರಮುಖ ರಾಜಕೀಯ ನಾಯಕರಾದ ಶ್ರೀ ಮೈಕೇಲ್ ಲೋಬೋ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಗಂಗಾಧರ ಸಂಬಣ್ಣಿ ಸೇರಿದಂತೆ ಅನೇಕ ಗಣ್ಯರು, ಗುರುಹಿರಿಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಭಕ್ತಿ, ಸಂಭ್ರಮ ಹಾಗೂ ಸಂತಸವನ್ನು ಹಂಚಿಕೊಂಡರು.

05/07/2026

'ಕ್ಷೀರ ಪೈಲಟ್ ಯೋಜನೆ' #ಬಬಲೇಶ್ವರ ಮತಕ್ಷೇತ್ರದ #ನಾಗರಾಳ ಗ್ರಾಮದ ರೈತ ಸಾಹೇಬಗೌಡ ಪಾಟೀಲ ಅವರ ಬದುಕನ್ನೇ ಬದಲಿಸಿದೆ.

BLDE, ಕೃಷಿಕಲ್ಪ ಹಾಗೂ ಅಕ್ಷಯಕಲ್ಪ ಫೌಂಡೇಶನ್‌ ಗಳ ವೈಜ್ಞಾನಿಕ ತರಬೇತಿ, ತಾಂತ್ರಿಕ ಮಾರ್ಗದರ್ಶನ ಮತ್ತು ನಿರಂತರ ಸಹಕಾರದಿಂದ ಒಂದು ಹಸುವಿನಿಂದ ಆರಂಭಿಸಿದ ಅವರು ಇಂದು 6 ಹಸುಗಳನ್ನು ಸಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಸುಗಳನ್ನು ಹೆಚ್ಚಿಸಿ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದ್ದಾರೆ.

ಇಂದು ಅವರು ಪ್ರತಿ ತಿಂಗಳು ₹55,000–₹60,000 ಆದಾಯ ಗಳಿಸುತ್ತಿದ್ದು, BLDE, ಕೃಷಿಕಲ್ಪ ಹಾಗೂ ಅಕ್ಷಯಕಲ್ಪ ಫೌಂಡೇಶನ್‌ ಗಳ ಸಹಯೋಗ ರೈತರ ಬದುಕಿನಲ್ಲಿ ಹೊಸ ಭರವಸೆ ಮತ್ತು ಸಮೃದ್ಧಿಯನ್ನು ಮೂಡಿಸುತ್ತಿದೆ.

#ಕ್ಷೀರಪೈಲಟ್_ಯೋಜನೆ

04/07/2026

ನಮ್ಮ ಗುರಿ ಸ್ಪಷ್ಟ - ಪ್ರತಿ ಸಣ್ಣ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿರಬೇಕು!

ಜಲಕ್ರಾಂತಿಯಿಂದ ಬಸವನಾಡಿನ ನೆಲ ಹಸಿರಾಯಿತು...ವೈಜ್ಞಾನಿಕ ಹೈನುಗಾರಿಕೆಯ ಮೂಲಕ ರೈತರ ಬದುಕು ಸಮೃದ್ಧಿಯಾಗುತ್ತಿದೆ.

BLDE–ಅಕ್ಷಯಕಲ್ಪ–ಕೃಷಿಕಲ್ಪ ಸಹಯೋಗದ 'ಕ್ಷೀರ ಪೈಲಟ್ ಯೋಜನೆ' ನೂರಾರು ಕುಟುಂಬಗಳಿಗೆ ಹೊಸ ಆಶಾಕಿರಣವಾಗುತ್ತಿದೆ.

