10/07/2024
ಸಂತೋಷಕ್ಕೆ ಸಾಕಷ್ಟು ಕಾರಣಗಳು ಇರುತ್ತವೆ..
ಇವತ್ತು ನಾನೊಂದು ವಿಷಯವನ್ನು ನಿಮ್ಮ ಜೊತೆಗೆ ಹಂಚಿಕೊಳ್ಬೇಕು ಅನ್ನಿಸ್ತು.. ಶೇಷಾದ್ರಿಪುರಂ ಕಾಲೇಜು ಹಾಗು ಗಾಂಧಿ ಅಧ್ಯಯನ ಕೇಂದ್ರ ವತಿಯಿಂದ ಆಯೋಜಿಸಿದ್ದ ಶಾಂತವೇರಿ ಗೋಪಾಲಗೌಡರು ಮತ್ತು ರಾಜಕೀಯ ಚಿಂತನೆಗಳು ಅನ್ನೋ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಭಾಗವಹಿಸಿದ್ದೆ.
ಶೇಷಾದ್ರಿಪುರಂ ಕಾನೂನು ಕಾಲೇಜು ಅಂತಿಮ ವರ್ಷದ ಎಲ್ಎಲ್ಬಿ ವಿದ್ಯಾರ್ಥಿಯಾದ ನಾನು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದೇನೆ..
ಪ್ರಥಮ ಬಹುಮಾನ ರೂಪದಲ್ಲಿ 10 ಸಾವಿರ ನಗದು ನೀಡಿದ್ದಾರೆ. ಅದು ಕೂಡ ಸಂತೋಷ.. ಅದಕ್ಕೂ ಮಿಗಿಲಾಗಿ ನಾನು ಪ್ರಥಮ ಸ್ಥಾನ ಗಳಿಸಿದ್ದೇನೆ ಎನ್ನುವುದು ಹೆಚ್ಚು ಸಂತೋಷ ಕೊಟ್ಟ ಸಂಗತಿ.
ವಿಷಾದಕರ ಸಂಗತಿ ಎಂದರೆ ನಗದು ಪ್ರಶಸ್ತಿ ಪಡೆದುಕೊಳ್ಳಲು ನಾನು ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ ಕ್ಷಮೆಯಿರಲಿ..
ಆದರೂ ನನಗೆ ಕರೆ ಮಾಡಿ ಪ್ರಬಂಧ ಬರೆದಿರುವ ರೀತಿಗೆ ತೀರ್ಪುಗಾರರು ಮತ್ತು ಆಯೋಜಕರ ವತಿಯಿಂದ ಫೋನ್ ಮಾಡಿ ಹೇಳಿದಾಗ ನನ್ನ ಸಂಭ್ರಮ ದುಪ್ಪಟ್ಟು ನೂರ್ಪಟ್ಟು ಆಗಿ ಬದಲಾಗಿತ್ತು.
ಪ್ರೋತ್ರಾಹಿಸಿದ ಶೇಷಾದ್ರಿಪುರಂ ಕಾನೂನು ಕಾಲೇಜು ಪ್ರಿನ್ಸಿಪಾಲ್ ಮೇಡಂ, ಉಪನ್ಯಾಸಕರು ಹಾಗು ನನ್ನ ಸಹೋದ್ಯೋಗಿಗಳಿಗೆ ಧನ್ಯವಾದ..