ನಮ್ಮ ಗುರಿ ಪ್ರತಿ ಸಣ್ಣ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿರಬೇಕು!ಹೆಸರಾಂತ ಅಕ್ಷಯ ಕಲ್ಪ, ಕೃಷಿ ಕಲ್ಪಗಳ ಸಹಯೋಗದಲ್ಲಿ ವೈಜ್ಞಾನಿಕ ತರಬೇತ...
03/07/2026

ನಮ್ಮ ಗುರಿ ಪ್ರತಿ ಸಣ್ಣ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿರಬೇಕು!
ಹೆಸರಾಂತ ಅಕ್ಷಯ ಕಲ್ಪ, ಕೃಷಿ ಕಲ್ಪಗಳ ಸಹಯೋಗದಲ್ಲಿ ವೈಜ್ಞಾನಿಕ ತರಬೇತಿ
ಕ್ಷೀರ ಪೈಲೆಟ್ ಯೋಜನೆ ಜಾರಿಗೊಳಿಸಲು BLDE ಪ್ರತಿ ವರ್ಷ ರೂ. 50ಲಕ್ಷ ಖರ್ಚು ಮಾಡುತ್ತಿದೆ.
ಹೈನೋದ್ಯಮದಲ್ಲಿ ಸೂಕ್ತ ಶಿಕ್ಷಣ ನೀಡಲು ನಿಡೋಣಿ ಗ್ರಾಮದ 11 ಎಕರೆ ಪ್ರದೇಶದಲ್ಲಿ ಬೃಹತ್ ಕ್ಷೀರ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪನೆ

ನೀರಾವರಿ ಯೋಜನೆಗಳ ಮೂಲಕ ಬಸವನಾಡಿನ ಒಣನೆಲಕ್ಕೆ ಜೀವ ತುಂಬಿ ಜಲಕ್ರಾಂತಿ ಸೃಷ್ಟಿಸಿರುವುದು ಈಗ ಇತಿಹಾಸವಾಗಿದೆ. ಅದರ ಫಲವಾಗಿ ಸಾವಿರಾರು ರೈತ ಕುಟುಂಬಗಳು ಕೃಷಿಯನ್ನು ಆಶ್ರಯಿಸಿ ನೆಮ್ಮದಿಯ ಹಾಗೂ ಸಮೃದ್ಧ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.

ಆ ಜಲಕ್ರಾಂತಿಯ ಮುಂದುವರಿದ ಅಧ್ಯಾಯವೇ ಕಳೆದ ವರ್ಷ ಆರಂಭಿಸಿದ ಕ್ಷೀರ ಪೈಲೆಟ್ ಯೋಜನೆ. ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಯೋಜನೆ 150ಕ್ಕೂ ಹೆಚ್ಚು ರೈತ ಕುಟುಂಬಗಳ ಬದುಕಿನಲ್ಲಿ ಆರ್ಥಿಕ ಕ್ರಾಂತಿಯನ್ನು ತಂದಿದೆ.

ಒಂದು ಕಾಲದಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿ ತಿಂಗಳಿಗೆ ₹20-30 ಸಾವಿರ ಆದಾಯ ಗಳಿಸುವುದೇ ಸವಾಲಾಗಿತ್ತು. ಆದರೆ BLDE, ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಫೌಂಡೇಶನ್ ಸಂಸ್ಥೆಗಳ ಸಹಯೋಗದಲ್ಲಿ ಜಾರಿಗೊಂಡಿರುವ ಈ ಯೋಜನೆಯಿಂದ ಇಂದು ಹಲವು ರೈತ ಕುಟುಂಬಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಮಟ್ಟಕ್ಕೆ ಬೆಳೆದಿವೆ.

ಪ್ರತಿ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿ ಇರಬೇಕು ಎಂಬುದು ನಮ್ಮ ಸಂಕಲ್ಪ. ಆ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿBLDE ಡೀಮ್ಡ್ ವಿವಿ ವತಿಯಿಂದ ಕ್ಷೀರ ಪೈಲೆಟ್ ಯೋಜನೆ ಜಾರಿಗೊಳಿಸಲು ಪ್ರತಿ ವರ್ಷ ರೂ. 50ಲಕ್ಷ ಖರ್ಚು ಮಾಡುತ್ತಿದ್ದೇವೆ.

ನಿಡೋಣಿ ಗ್ರಾಮದ 11 ಎಕರೆ ಪ್ರದೇಶದಲ್ಲಿ BLDE–ಅಕ್ಷಯಕಲ್ಪ–ಕೃಷಿಕಲ್ಪ ಸಹಯೋಗದೊಂದಿಗೆ ಅತ್ಯಾಧುನಿಕ ಬೃಹತ್ ಕ್ಷೀರ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುವುದು.

ಜಲಕ್ರಾಂತಿಯಿಂದ ಕ್ಷೀರಕ್ರಾಂತಿಯವರೆಗೆ… ನಮ್ಮ ಜನರ ಬದುಕು ಮತ್ತಷ್ಟು ಸಮೃದ್ಧವಾಗಬೇಕು ಎಂಬುದೇ ನಮ್ಮ ಧ್ಯೇಯ.

ನಿಡೋಣಿ ಗ್ರಾಮದಲ್ಲಿ ಶೀಘ್ರದಲ್ಲೇ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ, ...
02/07/2026

ನಿಡೋಣಿ ಗ್ರಾಮದಲ್ಲಿ ಶೀಘ್ರದಲ್ಲೇ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ

ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ, ಇಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನಿಡೋಣಿ ಗ್ರಾಮದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ.

ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ BLDE, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ ಗಳ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿರುವ 'ಕ್ಷೀರ ಪೈಲಟ್ ಯೋಜನೆ' ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದೆ. ಆಧುನಿಕ ಹೈನುಗಾರಿಕೆ, ವೈಜ್ಞಾನಿಕ ಪಶುಪಾಲನೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಯ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ರೈತರಿಗೆ ನಿರಂತರ ತರಬೇತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಕೌಶಲಾಭಿವೃದ್ಧಿಯನ್ನು ಒದಗಿಸುವ ಉದ್ದೇಶದಿಂದ, ಶೀಘ್ರದಲ್ಲೇ ನಿಡೋಣಿ ಗ್ರಾಮದಲ್ಲೇ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದೆ. ಈ ಕೇಂದ್ರವು ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಲು ರೈತರಿಗೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ನೀಡುವ ಮಹತ್ವದ ವೇದಿಕೆಯಾಗಲಿದೆ.

ಈ ಮಹತ್ವದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಗುರುಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ನಿಡೋಣಿ, ಅಕ್ಷಯಕಲ್ಪ ಸಂಸ್ಥೆಯ ಶ್ರೀ ಸಿ. ಎಂ. ಪಾಟೀಲ, BLDE ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಹಾಗೂ ರೈತ ಬಂಧುಗಳು ಉಪಸ್ಥಿತರಿದ್ದರು.

ಕ್ಷೀರ ಪೈಲಟ್ ಯೋಜನೆಯ ಫಲಶ್ರುತಿ: ನಾಗರಾಳ ಗ್ರಾಮದ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರ ಯಶೋಗಾಥೆತಿಂಗಳಿಗೆ ₹60 ಸಾವಿರದವರೆಗೆ ಆದಾಯ – ವೈ...
02/07/2026

ಕ್ಷೀರ ಪೈಲಟ್ ಯೋಜನೆಯ ಫಲಶ್ರುತಿ: ನಾಗರಾಳ ಗ್ರಾಮದ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರ ಯಶೋಗಾಥೆ
ತಿಂಗಳಿಗೆ ₹60 ಸಾವಿರದವರೆಗೆ ಆದಾಯ – ವೈಜ್ಞಾನಿಕ ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆಯತ್ತ ಯಶಸ್ವಿ ಹೆಜ್ಜೆ

ಈ ದಿನ ನಾಗರಾಳ ಗ್ರಾಮದ ರೈತ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರನ್ನು ಭೇಟಿ ಮಾಡಿ, ನಮ್ಮ BLDE, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ಗಳ ಸಹಯೋಗದಲ್ಲಿ ಜಾರಿಗೊಂಡಿರುವ 'ಕ್ಷೀರ ಪೈಲಟ್ ಯೋಜನೆ'ಯಿಂದ ಅವರ ಬದುಕಿನಲ್ಲಿ ಮೂಡಿರುವ ಸಕಾರಾತ್ಮಕ ಪರಿವರ್ತನೆಯ ಕುರಿತು ತಿಳಿದುಕೊಂಡೆ.

ಯೋಜನೆ ಆರಂಭಕ್ಕೂ ಮುನ್ನ ಕೇವಲ ಒಂದು ಹಸುವನ್ನು ಸಾಕುತ್ತಿದ್ದ ಅವರು, ಯೋಜನೆಯಡಿ ನೀಡಲಾದ ವೈಜ್ಞಾನಿಕ ತರಬೇತಿ, ನಿರಂತರ ಮಾರ್ಗದರ್ಶನ ಹಾಗೂ ತಾಂತ್ರಿಕ ನೆರವಿನ ಪ್ರೇರಣೆಯಿಂದ ಇಂದು ತಮ್ಮ ಹೈನುಗಾರಿಕೆಯನ್ನು ವಿಸ್ತರಿಸಿ ಆರು ಹಸುಗಳನ್ನು ಸಾಕುತ್ತಿದ್ದಾರೆ. ಇದರ ಫಲವಾಗಿ ಪ್ರತಿ ತಿಂಗಳು ₹55,000 ರಿಂದ ₹60,000ರವರೆಗೆ ಆದಾಯ ಗಳಿಸುತ್ತಿರುವುದು ತಿಳಿದು ಸಂತಸವಾಯಿತು.

ಕಳೆದ ಆರು ತಿಂಗಳುಗಳಲ್ಲಿ ವೈಜ್ಞಾನಿಕ ಪಶುಪಾಲನೆ, ಆಧುನಿಕ ಹೈನುಗಾರಿಕೆ ವಿಧಾನಗಳು ಹಾಗೂ ಸಮರ್ಪಕ ನಿರ್ವಹಣೆಯನ್ನು ಅಳವಡಿಸಿಕೊಂಡ ಪರಿಣಾಮ, "ಹೈನುಗಾರಿಕೆಯೇ ನಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ರೂಪಿಸಬಲ್ಲ ಉದ್ಯಮ" ಎಂಬ ದೃಢ ವಿಶ್ವಾಸ ಅವರಲ್ಲಿ ಮೂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಸುಗಳನ್ನು ಖರೀದಿಸಿ ತಮ್ಮ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪವನ್ನೂ ಅವರು ವ್ಯಕ್ತಪಡಿಸಿದರು.

ಇಂತಹ ಯಶೋಗಾಥೆಗಳು ಕ್ಷೀರ ಪೈಲಟ್ ಯೋಜನೆಯ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದ್ದು, ಕೃಷಿಯೊಂದಿಗೆ ಹೈನುಗಾರಿಕೆಯನ್ನು ಸಂಯೋಜಿಸುವ ಮೂಲಕ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.

ಈ ಸಂದರ್ಭದಲ್ಲಿ ಅಕ್ಷಯಕಲ್ಪ ಸಂಸ್ಥೆಯ ಶ್ರೀ ಸಿ.ಎಂ. ಪಾಟೀಲ, BLDE ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹೈನುಗಾರಿಕೆಯ ಮೂಲಕ ರೈತರನ್ನು ಇನ್ನಷ್ಟು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ, ಶೀಘ್ರದಲ್ಲೇ ನಿಡೋಣಿ ಗ್ರಾಮದಲ್ಲಿ BLDE ವತಿಯಿಂದ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಜ್ಞಾನ, ತಂತ್ರಜ್ಞಾನ ಹಾಗೂ ನಿರಂತರ ಮಾರ್ಗದರ್ಶನದ ಮೂಲಕ ವಿಜಯಪುರ ಜಿಲ್ಲೆಯನ್ನು ಕ್ಷೀರ ಕ್ರಾಂತಿಯ ಮಾದರಿ ಜಿಲ್ಲೆಯಾಗಿ ರೂಪಿಸುವುದು ನಮ್ಮ ಸಂಕಲ್ಪವಾಗಿದೆ.

Address

Bangalore
560080

Website

Alerts

Be the first to know and let us send you an email when Basanagouda Patil posts news and promotions. Your email address will not be used for any other purpose, and you can unsubscribe at any time.

Shortcuts

Share

Category